ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪರಿಷತ್ತಿಗೆ ಚುನಾವಣೆ

ವಿಶೇಷ ಲೇಖನ ಕನ್ನಡ ಘಟಾನುಘಟಿಗಳ ಪ್ರಚಾರ ಶುರು..! ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕøತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇಚ್ಛಾಶಕ್ತಿಯೊಂದಿಗೆ ಉದಯಿಸಿದ್ದೇ ಕನ್ನಡ ಸಾಹಿತ್ಯ ಪರಿಷತ್. ಪರಿಷತ್ತಿನ ಆರಂಭ ಕಾಲದಿಂದಲೂ 1940 ರವರೆಗೂ ಅಧ್ಯಕ್ಷರನ್ನು ಅವರ ಸಾಹಿತ್ಯ, ಕನ್ನಡ ನಾಡು-ನುಡಿಯ ಬಗೆಗಿನ ಸೇವೆ, ಬದ್ಧತೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರವೇ ಪರಿಷತ್ತಿಗೂ ಚುನಾವಣೆಯ ಪದ್ಧತಿ ಜಾರಿಗೊಂಡಿತು. ತಿರುಮಲೆ ತಾತಾಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಗೊ.ರು ಚನ್ನಬಸಪ್ಪ, ಸಾ.ಶಿ.ಮರಳಯ್ಯ, ಡಾ.ಹಂಪ ನಾಗರಾಜಯ್ಯ, ಜಿ.ನಾರಾಯಣ, ಚಂದ್ರಶೇಖರ ಪಾಟೀಲರಂತಹ ಸಾರಸ್ವತ ದಿಗ್ಗಜರು ಪರಿಷತ್ತಿನ ಆಡಳಿತ ಚುಕ್ಕಾಣಿ ಹಿಡಿದು ಕನ್ನಡದ ಕೈಂಕರ್ಯಕ್ಕೆ ತಮ್ಮದೇ ಕೊಡುಗೆ ನೀಡಿದವರು. ಬಹುತೇಕ ಸಾಹಿತಿಗಳು; ಹೋರಾಟಗಾರರೇ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಿರಿ ಅಲಂಕರಿಸುತ್ತ ಬಂದರೂ ಡಾ. ನಲ್ಲೂರು ಪ್ರಸಾದ್ ಆರ್. ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿಯಂತಹ ಸಾಹಿತ್ಯಾಸಕ್ತರು ಆಯ್ಕೆಯಾಗುವ ಮೂಲಕ ಹೊಸ ಶಕೆಗೆ ನಾಂದಿ ಹಾಡಿದರು. ಇದೀಗ ಮುಂದುವರೆದು ನಿವೃತ್ತ ಅಧಿಕಾರಿ ವರ್ಗವೂ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗಳತ್ತ ಆಸಕ್ತವಾಗಿವೆ. ಮನು ಬಳಿಗಾರ್ ಅವರು ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಈ ಪರಂಪರೆಗೆ ನಾಂದಿ ಹಾಡಿದರು. 5 ವರ್ಷಗಳ ಕಾಲ ಅಧ್ಯಕ್ಷಗಾದಿ ಅಲಂಕರಿಸಿದ ಅವರ ಆಡಳಿತಾವಧಿ 2021 ಮಾರ್ಚ್-3ಕ್ಕೆ ಅಂತ್ಯವಾಗಲಿದ್ದು ಈಗಿನಿಂದಲೇ ಆಕಾಂಕ್ಷಿಗಳ ಚುನಾವಣಾ ತಯಾರಿ ಚುರುಕುಗೊಂಡಿದೆ. ವಾಡಿಕೆಯಂತೆ ಕಸಾಪಗೆ ಅಧ್ಯಕ್ಷರ ಆಡಳಿತಾವಧಿ 3 ವರ್ಷಕ್ಕೆ ಸೀಮಿತವಾಗಿತ್ತು. ಪ್ರಸ್ತುತ ಅಧ್ಯಕ್ಷರಾದ ಮನು ಬಳಿಗಾರ್ ಅವರು, 5 ವರ್ಷಕ್ಕೆ ಏರಿಕೆ ಮಾಡಿದ ಪರಿಣಾಮ ಅವರಿಗೆ ಎರಡು ವರ್ಷಗಳ ಹೆಚ್ಚುವರಿ ಅವಧಿ ಲಭಿಸಿತು. ಇವರು ಸರ್ಕಾರದ ಅಧಿಕಾರಿಯಾಗಿದ್ದರೂ ಕೂಡ ಕವಿಗಳು ಎಂದು ಮುದ್ದಾಮ್ ಸಾಹಿತಿ ಎಂದು ಗುರುತಿಸಲ್ಪಡುವ ಅವರು, ಸಾಹಿತಿಗಳಾಗಿ ರಾಜ್ಯದ ವಿವಿಧೆಡೆ ಅಖಿಲ ಭಾರತ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಯೂ ಇವರಿಗಿದೆ. ಈಗ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತುದ ಹಾಲಿ ಗೌರವ ಕಾರ್ಯದರ್ಶಿ ವಾ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳದ ಶೇಖರಗೌಡ ಮಾಲೀ ಪಾಟೀಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅಖಾಡದಲ್ಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆಲವರು ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ. ಅಧ್ಯಕ್ಷರ ಅವಧಿ 3 ವರ್ಷಕ್ಕೆ ಮುಗಿಯುತ್ತದೆ ಎಂದು ತಿಳಿದು ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲೇ ಆಕಾಂಕ್ಷಿಗಳು ಪ್ರಚಾರ ಕಾರ್ಯ ಬಿರುಸಿನಿಂದ ನಡೆಸಿದ್ದರು. ಆದರೆ ಅಧ್ಯಕ್ಷರ ಅಧಿಕಾರವಧಿ 2 ವರ್ಷ ಮುಂದಕ್ಕೆ ಹೋದ ಪರಿಣಾಮ ಇವರು ಪ್ರಚಾರದಿಂದ ಹಿಂದೆ ಸರಿಯಬೇಕಾಯಿತು. ಈಗ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. 3 ಲಕ್ಷಕ್ಕೂ ಅಧಿಕ ಮತದಾರರು– ಕಳೆದ ಐದು ವರ್ಷಗಳ ಹಿಂದೆಯೇ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ 30 ಜಿಲ್ಲೆಗಳು, 5 ಗಡಿನಾಡು ಘಟಕಗಳು ಒಟ್ಟು ಸೇರಿ ಸುಮಾರು 1.87 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಎಲ್ಲಾ ಘಟಕಗಳಲ್ಲಿ ಹೊಸದಾಗಿ 1.24 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, 3,25,098 ಮಂದಿ ಸದಸ್ಯರು ಸದಸ್ಯತ್ವ ಪಡೆದಂತಾಗಿದೆ. ಪರಿಷತ್ತಿಗೆ ಇಷ್ಟು ಸಂಖ್ಯೆಯ ಜನರು ಸದಸ್ಯರಾಗಿರುವುದು ಇದೇ ಮೊದಲು. ಅಷ್ಟೇ ಅಲ್ಲ; ಈ ಹಿಂದೆ ಬೆಂಗಳೂರಿನಲ್ಲಿ ಒಂದೇ ಕಡೆ ಮತದಾನ ನಡೆಯುತ್ತಿತ್ತು. ಈಗ ಕ್ಷೇತ್ರವಾರು ಅಂದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ಈ ನವೆಂಬರ್‌ನಲ್ಲೇ ಮನು ಬಳಿಗಾರ್ ಅವರು ಪತ್ರ ಬರೆಯಲಿದ್ದು; ಆ ನಂತರವೇ ಚುನಾವಣಾಧಿಕಾರಿಗಳು ನೇಮಕಗೊಳ್ಳುತ್ತಿದ್ದಂತೆಯೇ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ಕನಿಷ್ಟ ಮೂರು ವರ್ಷ ಸದಸ್ಯರಾಗಿರುವವರು ಮತದಾನಕ್ಕೆ ಅರ್ಹರಾಗಿರುತ್ತಾರೆ. ಅಧ್ಯಕ್ಷರ ಆಯ್ಕೆ ಜೊತೆ ಎಲ್ಲಾ 30 ಜಿಲ್ಲೆ ಹಾಗೂ 5 ಗಡಿನಾಡು ಘಟಕಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಚುನಾವಣೆಗೆ ಸ್ಪರ್ಧೆ ಸುಲಭವಲ್ಲ– ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಗೆ ಸ್ಪರ್ಧಿಸುವುದು ಪ್ರಸ್ತುತ ಸಂದರ್ಭದಲ್ಲಿ ಸುಲಭದ ಮಾತಲ್ಲ. 3.25 ಲಕ್ಷ ಮತದಾರರನ್ನು ಸಂಪರ್ಕಿಸಬೇಕಾದರೆ ಹಣಬಲ ಇರಲೇ ಬೇಕು. ಇಡೀ ರಾಜ್ಯದಾದ್ಯಂತ ಸಂಚರಿಸಿ ಮತದಾರರ ಓಲೈಕೆ ಮಾಡಬೇಕು. ಜಾತಿ ರಾಜಕಾರಣವೂ ಇಲ್ಲಿ ಮುಖ್ಯವಾಗುತ್ತದೆ. ಹಣ, ಜಾತಿ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಬಡ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಾದಿಯ ಕನಸು ಕಾಣುವುದು ದುಸ್ತರವೇ ಸರಿ. ಮಹಿಳೆಯರಿಗೆ ಅವಕಾಶ ನೀಡಿ– ಶತಮಾನಗಳ ಇತಿಹಾಸವಿರುವ ಪರಿಷತ್ತಿಗೆ ಈವರೆಗೂ ಒಬ್ಬ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿಲ್ಲ. ಹೀಗಾಗಿಯೇ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಏಕೆ ಮಹಿಳಾ ಸಾಹಿತಿಯೊಬ್ಬರ ಸಾರಥ್ಯಕ್ಕೆ ಸಿಗಬಾರದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ವಚನ ಸಾಹಿತ್ಯದಿಂದ ಇತ್ತೀಚಿನ ನವ ಸಾಹಿತ್ಯದ ವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳಾ ಲೇಖಕಿಯರಿಗೆ ಕೊರತೆಯಿಲ್ಲ. ಗಟ್ಟಿತನದ ಸಾಹಿತ್ಯ ರಚನೆಯಲ್ಲೂ ಮಹಿಳೆಯರು ತೊಡಗಿದ್ದಾರೆ. ಹಾಗಾಗಿಯೇ ಈ ಬಾರಿ ಮಹಿಳೆಯರಿಗೆ ಸ್ಥಾನ ಸಿಗಲಿ ಎಂಬ ಒತ್ತಾಯಗಳೂ ಕೇಳಿ ಬರುತ್ತಿವೆ. ಒಟ್ಟಾರೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಜಿದ್ದಾಜಿದ್ದಿನ ಕಣವಾಗಲಿದ್ದು, ಯಾವುದೇ ರಾಜಕೀಯ ಚುನಾವಣೆಗಳಿಗೂ ಕಡಿಮೆ ಇಲ್ಲದಂತೆ ನಡೆಯುವ ಮುನ್ಸೂಚನೆಗಳೂ ಹೆಚ್ಚಾಗಿವೆ. ಕನ್ನಡ ಸಾರಸ್ವತ ಸಂಸ್ಥೆಗೆ ನೂತನ ಸಾರಥಿಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೇ ನಾವು..! ********************************* ಕೆ.ಶಿವು.ಲಕ್ಕಣ್ಣವರ

ಪರಿಷತ್ತಿಗೆ ಚುನಾವಣೆ Read Post »

ಇತರೆ, ಲಹರಿ

ಬಣ್ಣಗಳ ದಂಡು

ಲಹರಿ ಬಣ್ಣಗಳ ದಂಡು ಶಿವಲೀಲಾ ಹುಣಸಗಿ ಹೇಗೆ ಹೇಳಲಿ ಮನದ ತಳಮಳವ ಸಖಾ.ಬಲ್ಲೆ ನೀನು ನನ್ನಂತರಂಗವ.ನಿನ್ನ ಕಾಣುವ ಕೌತುಕಕೇ ಮೋಡಗಳು ತೊರಣ ಕಟ್ಟಿದಂತೆ ಇಳೆಯತ್ತ ಬಾಗಿವೆ.ಮಿಂಚುಗಳು ಆಗಾಗ ಹೃದಯ ಕಂಪನ ಮಾಡಿ ನಸುನಕ್ಕಿವೆ.ಹನಿಗಳೋ ಮದಿರೆಯಗುಂಗಿನಲಿ ಅವಿತು ನನ್ನ ತಣಿಸಲು ತವಕಿಸು ತಿವೆ.ಬಾನಿಗೆಲ್ಲ ಹಣತೆ ಹಚ್ಚಿ ನನ್ನಾಗಮನಕೆ ಕಾದಂತಿದೆ. ಪ್ರೀತಿ ತುಂಬಿದ ಹೃದಯವ ಬೊಗಸೆಯಲ್ಲಿ ಹಿಡಿದು ನಿಂ ತಂತೆ.ನಯನಗಳ ಪ್ರತಿಬಿಂಬಕೆ ನಿನೊಂದೆ ಉತ್ತರ ಸಖಾ.ನಿನ್ನ ಪ್ರೇಮದ ಶರವೇಗಕೆ ಎದೆಗೂಡು ತಲ್ಲಣಿಸಿದೆ. ನಿನ್ನಧರದ ಅಬ್ಬರಕೆ ಜೇನಹನಿಗಳು ತೊಟ್ಟಿಕ್ಕುತ್ತಿವೆ. ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ. ಬಣ್ಣಗಳ ದಂಡು ಮುಂಬಾಗಿಲಿಗೆ ಬಂದಿದೆ.ರಂಗೇರುವ ಕ್ಷಣ ಗಣನೆ.ನೀ ಇಲ್ಲದೆ ಕೆನ್ನೆಗೆ ರಂಗು ಬರದು.ನಿನ್ನ ಸ್ಪರ್ಶವಿರದೇ ಯಾವ ಬಣ್ಣವು ನನ್ನ ಸಂತೈಸದು. ಅಂದು ನೀ  ಕೊಟ್ಟ ನವಿಲುಗರಿಯೊಂದು ಚಿಗುರೊಡೆದಿದೆ. ಮನದಲಿಗ ಮೈದೆಳೆದು ನವಿರಾಗಿ ಗರಿಬಿಚ್ಚಿದೆ.ಆಗೊಮ್ಮೆ ಈಗೊಮ್ಮೆ ಇಣುಕುವ ಸವಿನೆನಪಂತೆ.ತೂಗು ಮಂಚದಲಿ ಎದೆಗೊರಗಿ ಕಾಡಿದಾಗೆಲ್ಲ,ಗಲ್ಲದ ತುಂಬ ನನ್ನ ಬಣ್ಣ ಮೆತ್ತಿ ದ್ದು ನೆನಪಾಗದೇ ಸಖಾ? ಪುಟಗಳಾಚೆ ಇಣುಕಿ ನಗಿಸುವ ನೀನು ಹೊಂಬೆಳಕಂತೆ ನನಗೆ.ಓಕುಳಿಯಾಡುವ ಪಿಚಕಾರಿಯಲ್ಲಿ ಅವಿತಂತೆ ನೀನು.ಮೈಮನಕೆ ಸೋಕಿದಾಗ ಅದ್ಭುತ ಸಾಂಗತ್ಯ ನಮ್ಮದು.ಬಾನು,ಭೂವಿಯು ನಾಚಿ ನೀರಾದಂತೆ ನಮ್ಮ ಪ್ರೇಮದ ಸಿಂಚನ.ಹೃದಯಕ್ಕೊಂದು ಜೀವಮಿಡಿತ ನೀನು.ನಿನ್ನೆದೆಯ ತುಡಿತ ನಾನು. ಹಕ್ಕಿಯಂ ತೆ ಗರಿಗೆದರಿ ಬಾನೆತ್ತರಕ್ಕೆ ಹಾರುವಷ್ಟು.ಗೂಡಿನೊಳಗೊಂ ದು ಗೂಡು ನಮ್ಮದು.ಕಣ್ಣಿಗೆ ಕಾಣದ ಪ್ರೇಮಲೋಕ. ನಮ್ಮೊಳಗಿನ ಸ್ವಪ್ನಲೋಕ.ಕಾಮನ ಬಿಲ್ಲಿನ ಪಲ್ಲಕ್ಕಿಯಲಿ ನಮ್ಮ ಪ್ರೇಮೋತ್ಸವ.ಕಡುಬಣ್ಣದಲಿ ಗಾಢವಾದ ನಿತ್ಯೋತ್ಸವ.ಕಾದ ಗಳಿಗೆಯೆಲ್ಲವೂ ನಿನಗರ್ಪಿತ ಸಖಾ. ಪ್ರೇಮವೆಂದರೆ ಅಮೂರ್ತಗಳ ಹೂ ಗುಚ್ಛ.ನಿನ್ನಾತ್ಮದ ಪ್ರತಿಬಿಂಬದಂತೆ.ನಿನ್ನ ವಿರಹದ ತಾಪದಲಿ.ದಾರಿ ದೂರ ವಾದರೂ ತಡೆದೆನು.ಮನಸಿಗೆ ದೂರವಾದರೆ ಬದುಕ ಲಾರೆ.ಕಾಡುವ ಗಳಿಗೆಗೆ ನೀ ಬೆಂದಿರಬಹುದು.ನೆನಪಿನ ಮಲ್ಲಿಗೆಯ ಮುಡಿಸಿ ಮರೆಯಾಗದಿರು.ಮೂರ್ತ ರೂಪವಾಗಿ ಪ್ರಕೃತಿಯ ಬಣ್ಣವಾಗಿ ಮೇಳೈಸು….ಕಾದಿರುವೆ ನೆನಪುಗಳ ಜಪಮಾಲೆ ಜಪಿಸುತ….. **************************************

ಬಣ್ಣಗಳ ದಂಡು Read Post »

ಇತರೆ, ದಾರಾವಾಹಿ

ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ

Read Post »

ಇತರೆ

ಪದಗಳು

ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. ಒಂದೇ ಘಟನೆಯ ಮೇಲೆ ನಡೆಯುವ ಕಥನ ಗೀತೆಗೆ ಮಾತ್ರ ಇದನ್ನು ಅನ್ವಯಿಸಬಹುದು. ಆದರೆ ದೀರ್ಘಕಾವ್ಯಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ. ಆಶುರಚನೆ ಮತ್ತು ಸಂಪ್ರದಾಯಗಳು ಎರಡು ಸೂತ್ರಗಳು. ಲಾವಣಿ:- ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ (ಗುಲ್ಬರ್ಗಾ), ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ಲಾವಣಿ ಎಂಬ ಒಂದು ಪ್ರಕಾರವಿದ್ದರೂ ಉತ್ತರದಷ್ಟೂ ವೈವಿದ್ಯ ಅದಕ್ಕಿಲ್ಲ.      ಸಾಂಪ್ರದಾಯಿಕವಾಗಿ ಲಾವಣಿಗಳನ್ನು ಬಯಲು ಲಾವಣಿ ಮತ್ತು ಮೇಳ ಲಾವಣಿಯೆಂದೂ ಕರೆಯಲಾಗುತ್ತದೆ. ಬಯಲು ಲಾವಣಿಯಲ್ಲಿ ಹೆಸರೇ ಹೇಳುವಂತೆ ಒಬ್ಬನೇ ಲಾವಣಿಯನ್ನ ಹೇಳುತ್ತಾನೆ. ಅಂತಾ ಸಂದರ್ಭ ಈಗಲೂ ಇದೆ. ಆದರೆ ಮೇಳ ಲಾವಣಿಯಲ್ಲಿ ಡಪ್ಪು, ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.         ಇದು ಉತ್ತರ ಭಾಗದ ಒಂದು ಜನಪ್ರಿಯ ಸಂಪ್ರದಾಯ ಲಾವಣಿಗಳನ್ನು ಗೀಗಿ ಡಿಪ್ಪಿನ ಹಾಡು, ಹಾಡಕ್ಕಿ, ಶಾಯರಿ, ಹರದೇಶಿ – ನಾಗೇಶಿ, ಕಲ್ಗಿ – ತುರಾಯಿ, ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅವುಗಳಲ್ಲಿ ಹರದೇಶಿ -ನಾಗೇಶಿ ಸಂಪ್ರದಾಯವನ್ನೆ ಕಲ್ಲಿ ತುರಾ ಸವಾಲ್ – ಜವಾಬು ಪದಗಳು ಎಂದು ಕರೆಯಲಾಗುತ್ತದೆ. ಕನ್ನಡದ ಲಾವಣಿಯ ಇತಿಹಾಸವನ್ನು ಮರಾಠಿಯ ಪೇಶ್ವೆಯ ಕಾಲಕ್ಕೆ ಕೊಂಡೊಯ್ಯೊಲಾಗುತ್ತದೆ. ಪೇಶ್ವೆಯರ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಪೊವಾಡಗಳೆಂಬ ವೀರರ ಕಥನ ಕವನಗಳೇ ಆಗಿದೆ. ನಮ್ಮಲ್ಲಿಯೂ ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ, ಸರ್ಜಪ್ಪ ನಾಯಕ ಮುಂತಾದ ಅನೇಕ ಲಾವಣಿಗಳು ಈ ಮಾದರಿಯವು ಎಂದು ಮೇಲ್ಮಟ್ಟಕ್ಕೆ ಒಪ್ಪಿಕೊಳ್ಳಬಹುದಾದರೂ, ಮರಾಠಿಯ ಪೋವಾಡಗಳು ಕನ್ನಡದಲ್ಲಿರುವಂತೆ ಜಾನಪದೀಯ ರಚನೆಗಳು.        ಲಾವಣಿ ಹಾಡುಗಳು ಬಹಳ ವಿಸ್ತಾರವಾದವುಗಳಲ್ಲಿ ಮಹಾಕಾವ್ಯದ ವ್ಯಾಪ್ತಿ ಇದಕ್ಕೆ ಹೊರತಾದುದು. ಹೆಚ್ಚೆಂದರೆ ಒಂದು ಗಂಟೆಯ ಅವಧಿಯಲ್ಲಿ ಒಂದು ಸಖಿ ಮುಖ್ಯ. ಹಾಡು ಹಾಗೂ ಖ್ಯಾಲಿಯನ್ನು ಬಳಸಬೇಕಾಗುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು. ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ಅದು ಸವಾಲ್ ಜವಾಬ್ ವಿಚಾರದಲ್ಲಿ ಅದರ ಕಾಲವನ್ನು ಒಂದು ಗಂಟೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಂದರ್ಭಾನುಸಾರ ಬೆಳೆಯುತ್ತದೆ. ಲಾವಣಿ ಸಾಹಿತ್ಯ ಪರಂಪರೆಯಲ್ಲಿ ಬೀಬೀ ಇಂಗಳಗಿ ಭಾಗದ ಲಾವಣಿಕಾರರು, ತೇರದಾಳ ಭಾಗದ ಲಾವಣಿಕಾರರು, ಹಲಕುಂದ ಭಾಗದ ಲಾವಣಿಕಾರರು ಎಂಬ ಪ್ರದೇಶಿಕ ವಿವರಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಗೀಗೀಪದ :-         ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಗೀಯ ಗೀಯ ಗೀಗೀ ಹರೇ ಗೀಯ ಗಾ ಎಂಬ ಪಲ್ಲವಿಯೊಂದಿಗೆ ಹಾಡುವ ಒಂದು ಜನಪದ ಗೀತಸಂಪ್ರದಾಯ.          ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು. ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ           ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.          ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಮಹಿಳೆಯರು .ಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ… (ಸಂಗ್ರಹ) ಗೀಗೀ ಪದ ಬಂದಾರ ಬರ್ರಿ ತಂದೀನಿ ಕಥೆಯನ್ನಕಿವಿಗೊಟ್ಟು ಕೇಳ್ರಿ ಮಾತಾ, ಮರೆತ, ನೀವಾ ಮಾತಾ ಮರೆತಾssಗೀಯ ಗೀಯಾ ಗಾ ಗೀಯ ಗೀಯಾ|| ಚೀನಾಕ ಹುಟ್ಟಿ ವಿಶ್ವವನ್ನೆ ಮೆಟ್ಟಿ ನಿಂತಾ,ಬಣ್ಣದ್ಬದುಕು ಮಣ್ಣಾಗಿ ಹೋದ್ಹಂತ,ಕಂತಿ ಕುಂತಿ ಕನಸೆಲ್ಲ ಕದಡಿದ್ಹಾಂಗ ನೀರಾಗ,ನಾ ನೀ ಅನ್ನೊ ಸೊಕ್ಕಿನ ಮಂದೀಗಾ,ಮಿಗಿಲೀನ ಬಾಳಪಾಠ ಕಲಿಸಿದಂತಾ,ಕೊರೋನಾ  ಕಥಿಯನ್ನಾss,ಅರೇ!ಗೀಯ ಗೀಯಾ ಗಾಗಿಯ ಗೀಯಾ…||೧|| ಮುಟಿಗಿವಳಗ ಬಾಳ್ ಐತಿ ಮೂರಾದಿನದಾಗ ನಿಂತೈತಿಸಾವಿನ ಮುಂದ ಸಣ್ಣವರು ನಾವೆಲ್ಲ,ಮನೆ ಮಾರು ತೊರೆದ ಮಕ್ಕಳನ್ನಮರಳಿ ಮನೆಗೆ ಸೇರಿಸಿ,ಇರೋದ್ರಾಗ ನೆಮ್ಮದಿಯಾಗಿರಿಯಂತಾ, ಹೇಳಿದ ಕೊರೋನಾ ಕಥಿಯನ್ನಾss ಅರೆ! ಗೀಯ ಗೀಯಾ ಗಾಗಿಯ ಗೀಯಾ…||೨|| ಬಣ್ಣದ ಬದುಕು ಬಯಲಿಗಾತುಸುಣ್ಣದ ಬಾಳು ಸವಾಲಾಯ್ತುಮೇಲು ಕೀಳು ಬಡವ ಬಲ್ಲಿದಅಂಬೋ ಮಾತು ಬಲಿಯಾಯ್ತು,ನಾವೆಲ್ಲ ಒಂದೆಂಬ,ಮಾನವೀಯತೆಹರಿಸಿ, ಮನುಕುಲಕ ನಾವ್ಯರಂತ,ಹೇಳಿದ ಕೊರೋನಾ ಕಥಿಯನ್ನಾssಅರೆ! ಗೀಯ ಗೀಯಾ ಗಾಗಿಯ ಗೀಯಾ||೩|| ತಿಂದು ತೇಗಿದ ಮಂದಿಗೆ ಅರೆಹೊಟ್ಟೆ ಮಾಡಿ, ದುಡ್ಡೇ ದೊಡ್ಡಪ್ಪನಲ್ಲಾ,ಅತಿಯಾದ ಜೀವನದ್ಮತಿಗೆಅವನತಿಯೇ ಸೂತ್ರವಿದಂತ,ಮುಖಕೆ ನಿಜದ ಮುಖ್ವಾಡ ಹಾಕಿದೇಹ ಮನಸ್ಸು ಶುದ್ದ ಮಾಡೋ ,ಸರಳಾss ಸಮ್ಮಾನ ಸ್ಯಾನಿಟೈಸರ್ ಹಾಕಿದಂತಾssಕೊರೋನಾ ಕಥಿಯನ್ನಾssಅರೆ ಗೀಯ ಗೀಯ ಗಾಗಿಯ ಗೀಯಾ||೪|| ಕಹಿಸತ್ಯ ಆದ್ರೂನು ಸಿಹಿಯಾಗಿ ಉಣಬೇಕ್ರಿಜೀವದಾಗ ಏನೈತಿ,ಎನ್ ಕಟಕೊಂಡುಸಾಯೊದೈತಿ ,ನಂದಾs ಎಲ್ಲ ಅಂಬೋ ಮಾತು ಸುಳ್ಳೈತಿ, ಸರಳ ಸತ್ಯ ತಿಳಿರಿ,ನಂಬಿಕೇನೆ ಜೀವನದ ಜೀವಾಳಂತ ಬಾಳ ಗೆಲಿರೀ, ಹೇಳಿದ ಕೊರೋನಾ ಕಥಿಯನ್ನಾsss…||೫|| ಶಾರು *******************************************************

ಪದಗಳು Read Post »

ಇತರೆ

ನೋಟ

ನೋಟ ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ. ಈ ವಚನದತಿರುಳು: ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ. ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ. ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ. ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು. ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು.. ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು! ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು! ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ. *********************************************************************                                                

ನೋಟ Read Post »

ಇತರೆ

ಅಕ್ಕ, ಲಲ್ಲಾ, ರಾಬಿಯಾ..!

ಲೇಖನ ಅಕ್ಕ, ಲಲ್ಲಾ, ರಾಬಿಯಾ..! ಕೆ.ಶಿವು.ಲಕ್ಕಣ್ಣವರ ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೇ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ.     ಏಕೋ ಏನೋ ದಿನದ ಯಾವುದೇ ಕುಷಿಯ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ..! # ಅಕ್ಕಮಹಾದೇವಿ …………………… ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಲಭ್ರಮೆ ಜಾತಿಭ್ರಮೆ, ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ… ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ, ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹಭ್ರಮೆ… ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೇ ಎನ್ನ ಮನ ನಾಚಿನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ. # ಲಲ್ಲೇಶ್ವರಿ/ ಲಲ್ಲಾ ಆರಿಫಾ | ಕನ್ನಡಕ್ಕೆ: ಅಲಾವಿಕಾ– …………………………………………………………….. ಆತ್ಮ ಕ್ಷಯಿಸಿದರೂ ಚಂದ್ರಮನಂತೆ ಹೊಸತಾಗಿ ಮರಳುವುದು ಮತ್ತೆ; ಅಳಿದಷ್ಟೂ ಅಲೆಗಳನು ಸೃಜಿಸುತಲೇ ಇರುವಂತೆ ಸಾಗರದ ನಿತ್ಯ ಪಾತ್ರೆ ನನ್ನ ಚಿತ್ತದ ಭಿತ್ತಿ ನನ್ನ ದೇಹದ ಚಿತ್ರ ಬಿಡಿಸುವೆನು ನಾನೇ; ಲಲ್ಲಾ! ಅಳಿಸಿ ಕ್ಷಣಕ್ಷಣವೂ ಹೊಸತಾಗಿ ಮೂಡುವೆನು ಇದಕೆ ಕೊನೆ ಇಲ್ಲ. “ಆತ್ಮದಲೆ ನೆಲೆಸು” ಎಂದಿರಲು ಗುರುವಾಣಿ, ಬಿಸುಟೆ ಬಟ್ಟೆಯ ಬಂಧ; ಲಲ್ಲಾ! ಬದುಕೀಗ ನಿತ್ಯ ಸಂಭ್ರಮದ ನೃತ್ಯ! ರಾಬಿಯಾ | ಕನ್ನಡಕ್ಕೆ: ಅಲಾವಿಕಾ– ……………………………………… ಏಕಾಂತದಲಿ ಶಾಂತಿಯಿದೆ ನನಗೆ, ಸೋದರರೇ! ಪ್ರಿಯತಮನ ಚಿರಸಂಗಾತವಿದೆ; ಬೇರೇನೂ ಇಲ್ಲವೆನಗೆ ಅವನೊಲವ ಬದಲು. ಮರ್ತ್ಯಲೋಕದಲಿ ಅವನೊಲವ ಸತ್ವಪರೀಕ್ಷೆ; ಅವನ ಸೌಂದರ್ಯ ಧ್ಯಾನವೇ ನನಗೆ ಮಿಹ್ರಾಬ್… ಅವನೆಡೆಗೆ ಚಲಿಸುವುದೆ ನನ್ನ ಕಿಬ್ಲಾಹ್! “ಜೀವ ತೊರೆದು ಹೋದರೆ ನಾನು ತೃಪ್ತಳಾಗುವ ಮೊದಲೇ!?” ಅಯ್ಯೋ! ಪೀಡಿಸುತಿದೆ ಎದೆಯ ಯಾತನೆ, ಬರಬಾರದೇ ಭವವೈದ್ಯ, ಬಯಕೆಯುಣ್ಣುತ್ತ ಜೀವ ಹಿಡಿದಿದೆ ಹೃದಯ ಮದ್ದಾಗುವುದು ಅವನ ಮಿಲನ, ಆನಂದದಲಿ ಆತ್ಮದಾಹ ಶಮನ! ಅವನೆನ್ನ ಜೀವ ಸ್ರೋತ, ಅವನಲ್ಲೆ ನನ್ನ ಭಾವಪರವಶ ಜಗದೆಲ್ಲ ಜಡಚೇತನವ ತೊರೆದು ಹೊರಟಿರುವೆ, ಅವನ ಕೂಡಿ ಕೊನೆಯಾಗುವುದೆ ಚರಮ ಗುರಿ ನನಗೆ. ********************************

ಅಕ್ಕ, ಲಲ್ಲಾ, ರಾಬಿಯಾ..! Read Post »

ಇತರೆ

ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ ನಿಂತು ಕಾಯತೊಡಗಿದ. ಆಳುಗಳನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಗೋಪಾಲನನ್ನು ಕಂಡು ಕೈಬೀಸಿ ಕರೆಯುತ್ತ, ‘ಓಹೋ ಗೋಪಾಲನಾ ಮಾರಾಯಾ ಬಾ ಬಾ… ಏನು ವಿಶೇಷ?’ ಎಂದ ಗತ್ತಿನಿಂದ.  ‘ವಿಶೇಷ ನಮ್ಮದೆಂಥದು ಶಂಕರಣ್ಣ ಎಲ್ಲಾ ನಿಮ್ಮದೇ!’ ಎಂದ ಗೋಪಾಲ ಸಂಕೋಚದಿಂದ. ಆದರೆ ಶಂಕರ ತನ್ನ ಕಟ್ಟಡ ದಿಟ್ಟಿಸುತ್ತಲೇ ಅವನೊಡನೆ ಮಾತಾಡುತ್ತಿದ್ದವನು, ‘ಹೌದಾ, ಹಾಗಂತೀಯಾ… ಹಾಗಾದರೆ ಸರಿ ಬಿಡು. ಈಗ ಬಂದ ವಿಷಯ ಹೇಳು?’ ಎಂದು ಉದಾಸೀನದಿಂದ. ‘ನೀವು ಮೊನ್ನೆ ಸಂಜೆ ಅಂಬಾಗಿಲಿನಲ್ಲಿ ಸಿಕ್ಕಿದಾಗ ಈ ಸೈಟಿನಲ್ಲಿ ಸ್ವಲ್ಪ ಕಬ್ಬಿಣ ಉಂಟೂಂತ ಹೇಳಿದ್ದಿರಿ. ಅದಕ್ಕೇ ಬಂದೆ ಶಂಕರಣ್ಣ…’ ‘ಓಹೋ, ಹೌದಲ್ಲವಾ… ನೀನು ಆಗಬಹುದು ಮಾರಾಯ. ಎರಡು ದಿನದ ಹಿಂದಷ್ಟೇ ಮಾತಾಡಿದವನು ಇವತ್ತು ಬಂದೇಬಿಟ್ಟಿದ್ದಿ ನೋಡು. ವ್ಯಾಪಾರದ ಮೇಲೆ ಭಾರೀ ಆಸ್ಥೆ ಉಂಟು ನಿಂಗೆ! ಇವತ್ತೇ ಬಂದದ್ದು ಒಳ್ಳೆಯದಾಯ್ತು. ನಾಳೆ ನಾಡಿದ್ದರಲ್ಲಿ ಬಂದಿದ್ದರೆ ಮಾಲು ಯಾರದ್ದೋ ಪಾಲಾಗುತ್ತಿತ್ತು. ನಿನ್ನೆಯಿಂದ ಇಬ್ಬರು ಗುಜರಿ ವ್ಯಾಪಾರಿಗಳು ಬಂದು ಹೋದರು. ಆದರೆ ನಾನು ಕೊಡಲಿಲ್ಲ!’ ಎಂದ ಗೋಪಾಲನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಧಾಟಿಯಿಂದ. ‘ಹೌದಾ ಶಂಕರಣ್ಣ ಬಹಳ ಒಳ್ಳೆಯದಾಯ್ತು! ನನಗೂ ಕೆಲಸವಿಲ್ಲದೆ, ವ್ಯಾಪಾರವೂ ಸರಿಯಾಗಿಲ್ಲದೆ ಕೆಲವು ದಿನಗಳಾದವು. ಸಂಸಾರವುಂಟಲ್ಲವಾ. ನಿಮ್ಮಂಥವರಿಂದಾಗಿಯೇ ನನ್ನಂಥ ಒಂದಷ್ಟು ಬಡವರ ಹೊಟ್ಟೆ ತುಂಬುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಶಂಕರಣ್ಣಾ!’ ಎಂದ ಗೋಪಾಲ ನಮ್ರನಾಗಿ. ಗೋಪಾಲನ ಹೊಗಳಿಕೆಯಿಂದ ಶಂಕರ ಉಬ್ಬಿ ಹೋದ. ಏಕೆಂದರೆ ಈಶ್ವರಪುರದಲ್ಲಿ ಅವನನ್ನು ಪ್ರಾಮಾಣಿಕ ಧನ್ಯತೆಯಿಂದ ಹೊಗಳುವವರು ಯಾರೂ ಇರಲಿಲ್ಲ. ಇರಲು, ಅವನು ಯಾರಿಗೂ ಯಾವ ಒಳ್ಳೆಯದನ್ನೂ ಮಾಡಿದವನಲ್ಲ. ಕೆಲಸಗಾರರನ್ನೂ ತನ್ನ ಕೆಂಗಣ್ಣಿನ ಅಂಕೆಯಲ್ಲಿಟ್ಟುಕೊಂಡು ದುಡಿಸುವವನು. ಸಂಬಂಧಿಕರೂ ಅವನ ಸಿರಿವಂತಿಕೆಯ ಅಟ್ಟಹಾಸಕ್ಕೆ ಹೆದರಿ ಹೆಚ್ಚಿಗೆ ಮಾತಾಡಲು ಹಿಂಜರಿಯುತ್ತ ದೂರವೇ ಉಳಿದಿದ್ದರು. ಅವನೊಂದಿಗೆ ಪುಕ್ಕಟೆ ಸಾರಾಯಿ ಕುಡಿಯುವ ಕೆಲವು ಸ್ನೇಹಿತರು ಮಾತ್ರ ತಮಗೆ ಅಮಲೇರಿದ ಮೇಲೆಯೇ ಅವನಿಂದ ಕುಡಿದ ಋಣಕ್ಕಾಗಿ ಇಲ್ಲಸಲ್ಲದ್ದಕ್ಕೆ ಒಂದಿಷ್ಟು ಒಗ್ಗರಣೆ ಹಾಕಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಆದರೆ ಆಗ ಶಂಕರನೂ ಮತ್ತಿನಲ್ಲಿರುತ್ತಿದ್ದ. ಆದ್ದರಿಂದ ಅದರ ಸ್ವಾದ ಅವನಿಗೆ ಅಷ್ಟಾಗಿ ಹತ್ತುತ್ತಿರಲಿಲ್ಲ. ಆದರೂ ಈಗ ಶಂಕರ ಗೋಪಾಲನ ಮಾತಿಗೆ ಬೆಲೆ ಕೊಡದವನಂತೆ, ‘ಅದೂ ಹೌದನ್ನು. ಆದರೆ ಸಂಸಾರ ಯಾರಿಗಿಲ್ಲ ಮಾರಾಯಾ? ನನಗೂ ಇದೆಯಲ್ಲ! ಅದಿರಲಿ, ನಿನ್ನೆ ಬಂದವರಿಗೆ ನಾನು ಮಾಲು ಯಾಕೆ ಕೊಡಲಿಲ್ಲ ಗೊತ್ತುಂಟಾ? ಯಾಕೆಂದರೆ ನನ್ನ ಜಾತಿಯವರು ನನಗೆ ಮೊದಲು. ಉಳಿದವರೆಲ್ಲ ಆಮೇಲೆ. ನಿನಗೆ ಕೊಟ್ಟ ಮಾತು ತಪ್ಪುತ್ತೇನಾ ಹೇಳು?’ ಎಂದ ನಗುತ್ತ. ಆಗ ಗೋಪಾಲನಿಗೆ ಅವನ ಮೇಲೆ ಅಭಿಮಾನ ಉಕ್ಕಿ ಬಂತು. ‘ನಿಮ್ಮದು ದೊಡ್ಡ ಗುಣ ಶಂಕರಣ್ಣಾ. ಈಗಿನ ಕಾಲದಲ್ಲಿ ನಿಮ್ಮಂಥವರು ಸಿಗುವುದು ಬಹಳ ಕಡಿಮೆ!’ ಎಂದು ಇನ್ನಷ್ಟು ಮೇಲಕ್ಕಿಟ್ಟ. ಅದರಿಂದ ಶಂಕರ ಮತ್ತಷ್ಟು ಹಿಗ್ಗಿದನಾದರೂ ವ್ಯಾಪಾರ ಚತುರತೆ ಅವನನ್ನು ಎಚ್ಚರಿಸಿತು. ಹಾಗಾಗಿ, ‘ಆದರೂ ಒಂದು ಮಾತು ಗೋಪಾಲ, ನನ್ನ ಮಾಲಿಗೆ ನೀನು ರೇಟ್ ಮಾತ್ರ ಸರಿಯಾಗಿ ಕೊಡಬೇಕು ನೋಡು!’ ಎನ್ನುತ್ತ ಗೋಪಾಲನ ಉತ್ತರಕ್ಕೂ ಕಾಯದೆ ಸ್ವಲ್ಪ ದೂರದಲ್ಲಿದ್ದ ಬಿಲ್ಡಿಂಗ್ ರಾಡಿನ ರಾಶಿಯೊಂದರ ಪಕ್ಕ ಹೋಗಿ ನಿಂತುಕೊಂಡ. ‘ಆಯ್ತು ಶಂಕರಣ್ಣಾ…’ ಎಂದ ಗೋಪಾಲನೂ ಅತ್ತ ಹೋಗಿ ಕಬ್ಬಿಣವನ್ನು ಗಮನಿಸಿದ. ಸಾಕಷ್ಟಿತ್ತು. ಆದರೆ ಶಂಕರ ಅದಕ್ಕೆ ಹೇಳಿದ ಬೆಲೆಯನ್ನು ಕೇಳಿದವನು ದಂಗಾಗಿಬಿಟ್ಟ! ಕಿಲೋಗೆ ಇನ್ನೊಂದೆರಡು ರೂಪಾಯಿ ಜಾಸ್ತಿ ಕೊಟ್ಟರೆ ಹೊಸ ಕಬ್ಬಿಣವನ್ನೇ ಕೊಳ್ಳಬಹುದಲ್ಲವಾ ಎಂದೆನ್ನಿಸಿತವನಿಗೆ. ಆದರೆ ಶಂಕರನ ಜಿಪುಣತನ ಅವನಿಗೂ ಗೊತ್ತಿತ್ತು. ಹಾಗಾಗಿ ಪಟ್ಟುಬಿಡದೆ ಚೌಕಾಶಿ ಮಾಡಿದ. ಕೊನೆಗೆ, ಹಿಂದೆ ಬಂದು ಹೋಗಿದ್ದ ಇಬ್ಬರು ವ್ಯಾಪಾರಿಗಳಿಗಿಂತ ಒಂದಿಷ್ಟು ಹೆಚ್ಚಿಗೆ ಬೆಲೆ ಕೊಟ್ಟು ವ್ಯಾಪಾರ ಕುದುರಿಸುವ ಹೊತ್ತಿಗೆ ಗೋಪಾಲ ಅರೆಜೀವವಾಗಿದ್ದ. ಆದರೆ ಆ ದೊಡ್ಡ ರಾಶಿಯನ್ನು ಕೊಳ್ಳುವಷ್ಟು ಹಣ ಆಗ ಅವನಲ್ಲಿರಲಿಲ್ಲ. ಆದ್ದರಿಂದ, ‘ಶಂಕರಣ್ಣ, ಈಗ ನನ್ನ ಹತ್ರ ಅಷ್ಟೊಂದು ದುಡ್ಡಿಲ್ಲ. ಹಾಗಂತ ಬೇರೆ ಯಾರಿಗೂ ಕೊಡಬಾರದು ನೀವು. ನಾಳೆ ಬೆಳಿಗ್ಗೆ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಂಡು ಸೀದಾ ಇಲ್ಲಿಗೆ ಬಂದು ಲೆಕ್ಕ ಚುಕ್ತ ಮಾಡಿ ಮಾಲು ಕೊಂಡೊಯ್ಯುತ್ತೇನೆ. ಅಲ್ಲಿವರೆಗೆ ಟೈಮ್ ಕೊಡಬೇಕು!’ ಎಂದು ದೈನ್ಯದಿಂದ ಕೇಳಿಕೊಂಡ. ಶಂಕರನಿಗೆ ನಿರಾಶೆಯಾಯಿತು. ಆದರೂ ವಿಧಿಯಿಲ್ಲದೆ ಒಪ್ಪಿದ. ಅಷ್ಟಾಗುತ್ತಲೇ ಗೋಪಾಲನಿಗೆ ತನ್ನ ಸ್ವಂತ ಜಾಗದ ವಿಷಯ ನೆನಪಾಯಿತು. ಈತ ಹೇಗೂ ಜಾಗದ ವ್ಯಾಪಾರಿ. ಇವನ ಹತ್ತಿರ ಹೇಳಿಟ್ಟರೆ ಒಂದು ತುಂಡು ಭೂಮಿ ಎಲ್ಲಾದರೂ ಸಿಗಬಹುದೇನೋ ಎಂದುಕೊಂಡವನು, ‘ಶಂಕರಣ್ಣ ನಿಮ್ಮಿಂದ ಒಂದು ಉಪಕಾರ ಆಗಬೇಕಲ್ಲವಾ?’ ಎಂದ ಮೃದುವಾಗಿ. ಆಗ ಶಂಕರನಿಗೆ, ಇವನೆಲ್ಲಾದರೂ ಸಾಲ ಗೀಲ ಕೇಳಿ ಬಿಡುತ್ತಾನೇನೋ ಎಂದೆನಿಸಿ ಎದೆಯೊಮ್ಮೆ ಧಸಕ್ ಎಂದಿತು. ‘ಅದೇನು ಮಾರಾಯಾ ಹೇಳು? ಆದರೆ ಈಗ ವ್ಯಾಪಾರ ವೈವಾಟೆಲ್ಲ ನೆಲಕಚ್ಚಿಬಿಟ್ಟಿದೆ ಹಾಳಾದ್ದು. ಹಾಗಾಗಿ ದುಡ್ಡಿನ ವಿಷಯವೊಂದನ್ನು ಬಿಟ್ಟು ಬೇರೆ ಏನಾದರೂ ಕೇಳು. ಸಾಧ್ಯವಿದ್ದರೆ ಮಾಡುವ’ ಎಂದು ಅರ್ಧ ಕಟ್ಟಿದ್ದ ಕಟ್ಟಡದ ತುದಿಯನ್ನೇ ದಿಟ್ಟಿಸುತ್ತ ಹೇಳಿದ. ‘ಛೇ, ಛೇ! ಹಣದ ವಿಷಯ ಅಲ್ಲ ಶಂಕರಣ್ಣಾ. ನೀವು ಇಷ್ಟೆಲ್ಲ ಕಡೆ ಜಾಗದ ವ್ಯಾಪಾರ ಮಾಡುತ್ತೀರಿ. ಎಲ್ಲಾದರೂ ನನಗೊಂದು ನಾಲ್ಕೈದು ಸೆಂಟ್ಸ್ ಜಾಗ ಸಿಗುತ್ತದಾ ಅಂತ ನೋಡಬಹುದಾ? ಈ ದರಿದ್ರದ ಬಾಡಿಗೆ ಮನೆಗಳಲ್ಲಿ ಕೂತು ಸಾಕಾಗಿಬಿಟ್ಟಿದೆ ಶಂಕರಣ್ಣ. ಜೊತೆಗೆ ಇವಳದ್ದೂ ಒಂದೇ ಸಮನೆ ಕಿರಿಕಿರಿ ಶುರುವಾಗಿದೆ!’ ಎಂದು ನೋವು ತೋಡಿಕೊಂಡ. ‘ಅಷ್ಟೇನಾ ಮಾರಾಯಾ…!’ ಎಂದ ಶಂಕರ ನಿರಾಳನಾದ. ಅಷ್ಟರಲ್ಲಿ ಅವನಿಗೇನೋ ಹೊಳೆಯಿತು. ‘ಓಹೋ, ಹೌದಲ್ಲವಾ. ನೀನೀಗ ಆ ಮುತ್ತಯ್ಯನ ತೋಟದ ಮನೆಯಲ್ಲಿ ಇರುವುದಲ್ಲವಾ?’ ‘ಹೌದು ಶಂಕರಣ್ಣ…!’  ‘ಅವನು ಹೆಂಗಸರ ವಿಷ್ಯದಲ್ಲಿ ದೊಡ್ಡ ಫಟಿಂಗನಂತೆ ಮಾರಾಯಾ. ನನ್ನ ಸೈಟಿಗೆ ಕೂಲಿಗೆ ಬರುತ್ತಿದ್ದ ಬಿಜಾಪುರದ ಕೆಲವು ಹೆಂಗಸರು ಅವನ ಕಥೆ ಹೇಳಿಕೊಂಡು ಕಂಡಾಬಟ್ಟೆ ಉಗಿಯುತ್ತಿದ್ದರು!’ ಎಂದು ಜೋರಾಗಿ ನಕ್ಕ. ಆಗ ಗೋಪಾಲನಿಗೆ ರಾಧಾಳ ಕಥೆ ನೆನಪಾಗಿ ತಟ್ಟನೆ ಅಶಾಂತನಾದ. ಆದರೂ ಸಂಭಾಳಿಸಿಕೊಂಡು, ‘ಹೌದಂತೆ ಶಂಕರಣ್ಣಾ. ಆದರೆ ನನ್ನ ಹೆಂಡತಿಯ ತಂಟೆಗೆ ಮಾತ್ರ ಅವನು ಈವರೆಗೆ ಬಂದಿಲ್ಲ ನೋಡಿ. ಆದರೂ ಈ ಬಾಡಿಗೆ ಬದುಕಿನಿಂದ ಒಮ್ಮೆ ಬಿಡುಗಡೆ ಸಿಕ್ಕಿದರೆ ಸಾಕಪ್ಪಾ ಅಂತಾಗಿಬಿಟ್ಟಿದೆ ನನಗೆ!’ ಎಂದ ಗೋಪಾಲ ಬೇಸರದಿಂದ. ‘ಆಯ್ತು ಮಾರಾಯ. ನೀನು ನಮ್ಮವನೇ ಅಲ್ಲವಾ. ನಿನಗೊಂದು ಜಾಗ ಮಾಡಿ ಕೊಡಲಾರೆನಾ? ಇತ್ತೀಚೆಗೆ ನಾನೊಂದು ಕಡೆ ಐದು ಎಕರೆ ಭೂಮಿ ಕೊಂಡು ಅದನ್ನು ಹತ್ಹತ್ತು ಸೆಂಟ್ಸ್‍ನ ಲೇಔಟ್ ಮಾಡಿದ್ದೆ. ಆ ಸೈಟುಗಳ ಒಂದು ಮೂಲೆಯಲ್ಲಿ ಚಿಕ್ಕದೊಂದು ಜಾಗ ಉಳಿದಿದೆ ನೋಡು. ಅದರಲ್ಲಿ ಎಷ್ಟು ಸೆಂಟ್ಸ್ ಉಂಟೂಂತ ಅಳತೆ ಮಾಡಿ ಹೇಳಬೇಕು. ನಾಳೆ, ನಾಡಿದ್ದರಲ್ಲಿ ಬಾ ಮಾತಾಡುವ’ ಎಂದು ಶಂಕರ ನಿರ್ಲಿಪ್ತನಂತೆ ನುಡಿದ. ಅಷ್ಟಕ್ಕೆ ಗೋಪಾಲ ಆನಂದದಿಂದ ತೇಲಾಡಿದ. ‘ಹೌದಾ ಶಂಕರಣ್ಣ. ಹಾಗಾದರೆ ಬದುಕಿದೆ ನಾನು! ಯಾವ ರಗಳೆಯೂ ಇಲ್ಲದ ಸಣ್ಣ ಜಾಗವೊಂದನ್ನು ನೀವು ಮಾಡಿ ಕೊಟ್ಟರೆ, ನನ್ನ ಉಸಿರಿರುವ ತನಕ ನಿಮ್ಮ ಉಪಕಾರವನ್ನು ಮರೆಯಲಿಕ್ಕಿಲ್ಲ ಶಂಕರಣ್ಣಾ. ಈ ವಿಷಯದಲ್ಲಿ ನಿಮ್ಮ ಮೇಲೆ ಪೂರ್ಣ ವಿಶ್ವಾಸ ಉಂಟು ನಂಗೆ. ಸಾಲ ಸೋಲ ಮಾಡಿಯಾದರೂ ಆ ಜಾಗವನ್ನು ಕೊಳ್ಳುತ್ತೇನೆ!’ ಎಂದು ದೈನ್ಯದಿಂದ ಹೇಳಿದ. ‘ಆಯ್ತಾಯ್ತು ಮಾರಾಯ ಈಗ ಹೊರಡು. ನಾಳೆ ಬಾ, ಜಾಗ ತೋರಿಸುತ್ತೇನೆ. ಒಪ್ಪಿಗೆಯಾದರೆ ನಂತರ ದುಡ್ಡಿನ ಮಾತುಕಥೆಯಾಡುವ’ ಎಂದ ಶಂಕರ ಅಲಕ್ಷ್ಯದಿಂದ. ಗೋಪಾಲ ನಮ್ರವಾಗಿ ಕೈಮುಗಿದು ಹೊರಟು ಹೋದ. ಆದರೆ ಅವನು ಅಲ್ಲಿಂದ ನಿರ್ಗಮಿಸುತ್ತಲೇ ಶಂಕರ ಆ ಜಾಗದ ಕುರಿತು ಯೋಚಿಸತೊಡಗಿದ. ಐದು ಎಕರೆ ಜಮೀನಿನ ಒಂದು ಕೊನೆಯಲ್ಲಿ ಉಳಿದ ಜಾಗವದು. ಆದರೇನು ಮಾಡುವುದು? ಅದರ ಸಮೀಪವೊಂದು ನಾಗಬನ ಇರುವುದೇ ದೊಡ್ಡ ತೊಡಕಾಗಿಬಿಟ್ಟಿದೆ! ಎಷ್ಟು ಗಿರಾಕಿಗಳು ಬಂದರು. ಆ ಕಾಡನ್ನು ನೋಡಿ ಅದರೊಳಗೆ ನಾಗಬನವಿದೆ ಎಂದು ತಿಳಿದ ಕೂಡಲೇ ಓಡಿ ಹೋಗುತ್ತಾರೆ. ಈ ಕೆಲವು ಜೋಯಿಸರೂ ವಾಸ್ತುವಿನವರೂ ಕೂಡಿ ಜನರಲ್ಲಿ ನಾಗನ ಬಗ್ಗೆ ಇಲ್ಲಸಲ್ಲದ ಹೆದರಿಕೆಯನ್ನು ಹುಟ್ಟಿಸಿ ಬಿಟ್ಟಿದ್ದಾರೆ ಹಾಳಾದವರು! ಆ ಜಾಗವನ್ನು ಬ್ರಾಹ್ಮಣರಾದರೂ ಕೊಂಡುಕೊಳ್ಳಬಹುದೆಂದು ಭಾವಿಸಿದ್ದೆ. ಆದರೆ ಮೂರೂವರೆ ಸೆಂಟ್ಸ್ ಎಂದ ಕೂಡಲೇ ಅವರೂ ಕಡಿಮೆಯಾಯ್ತು ಎಂದು ಹೋಗುತ್ತಿದ್ದಾರೆ. ಅದಕ್ಕೆ ಇವನೇ ತಕ್ಕ ಪಾರ್ಟಿ. ದೊಡ್ಡ ಜಾಗವನ್ನು ಕೊಂಡುಕೊಳ್ಳುವ ಶಕ್ತಿ ಇವನಲ್ಲಂತೂ ಇಲ್ಲ. ಆದ್ದರಿಂದ ಇವನ ಕೊರಳಿಗೇ ಕಟ್ಟಿಬಿಡಬೇಕು!’ ಎಂದು ನಿರ್ಧರಿಸಿದ. ಶಂಕರನ ದಯೆಯಿಂದ ನಾಳೆಯೇ ತನಗೊಂದು ಸ್ವಂತ ಜಾಗ ಸಿಗಲಿಕ್ಕಿದೆ ಎಂದು ಖುಷಿಪಟ್ಟ ಗೋಪಾಲ, ವೇಗವಾಗಿ ಮನೆಯತ್ತ ಸೈಕಲ್ ತುಳಿದ. ಅರ್ಧ ಗಂಟೆಯಲ್ಲಿ ಮನೆಯಂಗಳಕ್ಕೆ ಬಂದು ಸೈಕಲ್ ನಿಲ್ಲಿಸಿ, ‘ಹೇ ರಾಧಾ, ಎಲ್ಲಿದ್ದಿ ಮಾರಾಯ್ತೀ…?’ ಎಂದು ಉದ್ವೇಗದಿಂದ ಕೂಗುತ್ತ ಒಳಗೆ ಹೋದ. ಅವಳು ಮುತ್ತಯ್ಯನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಮನೆಯ ಹಿಂಬದಿಯ ಬಾಗಿಲಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದಳು. ಗಂಡನ ಧ್ವನಿಯಲ್ಲಿದ್ದ ಉದ್ವೇಗವನ್ನು ಕಂಡವಳು ಏನೋ ವಿಶೇಷವಿರಬೇಕು ಎಂದುಕೊಂಡು ಬೀಡಿಯ ಮೊರವನ್ನು ಬದಿಗಿಟ್ಟು ಎದ್ದು ಬಂದಳು. ‘ಸದ್ಯ ದೇವರು ಕಣ್ಣುಬಿಟ್ಟ ಮಾರಾಯ್ತೀ. ಜಾಗವೊಂದು ಆದ ಹಾಗಾಯ್ತು!’ ಎಂದ ಗೋಪಾಲ ಹೆಮ್ಮೆಯಿಂದ. ಅಷ್ಟು ಕೇಳಿದ ರಾಧಾಳ ಮುಖ ಹೂವಿನಂತೆ ಅರಳಿತು. ‘ಎಲ್ಲಿ, ಯಾವಾಗ ಆಯ್ತು ಮಾರಾಯ್ರೇ…? ನೀವು ನೋಡಿ ಬಂದ್ರಾ? ನಾನೂ ನೋಡಬೇಕಲ್ವಾ…?’ ಎಂದಳು ಆತುರದಿಂದ.  ‘ಅರೆರೇ, ಸ್ವಲ್ಪ ತಡ್ಕೊ ಮಾರಾಯ್ತಿ… ಹೇಳುತ್ತೇನೆ. ನೀನು ನೋಡಿದ ಮೇಲೆಯೇ ಓಕೆ ಮಾಡುವುದು!’ ಎಂದು ನಗುತ್ತ ಅಂದಾಗ ರಾಧಾ ಮುಗುಳ್ನಕ್ಕಳು. ಮರುಕ್ಷಣ ಗೋಪಾಲ, ತನ್ನ ಕಬ್ಬಿಣದ ವ್ಯಾಪಾರದಲ್ಲಿ ಶಂಕರ ಮಂಡೆ ಹಾಳಾಗುವಂತೆ ಚೌಕಾಶಿ ಮಾಡಿದ್ದೊಂದನ್ನು ಬಿಟ್ಟು ಉಳಿದ ಮಾತುಕತೆಯನ್ನು ಹಾಲು ತುಪ್ಪ ಸುರಿದಷ್ಟು ಮುದದಿಂದ ಅವಳಿಗೆ ವಿವರಿಸಿದವನು ಶಂಕರ ತಮ್ಮ ಪಾಲಿಗೆ ದೇವರೇ ಎಂಬಂತೆ ಹೊಗಳಿದ. ರಾಧಾಳಿಗೆ ಬಹಳ ಸಂತೋಷವಾಯಿತು. ಮುತ್ತಯ್ಯನಂಥ ಲಂಪಟರ ಕಪಿಮುಷ್ಟಿಯಿಂದ ಆ ಕ್ಷಣವೇ ಶಾಶ್ವತ ಬಿಡುಗಡೆ ದೊರೆತಂಥ ನಿರಾಳತೆ ಅವಳಲ್ಲಿ ಮೂಡಿ ಕಣ್ಣುಗಳು ತೇವಗೊಂಡವು. ಅದನ್ನು ಗಮನಿಸಿದ ಗೋಪಾಲ, ‘ಅರೆರೇ, ಈಗಲೇ ಯಾಕೆ ಅಳುತ್ತಿ ಮಾರಾಯ್ತೀ? ಈ ಹಂಗಿನ ಬದುಕಿನಿಂದ ಸ್ವತಂತ್ರ ಸಿಗುತ್ತದೆಯಲ್ಲ, ಆವಾಗ ಎಷ್ಟು ಬೇಕಾದರೂ ಖುಷಿಯಿಂದ ಅಳುವಿಯಂತೆ!’ ಎಂದು ನಗುತ್ತ ಅವಳನ್ನು ತಬ್ಬಿಕೊಂಡ. ಅಂದು ರಾತ್ರಿ ಗೋಪಾಲ ನೆಮ್ಮದಿಯಿಂದ ಚಾಪೆಗೊರಗಿದ. ಆದರೆ ಮರುದಿನ ಶಂಕರನ ಗುಜರಿ ಕೊಂಡುಕೊಳ್ಳಲು ದೊಡ್ಡ ಮೊತ್ತದ ಚಿಂತೆ ಅವನನ್ನು ಕಾಡಿತು. ಹಣವನ್ನು ಹೊಂದಿಸುವುದು ಹೇಗೆ? ಎಂದು ಯೋಚಿಸಿದ. ಅದಕ್ಕೊಂದು ದಾರಿಯೂ ಹೊಳೆಯಿತು. ಹೆಂಡತಿಯ ಚಿನ್ನಾಭರಣವನ್ನು ಅಡವಿಡಲು ನಿರ್ಧರಿಸಿದ. ಬಳಿಕ ನಿದ್ರೆ ಹತ್ತಿತ್ತು. ಮುಂಜಾನೆ ಬೇಗನೆದ್ದು ನಿತ್ಯಕರ್ಮ ಮುಗಿಸಿದ. ರಾಧಾ ತಂದಿರಿಸಿದ ಉಪ್ಪಿಟ್ಟು ಮತ್ತು ಚಹಾ ಸೇವಿಸಿ, ಅವಳು ಕೊಟ್ಟ ಆಭರಣವನ್ನು ಹಳೆಯ ಪೇಪರಿನ ತುಂಡೊಂದರಲ್ಲಿ ಕಟ್ಟಿ, ಪ್ಯಾಂಟಿನ ಜೇಬಿಗಿಳಿಸಿ ಹೊರಗಡಿಯಿಟ್ಟವನು ಮತ್ತೆ ಒಂದೆರಡು ಬಾರಿ ಜೇಬನ್ನು ಒತ್ತಿ ಸವರಿ ಭದ್ರಪಡಿಸಿಕೊಂಡ. ಬಳಿಕ ಮಡದಿ, ಮಕ್ಕಳಿಗೆ ಕೈಯಾಡಿಸುತ್ತ ಈಶ್ವರಪುರ

Read Post »

ಇತರೆ, ಜೀವನ

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

ಸಿರಿಗರ ಹೊಡೆದವರ. . . . . Read Post »

You cannot copy content of this page

Scroll to Top