ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಉಪವಾಸ ಒಂದು ತಪಸ್ಸು

ಲೇಖನ ಉಪವಾಸ ಒಂದು ತಪಸ್ಸು ಆಸೀಫಾ  ಹಬ್ಬಗಳ ಆಚರಣೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.ಅದರಂತೆ ರಂಜಾನ್ ಮುಸ್ಲಿಮರಿಗೆ ಪವಿತ್ರ ಹಾಗೂ ಪುಣ್ಯ ಸಂಪಾದಿಸಿಕೊಳ್ಳುವ ತಿಂಗಳಾಗಿದೆ.ಮೂವತ್ತು ದಿನಗಳು ಉಪವಾಸಾಚಾರಣೆ,ಖುರಾನ್ ಪಠಣ , ದಾನಧರ್ಮ ಹಾಗೂ ಸನ್ನಡತೆ ಈ ತಿಂಗಳ ವಿಶಿಷ್ಟತೆಗಳು. ಸೂರ್ಯೋದಯದ ಮೊದಲು ಆಹಾರ ಸೇವನೆ ಅಂದರೆ  ಸೆಹರಿ ಮಾಡಲಾಗುವುದು, ಸೂರ್ಯೋದಯದ ನಂತರ ಉಪವಾಸ ಬಿಡುವುದು ಅಂದರೆ ಇಫ್ತಾರ್ ಮಾಡಲಾಗುವುದು. . ದಿನವೆಲ್ಲಾ ಖುರಾನ್ ಓದುವುದು,ಜಪಮಾಡುವುದು, ನಮಾಜ್ ಮಾಡುವುದು, ಕೈಲಾದಷ್ಟು ದಾನ ಮಾಡುವುದು.ಇಲ್ಲಿ ಕೈಲಾದಷ್ಟು ಅಂದರೆ ಏನೂ ಇಲ್ಲ ಕಡುಬಡವರು ಅಂದ ಪಕ್ಷದಲ್ಲಿ ತಲೆಗೆ 💯 ರೂ ಆದರೂ ದಾನಮಾಡಲೇ ಬೇಕು ಇದನ್ನು ಝಕಾತ್  ಎನ್ನುವರು.ಇನ್ನು ಉಳ್ಳವರು ಬಂಗಾರ,ಮನೆಮಠ, ಆಸ್ತಿಪಾಸ್ತಿಗಳನ್ನು ಲೆಕ್ಕ ಹಾಕಿ ಒಂದು ಲಕ್ಷಕ್ಕೆ ಎರಡೂವರೆ ಸಾವಿರ ರೂಪಾಯಿಯಂತೆ ದಾನ ಮಾಡಲೇಬೇಕು ಇದು ಕಡ್ಡಾಯ.ಹಣ,ಊಟ,ಬಟ್ಟೆ, ದವಸಧಾನ್ಯ ವಿತರಣೆಮಾಡುವುದು ಈ ತಿಂಗಳಲ್ಲಿ ಸಾಮಾನ್ಯ.ಈ ರೀತಿ ಮಾಡುವುದರಿಂದ ಪವಿತ್ರ ಮಾಸ ರಂಜಾನ್ ನಲ್ಲಿ ಅಲ್ಲಾಹನು ಯಾರಿಗೂ ಬರಿಹೊಟ್ಟೆ ಮಲಗದಂತೆ ಕಾಪಾಡುವನು ಎನ್ನುವ ನಂಬಿಕೆ ನಿಜವಾಗುವುದು..ಉಪವಾಸವೆನ್ನುವುದು ಒಂದು ಬಗೆಯ ತಪಸ್ಸು.  ಇದು ದೈಹಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದೃಢಗೊಳಿಸುವುದಲ್ಲದೆ ಸುಳ್ಳು, ಮೋಸ, ವಂಚನೆ, ಲೈಂಗಿಕತೆ ,ನೀಚಕೃತ್ಯಗಳಿಗೆ ಕಡಿವಾಣ ಹಾಕುತ್ತದೆ.ಇದರಿಂದ ಉತ್ತಮ ಸಮಾಜದ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಈ ಒಂದು ತಿಂಗಳು ಮಾತ್ರ ಸನ್ಮಾರ್ಗದಲ್ಲಿ ನಡೆದು ನಂತರ ಮೊದಲಿನಂತಾಗುವುದು ವಿಷಾದನೀಯ. ಹಬ್ಬದ ದಿನ ಬಡವ, ಬಲ್ಲಿದ, ಮೇಲು, ಕೀಳು ಇವ ಶತ್ರು ,ಮಿತ್ರ,ಎಂಬ ಭಾವನೆಗಳಿಲ್ಲದೆ ಒಂದೆಡೆ ಸೇರಿ ನಮಾಜ್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿ ಒಬ್ಬರನೊಬ್ಬರು ಆಲಿಂಗಿಸಿಕೊಳ್ಳುವ ದೃಶ್ಯ ಸಮಾನತೆ ಹಾಗೂ ಸೌಹಾರ್ದತೆಯನ್ನು ತೋರುತ್ತದೆ.ಈ ಭಾವನೆಗಳು ಸದಾ ಜನರಲ್ಲಿ ಹೀಗೆ ಇದ್ದರೆ ಎಷ್ಟು ಒಳಿತು ಅಲ್ಲವೇ. *******************

ಉಪವಾಸ ಒಂದು ತಪಸ್ಸು Read Post »

ಇತರೆ, ಪ್ರಬಂದ

ಹಾಲು ಎಲ್ಲಿ ಕೊಳ್ಳುವುದು?

ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.

ಹಾಲು ಎಲ್ಲಿ ಕೊಳ್ಳುವುದು? Read Post »

ಇತರೆ

ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.

Read Post »

ಇತರೆ

ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ

ಜೀವನದಿ ಶಾಂತವಾಗಿ ಹರಿಯುತ್ತಿದೆಯೆಂದು ನಾವಂದುಕೊಳ್ಳುವಾಗ ದೊಡ್ಡ ಸುಳಿ ಬಂದು ದೋಣಿ ಅಲ್ಲಾಡಿಸಿ ಬಿಡುತ್ತದೆ. ಬದುಕಿನ ಬಂಡಿ ನಿರಾಳವಾಗಿ ಸಾಗುತ್ತದೆ ಎನ್ನುತ್ತಿರುವಾಗಲೇ ವಿಧಿಗೆ ಅದನ್ನು ಸಹಿಸಲಾಗುವುದಿಲ್ಲ.ಅಂಥ ಪರಿಸ್ಥಿತಿಯಲ್ಲಿ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡುವಂತಾಗುತ್ತದೆ.

ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ Read Post »

ಇತರೆ

ಸಾಕು ಪ್ರಾಣಿಗಳು

ಮಕ್ಕಳ ಕಥೆ ಸಾಕು ಪ್ರಾಣಿಗಳು ಡಾ. ಗುರುಸಿದ್ಧಯ್ಯಾ ಸ್ವಾಮಿ “ಅಪ್ಪ, ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ….” ಎಂದು ಅನಿಕೇತ ಒಂದು ಮೂಲೆಯಲ್ಲಿ ಹೋಗಿ ಕುಳಿತು ಬಿಟ್ಟ.“ಯಾಕೆ ಮರಿ, ಏನಾಯಿತು?” ಎಂದು ಪ್ರಕಾಶ ಅವರು ಅನಿಕೇತನನ್ನು ತಮ್ಮ ಬಳಿ ಕರೆದುಕೊಂಡು ಒಂದು ಮುತ್ತು ಕೊಟ್ಟು ತಲೆ ನೇವರಿಸುತ್ತ ಕೇಳಿದರು.“ಅಪ್ಪ, ಇಂದು ನಮ್ಮ ಶಿಕ್ಷಕರು ನಾನು ಸರಿಯಾಗಿ ಬರೆದ ಉತ್ತರಕ್ಕೆ ಸೊನ್ನೆ ಗುಣ ಕೊಟ್ಟಿದ್ದಾರೆ.”“ಹೌದಾ…? ಯಾವ ಪ್ರಶ್ನೆ ಅದು?”“ಸಾಕು ಪ್ರಾಣಿಗಳ ಹೆಸರು ಬರೆಯಿರಿ ಎಂಬ ಪ್ರಶ್ನೆ ಇತ್ತು.”“ಸರಿ, ಅದಕ್ಕೆ ನೀ ಬರೆದ ಹೆಸರುಗಳು ಯಾವುವು?”“ಅದಕ್ಕೆ ನಾನು, ಆಕಳು, ಎಮ್ಮೆ, ಬೆಕ್ಕು, ನಾಯಿ, ಹುಲಿ, ಹಾವು ಇತ್ಯಾದಿ ಹೆಸರುಗಳನ್ನು ಬರೆದಿದ್ದೆ.”“ಓ ಹೌದಾ, ಸರಿ ನಾನು ನಾಳೆ ಶಾಲೆಗೆ ಬಂದು ನಿಮ್ಮ ಶಿಕ್ಷಕರ ಜೊತೆ ಮಾತನಾಡುವೆ.”ಅಪ್ಪ ತನ್ನ ಪರವಾಗಿ ಮಾತನಾಡಿದ್ದಕ್ಕೆ ಅನಿಕೇತನಿಗೆ ಎಲ್ಲಿಲ್ಲದ ಖುಷಿ. ಸ್ವರ್ಗ ಮೂರೇ ಗೇಣು. ಮರುದಿನ ಅನಿಕೇತನ ಜೊತೆ ಪ್ರಕಾಶ ಅವರೂ ಕೂಡ ಶಾಲೆಗೆ ಹೋದರು. ಪ್ರಕಾಶ ಆಮಟೆಯವರು ವರ್ಗಕೋಣೆಯಲ್ಲಿ ಬರುತ್ತಿರುವುದನ್ನು ನೋಡಿ ಶಿಕ್ಷಕರು ಎದ್ದು ನಿಂತು “ಬನ್ನಿ ಸರ್, ಬನ್ನಿ ಬನ್ನಿ” ಎಂದು ಸ್ವಾಗತಿಸಿದರು.“ನಮಸ್ಕಾರ ಸರ್, ಹೇಗಿದಿರಿ?” ಎಂದು ಮುಗುಳ್ನಗೆ ಬೀರುತ್ತ ಪ್ರಕಾಶ ಅವರು ಶಿಕ್ಷಕರಿಗೆ ಕುಳಿತುಕೊಳ್ಳಲು ಹೇಳಿ ತಾವೂ ಅವರ ಪಕ್ಕದ ಚೇಅರನಲ್ಲಿ ಕುಳಿತರು.“ಸರ್, ನಿಮ್ಮ ಒಪ್ಪಿಗೆ ಇದ್ದರೆ ನಿನ್ನೆ ನಡೆದ ಪರೀಕ್ಷೆಯ ಬಗ್ಗೆ ಸ್ವಲ್ಪ ಚರ್ಚೆ ಮಾಡಬಯಸುತ್ತೇನೆ.” ಎಂದರು ಪ್ರಕಾಶ.“ಅಯ್ಯೋ, ದೊಡ್ಡ ಮಾತು. ನೀವು ತುಂಬ ದೊಡ್ಡವರು. ನಿಮ್ಮ ಅಭಿಪ್ರಾಯ ನೇರವಾಗಿ ಹೇಳಿ.” ಶಿಕ್ಷಕರು ಅಂದರು.“ನಿನ್ನೆ ನಡೆದ ಪರೀಕ್ಷೆಯಲ್ಲಿ ಸಾಕು ಪ್ರಾಣಿಗಳ ಹೆಸರುಗಳನ್ನು ಬರೆಯುವ ಪ್ರಶ್ನೆಯ ಬಗ್ಗೆ ಸ್ವಲ್ಪ ಮಾತನಾಡುವೆ ಸರ್. ನಮ್ಮ ಆಶ್ರಮದಲ್ಲಿ ಹುಲಿ, ಹಾವು ಮುಂತಾದ ಅನೇಕ ಕಾಡು ಪ್ರಾಣಿಗಳನ್ನು ಸಾಕಿರುವ ವಿಷಯ ನಿಮಗೂ ಗೊತ್ತಿದೆ. ಅವು ಕಾಡುಪ್ರಾಣಿಗಳು ಎಂಬುದು ನಮಗೆ ಮತ್ತು ನಿಮಗೆ ಗೊತ್ತಿದೆ. ಆದರೆ ನಮ್ಮ ಆಶ್ರಮದಲ್ಲಿ ಸಾಕು ಪ್ರಾಣಿಗಳ ಜೊತೆ ಕೆಲವು ಕಾಡು ಪ್ರಾಣಿಗಳನ್ನೂ ಸಾಕಿದ್ದೇವೆ. ಹೀಗಾಗಿ ಅನಿಕೇತ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಅವುಗಳ ಹೆಸರುಗಳನ್ನು ಬರೆದಿದ್ದಾನೆ. ಇದರಲ್ಲಿ ಅವನ ತಪ್ಪು ಏನೂ ಇಲ್ಲ. ಅವನ ಉತ್ತರಕ್ಕೆ ನೀವು ಗುಣ ಕೊಟ್ಟಿಲ್ಲ. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿಯೇ ಮಾಡಿರುವಿರಿ. ಆದರೆ ಇದೊಂದು ಸಲ ಅವನ ಅನುಭವ ವಿಶ್ವಕ್ಕೂ ಸ್ವಲ್ಪ ಗೌರವ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಮುಂದೆ ದೊಡ್ಡವನಾದ ಮೇಲೆ ಅವನು ಇವೆಲ್ಲವುಗಳ ಬಗ್ಗೆ ವಿವರವಾಗಿ ತಾನಾಗಿಯೇ ತಿಳಿದುಕೊಳ್ಳುತ್ತಾನೆ.ನಿಮ್ಮ ಹೆಚ್ಚು ಸಮಯ ನಾನು ತೆಗೆದುಕೊಳ್ಳುವುದಿಲ್ಲ. ಬರುತ್ತೇನೆ, ನಮಸ್ಕಾರ” ಎಂದು ಪ್ರಕಾಶ ಹೊರಟೇ ಬಿಟ್ಟರು. ಕೈ ಮುಗಿದು ಎದ್ದು ನಿಂತ ಶಿಕ್ಷಕರು ಪ್ರಕಾಶ ಅವರು ನಡೆದು ಹೋದ ಮಾರ್ಗವನ್ನೇ ರೆಪ್ಪೆ ಬಡಿಯದೆ ನೋಡುತ್ತಿದ್ದರು. ****************

ಸಾಕು ಪ್ರಾಣಿಗಳು Read Post »

ಇತರೆ

ಬನ್ನಿ ಮನೆಗೆ ಹೋಗೋಣ. . .

ವಿಶೇಷ ಲೇಖನ ಬನ್ನಿ ಮನೆಗೆ ಹೋಗೋಣ. . . ಅಂಜಲಿ ರಾಮಣ್ಣ ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕಳಂತೆ ಮದುವೆಯೇ ಪರಮ ಗುರಿಯಾಗಿದೆ. ಯಾವುದೋ ಸಮಯದಲ್ಲಿ ತಮ್ಮ ಮಕ್ಕಳನ್ನು ಸಂಸ್ಥೆಗಳಿಗೆ ದಾಖಲು ಮಾಡಿರುವ ಪೋಷಕರು ನಂತರ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವು ಆಶಯದಿಂದ ಸಂಸ್ಥೆಯನ್ನು ವಿನಂತಿಸಿಕೊಂಡರೂ ಹತ್ತಾರು ಕಾರಣಗಳನ್ನು ಮುಂದೆ ಒಡ್ಡಿ ಮಕ್ಕಳನ್ನು ಕುಟುಂಬದ ಜೊತೆಗೆ ಹೋಗದಂತೆ ಸಂಸ್ಥೆಯವರು ತಡೆಗಟ್ಟುತ್ತಿರುವುದು ವಾಸ್ತವ. ಇಂತಹ ಸನ್ನಿವೇಶಕ್ಕೆ ಕರೋನ ಧಾಳಿ ತಿಳಿಗಾಳಿ  ತೀಡಿದಂತಾಗಿದೆ. ಕರೋನ ಕೃಪೆಯಿಂದ  ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಹಪಹಪಿಸುತ್ತಿದ್ದಾರೆ. ಸಂಸ್ಥೆಗಳೂ ತಮ್ಮ ಜವಾಬ್ದಾರಿಯಿಂದ ಹೊರಬರಲು ಮಕ್ಕಳನ್ನು ಮನೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಬಡ ಕುಟುಂಬಗಳು ತಮ್ಮತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ ಮಕ್ಕಳೊಂದಿಗೆ,  ಪರಿಸ್ಥಿತಿ ಸರಿ ಹೋಗುತ್ತದೆ ಆಗ ಮತ್ತೆ ಸಂಸ್ಥೆಗೆ ಸೇರಿಸುವ ಎನ್ನುವ ಭಾವದೊಂದಿಗೆ. ಸಂಸ್ಥೆಗಳೂ ಇವರಲ್ಲದಿದ್ದರೆ ಇನ್ನೊಬ್ಬರು, ಈ ದೇಶದಲ್ಲಿ ಮರುಳಾಗುವ ಜನಕ್ಕೇನು ಕೊರತೆಯೇ ಎನ್ನುವ ಆಶಾಭಾವದೊಂದಿಗೆ ಮಕ್ಕಳನ್ನು ಮನೆ ಸೇರಿಸುತ್ತಿದ್ದಾರೆ. ಅಂತೂ ಕಾನೂನು, ಕಾರ್ಯಾಂಗ ಮಾಡಲು ಸೋತಿದ್ದನ್ನು ಕರೋನ ಒಂದಷ್ಠ್ರ ಮಟ್ಟಿಗೆ ಜಾರಿಗೆ ತಂದಿದೆ. ಮಕ್ಕಳು ಎಷ್ಟೋ ದಿನಗಳ ನಂತರ ಅವ್ವ, ಅಮ್ಮ, ಅಪ್ಪ ಎನ್ನುವ ನಗುವನ್ನು ಸ್ಪರ್ಶಿಸುತ್ತಿದ್ದಾರೆ. ವಿಕೇಂದ್ರೀಕರಣಗೊಳ್ಳುತ್ತಿರುವ ಆರ್ಥಿಕತೆ ಮತ್ತೆ ಕೆಲವೇ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಮಕ್ಕಳು  ಮನೆಯ ಮಣ್ಣಲ್ಲಿ ಕಿಲಗುಟ್ಟುತ್ತಿರುತ್ತಾರೆ. ಮನೆ ಎಂದರೆ ಅವರಿಗೆ ಬರಿಯ ಮಣ್ಣಲ್ಲ ಅವರ ಅಕ್ಕ ಅಣ್ಣ  ತಂಗಿ ತಮ್ಮಂದಿರ ಪರಿಮಳ. ಅಜ್ಜಿಯ ತೂತು ಬಿದ್ದ ಸೆರಗು, ತಾತನ ಮೋಟು ಬೀಡಿ, ದೊಡ್ಡಪ್ಪನ ಜಗಳ, ಅತ್ತೆ ಬೀದಿ ಬದಿಯಲ್ಲಿ ಕರಿದು ಕೊಡುವ ಕಜ್ಜಾಯ, ಸಡಿಲಾದ ಚೊಣ್ಣವನ್ನು ಮೇಲೆಕ್ಕೆಳುದುಕೊಳ್ಳುತ್ತಾ ಮೂಲೆ ಅಂಗಡಿಗೆ ಹೋಗಿ ಬೆರಳಿಗೆ ಅಂಗಿಯಾಗುವ ಬೋಟಿ! ಓಹ್, ಎಲ್ಲಾ ಮಕ್ಕಳನ್ನೂ ನಗರೀಕರಣಗೊಳಿಸಬೇಕು ಎನ್ನುವ ಅಮಾವಸ್ಯೆ ನಾಗರೀಕತೆಯನ್ನು ಅದ್ಯಾವಾಗ ಆವರಿಸಿಕೊಂಡಿತೋ!  ಮಕ್ಕಳನ್ನು ಕುಟುಂಬದಿಂದ ಬೇರ್ಪಡಿಸಿ ಬೆಳೆಸುವುದು ಹೇಗಿದೆ ಎಂದರೆ, ಪ್ರಾಕೃತಿಕವಾಗಿ ಸ್ವಜಾತಿಯ ಗುಂಪಿನೊಂದಿಗೆ ಗುರುತಿಸಿಕೊಂಡು, ಇದ್ದು ಬೆಳೆದು ಬದುಕು ರೂಪಿಸಿಕೊಳ್ಳಬೇಕಿರುವ ಜೀವಿಯನ್ನು ಸರ್ಕಸ್‍ ಕಂಪನಿಯಲ್ಲಿ ಕೂಡಿಟ್ಟು, ತರಬೇತಿಕೊಟ್ಟು, ಅಸಹಜಕ್ಕೆ ಒಗ್ಗುವಂತೆ ಪಳಗಿಸಿ ಮತ್ತೆ ತನ್ನ ಪ್ರಾಕೃತಿಕ ಗುಂಪಿನೊಂದಿಗೆ ಒಂದು ಮಾಡುವಂತೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಇಂದ, ಮಕ್ಕಳ ಹಕ್ಕುಗಳ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಯಿದೆ, ಯೋಜನೆಗಳ ಮೂಲ ಉದ್ದೇಶ ಮಕ್ಕಳು ಅವರ ಕುಟುಂಬದ ಜೊತೆಯಲ್ಲಿಯೇ ಬೆಳೆಯಬೇಕು ಎನ್ನುವುದೇ ಆಗಿದೆ. ಇದು ಕೇವಲ ಉಳ್ಳವರಿಗೆ  ಮಾತ್ರ ಅನ್ವಯ ಆಗುವುದಿಲ್ಲ,  ಅಲೆಮಾರಿ ವರ್ಗದ ಕುಟುಂಬವೂ ತಮ್ಮ ಮರಿಗಳನ್ನು ತಮ್ಮದೇ ಗೂಡೆಯಲ್ಲಿಟ್ಟು ಕಾಪಾಡಬೇಕು. ಎಲ್ಲೆಡೆಯಲ್ಲಿಯೂ ಮಕ್ಕಳ ದೈಹಿಕ,  ಮಾನಸಿಕ, ಭಾವನಾತ್ಮಕ ಮತ್ತು ಬುದ್ಧಿಮತ್ತೆಯ ಆರೋಗ್ಯ ಕಾಪಾಡಲು ಪರ್ಯಾಯ ಬೆಂಬಲ ಕೊಡುವುದು ಮಾತ್ರ ಸರ್ಕಾರದ ಜವಾಬ್ದಾರಿ ಬಾಕಿಯಂತೆ ಮಕ್ಕಳು ಅವರವರ ಕುಟುಂಬದ ಹೊಣೆ ಮತ್ತು ಸಾಮಾಜಿಕ ಕರ್ತವ್ಯ. ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ಇವುಗಳ ಪ್ರಕಾರ ಮತ್ತು Universal Declaration of Human Rights, Convention For Elimination of all All Forms of Violence Against Women and Child Rights Convention ಇವುಗಳ ಆಶಯ “Institutionalization shall be a last resort” ಕರೋನ ಸನ್ನಿವೇಶವು ಪಂಚಾಯ್ತಿ ಅಧಿಕಾರ ವ್ಯವಸ್ಥೆಯನ್ನು ಎಚ್ಚರಗೊಳಿಸಿದೆ. ಅಂಗನವಾಡಿಗಳ ಕಡೆಗೆ ಸರ್ಕಾರದ ಹೆಚ್ಚು ಗಮನ ಹರಿಯುವಂತೆ ಮಾಡಿದೆ. ಅಂತರ್ಜಾಲ ಮುಖೇನ ಶಿಕ್ಷಣ ಏರು ಮುಖ ಕಾಣುತ್ತಿದೆ. ನ್ಯಾಯಾಲಯಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ ಯೋಜನೆಗಳು ಸರಿಯಾಗಿ ಜಾರಿಗೆ ಮಾಡುವಂತೆ ಕಾರ್ಯಾಂಗಕ್ಕೆ ಆದೇಶ ನೀಡಿವೆ. ಈ ಎಲ್ಲಾ ಶ್ರಮಗಳಿಂದ ಮಕ್ಕಳು ಕುಟುಂಬದ ಜೊತೆ ಇರುವಂತೆ ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಮತ್ತು ಸಾಂಸ್ಥಿಕ ವ್ಯವಸ್ಥೆಯ ಬಲದಿಂದ ವ್ಯವಸಾಯ ಊರ್ಜಿತಗೊಂಡರೆ ಕಳೆದು ಹೋಗಿರುವ ಒಂದು ತಲೆಮಾರಿನ ಮನಸ್ಸು ರೈತನಾಗುತ್ತೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮನೆಗಳಲ್ಲಿಯೇ ಹೆಚ್ಚು, ಬಡತನ ಬಾಲ ಕಾರ್ಮಿಕತೆಗೆ ಮೂಲ ಎನ್ನುವ ಕರಾಳ ಸತ್ಯವನ್ನು ಭೂತಗನ್ನಡಿಯಲ್ಲಿ ದಪ್ಪಗಾಗಿಸುವ ಪ್ರತಿವಾದಿಗಳು ಮಕ್ಕಳನ್ನು ಸಂಸ್ಥೆಯಲ್ಲಿ ಇರಿಸುವುದು ಸುರಕ್ಷಿತ ಎನ್ನುತ್ತಾರೆ. ಆದರೆ ಲ್ಹಾಕ್ಗೆಡೌನ್ ಕಾರಣದಿಂದ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಹಂಚಿಹೋಗಿ ಮನೆ ಸೇರಿಸಿಕೊಂಡಿರುವ ಮಕ್ಕಳಿಗೆ, ಅವರ ಸಂಬಂಧಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ awareness ಕೊಡುವುದು ಮೊದಲಿಗಿಂತಲೂ ಸುಲಭ ಸಾಧ್ಯ. ಅದಕ್ಕಾಗಿ ಸಮಾಜ ಕಾರ್ಯಕರ್ತರನ್ನು, ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ತರಬೇತುಗೊಳಿಸಬೇಕಷ್ಟೇ. ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಗೊಂಡಿರುವ ಮಕ್ಕಳೆಡೆಗಿನ ನಮ್ಮ ಕಾಳಜಿಯನ್ನು ಅವರಿರುವ ಜಾಗಗಳಿಗೆ ಕೊಂಡೊಯ್ಯ ಬೇಕಿದೆ. ಮಕ್ಕಳ ಪಾಲನೆ, ಪೋಷಣೆ, ಸುರಕ್ಷತೆ, ವಿದ್ಯಾಭ್ಯಾಸವನ್ನೂ ಅವರ ಜೊತೆಗೇ “ಬನ್ನಿ ಮನೆಗೆ ಹೋಗೋಣ” ಎಂದು ಜತನದಿಂದ ಕರೆದುಕೊಂಡು ಹೋಗಬೇಕಿದೆ. ಅವರೆಡೆಗೆ ಮಿಡಿಯುವ ನಮ್ಮ ಮನಸ್ಸುಗಳಿಗೆ ಅವರುಗಳನ್ನು ಅವರವರ ಕುಟುಂಬಕ್ಕೆ ಸೇರಿಸುವುದೇ ಧ್ಯಾನವಾಗಬೇಕಿದೆ. ಎಲ್ಲರ ಗಮ್ಯವೂ “Lets Go Home” ಎನ್ನುವುದೇ ಆಗಬೇಕಿದೆ. ************************* ಲೇಖನ ಕೃಪೆ: ಅಸ್ಥಿತ್ವ ಲೀಗಲ್ ಬ್ಲಾಗ್(ಅಂಜಲಿ)

ಬನ್ನಿ ಮನೆಗೆ ಹೋಗೋಣ. . . Read Post »

ಇತರೆ

ಧರೆ ಹತ್ತಿ ಉರಿದೊಡೆ

ಲೇಖನ ಧರೆ ಹತ್ತಿ ಉರಿದೊಡೆ ಜಯಶ್ರೀ.ಜೆ.ಅಬ್ಬಿಗೇರಿ ರಾತ್ರಿ ಹನ್ನೆರಡು ಹೊಡೆದರೂ ಹಾಡು ಹಗಲಿನಂತೆ ಕಿಕ್ಕಿರಿದು ಜನ ತುಂಬಿರುತ್ತಿದ್ದ ಬೀದಿಗಳೆಲ್ಲ ಬಿಕೋ ಎನ್ನುತ್ತಿವೆ. ಸಂಖ್ಯೆಗೆ ಸಿಗದಷ್ಟು ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಉರಿದು ಹೋಗುತ್ತಿವೆ.ಇದೊಂಥರ  ಮರದಲ್ಲಿನ ಹಣ್ಣು ಉದುರಿ ಬೀಳುವಂತೆ ಬೀಳುತ್ತಿವೆ. ಅಳಿದುಳಿದ ಕಾಯಿಗಳ ಹಣ್ಣುಗಳ ದುಃಖ ಅರಣ್ಯರೋಧನವಾಗಿದೆ. ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ.ಇಂಥದ್ದೊಂದು ದಿನ ಬರುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಜೀವನ ಹಿಡಿತಕ್ಕೆ ಸಿಗದಂತಾಗಿದೆ. ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿದೆ.ಬದುಕನ್ನು ಯಾವ ಕಡೆಯಿಂದ ನಿಯಂತ್ರಿಸಿದರೆ ಹಿಡಿತಕ್ಕೆ ಸಿಗಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ನಾ ನೀ ಎನ್ನುವ ಅತಿರಥ ಮಹಾರಥರು, ಪಂಡಿತರು, ವಿದ್ವಾಂಸರು ಪ್ರಯತ್ನಿಸಿ ಸೋತು ಸುಣ್ಣವಾಗಿದ್ದಾರೆ. ಹೆಣಗಳ ಉರುಳುವಿಕೆ ಹೀಗೆ ಮಾಡಿದರೆ ನಿಲ್ಲಬಹುದು ಹಾಗೆ ಮಾಡಿದರೆ ನಿಲ್ಲಬಹುದು ಎಂದು ಲೆಕ್ಕ ಹಾಕುವುದೇ ಆಯಿತು. ಆದರೆ ಅದು ಯಾವವೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದುವರೆಗೂ ವಿಶ್ವವು ಕೇಳರಿಯದ ಕಂಡರಿಯದ ದುಸ್ಥಿತಿಯಿದು. ಹೀಗಾಗಿ ಇದರ ನಿಗ್ರಹಕ್ಕೆ  ಓದಿದ ಯಾವ ಗ್ರಂಥದ ಜ್ಞಾನವೂ ಉಪಯೋಗಕ್ಕೆ ಬರುತ್ತಿಲ್ಲವೆಂದು ಕೆಲವು ಜ್ಞಾನಿಗಳು ಗೊಣಗುತ್ತಿದ್ದಾರೆ. ವಿಷಮ ಸ್ಥಿತಿಯನ್ನು ತಹಬದಿಗೆ ತರಲು ವೈದ್ಯರು, ನರ್ಸ್ಗಳು, ಸಂಪೂರ್ಣ ವೈದ್ಯಕೀಯ ಇಲಾಖೆ ವೀರ ಸೇನಾನಿಗಳಂತೆ ಜನರ ಜೀವ ಕಾಪಾಡಲು ತಮ್ಮ ಜೀವ ಒತ್ತೆ ಇಟ್ಟಿದ್ದಾರೆ. ಇವರೊಂದಿಗೆ ಹೃದಯವಂತರು ಮನೆ ಮಠ ಬಿಟ್ಟು ಟೊಂಕ ಕಟ್ಟಿ ನಿಂತಿದ್ದಾರೆ. ಸ್ವೇಚ್ಛಚಾರದಿಂದ ಬೀಗುತ್ತಿದ್ದವರನ್ನು ಕೈ ಕಾಲು ಕಟ್ಟಿ ಮೂಲೆಯಲ್ಲಿ ಒಗೆದಂತಾಗಿದೆ. ನಾವೆಲ್ಲ ಪಂಜರದಲ್ಲಿನ ಗಿಳಿಗಳಂತಾಗಿದ್ದೇವೆ. ಅದೇ ಸೂರ್ಯ ಅದೇ ಚಂದ್ರ ಆದರೂ ಬದುಕಿನ ಚಂಡಮಾರುತದಿಂದ ಮನಸ್ಸು ಬಿಕ್ಕುತ್ತಿದೆ. ಮಂಗನಂತೆ ಹಾರಾಡುತ್ತಿದ್ದ ಮನಸ್ಸು ತಲೆ ಮೇಲೆ ಕೈ ಹೊತ್ತು ಕೂತಿದೆ. ಜಗವೇ ಮಸಣಭೂಮಿ ಎಂದೆನಿಸುತ್ತಿದೆ.ಇದೆಲ್ಲ ಮಾನಸಿಕ ಸ್ಥಿತಿ ಒಂದೆಡೆಯಾದರೆ,ಇನ್ನೊಂದೆಡೆ ಮಿಡಿಯುವ ಹೃದಯ ತನ್ನ ಕರುಣಾ ಮಿಡಿತವನ್ನು ಕಳೆದುಕೊಳ್ಳುತ್ತಿದೆ.ಮಿಡಿದರೂ ಅಸಹಾಯಕ ಸ್ಥಿತಿಯಲ್ಲಿದೆ. ಬಿಕ್ಕಳಿಸುವ ದೇಹಗಳ ಕಣ್ಣೊರೆಸುವವರಿಲ್ಲ. ಕಣ್ಣೊರೆಸುವ ಹೃದಯವಂತಿಕೆ ಇದ್ದರೂ ಧೈರ್ಯ ಬರುತ್ತಿಲ್ಲ. ಎಲ್ಲಿ ನನಗೂ ಸಾವು ಅಂಟಿಬಿಡುವುದೇನೋ ಎಂಬ ಭಯ ಹಿಂಜರಿಯುವಂತೆ ಮಾಡುತ್ತಿದೆ. ಅಪ್ಪನನ್ನು ಕಳೆದುಕೊಂಡ ಮಕ್ಕಳ ರೋಧನ ಒಂದೆಡೆಯಾದರೆ, ಹೆತ್ತವ್ವನನ್ನು ಬೆಂಕಿ ಆಹುತಿ ತೆಗೆದುಕೊಂಡವರ ಗೋಳು ಮುಗಿಲು ಮುಟ್ಟುತ್ತಿದೆ. ಇನ್ನು ಕಾಣುವ ದೇವರೀರ್ವವರು ಮುನಿಸಿಕೊಂಡಂತೆ ಹೇಳದೇ ಹೋದವರ ಗೋಳಿಗೆ ಸಾಂತ್ವನ ಹೇಳಲು ಬಾಯಿ ಬರುತ್ತಿಲ್ಲ. ಪುಟ್ಟ ಪುಟ್ಟ ಮಕ್ಕಳು ಅನಾಥರಾಗಿ ದಿಕ್ಕು ಕಾಣದೇ ಹಲಬುತ್ತಿದ್ದಾರೆ.ಹಸಿವಿನಿಂದ ರೋಧಿಸುವ ಮಕ್ಕಳ ದನಿ ಕೇಳುವ ಕಿವಿಗಳು ಕಮ್ಮಿಯಾಗಿವೆ. ವಿಧವಿಧವಾದ ರುಚಿಯಾದ ಹಣ್ಣುಗಳು, ನಗುವ ಹೂಗಳು, ಮನೋಸ್ಥೈರ್ಯ ಹೆಚ್ಚಿಸುತ್ತಿದ್ದ  ಪುಸ್ತಕಗಳು ಲಾಟಿಯ ರುಚಿ  ನೆನೆದು ಕೊಳೆಯುತ್ತಿವೆ ಬಾಡುತ್ತಿವೆ ಪುಟಗಳನ್ನು ಭದ್ರವಾಗಿ ಮುಚ್ಚಿಕೊಂಡು ಕೂತಿವೆ.ವ್ಯಾಪಾರವೆಲ್ಲ ಕುಸಿದಿದೆ. ಹೀಗಾಗಿ ಜೀವನ ಜರ್ಝರಿತವಾಗುತ್ತಿದೆ. ಯಾರ ಪಾಳೆ ಯಾವಾಗ ಅಂತ ಗೊತ್ತಿಲ್ಲ. ಜೀವ ಪಕ್ಷಿ ಹಾರುವುದಕ್ಕೆ ಕ್ಷಣಗಣನೆ ನಡೆದಿದೆ. ನಿನ್ನೆ ನಮ್ಮೊಂದಿಗಿದ್ದವರು ಇಂದಿಲ್ಲ. ಇಂದು ಇರುವವರು ನಾಳೆ ಇರುವರೋ ಇಲ್ಲವೋ ಗೊತ್ತಿಲ್ಲ. ಮೃತ್ಯುಲೋಕವೇ ಧರೆಗಿಳಿದಂತಾಗಿದೆ. ದಿನವೂ ಸಾವುಗಳ ಲೆಕ್ಕ ಇಡಲು ಯಮ ಮತ್ತು ಚಿತ್ರಗುಪ್ತರು ಹರಸಾಹಸ ಪಡುವಂತಾಗಿದೆ. ಭೂ ಲೋಕದ ಜನರನ್ನೆಲ್ಲ ಮೃತ್ಯುಲೋಕಕ್ಕೆ ಹಂತ ಹಂತವಾಗಿ ಸಾಗಿಸುವ ಬೃಹತ್ ಆಂದೋಲನವೇನಾದರೂ ನಡೆದಿದೆಯೇನೋ ಎನ್ನುವ ಸಂದೇಹ ಹೆಚ್ಚುತ್ತಿದೆ. ಇನ್ನೂ ಕೆಲ ವರ್ಷ ನಮ್ಮ ಜೊತೆ ಇದ್ದಾರು. ಸಿಹಿ ಕಹಿಗಳಲ್ಲಿ ನಮ್ಮೊಡನಿದ್ದು ಮುನ್ನಡೆದಾರು ಎನ್ನುವಂತವರು ಹೇಳದೇ ಕೇಳದೇ ಹೋಗಿಯೇ ಬಿಟ್ಟರು.ನೂರು ವರ್ಷ ಬದುಕಲಿಲ್ಲವಾದರೂ ಇಷ್ಟು ವರ್ಷಗಳ ದೀರ್ಘಾಯುóಷಿಯಾದರಲ್ಲ ಅದೇ ನಮ್ಮ ಭಾಗ್ಯ.ವೆಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಅಗಲಿ ಹೋದ ಜೀವಗಳ ಜೊತೆ ಕಳೆದ ಸವಿನೆನಪುಗಳ ನೆನೆದು ಕಣ್ಣೀರಿಡುವುದೊಂದೇ ನಮ್ಮ ಕೈಯಲ್ಲಿರೋದು ಅಂತ ಸಂಕಟ ಪಡುತ್ತಿದ್ದೇವೆ. ಬಾಳಿನ ದೋಣಿ ಯಾವಾಗ ಮುಗುಚಿ ಬೀಳುವುದೋ ಎಂಬ ಭಯ ಎಲ್ಲೆಲ್ಲೂ ಆವರಿಸಿದೆ. ದೋಣಿ ಸಾಗಿದರೂ ಸುರಕ್ಷಿತವಾಗಿ ಮುನ್ನಡೆಯುವುದೋ ಇಲ್ಲವೋ ಎನ್ನುವ ಆತಂತ ಮನದಲ್ಲಿ ಮನೆ ಮಾಡುತ್ತಿದೆ.ಮೂಗಿನಲ್ಲಿ ನುಸುಳುವ ಗಾಳಿ ಸಿಗದೆ ಪ್ರಾಣವನ್ನು ಗಾಳಿಪಟದ ಹಾಗೆ ಹರಿದು ಹಾಕುತ್ತಿದೆ. ಮುಗಿಲೆತ್ತರಕ್ಕೆ ಹೆಣದ ರಾಶಿ ಸುಡುವವರೂ ದಿಕ್ಕಿಲ್ಲ. ಈ ದೃಶ್ಯ ಸುಳಿವ ಕೀಟಗಳನ್ನು ಬಾಚಿಕೊಳ್ಳುವ ಓತಿಕ್ಯಾತನ ರೀತಿ ನೆನಪಿಸುತ್ತಿದೆ. ಅಳಿಸಲಾಗದ ಕ್ರೂರ ಹಣೆ ಬರಹದಂತಾಗಿದೆ. ಅಂಗೈ ರೇಖೆಗಳ ನುಡಿ ಎಲ್ಲಿ ಸವೆದು ಹೋಯಿತೋ? ಸಾವು ಇಡಿಯಾಗಿ ಎಲ್ಲರನ್ನೂ ಒಮ್ಮೆಲೇ ಹೊಸೆದು ಹಾಕುತ್ತದೆ ಎಂದು ಬರೆಯಲಾಗಿತ್ತೋ ಏನೋ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಮ್ಮ ಮುಖಗಳಿಂದ ಸೆರಗು ಸರಿಸಿದ ಸಮಯವಿದು. ಬದುಕಿಗೆ ಮುಚ್ಚಿದ್ದ ರೇಷಿಮೆಯ ಪರದೆ ತೆರೆದ ಹೊತ್ತಿದು. ಬದುಕಿನ ಮೊನಚನ್ನು ಆವಾಹಿಸಿಕೊಳ್ಳಲು ಸಾವು ಹವಣಿಸುವ ಹೊತ್ತಿನಲ್ಲಿ ಉಚ್ಛಸ್ವರದ ಬೀಗುವಿಕೆ ಉಚಿತವಾಗದು. ಇದೆಲ್ಲ ಗೊತ್ತಿದ್ದರೂ ಇನ್ನೂ ಬೀಗುವುದನ್ನು ಬಿಟ್ಟಿಲ್ಲ. ರಕ್ಷಣೆಗಾಗಿ ನೆಟ್ಟ ಕಂಬಗಳೆಲ್ಲ ಕೆಸರಿನಲ್ಲಿ ಸಿಕ್ಕಿಕೊಂಡಿವೆ. ಇತ್ತಿಂದತ್ತ ಅತ್ತಿಂದಿತ್ತ ನಿಧಾನವಾಗಿ ಸಾವಿನ ಕತ್ತಿ ತೂಗುತ್ತಿದ್ದ ಯಮ ಈಗ ಕೋಮಲ ಕತ್ತುಗಳು ಮಾಗಿದ ಜೀವಗಳೆಂದು ನೋಡದೇ  ಹಿಸುಕುತ್ತಿದ್ದಾನೆ. ಇಷ್ಟೆಲ್ಲ ನರಕ ಸದೃಶ ವಾತಾವರಣ ಹೆಚ್ಚುತ್ತಿರುವಾಗ ಕಾಯುವ ದೇವರು ಎಲ್ಲಿರಬಹುದು? ನಾನೇ ಬುದ್ಧಿವಂತ  ಎನ್ನುವ ಮಾನವನ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲವಲ್ಲ ಏಕೆ? ಎನ್ನುವ ಪ್ರಶ್ನೆಗಳು ಭೂತಾಕಾರವಾಗಿ ಪೀಡಿಸುತ್ತಿವೆ. ಹಾರುವ ಜೀವಗಳೆಲ್ಲ ನೋವಿನಿಂದ ಬೇಡಿಕೊಳ್ಳುತ್ತಿವೆ. ಇದೀಗ ಕಾರಂತರ ‘ಬಾಳ್ವೆಯೇ ಬೆಳಕು’ ವೈಚಾರಿಕ ಕೃತಿಯು ನೆನಪಿಗೆ ಬರುತ್ತಿದೆ. ಅದು ಜೀವನ ಸ್ವೀಕಾರವನ್ನು ದೃಢವಾಗಿ ಪ್ರತಿಪಾದಿಸುತ್ತದೆ. ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಲುಬಾರದು ಏರಿ ನೀರೊಂಬೊಡೆ ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವ ಪ್ರಸ್ತುತ ಸನ್ನಿವೇಶಕ್ಕೆ ಈ ವಚನ ಕನ್ನಡಿ ಹಿಡಿದಂತಿದೆ. ಒಲೆಯಲ್ಲಿ ಹತ್ತಿ ಉರಿಯುವ ಉರಿಯು ಇದ್ದಕ್ಕಿದ್ದಂತೆಯೇ ಧಗ್ ಎಂದು ಹತ್ತಿಕೊಂಡು ತನ್ನ ಕೆನ್ನಾಲಿಗೆಯನ್ನು ಸುತ್ತಮುತ್ತ ಚಾಚುತ್ತ ಹಬ್ಬತೊಡಗಿದಾಗ ಒಲೆಯ ಉರಿಯ ಜಳದಿಂದ ದೂರ ಸರಿದು ತಪ್ಪಿಸಿಕೊಳ್ಳಬಹುದು. ಆದರೆ ಇಡೀ ಜಗತ್ತೇ ಹತ್ತಿಕೊಂಡು ಉರಿಯತೊಡಗಿದರೆ ಬೆಂಕಿಯ ತಾಪದಿಂದ ಪಾರಾಗಲು ಹೋಗುವುದಾದರೂ ಎಲ್ಲಿಗೆ? ವಿಧಿಯಿಲ್ಲದೇ ಉರಿಗೆ ಬಿದ್ದು ಸುಟ್ಟು ಕರಕಲಾಗಬೇಕಾಗುತ್ತದೆ. ವ್ಯವಸಾಯಕ್ಕೆ ಬಳಸಲೆಂದು ಹರಿಯುತ್ತಿರುವ ನೀರನ್ನು ಒಂದೆಡೆ ನಿಲ್ಲಿಸಲೆಂದು ಕಟ್ಟಿರುವ ಏರಿಯೇ ನೀರೆಲ್ಲವನ್ನು ಹೀರಿಕೊಂಡರೆ ಏನು ಗತಿ? ಬೆಳೆದ ಬೆಳೆಯನ್ನು ಕಾಪಾಡುವುದಕ್ಕೆ ಹೊಲದ ಸುತ್ತ ಹಾಕಿದ ಬೇಲಿಯೇ ಬೆಳೆಯನ್ನು ಮೇಯ್ದರೆ ಮಾಡುವುದಾದರೂ ಏನು? ಮನೆಯನ್ನು ಕಾಯಬೇಕಾಗಿರುವ ಮನೆಯೊಡತಿಯೇ ಮನೆಯ ವಸ್ತುಗಳನ್ನು ಕದ್ದರೆ? ಮಗುವನ್ನು ರಕ್ಷಿಸುವ ಎದೆಹಾಲೇ ಮಗುವಿನ ಸಾವಿಗೆ ಕಾರಣವಾದರೆ ಏನು ಗತಿ? ಇಂತಹ ವಿವಿಧ ರೂಪಕಗಳ ಮೂಲಕ ಸಮಾನತೆಯ ಹರಿಕಾರ ಬಸವಣ್ಣ ಸಾಮಾಜಿಕ ಷಡ್ಯಂತ್ರಗಳಿಗೆ ಬಲಿಯಾಗಿ ತೊಳಲಾಡುವ ವ್ಯಕ್ತಿಯ ಮೂಕವೇದನೆಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾನೆ.  ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು, ತನ್ನನ್ನು ತಾನೇ ನಾಶ ಮಾಡಿಕೊಳ್ಳಲು ಹೊರಟಾಗ ಅದನ್ನು  ತಡೆಗಟ್ಟಲು ಯಾರಿಂದಲೂ ಆಗುವುದಿಲ್ಲವೆಂಬ ವಾಸ್ತವ ಸತ್ಯವನ್ನು ರೂಪಕಗಳ ಮೂಲಕ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಕಳಚಿ ಬಿದ್ದಿರುವುದನ್ನೆಲ್ಲ ಬದುಕಿನ ಕುಲುಮೆಯಲ್ಲಿ ಮತ್ತೆ ಬೆಸೆಯಬೇಕಿದೆ. ದೇಶ ದೇಶಗಳ ನಡುವೆ ಸೊದರತ್ವದ ಪ್ರೀತಿ ಪ್ರಜ್ವಲಿಸಬೇಕಿದೆ. ಹೃದಯ ಹೃದಯಗಳ ಬೆಸೆಯಬೇಕಿದೆ. ಚಂದ್ರ ಚೂರಾಗುವ ಮುನ್ನ, ನಕ್ಷತ್ರಗಳು ಕರಗುವ ಮುನ್ನ ಪ್ರಾಣಿಗಳಲ್ಲೇ ಬುದ್ಧಿವಂತ ಪ್ರಾಣಿ ಎಂದು ಜಂಭ ಪಡುವ ನಾವೆಲ್ಲ ಪಾಠ ಕಲಿಯಲೇಬೇಕಿದೆ. ಆಗ ಬದುಕೆಂಬ ಗುಲಾಬಿ ಹೂ ಪಕಳೆಗಳ ಹರವುತ್ತ ಖುಷಿಯ ಸುಗಂಧ ಸೂಸುತ್ತದೆ. =============================================================

ಧರೆ ಹತ್ತಿ ಉರಿದೊಡೆ Read Post »

ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ ಅವರ ಹೊಲಗದ್ದೆಗಳಿಗೆ ನುಗ್ಗಿ ಬೆಳೆಗಳನ್ನೆಲ್ಲ ಹಾಳು ಮಾಡುತ್ತಿದ್ದುದನ್ನು ನೋಡುತ್ತ ಬಂದವರಿಗೆ ತಲೆಕೆಟ್ಟು ಹೋಯ್ತಂತೆ. ಅದೇ ಸಂದರ್ಭದಲ್ಲಿ ಯಾರೋ ಸ್ನೇಹಿತರು ಅವರಿಗೆ ಈ ಜನರ ಪರಿಚಯ ಮಾಡಿಸಿದರಂತೆ. ಹಾಗಾಗಿ ಇವರು ಆಗಾಗ ಆ ಜನರನ್ನು ಕರೆಯಿಸಿಕೊಂಡು ಹಂದಿಗಳನ್ನು ಹಿಡಿಸುತ್ತಿದ್ದವರು ಒಂದೆರಡು ಹಂದಿಗಳನ್ನೂ ಮತ್ತು ಐದಾರು ಸಾವಿರ ರೂಪಾಯಿಗಳನ್ನೂ ಅವರಿಗೆ ಕೊಟ್ಟು ಖುಷಿಪಡಿಸುತ್ತಿದ್ದರು. ಉಳಿದ ಹಂದಿಗಳನ್ನು ಅವರಿಂದಲೇ ಕೊಲ್ಲಿಸಿ ಮಾಂಸ ಮಾಡಿಸುತ್ತಿದ್ದರು. ಈಶ್ವರಪುರದ ಪೇಟೆಯಲ್ಲಿ, ‘ಹೊಟೇಲ್ ಮೇನಕಾ’ ಅಂತ ದೊಡ್ಡ ತ್ರೀಸ್ಟಾರ್ ಹೋಟೆಲೊಂದಿದೆ ಗೊಂತ್ತುಂಟಾ ನಿಮಗೆ?’ ‘ಹೌದು ಮಾರಾಯಾ…ಬಹಳ ಫೇಮಸ್ ಹೊಟೇಲ್ ಅಲ್ಲವಾ ಅದು!’ ‘ಹೌದು ಗುರೂಜಿ ಅದು ಪುರಂದರಣ್ಣನದ್ದಲ್ಲವಾ…!’ ‘ಓಹೋ, ಹೌದಾ ಮಾರಾಯಾ…ಅವರೀಗ ಅಷ್ಟು ದೊಡ್ಡ ಕುಳವಾ…?’ ‘ಮತ್ತೆಂಥದು ಗುರೂಜಿ…ನೀವು ನನ್ನನ್ನು ಏನೆಂದುಕೊಂಡಿದ್ದೀರಿ! ಅಂತಿಂಥವರೊಡನೆಯೆಲ್ಲ ಬೆರೆಯುವವನಲ್ಲ ನಾನು. ಅವರೂ ನಾನೂ ತುಂಬಾ ಹಳೆಯ ದೋಸ್ತಿಗಳು. ಹಾಗಾಗಿ ಯಾವಾಗಲೂ ಒಟ್ಟಿಗಿರುತ್ತೇವೆ. ಅದಿರಲಿ. ಮುಂದೆ ಕೇಳಿ. ಕಾಡುಹಂದಿಯ ಮಾಂಸದಿಂದ ತಮ್ಮ ಹೊಟೇಲಿನಲ್ಲಿ ಅವರು ಎಷ್ಟೊಂದು ಬಗೆಯ ಚೈನೀಶ್ ಫುಡ್ ತಯಾರಿಸುತ್ತಾರೆ ಗೊತ್ತುಂಟಾ? ಹಾಗಾಗಿಯೇ ಅವರ ಹೊಟೇಲಿಗೆ ಕಂಡಾಬಟ್ಟೆ ಗಿರಾಕಿ!’ ಎಂದ ಶಂಕರ ನಗುತ್ತ. ‘ಅಯ್ಯೋ ದೇವರೇ, ಹೀಗೂ ಉಂಟಾ? ಇದೆಲ್ಲ ಅರಣ್ಯ ಇಲಾಖೆಗೆ ಗೊತ್ತಾದರೆ ಕೇಸು ಗೀಸು ಆಗಿ ಅವರ ಕಥೆ ಕೋಚಾ ಆಗಲಿಕ್ಕಿಲ್ಲವಾ ಮಾರಾಯಾ?’ ಎಂದು ಏಕನಾಥರು ಅಚ್ಚರಿಯಿಂದ ಪ್ರಶ್ನಿಸಿದರು. ‘ಎಂಥದು ಕೋಚಾ ಆಗುವುದು ಗುರೂಜೀ? ಅದಕ್ಕೆಲ್ಲ ಅವರು ತಕ್ಕ ವ್ಯವಸ್ಥೆ ಮಾಡಿಕೊಂಡೇ ವ್ಯಾಪಾರಕ್ಕಿಳಿದಿರುವುದು. ಕೇಸು ಮತ್ತು ಕೋರ್ಟು ಕಛೇರಿಗಳೆಲ್ಲ ನಮ್ಮಂಥವರಿಗೆ ಅಲ್ಲ ಗುರೂಜಿ. ಅದಕ್ಕೆಂದು ಬೇರೆಯೇ ವರ್ಗದ ಜನರಿದ್ದಾರೆ!’ ಎಂದು ಶಂಕರ ಗರ್ವದಿಂದ. ‘ಅಂದರೇ, ಈಗ ನಮ್ಮೂರಿನಲ್ಲಿ ಇಷ್ಟೆಲ್ಲ ಸಂಗತಿಗಳು ನಡೆಯುತ್ತಿದ್ದಾವಾ ಮಾರಾಯಾ…? ಇದೆಲ್ಲ ನಮಗೇ ಗೊತ್ತೇ ಇರಲಿಲ್ಲ ನೋಡು!’ ಎಂದು ಗುರೂಜಿ ವಿಸ್ಮಯ ತೋರಿಸಿದರು. ‘ಅದು ಬಿಡಿ ಗುರೂಜಿ, ಇನ್ನೊಂದು ಕೊನೆಯ ವಿಷಯವನ್ನು ಹೇಳಿ ಕಥೆ ಮುಗಿಸುತ್ತೇನೆ’ ಎಂದು ನಗುತ್ತ ಅಂದ ಶಂಕರ, ‘ನನ್ನ ಆ ಜಾಗದೊಳಗೆ ಒಂದು ಕೆರೆಯಿತ್ತು. ಅದು ಎಷ್ಟು ದೊಡ್ಡದಿತ್ತೆಂದರೆ ಸುಮಾರು ಎರಡು ಎಕರೆಯಷ್ಟು ವಿಶಾಲವಿತ್ತು. ಅದರ ಸುತ್ತಮುತ್ತ ಮರಮಟ್ಟುಗಳೆಲ್ಲ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದವು. ಅವುಗಳ ಮೇಲೆ ದೊಡ್ಡ ದೊಡ್ಡ ಗಾತ್ರದ ಕೊರುಂಗ್ ಪಕ್ಷಿ(ವಲಸೆ ಕೊಕ್ಕರೆಗಳು)ಗಳಿದ್ದವು. ಅವು ನಮ್ಮೂರಿನ ಸಾಮಾನ್ಯ ಕೊರುಂಗುಗಳಂತೆ ಇರಲಿಲ್ಲ ಗುರೂಜಿ. ನಮ್ಮೂರಿನ ನಾಯಿಗಳಷ್ಟು ಎತ್ತರವಿದ್ದವು! ಅಲ್ಲಿನ ಮರಗಳನ್ನೆಲ್ಲ ಕಡಿದುರುಳಿಸುವಾಗ ಆ ಹಕ್ಕಿಗಳ ಐನೂರಕ್ಕೂ ಹೆಚ್ಚು ಮರಿಗಳು ಮತ್ತು ಅವುಗಳ ರಾಶಿರಾಶಿ ಮೊಟ್ಟೆಗಳೂ ಆ ಕಾಡು ಜನರಿಗೆ ಸಿಕ್ಕಿದವು. ಒಂದೊಂದು ಹಕ್ಕಿಮರಿಗಳು ಒಂದೊಂದು ಕಿಲೋದಷ್ಟು ತೂಕವಿದ್ದವು. ಅವೆಲ್ಲ ಪ್ರತೀವರ್ಷ ಸಾವಿರಾರು ಕಿಲೋಮೀಟರ್ ದೂರದ ಯಾವ್ಯಾವುದೋ ಹೊರ ದೇಶಗಳಿಂದೆಲ್ಲ ನಮ್ಮಲ್ಲಿಗೆ ವಲಸೆ ಬರುವ ಹಕ್ಕಿಗಳೆಂದು ಪುರಂದರಣ್ಣ ಹೇಳುತ್ತಿದ್ದರು. ಆದರೆ ಅವುಗಳ ಈ ವರ್ಷದ ಫಾರಿನ್ ಟೂರನ್ನು ನಾವು ಇಲ್ಲಿಯೇ ಮುಕ್ತಾಯಗೊಳಿಸಿ ಅವುಗಳ ಆತ್ಮಕ್ಕೆ ಸಾಮೂಹಿಕವಾಗಿ ಶಾಂತಿ ಕೋರಿದೆವು ಗುರೂಜಿ!’ ಎಂದು ಶಂಕರ ಒಮ್ಮೆ ಜೋರಾಗಿ ನಕ್ಕ. ಆಗ ಗುರೂಜಿಯ ಮುಖದಲ್ಲಿ ವಿಷಾದ ಮೂಡಿತು. ಆದರೆ ಅದನ್ನು ಗಮನಿಸದ ಶಂಕರ ಮತ್ತೆ ಕಥೆ ಮುಂದುವರೆಸಿದ. ‘ನಮ್ಮ ಕಾಡು ಜನರು ಆ ಪಕ್ಷಿಗಳನ್ನೆಲ್ಲ ಹಿಡಿದ್ಹಿಡಿದು ಅವುಗಳ ಕೊರಳು ಹಿಸುಕಿ ಕೊಂದು ಗೋಣಿ ಚೀಲಕ್ಕೆ ತುಂಬಿಸಿಕೊಂಡು ಕುಣಿದಾಡುತ್ತಿದ್ದರು. ಸುಮಾರಾಗಿ ರೆಕ್ಕೆ ಬಲಿತ ಮೂವತ್ತು, ನಲ್ವತ್ತು ದೊಡ್ಡ ಮರಿಗಳು ಪುರಂದರಣ್ಣನ ಹೊಟೇಲಿಗೂ ರವಾನೆಯಾದವು. ಹೀಗೆ ಆ ಜಾಗವನ್ನು ಸಮತಟ್ಟು ಮಾಡುವ ಸುಮಾರು ಎರಡು ತಿಂಗಳ ಕಾಲ ಆ ಮನುಷ್ಯರ ದೆಸೆಯಿಂದಾಗಿ ನಮ್ಮವರ ತಂಡವೂ ಬೇಕಾಬಿಟ್ಟಿ ಮಾಂಸದೂಟ ಮಾಡುತ್ತ ತೇಗುತ್ತಿತ್ತು. ಹಾಗಾಗಿ ಸತ್ಯ ಹೇಳುತ್ತೇನೆ ಗುರೂಜಿ, ಈಗ ‘ಮಾಂಸ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ವಾಕರಿಕೆ ಬಂದಂತಾಗುತ್ತದೆ!’ ಎಂದು ಶಂಕರ ಮುಖವನ್ನು ವಿಲಕ್ಷಣವಾಗಿ ಕಂಪಿಸುತ್ತ ತನ್ನ ವಿಕೃತ ಕಾಯಕವನ್ನು ವರ್ಣಿಸಿದ. ಅಷ್ಟು ಕೇಳಿದ ಏಕನಾಥರಿಗೆ ಮತ್ತೊಮ್ಮೆ ಹೇಸಿಗೆ ಒತ್ತರಿಸಿ ಬಂತು. ‘ಅಲ್ಲಾ ಮಾರಾಯಾ, ನೀವೆಲ್ಲ ಮನುಷ್ಯರೋ, ಮೃಗಗಳೋ ಆ ದೇವರಿಗೆ ಗೊತ್ತು. ಥು, ಥೂ…!’ ಎಂದು ಈ ಸಲ ಬಾಯಿಬಿಟ್ಟೇ ಉಗಿದುಬಿಟ್ಟರು. ಆದರೆ ಶಂಕರ ಅವರ ಮಾತಿಗೆ ಪಕಪಕಾ ನಗುತ್ತ ಮರಳಿ ಮಾತು ಮುಂದುವರೆಸಲಿದ್ದ. ಅಷ್ಟರಲ್ಲಿ ಏಕನಾಥರ ಮನೆಯೆದುರು ಒಂದಷ್ಟು ದೈತ್ಯ ಮರಗಳಿದ್ದ ತೋಟದೊಳಗಿಂದ ತಂಪಾದ ಗಾಳಿಯೆದ್ದು ವಠಾರದೊಳಗೆಲ್ಲ ಸುಳಿಯುತ್ತ ಬಂದುದು ಇವರನ್ನು ಹದವಾಗಿ ಸೋಕುತ್ತ ಒಳಗೆ ಹೋಗಿ ಮನೆಯೊಳಗೊಂದು ಸುತ್ತು ಹೊಡೆದು ಕಿಟಕಿ, ಬಾಗಿಲುಗಳ ಮೂಲಕ ಹಿತ್ತಲಿಗೆ ಹೊರಟು ಹೋಯಿತು. ಅದು ನಡು ಬೇಸಿಗೆಯ ಕಾಲ. ಹಾಗಾಗಿ ಏಕನಾಥರೂ, ಶಂಕರನೂ ವಿಪರೀತ ಸೆಕೆಯಿಂದ ಬೆವರುತ್ತಿದ್ದರಾದರೂ ಸಹಿಸಿಕೊಂಡು ಮಾತುಕತೆಯಲ್ಲಿ ಮುಳುಗಿದ್ದರು. ಈಗ ತಂಗಾಳಿ ಬೀಸಿದ್ದು ಶಂಕರನಲ್ಲಿ ಉಲ್ಲಾಸವನ್ನು ತರಿಸಿತು. ಆದ್ದರಿಂದ ಅವನು, ‘ಆಹ್ಹಾಯ್ ಗುರೂಜೀ…! ನಿಮ್ಮ ವಠಾರದಲ್ಲಿ ಭಾರೀ ಒಳ್ಳೆಯ ಗಾಳಿ ಉಂಟಲ್ಲವಾ ಅಬ್ಬಾ…! ಒಮ್ಮೆ ಜೀವ ಬಂದ ಹಾಗಾಯ್ತು ನೋಡಿ!’ ಎಂದು ಉದ್ಗರಿಸಿ, ತನ್ನ ಅಂಗಿಯ ನಾಲ್ಕು ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ಪೂರ್ತಿ ಗಾಳಿಗೊಡ್ಡುತ್ತ, ‘ಅದಕ್ಕೇ ಹೇಳುವುದು  ನೋಡಿ, ಒಂದು ಮನೆ ಎಂದ ಮೇಲೆ ಅದರ ಸುತ್ತಮುತ್ತ ಹತ್ತಾರು ಗಿಡಮರಗಳು ಇರಲೇಬೇಕು ಅಂತ!’ ಎಂದು ದೊಡ್ಡ ಪರಿಸರ ಜ್ಞಾನಿಯಂತೆ ಅಂದ. ‘ಹೌದು ಹೌದು ಮಾರಾಯಾ. ನಮ್ಮ ತೋಟದಲ್ಲೂ ಬಹಳಷ್ಟು ಮರಮಟ್ಟುಗಳುಂಟು. ನನ್ನ ಅಜ್ಜ ಮತ್ತು ಅಪ್ಪ ಅವನ್ನೆಲ್ಲ ನೆಟ್ಟು ಬೆಳೆಸಿದ್ದಂತೆ. ‘ಮನೆಯೆಂದ ಮೇಲೆ ನಾಲ್ಕಾರು ಮರಗಳಿರಬೇಕು. ಇಲ್ಲದಿದ್ದರೆ ಅದು ಮನುಷ್ಯರ ವಾಸಸ್ಥಾನವೇ ಅಲ್ಲ ಅಂತ ಅವರು ಹೇಳುತ್ತಿದ್ದರು. ಆ ಮಾತು ಸತ್ಯ ನೋಡು. ಅವರಿಂದಾಗಿ ಇಂದು ನಮ್ಮ ವಠಾರದ ವಾತಾವರಣವು ಬಹಳ ಉತ್ತಮವಾಗಿದೆ. ನಮ್ಮ ಹಿರಿಯರು ನಮಗೆ ಆಸ್ತಿಪಾಸ್ತಿಯನ್ನೇನೂ ಮಾಡಿಟ್ಟು ಹೋಗದಿದ್ದರೂ ಇಂಥದ್ದೊಂದು ಜಾಗವನ್ನು ನಮಗೆ ಬಿಟ್ಟು ಹೋದದ್ದು ನಮ್ಮ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು ಮಾರಾಯಾ!’ ಎಂದರು ಏಕನಾಥರೂ ಹೆಮ್ಮೆಯಿಂದ. ‘ಹೌದು ಗುರೂಜಿ, ಆ ವಿಷಯದಲ್ಲಿ ನೀವು ಅದೃಷ್ಟವಂತರು!’ ಎಂದ ಶಂಕರ ಮರಳಿ ಮಾತು ಮುಂದುವರೆಸಿದ. ‘ಪುರಂದರಣ್ಣನ ಕಾಡು ಜನರು ಆ ಪಕ್ಷಿಗಳ ಕಥೆಯನ್ನೆಲ್ಲ ಮುಗಿಸಿದ ಮೇಲೆ ನಮಗೆ ಅವರ ಇನ್ನೊಂದು ಕಾರನಾಮೆಯೂ ತಿಳಿಯಿತು ಗುರೂಜೀ. ಆ ಮನುಷ್ಯರು ಬರೇ ಪ್ರಾಣಿಗಳನ್ನು ಮಾತ್ರ ತಿನ್ನುವುದಲ್ಲ ಅರಣೆ, ಓತಿಕೇತ, ಕ್ರಿಮಿಕೀಟ ಮತ್ತು ಸಿಕ್ಕಿಸಿಕ್ಕಿದ ಹಾವುಗಳನ್ನೆಲ್ಲ ಹಿಡಿದು ತಿನ್ನುತ್ತಾರೆ ಬಿಕನಾಸಿಗಳು!’ ಎಂದು ಅಸಹ್ಯದಿಂದ ಮೈಯನ್ನು ಹಿಂಡಿ ನಕ್ಕ. ಅಷ್ಟು ಕೇಳಿದ ಏಕನಾಥರಿಗೆ ಹೊಟ್ಟೆ ತೊಳಸಿದಂತಾಯಿತು. ‘ಥೂ! ಸಾಕು, ಸಾಕು ಮಾರಾಯ ನಿಲ್ಲಿಸು. ಆ ರಕ್ಕಸ ವಂಶದವರು ಸಾಯಲಿ ಅತ್ಲಾಗೆ! ನೀನು ಬಂದ ವಿಷಯವನ್ನು ಇನ್ನೂ ಹೇಳಲಿಲ್ಲ. ಅದನ್ನು ಹೇಳು!’ ಎಂದು ಮುಖ ಕಹಿ ಮಾಡಿಕೊಂಡು ಅಂದರು. ಏಕನಾಥರ ಮುಖ ಚಿರುಟಿದ್ದನ್ನು ಕಂಡ ಶಂಕರನಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕ. ಆಗ ಏಕನಾಥರಿಗೂ ನಗು ಬಂತು. ‘ಆಯ್ತು ಗುರೂಜೀ ಇಲ್ಲಿ ಕೇಳಿ, ಇನ್ನೊಂದು ಸ್ವಲ್ಪ ಉಂಟು ಅದನ್ನೂ ಹೇಳಿ ಬಿಡುತ್ತೇನೆ. ಒಮ್ಮೆ ನಮ್ಮ ಜೆಸಿಬಿ ಚಾಲಕನೊಬ್ಬ ಒಂದು ದಟ್ಟವಾದ ಬಲ್ಲೆಯನ್ನು ತೆಗೆಯುತ್ತಿದ್ದವನು ‘ಹಾವು ಹಾವೂ…! ಎಂದು ಬೊಬ್ಬೆ ಹೊಡೆದು ತಟ್ಟನೆ ಕೆಲಸ ನಿಲ್ಲಿಸಿಬಿಟ್ಟ. ಅಷ್ಟೊತ್ತಿಗೆ ಸುತ್ತಮುತ್ತಲಿದ್ದ ಕೆಲಸಗಾರರೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿ ಹೋದರು. ಯಾವ ಹಾವೆಂದು ತಿಳಿಯದ ನಮಗೂ ಭಯವಾಗಿ ದೂರ ಓಡಿದೆವು. ಆದರೆ ಆ ಕಾಡು ಜನರು ಒಮ್ಮೆಲೇ ಆ ಪೊದರಿನತ್ತ ನುಗ್ಗಿದರು. ಆಗ ನಮಗೆಲ್ಲ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸಮೀಪ ಹೋದೆವು. ಅಷ್ಟರಲ್ಲಿ ಅವರ ಐವರು ಯುವಕರು ಆ ಪೊದೆಯಿಂದ ದೊಡ್ಡ ದೊಡ್ಡ ಐದು ಹೆಬ್ಬಾವುಗಳ ಬಾಲಗಳನ್ನು ಹಿಡಿದು ದರದರನೇ ಹೊರಗೆಳೆದು ತಂದು ಮೈದಾನದಲ್ಲಿ ಹಾಕಿದರು. ಮತ್ತೊಬ್ಬ ಯುವಕ ಸುತ್ತಿಗೆಯೊಂದನ್ನು ತಂದ. ನಮ್ಮ ಕಂಕಣಬೆಟ್ಟಿನ ಉಮೇಶಾಚಾರಿ ಇದ್ದಾನಲ್ಲ ಅವನು ಕಾದ ಪಿಕ್ಕಾಸಿನ ತುದಿಯನ್ನು ಹೇಗೆ ಬಡಿಬಡಿದು ಹದ ಮಾಡುತ್ತಾನೆ ಎಂದು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ, ಈ ಹುಡುಗನೂ ಒಂದೊಂದು ಪೆರ್ಮಾರಿಯ ತಲೆಗೂ ಲೆಕ್ಕದ ಎರಡೆರಡು ಪೆಟ್ಟು ಬೀಸಿ ಬೀಸಿ ಬಡಿದ ನೋಡಿ ಅವುಗಳ ತಲೆ ಒಡೆದು ಅಪ್ಪಚ್ಚಿಯಾಯಿತು. ಮರುಕ್ಷಣ ಅವು ಅಲ್ಲಲ್ಲೇ ನರಳಾಡಿ ಪ್ರಾಣಬಿಟ್ಟವು. ಬಳಿಕ ಅವರು ಅವುಗಳನ್ನು ಚೀಲಕ್ಕೆ ತುಂಬಿಸಿಕೊಂಡು ಗುಡಿಸಲಿನತ್ತ ಹೋದರು. ಅದನ್ನೂ ಪದಾರ್ಥ ಮಾಡಿ ತಿನ್ನುತ್ತಾರಂತೆ ಅವರು!’ ‘ಅಯ್ಯೋ ದೇವರೇ, ನೀವೆಲ್ಲ ಮಹಾಪಾಪಿಗಳು ಮಾರಾಯಾ!’ ಎಂದು ವಿಷಾದದಿಂದ ನಕ್ಕ ಗುರೂಜಿ, ‘ಅದೆಲ್ಲ ಹಾಗಿರಲಿ ಶಂಕರ. ನೀನು ಹೇಳಬೇಕೆಂದಿದ್ದ ವಿಷಯವನ್ನು ಕೊನೆಗೂ ಹೇಳಲೇ ಇಲ್ಲವಲ್ಲ? ನಮಗೂ ಪೂಜೆಗೆ ಹೊತ್ತಾಯಿತು ಮಾರಾಯಾ…!’ ಎಂದು ಅವನ ಮೂಕ ಜೀವರಾಶಿಯ ಮಾರಣಹೋಮದ ಕಥೆಗೆ ಮುಕ್ತಾಯ ಹಾಡಿದರು. ಆಗ ಶಂಕರ ಪೆಚ್ಚಾದ. ಆದರೂ ಸಂಭಾಳಿಸಿಕೊಂಡು, ‘ಓಹೋ, ಹೌದಲ್ಲವಾ ಗುರೂಜಿ. ನಮ್ಮ ಕಥೆ ಎಲ್ಲೆಲ್ಲಿಗೋ ಹೋಯಿತು. ಸರಿ, ಈಗ ಹೇಳುತ್ತೇನೆ ಕೇಳಿ’ ಎಂದವನು ಮುಖ್ಯ ವಿಷಯಕ್ಕೆ ಬಂದ. ‘ನನ್ನ ಜಾಗದ ಕಥೆ ಹೇಳಿದೆನಲ್ಲ ಅದರ ಮೂಲ ವಾರಸುದಾರರು ಅಮೆರಿಕದಲ್ಲೆಲ್ಲೋ ಇದ್ದಾರಂತೆ ಗುರೂಜಿ. ಅವರ ಪರವಾಗಿ ನನ್ನ ಜೊತೆ ಅದರ ವ್ಯವಹಾರ ಮಾಡಿದವನು ಅಬ್ದುಲ್ ರಜಾಕ್ ಅಂತ. ಅವನೂ ನನಗೆ ಒಳ್ಳೆಯ ಪರಿಚಯಸ್ಥ. ಅವನ ಕುಟುಂಬಕ್ಕೂ ಜಾಗದವರ ಕುಟುಂಬಕ್ಕೂ ಹಿಂದಿನಿಂದಲೂ ಬಹಳ ಹತ್ತಿರವಂತೆ. ಹಾಗಾಗಿ ನಾನು ಆ ಜಾಗದ ರೆಕಾರ್ಡ್ ಪರೀಕ್ಷಿಸಿ ಎಲ್ಲವೂ ಸರಿಯಾಗಿದೆ ಅಂತ ತಿಳಿದ ಮೇಲೆ ಅಡ್ವಾನ್ಸ್ ಕೊಟ್ಟು ಕಾಡು ಕಡಿಯಲಾರಂಭಿಸಿದೆ. ಆದರೆ ಅದು ಮುಗಿಯುವಷ್ಟರಲ್ಲಿ ಒಂದು ದೊಡ್ಡ ತಾಪತ್ರಯ ಬಂದು ವಕ್ಕರಿಸಿತು ನೋಡಿ! ಆ ಜಾಗವು ಶೆಟ್ಟರೊಬ್ಬರ ಮನೆತನಕ್ಕೆ ಸೇರಿದ್ದಂತೆ. ಅದರೊಳಗಿನ ಕಾಡು ಅವರ ಮೂಲದ ದೈವಭೂತಗಳ ಸ್ಥಾನವಂತೆ. ಆ ಕಾಡಿನೊಳಗೆ ನಾಗ, ಪಂಜುರ್ಲಿ, ನಂದಿಗೋಣ, ಲೆಕ್ಕೆಸಿರಿ, ಕ್ಷೇತ್ರಪಾಲ ಮತ್ತು ಗುಳಿಗ ದೈವಗಳ ಗುಂಡಗಳಿದ್ದವಂತೆ! ನಮ್ಮ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕೆಲಸ ಮಾಡುವಾಗ ಒಂದು ಕಡೆ ವಿಶಾಲ ಜಾಗದಲ್ಲಿ ತರಗೆಲೆಯ ರಾಶಿಯ ಮಧ್ಯೆ ಬಹಳ ಹಿಂದಿನ ಕಾಲದ ಸವೆದು ಹೋದ ಹತ್ತಾರು ಮುರಕಲ್ಲುಗಳು ಸಿಕ್ಕಿದ್ದವು ಗುರೂಜಿ. ಆದರೆ ನನಗೇನು ಗೊತ್ತಿತ್ತು ಅವು ಭೂತದ ಕಲ್ಲುಗಳು ಅಂತ? ಹಾಗಾಗಿ ಅಲ್ಲಿನ ಮಣ್ಣು ಲೋಡು ಮಾಡುವಾಗ ಆ ಕಲ್ಲುಗಳು ಮಣ್ಣಿನೊಳಗೆಲ್ಲೋ ಸೇರಿಕೊಂಡು ಈಗ ಯಾರ ಮನೆಯ ಅಡಿಪಾಯದೊಳಗೋ ಅಥವಾ ಪೊಟ್ಟು ಬಾವಿಯೊಳಗೋ ಬಿದ್ದು ಮುಚ್ಚಿ ಹೋಗಿವೆಯೋ ಯಾರಿಗೆ ಗೊತ್ತು?’ ಎಂದು ಶಂಕರ ಮಾತು ನಿಲ್ಲಿಸಿ ಯಾವುದೋ ಚಿಂತೆಗೆ ಬಿದ್ದ. ಆಗ ಏಕನಾಥರಿಗೆ ಸಂಗತಿ ಮೆಲ್ಲನೆ ಮನವರಿಕೆಯಾಗತೊಡಗಿತು. ಆದ್ದರಿಂದ ಅವರು, ‘ಬೇರೇನು ತೊಂದರೆಯಾಗಿದೆ ಮಾರಾಯಾ, ಅದನ್ನೂ ಹೇಳು…?’ ಎಂದರು ಮೃದುವಾಗಿ.    ಆಗ ಶಂಕರ ತನ್ನ ಹಿಂತಲೆಯನ್ನೊಮ್ಮೆ ಅಸಹನೆಯಿಂದ ಕೆರೆದುಕೊಂಡವನು, ‘ಈಗ ಒಂದು ದೊಡ್ಡ ಫಜೀತಿಯಾಗಿದೆ ಗುರೂಜಿ.

Read Post »

You cannot copy content of this page

Scroll to Top