ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬುದ್ಧ ಪೂರ್ಣಿಮೆ

ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್​ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ.

ಬುದ್ಧ ಪೂರ್ಣಿಮೆ Read Post »

ಇತರೆ

ಪರಿಸರ ಯೋಧ ಸುಂದರಲಾಲ್ ಬಹುಗುಣ..!

ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.

ಪರಿಸರ ಯೋಧ ಸುಂದರಲಾಲ್ ಬಹುಗುಣ..! Read Post »

ಇತರೆ

ಶಾಹು ಮಹಾರಾಜ್ ಎಂಬ ಜೀವಪರ ರಾಜ

ಲೇಖನ ಶಾಹು ಮಹಾರಾಜ್ ಎಂಬ ಜೀವಪರ ರಾಜ ಆಶಾ. ಎಸ್ ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು. ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‍. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು. ಇವರು ಮೂಲತಃ ಕುಣುಬಿ(ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ. ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.  ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ. ಆಗ ಶಾಹು ಮಹಾರಾಜರು ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ. ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾ ಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ. ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿ ಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೆ. ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೆ. ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಹೊರಟುಹೋಗುತ್ತಾನೆ. ********************

ಶಾಹು ಮಹಾರಾಜ್ ಎಂಬ ಜೀವಪರ ರಾಜ Read Post »

ಇತರೆ

ಶಾಲಾ journey

ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.

ಶಾಲಾ journey Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು.    ‘ಬಹುಶಃ ಇಷ್ಟರವರೆಗಿನ ತಮ್ಮ ಗುಲಾಮಗಿರಿಯ ಬದುಕು ಇಂದಿಗೆ ಮುಕ್ತಾಯಗೊಂಡು ಸ್ವತಂತ್ರ ಜೀವನದ ಹೆಬ್ಬಾಗಿಲು ತೆರೆಯುತ್ತಿದೆ. ಆ ಅವಕಾಶವು ಇವನ ಮೂಲಕವೇ ತಮ್ಮನ್ನು ಹುಡುಕಿ ಬಂದಿರುವುದು ಖಚಿತವಾಗಿದೆ. ಈ ಒಂದು ಕಾರ್ಯವನ್ನು ತಾವು ಯಶಸ್ವಿಯಾಗಿ ನಡೆಸಿಕೊಟ್ಟೆವೆಂದರೆ ಆಮೇಲೆ ತಮ್ಮ ಅದೃಷ್ಟ ಕುಲಾಯಿಸಿದಂತೆಯೇ ಸರಿ! ಮುಂದಿನ ನಾಲ್ಕೈದು ವರ್ಷದೊಳಗೆ ಒಳ್ಳೆಯ ಸಂಪಾದನೆ ಕುದುರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಇವತ್ತು ತಾವು ಇವನ ಸಮಸ್ಯೆಯ ಎಳೆಎಳೆಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಇವನೂ ಒಳ್ಳೆಯ ಮನುಷ್ಯನೇನೂ ಅಲ್ಲ. ಎಷ್ಟೋ ಬಡವರ, ಅಮಾಯಕರ ಮಂಡೆ ಹೊಡೆದೇ ಮೇಲೆ ಬಂದವನು. ಇಂಥವರೊಂದಿಗೆ ವ್ಯವಹರಿಸುವಾಗ ಸ್ವಲ್ಪ ವ್ಯಾಪಾರದ ನಾಟಕವಾಡುವುದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ನಮಗೂ ಸಂಸಾರವಿದೆ ಮತ್ತೆ ಅದಕ್ಕೊಂದು ಭವಿಷ್ಯವೂ ಇದೆಯಲ್ಲವಾ! ಅದಕ್ಕಾಗಿಯಾದರೂ ತಾವು ಬುದ್ಧಿವಂತಿಕೆಯಿಂದ ಮುಂದುವರೆಯಬೇಕು. ‘ಒಂದು ಶುಭಕಾರ್ಯಕ್ಕೆ ನೂರೆಂಟು ವಿಘ್ನಗಳಂತೆ. ಅವನ್ನೆಲ್ಲ ಮೀರಿ ಕಾರ್ಯಸಿದ್ಧಿಗೆ ಹೊರಟಾಗ ಸಣ್ಣಪುಟ್ಟ ತಪ್ಪು ಒಪ್ಪುಗಳು ನಡೆಯುವುದೂ ಸಹಜವೇ!’ ಎಂದು ಪೆದುಮಾಳರು ಹೇಳುತ್ತಿದ್ದುದು ನೆನಪಿದೆ. ಆದರೂ ತಮ್ಮ ಕಾಯಕದಲ್ಲಿ ತಾವು ವಿವೇಕದಿಂದ ವರ್ತಿಸಬೇಕು. ಎಂದಿಗೂ ಇವನಂಥ ದುರಾಸೆಯ ಮನುಷ್ಯನಾಗಬಾರದು. ತಾವು ನಂಬಿದ ದೈವ ದೇವರುಗಳು ಮೆಚ್ಚುವಂತೆಯೇ ನಡೆದುಕೊಳ್ಳಬೇಕು. ತಮ್ಮನ್ನು ನಂಬಿ ಬಂದವರಿಗೆ ಒಳ್ಳೆಯದಾಗುವಂತೆಯೇ ವ್ಯವಹರಿಸಬೇಕು. ಹಾಗೆ ಬದುಕಿದರೆ ಯಾವ ದೋಷವೂ ತಟ್ಟುವುದಿಲ್ಲ! ಎಂದು ನಿರ್ಧರಿಸಿದ ಏಕನಾಥರು ತಮ್ಮ ಚಿಂತನೆಗೆ ಮಂಗಳ ಹಾಡುವಷ್ಟರಲ್ಲಿ ಶಂಕರನ ಕಾರು ಶೀಂಬ್ರಗುಡ್ಡೆಯನ್ನು ದಾಟಿ ಸಣ್ಣ ಬೆಟ್ಟವೊಂದನ್ನೇರಿ ಬಾಕುಡಗುಡ್ಡೆಯನ್ನು ತಲುಪಿತು. ಅಲ್ಲಿನ ಕೊರಕಲು ಮಣ್ಣಿನ ರಸ್ತೆಯನ್ನು ಹಿಡಿದು ಮತ್ತಷ್ಟು ದೂರ ಸಾಗಿದ ನಂತರ ಒಂದು ಕಡೆ ಬಲಕ್ಕೆ ತಿರುಗಿ ವಿಶಾಲವಾದೊಂದು ಕುರುಚಲು ಕಾಡಿನ ಸಮೀಪ ಹೋಗಿ ನಿಂತಿತು. ಏಕನಾಥರು ಕಾರಿನಿಂದ ಇಳಿದವರು ಎದುರಿನ ಪ್ರದೇಶದ ಮೇಲೊಂದು ಪಕ್ಷಿನೋಟವನ್ನು ಬೀರುತ್ತ ನಿಂತರು. ಆ ವಿಶಾಲವಾದ ಜಮೀನಿನ ಮುಕ್ಕಾಲು ಭಾಗದ ಕಾಡುಗುಡ್ಡಗಳನ್ನು ಕಡಿದು ಜರಿದು ನಿನಾರ್ಮಗೊಳಿಸಲಾಗಿತ್ತು. ಕೆಲವೇ ತಿಂಗಳುಗಳ ಹಿಂದಷ್ಟೇ ಪಶ್ಚಿಮಘಟ್ಟದ ಒಂದು ಬೃಹತ್ ತುಣುಕಿನಂತೆ ಹಚ್ಚಹಸುರಾಗಿ ನಳನಳಿಸುತ್ತಿದ್ದ ಆ ಅರಣ್ಯವನ್ನೂ ಅಲ್ಲಿನ ಅಸಂಖ್ಯಾತ ಸ್ಥೂಲ ಮತ್ತು ಸೂಕ್ಷ್ಮ ಜೀವರಾಶಿಗಳನ್ನೂ ಜೆಸಿಬಿ, ಹಿಟಾಚಿ ಹಾಗೂ ಬುಲ್‍ಡೋಜರ್‍ಗಳಂಥ ರಾಕ್ಷಸ ಯಂತ್ರಗಳೂ, ಜನರೂ ಕೂಡಿ ಧ್ವಂಸಗೊಳಿಸಿಬಿಟ್ಟಿದ್ದರು. ಅಷ್ಟಲ್ಲದೇ ಆ ಕೆಲಸವಿನ್ನೂ ಚಾಲ್ತಿಯಲ್ಲಿತ್ತು! ಹಾಗಾಗಿ ಆ ಪರಿಸರವೂ ಅಲ್ಲಿನ ವಾತಾವರಣವೂ ಸುಡುಗಾಡಿನಂತೆ ಬಣಗುಟ್ಟುತ್ತಿತ್ತು. ಸಂಜೆಯ ಹೊಂಬಣ್ಣದ ಸೂರ್ಯನ ತಂಪಾದ ಕಿರಣಗಳ ನಡುವೆಯೂ ಆ ಭೂಮಿಯು ಬಿಸಿಯೇರಿ ನರಳುತ್ತಿತ್ತು. ರಭಸದಿಂದ ಏಳುತ್ತಿದ್ದ ಒಣಹವೆಯು ಆಕಾಶದೆತ್ತರಕ್ಕೆ ಕೆಂಧೂಳನ್ನೆಬ್ಬಿಸುತ್ತ ಅಲ್ಲಿನ ವಾತಾವರಣವನ್ನು ತೀವ್ರ ಕಲುಷಿತಗೊಳಿಸಿತ್ತು. ಆ ದೃಶ್ಯವನ್ನು ಗಮನಿಸಿದರೆ, ಮುಂದೊಂದು ದಿನ ಆ ಪ್ರದೇಶದಲ್ಲಿ ಉಂಟಾಗಬಹುದಾದ ವಿವಿಧ ರೂಪದ ಪ್ರಕೃತಿ ವಿಕೋಪದ ಸ್ಪಷ್ಟ ಮುನ್ಸೂಚನೆಯಂತಿತ್ತು.    ಶತಮಾನಗಳಿಂದಲೂ ತಮ್ಮ ಸಂತತಿಯನ್ನು ಆ ಮಳೆಕಾಡಿನೊಳಗೆಯೇ ಸೃಷ್ಟಿಸಿ ಬೆಳೆಸುತ್ತ ಪರಿಸರಸ್ನೇಹಿಗಳಾಗಿ, ಸಮೃದ್ಧವಾಗಿ ಬಾಳಿ ಬದುಕಿದ ನೂರಾರು ಪಕ್ಷಿಸಂಕುಲಗಳಿಂದು ಶಂಕರನ ಅಭಿವೃದ್ಧಿ ಮತ್ತು ನಗರೀಕರಣದ ಧಾವಂತಕ್ಕೆ ಬಲಿಯಾಗಿ ತಮ್ಮ ನೆಲೆಗಳನ್ನು ಶಾಶ್ವತವಾಗಿ ಕಳೆದುಕೊಂಡು ಅನಾಥವಾಗಿಬಿಟ್ಟಿದ್ದವು. ಆದರೂ ಆ ಕಹಿ ಸತ್ಯವನ್ನು ತಿಳಿಯಲಾರದ ಅವುಗಳು ಸಂಜೆಯಾಗುತ್ತಲೇ ಅಳಿದುಳಿದ ಮರಗಿಡಗಳಲ್ಲಿ ವಿಶ್ರಮಿಸಿ ರಾತ್ರಿ ಕಳೆಯಲು ಹೆಣಗುತ್ತಿದ್ದವು. ಅಲ್ಲೂ ಸ್ಥಳಾವಕಾಶ ಸಾಲದೆ ಸೋತು ಆಕಾಶದ ತುಂಬೆಲ್ಲಾ ಹಾರಾಡುತ್ತ ಅತೀವ ವಿಚಲಿತತೆಯಿಂದ ಅರಚುತ್ತ ತಮ್ಮ ತಮ್ಮೊಳಗೇ ಕಚ್ಚಾಡಿಕೊಂಡು ಬಳಲುತ್ತಿದ್ದ ದೃಶ್ಯವು ಅಲ್ಲಿನ ಯಾವ ಮನುಷ್ಯರಲ್ಲೂ ಕನಿಕರ ಅನುಕಂಪವನ್ನು ಮೂಡಿಸದಿದ್ದುದು ಆ ಮನುಷ್ಯರೊಳಗಿನ ಅಮಾನವೀಯತೆಯನ್ನು ಬಿಂಬಿಸುತ್ತಿತ್ತು.    ಅನಾದಿಕಾಲದಿಂದಲೂ ತಮ್ಮನ್ನಾಶ್ರಯಿಸಿದ ಮೂಕ ಜೀವರಾಶಿಗಳಿಗೂ, ಮೇಲಾಗಿ ಮನುಷ್ಯರಿಗೂ ಮಮತೆಯ ತೊಟ್ಟಿಲಿನಂತಿದ್ದ ದೈತ್ಯ ಮರಗಿಡಗಳು ಮತ್ತು ಅವುಗಳನ್ನು ಪ್ರೀತಿ, ವಿಶ್ವಾಸದಿಂದ ಅಪ್ಪಿಕೊಂಡು ಬೆಳೆದಿದ್ದ ವಿವಿಧ ಔಷಧಿಯ ಬಳ್ಳಿಗಳು ತಂತಮ್ಮ ಅವಯವಗಳನ್ನು ಕ್ರೂರವಾಗಿ ಕತ್ತರಿಸಲ್ಪಟ್ಟು, ಎಳೆದು ಸೀಳಲ್ಪಟ್ಟು, ಬುಡ ಸಮೇತ ಕೀಳಲ್ಪಟ್ಟು, ಅಪಘಾತಕ್ಕೀಡಾಗಿ ರಸ್ತೆಯ ನಟ್ಟನಡುವೆ ನರಳಿ ಸತ್ತ ಮೂಕ ನಾಯಿ, ನರಿ, ಬೆಕ್ಕುಗಳಂತೆಯೂ ಹಾಗೂ ಇನ್ನು ಕೆಲವು ಅರೆಜೀವಾವಸ್ಥೆಯಲ್ಲಿ ಒದ್ದಾಡುತ್ತಿರುವಂತೆಯೂ ಭಾಸವಾಗುತ್ತಿದ್ದವು. ನಿಸರ್ಗದ ನಡುವೆ ಸರಳವಾಗಿ ಬಾಳಿ ಬದುಕುವ ಯಾವ ಜೀವರಾಶಿಗಳೇ ಆಗಲಿ ಅತ್ತ ಸುಳಿಯಲಾರದಷ್ಟು ಆ ಪ್ರದೇಶವು ಶುಷ್ಕ, ರಣಭೂಮಿಯಂತೆ ಕಾಣುತ್ತಿತ್ತು.    ಏಕನಾಥರು ಆ ದೃಶ್ಯವನ್ನೆಲ್ಲ ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತ ಮುನ್ನಡೆದರು. ಆದರೆ ಆ ಭೀಕರತೆಯನ್ನು ಕಾಣುತ್ತ ಹೋದವರಿಗೆ ನಿಧಾನವಾಗಿ ತಮ್ಮ ದೇಹದೊಳಗೆ ಯಾರೋ ಒರಟು ಕೈಗಳನ್ನು ತೂರಿಸಿ ಹೃದಯವನ್ನು ಬಲವಾಗಿ ಹಿಂಡಿದಂಥ ವೇದನೆ, ವಿಷಾದ ಹುಟ್ಟಿತು. ಜೊತೆಗೆ ತಮ್ಮ ತೀಕ್ಷ್ಣ ಬುದ್ಧಿಗೂ ನಿಲುಕದಂಥ ಹತಾಶಾಭಾವವೊಂದು ಮೊಳೆತು ಮೈಯಿಡೀ ತಣ್ಣನೆ ಬೆವರುತ್ತ ಉಸಿರುಗಟ್ಟಿದಂತಾಯಿತು. ಮರುಕ್ಷಣ ‘ಛೇ, ಛೇ! ಎಂಥ ಭಯಂಕರ ದೃಶ್ಯವಿದು! ಪ್ರಕೃತಿಯ ಮೇಲೆ ಮನುಷ್ಯನೊಬ್ಬ ಈ ಮಟ್ಟಕ್ಕೆ ಅತ್ಯಾಚಾರ ಎಸಗುವುದೆಂದರೇನು…? ಇಂಥ ಕೆಟ್ಟ ಕರ್ಮದಲ್ಲಿ ತಾವೂ ಭಾಗಿಯಾಗುವುದು ಸರಿಯೇ…?’ ಎಂದು ಅವರ ಅಂತರಾತ್ಮವು ಚೀರಿ ಕೇಳಿದಂತಾಯಿತು. ಮುಂದೇನೂ ಹೊಳೆಯದೆ ಅಶಾಂತರಾಗಿಬಿಟ್ಟರು. ಆದರೆ ಅಷ್ಟರಲ್ಲಿ ಅವರ ಸಂಸಾರವು ಅನುಭವಿಸುತ್ತಿದ್ದ ದಟ್ಟದಾರಿದ್ರ್ಯವೂ ಅದನ್ನು ನಿವಾರಿಸಲಾಗದ ಅವರ ದೌರ್ಬಲ್ಯವೂ ಕಣ್ಣೆದುರು ಬಂದು ಕುಣಿಯಿತು. ಆಗ ಅವರಲ್ಲಿ ಈ ಮೊದಲು ಉದ್ಭವಿಸಿದ್ದ ಆರ್ಧ್ರ ಭಾವನೆಯು ತಟ್ಟನೆ ಮುದುಡಿ ಮನಸ್ಸಿನಾಳಕ್ಕಿಳಿದು ಮರೆಯಾಯಿತು. ಹಾಗಾಗಿ ಅಂಥ ಯೋಚನೆಗಳು ತಮ್ಮ ಮನೋದೌರ್ಬಲ್ಯದ ಸೂಚನೆಯೆಂದು ಭಾವಿಸಿದ ಅವರು ಕೂಡಲೇ ತಮ್ಮ ವ್ಯಾವಹಾರಿಕ ಬುದ್ಧಿಯನ್ನು ಚುರುಕುಗೊಳಿಸಿ ಬಂದ ಕೆಲಸದತ್ತ ಗಮನ ಹರಿಸಿದರು.    ಏಕನಾಥರಂತೆ ಶಂಕರನೂ ತನ್ನ ಜಮೀನನ್ನು ನೋಡುತ್ತ ನಡೆಯುತ್ತಿದ್ದ. ಆದರೆ ಅವನಿಗೆ ಅಲ್ಲಿ ತನ್ನಿಂದಾಗಿಯೇ ಕಲುಷಿತಗೊಂಡ ವಾತಾವರಣವಾಗಲಿ, ಅತಂತ್ರಗೊಂಡ ಜೀವರಾಶಿಗಳಾಗಲಿ ಅಥವಾ ತಮ್ಮ ಅವಯವಗಳನ್ನು ಸೀಳಿಸಿಕೊಂಡು ಕುರೂಪವಾಗಿ ಬಿದ್ದಿದ್ದ ಮರಗಿಡ ಬಳ್ಳಿಗಳಾಗಲಿ ಕಾಣುತ್ತಿರಲಿಲ್ಲ. ಬದಲಿಗೆ ಅವನ ಮನಸ್ಸು, ಮುಂದೆ ಅಲ್ಲಿ ತನ್ನಿಂದ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡಗಳು ಮತ್ತು ಶ್ರೀಮಂತ ಬಂಗಲೆಗಳು ಬೃಹದಾಕಾರವಾಗಿ ತಲೆಯೆತ್ತಿ ನಿಲ್ಲುತ್ತಿರುವಂತೆಯೂ ಆ ಮೂಲಕ ತಾನು ಹಾಗೂ ತನ್ನ ಮುಂದಿನ ಹಲವಾರು ತಲೆಮಾರುಗಳು ಆಗರ್ಭ ಸಿರಿವಂತಿಕೆಯಿಂದ ಮೆರೆದಾಡುವಂತೆಯೂ ಕಲ್ಪಿಸಿಕೊಳ್ಳುತ್ತ ಪುಳಕಿತಗೊಳ್ಳುತ್ತಿತ್ತು. ಅದೇ ಹೆಮ್ಮೆಯಿಂದ ನಡೆಯುತ್ತಿದ್ದವನು, ‘ನೋಡಿ ಗುರೂಜೀ, ಇದೇ ನನ್ನ ಜೀವಮಾನದ ದೊಡ್ಡ ಸಾಧನೆ!’ ಎಂದ ಗರ್ವದಿಂದ.    ‘ಹ್ಞೂಂ, ಹ್ಞೂಂ, ಪರ್ವಾಗಿಲ್ಲ ಮಾರಾಯಾ ನೀನೂ ಸಣ್ಣ ಕುಳವೇನಲ್ಲ! ಈ ವ್ಯವಹಾರದಲ್ಲಿ ನೀನು ಇಷ್ಟೊಂದು ಹುಷಾರಿನವನೂ ಮತ್ತು ದೂರಾಲೋಚನೆ ಇರುವವನೂ ಎಂದರೆ ನಮಗೆ ನಂಬಲಿಕ್ಕೇ ಆಗುವುದಿಲ್ಲ! ನಮ್ಮ ಚೆನ್ನಮಣೆ ಆಟ ಗೊತ್ತುಂಟಲ್ಲವಾ ನಿಂಗೆ? ಅದರ ಮಾತಿನಂತೆ, ‘ಹೊಡೆದರೆ ಪೆರ್ಗವನ್ನೇ ಹೊಡೆಯಬೇಕು!’ ಅನ್ನುವುದನ್ನು ನೀನು ನಿಜ ಮಾಡಿಬಿಟ್ಟಿದ್ದಿ ನೋಡು!’ ಎಂದು ಏಕನಾಥರು ಅವನನ್ನು ಅಟ್ಟಕೇರಿಸಿದರು. ಅದರಿಂದ ಶಂಕರ ಮತ್ತಷ್ಟು ಉಬ್ಬಿದವನು ನಗುತ್ತ ಮುಂದೆ ಸಾಗಿದ. ಆದರೂ ಆ ಪ್ರದೇಶದೊಳಗಿನ ಪುರಾತನ ನಾಗಬನವನ್ನೂ ತುಳುನಾಡಿನ ದೈವಗಳ ನೆಲೆಗಳನ್ನೂ ತಾನು ಧ್ವಂಸ ಮಾಡಿದ್ದುದರ ತೀವ್ರ ಭಯವೊಂದು ಅವನನ್ನು ಅಡಿಗಡಿಗೂ ಕಾಡುತ್ತ ಹಿಂಸಿಸುತ್ತಿತ್ತು. ಅದನ್ನು ಹತ್ತಿಕ್ಕಿಕೊಳ್ಳುತ್ತ ಒಂದಷ್ಟು ದೂರ ದಾಪುಗಾಲು ಹಾಕಿದವನು ಅಲ್ಲೊಂದು ಕಡೆ ಇನ್ನೂ ಉಳಿದಿದ್ದ ಸಣ್ಣದೊಂದು ಹಾಡಿಯತ್ತ ಏಕನಾಥರನ್ನು ಕರೆದೊಯ್ದ. ಅಲ್ಲಿ ಕೆಲವು ಜೆಸಿಬಿ ಯಂತ್ರಗಳು ರೋಷಗೊಂಡ ಘೇಂಡಾಮೃಗಗಳಂತೆ ಆಕ್ರಮಣಕ್ಕೆ ಸಿದ್ಧವಾಗಿ ನಿಂತಿದ್ದವು. ಆದರೆ ಅವು ತಮ್ಮನ್ನು ಚಲಾಯಿಸುವವರಲ್ಲಿ ಹುಟ್ಟಿದ ನಾಗದೋಷದ ಭೀತಿಗೆ ತಾವೂ ಮಣಿದು ತಮ್ಮ ಹುಟ್ಟುಗುಣವನ್ನು ಹತ್ತಿಕ್ಕಿಕೊಂಡು ಮರಳಿ ಯಾವಾಗ ತಮ್ಮ ವಿಧ್ವಂಸಕ ಕೃತ್ಯಕ್ಕೆ ಚಾಲನೆ ದೊರಕೀತೋ…? ಎಂದು ಕಾಯುತ್ತಿದ್ದುದು ಅಲ್ಲಿನ ಒಂದಷ್ಟು ಜಾಗದಲ್ಲಿ ಅಳಿದುಳಿದಿದ್ದ ಜೀವರಾಶಿಗಳಿಗೂ ಮರಗಿಡ ಬಳ್ಳಿಗಳಿಗೂ ಸೂಕ್ಷ್ಮವಾಗಿ ತಿಳಿಯುತ್ತಿತ್ತು. ಆದ್ದರಿಂದ ಅವು ತಮ್ಮ ಅಂತ್ಯಕಾಲವನ್ನು ದುಃಖದಿಂದ ಎದುರು ನೋಡುತ್ತ ಕ್ಷೀಣವಾಗಿ ಉಸಿರಾಡಿಕೊಂಡಿದ್ದವು.    ಶಂಕರ ತಾನು ಕಡಿದುರುಳಿಸಿದ್ದ ಹತ್ತಾರು ಮರಗಳನ್ನು ಹಾರಿ ನೆಗೆದು ದಾಟುತ್ತ ಒಂದು ಕಡೆ ಧೂಪ, ರೆಂಜೆ, ಸುರಗಿ, ಹೊನ್ನೆ ಮತ್ತು ಹಾಲೆಮರಗಳಿದ್ದ ಜಾಗಕ್ಕೆ ಏಕನಾಥರನ್ನು ಕರೆದೊಯ್ದ. ಆ ಮರಗಳ ನಾಲ್ಕು ಸುತ್ತಲೂ ಮುರಗಲ್ಲಿನಿಂದ ಕಟ್ಟಿದ ಸುಮಾರು ಎರಡಡಿಯಷ್ಟು ಎತ್ತರದ ಹಳೆಯ ಆವರಣವಿತ್ತು. ಅದರೊಳಗೊಂದು ವಿಶಾಲವಾದ ಚಚ್ಚೌಕದ ಮತ್ತು ಸ್ವಲ್ಪ ಎತ್ತರದ ಪೀಠವಿತ್ತು. ಆ ಪೀಠದ ಮೇಲೆ ಮತ್ತು ಅದರ ಸುತ್ತಮುತ್ತಲೂ ಅನೇಕ ಜಾತಿಯ ಮರಗಳು ಅವುಗಳ ಬೇರುಗಳು ಹಾಗೂ ಗಿಡಗಂಟಿ, ಪೊದೆಗಳು ಬೆಳೆದು ನಿಂತಿದ್ದವು. ಅದರಿಂದ ಆ ಪೀಠವು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಬಿರುಕಿನೆಡೆಗಳಲ್ಲೂ ಅನೇಕ ಕುಬ್ಜವೃಕ್ಷಗಳು ಹುಟ್ಟಿ ಬೆಳೆದು ಜೀವಂತಿಕೆಯಿಂದ ನಳನಳಿಸುತ್ತಿದ್ದವು. ಆದರೆ ಜೆಸಿಬಿಯಿಂದ ಬಗೆದ ರಭಸಕ್ಕೆ ಪೀಠದ ಒಂದು ಭಾಗವು ಒಡೆದು ಪುಡಿಪುಡಿಯಾಗಿತ್ತು. ಅದರಲ್ಲಿ ದೈವದ ಕುರುಹುಗಳಾಗಿ ಸ್ಥಾಪಸಿಲಾಗಿದ್ದ ಸುಮಾರು ಮೂರು ನಾಲ್ಕು ಶತಮಾನಗಳಷ್ಟು ಪುರಾತನವಾದ ಕೆಲವು ಮುರಕಲ್ಲುಗಳು ಮತ್ತು ನಾಗನಕಲ್ಲುಗಳು ಸ್ವಸ್ಥಾನದಿಂದ ಕಿತ್ತು ಹೊರಗೆ ಎಸೆಯಲ್ಪಟ್ಟು ಅನಾಥವಾಗಿ ಬಿದ್ದಿದ್ದವು. ಆ ಕೆಲವು ಶಿಲೆಗಳ ಮೇಲೆ ಹೆಡೆ ಬಿಚ್ಚಿ ಬಾಲದ ತುದಿಯಲ್ಲಿ ನಿಂತ ನಾಗಿಣಿಯ ಚಿತ್ತಾರದ ಕೆತ್ತನೆಯೂ ಅದರ ಬಾಲದಿಂದ ನಡು ಶರೀರದವರೆಗೆ ದುಂಡಗಿನ ಮೊಟ್ಟೆಗಳ ಚಿತ್ತಾರಗಳೂ ಇದ್ದವು. ಇನ್ನು ಹಲವದರಲ್ಲಿ ಜೋಡಿ ನಾಗರಗಳ ಮಿಥುನ ಶಿಲ್ಪಗಳನ್ನೂ ಕೆಲವದರಲ್ಲಿ ಗಂಭೀರ ಹೆಡೆಯುಳ್ಳ ನಾಗರಾಜನನ್ನೂ ಮತ್ತು ‘ಪವಿತ್ರ ಗಂಟು’ ಹೆಣೆದ ನಾಗರ ಚಿತ್ತಾರಗಳನ್ನೂ ಕಲಾತ್ಮಕವಾಗಿ ಕೆತ್ತಲಾಗಿತ್ತು. ಅಂಥ ಕೆಲವು ಕಲ್ಲುಗಳು ಯಂತ್ರಗಳ ಹೊಡೆತಕ್ಕೆ ಸಿಲುಕಿ ಒಡೆದು ಪುಡಿಯಾಗಿದ್ದವು. ಏಕನಾಥರು ಅವನ್ನೆಲ್ಲ ಯೋಚನಾಗ್ರಸ್ತರಾಗಿ ಪರೀಕ್ಷಿಸತೊಡಗಿದವರು ಪದೇಪದೇ ತಮ್ಮ ಮುಖದಲ್ಲಿ ಭಯ ಮತ್ತು ವಿಷಾದವನ್ನು ಪ್ರಕಟಿಸುತ್ತ ಆ ಸ್ಥಳಕ್ಕೊಂದು ದೊಡ್ಡ ಸುತ್ತು ಹೊಡೆದರು. ಅವರ ಆಗಿನ ಮುಖಭಾವವನ್ನೂ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದ ಅವರ ವರ್ತನೆಯನ್ನೂ ನೋಡುತ್ತಿದ್ದ ಶಂಕರನೊಳಗಿನ ಆತಂಕವೂ ಇಮ್ಮಡಿಯಾಗುತ್ತಿತ್ತು. ಅದೇ ಚಡಪಡಿಕೆಯಿಂದ ಅವನು ಪದೇಪದೇ ಉಗುರುಕಚ್ಚಿ ಉಗಿಯುತ್ತಿದ್ದವನು, ಅಯ್ಯೋ ದೇವರೇ…! ಈ ದರ್ವೇಶಿ ಏಕನಾಥ ನಾನು ಸೂಚಿಸಿದ ಕೆಲಸ ಮಾಡುವುದನ್ನು ಬಿಟ್ಟು ನನ್ನ ಮನೆಮಠ ಲಗಾಡಿ ತೆಗೆಯುವ ಉಪಾಯವನ್ನೇ ಹೂಡುತ್ತಿದ್ದಾನೋ ಏನೋ…?’ ಎಂದು ತಳಮಳಿಸುತ್ತಿದ್ದ. ಆದರೆ ಅತ್ತ ಏಕನಾಥರೂ ಶಂಕರನ ಅಶಾಂತಿಯನ್ನು ಗಮನಿಸುತ್ತಲೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.    ಸುಮಾರು ಹೊತ್ತಿನವರೆಗೆ ಆ ಪ್ರದೇಶವನ್ನೂ ಅಲ್ಲಿ ಹಾನಿಗೊಂಡಿದ್ದ ನಾಗ, ಪರಿವಾರ ದೈವಗಳ ಪೀಠವನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ಏಕನಾಥರು, ಕೊನೆಯಲ್ಲಿ ತಮ್ಮೊಳಗಿನ ಲೆಕ್ಕಾಚಾರಕ್ಕೂ ಒಂದು ಸ್ಪಷ್ಟರೂಪವನ್ನು ಕೊಟ್ಟುಕೊಂಡರು. ಬಳಿಕ ಆ ಜಾಗದಿಂದ ತಟ್ಟನೆ ಹೊರಗೆ ಬಂದುಬಿಟ್ಟರು. ಒಮ್ಮೆ ನಾಲ್ಕು ದಿಕ್ಕುಗಳನ್ನೂ ಮತ್ತು ಸಂಜೆಯ ಧೂಳಿನ ಓಕುಳಿ ಹರಡಿದ್ದ ಆಕಾಶವನ್ನೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣುಮುಚ್ಚಿದವರು ದೀರ್ಘ ಉಸಿರೆಳೆದುಕೊಂಡು ಕೆಲವು ಕ್ಷಣ ಧ್ಯಾನಸ್ಥರಾದರು. ನಂತರ ಕಣ್ಣು ತೆರೆದು ಶಂಕರನತ್ತ ದೃಷ್ಟಿ ಹೊರಳಿಸಿದರು. ಅವನು ಒಳಗೊಳಗೇ ಪರಿತಪಿಸುತ್ತಿದ್ದವನು ಬಾರದ ನಗು ಬರಿಸಿಕೊಂಡು ಅವರನ್ನು ದಿಟ್ಟಿಸಿದ.    ಆಗ ಏಕನಾಥರು, ‘ಎಲ್ಲವನ್ನೂ ನೋಡಿಯಾಯಿತು ಶಂಕರ. ಇನ್ನು ಹೊರಡೋಣವಾ…?’ ಎಂದು ಗಂಭೀರವಾಗಿ ಅಂದರು. ಆದರೆ ಅಷ್ಟು ಕೇಳಿದ ಶಂಕರ ಅಶಾಂತನಾದ. ‘ಅಂದರೇ ಗುರೂಜೀ…? ತುಂಡಾದ ನಾಗನ ಕಲ್ಲುಗಳನ್ನು ಏನು ಮಾಡುವ

Read Post »

ಇತರೆ

ಬದುಕುವ ಕಲೆ

ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ದೂರ ಮಾಡಿ ಇಂಗ್ಲಿಷ್ ವ್ಯಾಮೋಹದ ವ್ಯಾಧಿ ಹುಟ್ಟು ಹಾಕುತ್ತಿರುವುದು ಊರಿನ ಅನೇಕ ಹಿರೇಕರನ್ನು ಚಿಂತೆಗೀಡು ಮಾಡಿದೆ.

ಬದುಕುವ ಕಲೆ Read Post »

ಇತರೆ

ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಜಂಗಮವಾಣಿ(ಮೊಬೈಲ) ಒಂದಿದ್ದರೇ ಏನೂ ಬೇಡ,ಯಾರೂ ಬೇಡ ಎಂಬ ಸಂಗತಿಯನ್ನು ನೆನೆದಾಗ ಪಾಲಕರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೊಂಚ ಶ್ರಮ ಪಡುವ ಅನಿವಾರ್ಯತೆ ಅವಶ್ಯಕತೆ ತುಂಬಾ ಇದೆ

ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ Read Post »

ಇತರೆ

ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು

ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ ರೀತಿ ಹಾಯ್ಕುವನ್ನುಚಾಪರೂಪದ ಕಾವ್ಯ ಪ್ರಕಾರವಾಗಿಸಿದೆ ” ಎನ್ನುತ್ತಾರೆ‌

ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು Read Post »

ಇತರೆ

ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಎಷ್ಟೇ ‘ಅಮರ’ ಸಾಧಕ ಆಗಿದ್ದರೂ, ಎಷ್ಟೇ ಶ್ರೀಮಂತ ಆಗಿದ್ದರೂ, ಎಂಥೆಂಥ ಬಿರುದು ಪಡೆದಿದ್ದರೂ, ಆತನ ಸುತ್ತ ಹೊಗಳುವ ಸೈನ್ಯವೇ ಇದ್ದರೂ, ಕೆಲಕಾಲವಾದರೂ ಒಬ್ಬಂಟಿತನದ ಬೆಂಬಿಡದ ಭೂತದ ತುತ್ತು ಆತ! ಬಹುಷಃ! ಈಗಿನ ಜಗತ್ತಿನ ಪ್ರಕ್ಷೋಭ

Read Post »

You cannot copy content of this page

Scroll to Top