ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್        ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ  ಸಂಶೋದನೆಯ ಸರಳ ವಿಧಾನ ತಿಳಿಸಿ ಕೊಟ್ಟರು. ಅದರಂತೆ ಅಂಬೇಡ್ಕರರು ಅರ್ಥಶಾಸ್ತ್ರ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದರು. ಆಳವಾದ ಅಧ್ಯಯನದ ಫಲವಾಗಿ ಅಂಬೇಡ್ಕರರು 1916 ರಲ್ಲಿ ಪ್ರೊ.ಗೋಲ್ಡನ್ ವೈಜರ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದಲ್ಲಿ ಜಾತಿಗಳ ಉಗಮ ಮತ್ತು ಅವುಗಳ ವಿಕಾಸ “ (Castes in India; Their mechanism, Genesis and development) ಎಂಬ ಎರಡನೆಯ ಪ್ರಬಂಧವನ್ನು ಮಂಡಿಸಿದರು. ಸ್ವ ಗೋತ್ರ ವಿವಾಹವೇ ಜಾತಿಗೆ ಮೂಲ ಮತ್ತು ಅವುಗಳ ವಿಕಾಸದ ಸೂಕ್ಷ್ಮತೆಯನ್ನು ಅಲ್ಲದೆ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ಮಾಲಿನ್ಯದ ಪರಿಕಲ್ಪನೆ ಅಂದರೆ ಮಾಲಿನ್ಯ ,ಮೈಲಿಗೆ, ಮಡಿ, ಪರಿಕಲ್ಪನೆಯೊಂದಿಗೆ ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವುದು, ಪ್ರತ್ಯೇಕತೆ,ಅಂತರ್ಜಾತೀಯ ವಿವಾಹ ನಿಷೇದ ಮತ್ತು ಸ್ವಕುಲಜನರಿಗೆ ಮಾತ್ರ ತನ್ನೊಂದಿಗೆ ಸದಸ್ಯತ್ವ ಇವು ಜಾತಿಯ ಲಕ್ಷಣಗಳೆಂದು ವಿವರಿಸಿರುವರು.              ಭಾರತದ ಹಿಂದು ಧರ್ಮವು ಮೂಲಭೂತವಾಗಿ ಪುರಾತನವಾದದ್ದು ಎಂದು ನಾಗರಿಕತೆ ಬದಲಾವನೆಯಾಗಿದ್ದರೂ ಸನಾತನ ನಿಯಮಗಳು ಶ್ರೇಷ್ಠವೆಂದು ಇಂದಿಗೂ ಬಲಯುತವಾಗಿ ಜಾರಿಯಲ್ಲಿವೆ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಪದ್ದತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಭಾರತಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಸ್ವಜಾತಿ ವಿವಾಹವು ಜಾತಿಯ ಉತ್ಪತ್ತಿಗೆ ಕಾರಣವೆಂದು, ಜಾತಿ ಉತ್ಪತ್ತಿ ನಂತರ ಅದನ್ನು ನಿರಂತರ ಹೇಗೆ ಕಾಪಾಡಿಕೊಂಡು ಬರಲಾಯಿತೆಂಬುವುದನ್ನು ಅಂಬೇಡ್ಕರರು ತಮ್ಮ ಈ ಪ್ರಬಂಧದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಗಂಡ ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ ಒಂದು ಗುಂಪಿನ ಜಾತಿ ಸಂಖ್ಯೆಯಲ್ಲಿ ಗಂಡು ಹೆಣ್ಣು ಅನುರೂಪತೆ ಕಾಣಲು ಸಾಧ್ಯ ಆದರೆ ಸ್ವಜಾತಿ ವಿವಾಹ ಪದ್ಧತಿ ಮೂಲಕ ಸಮನಾದ ಸಂಖ್ಯೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಇಲ್ಲಿ ಆಶ್ಚರ್ಯ ಚಕಿತ ಗೊಳಿಸುವಂತದೆಂದರೆ ಗಂಡ ಸತ್ತಾಗ ಆತನ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಸುಡುವುದು. ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ಉಳಿದ ಹೆಣ್ಣು ಅಂತರ್ಜಾತಿ ವಿವಾಹವಾದಲ್ಲಿ ಅವಳು ಸ್ವಜಾತಿ ವಿವಾಹ ಪದ್ಧತಿಯನ್ನು ಮುರಿದು ಜಾತಿ ಪದ್ಧತಿಯನ್ನು ನಾಶಮಾಡುತ್ತಾಳೆ. ಹಾಗಾಗಿ ಗಂಡ ಹೆಂಡತಿಯ ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷವೆಂದು, ಸಮಾಧಿಯ ಆಚೆಗೆ ಇರುವ ಭಕ್ತಿ ಎಂದು, ಸತಿ ಪದ್ಧತಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಸಾಂಪ್ರದಾಯಿಕ ಸಮರ್ಥನೆ ನೀಡಲಾಗಿದೆ. ಇದೆ ನಿಯಮ ಹೆಂಡತಿ ಸತ್ತ ಗಂಡನಿಗೆ ಕಟ್ಟು ನಿಟ್ಟಾಗಿ ಅಳವಡಿಸಿಲ್ಲ. ಇನ್ನು ಸತಿ ಪದ್ಧತಿಯಿಂದ ಪಾರಾಗಿದ್ದಲ್ಲಿ ಜೀವನ ಪೂರ್ತಿ ಅವಳು ವಿಧವೆಯಾಗಿ ಜೀವಿಸಬೇಕು. ಹೆಂಡತಿಸತ್ತು ಗಂಡ ಉಳಿದಲ್ಲಿ ಅವನು ವಿದುರನಾಗಬೇಕು. ಆದರೆ ಹೆಣ್ಣಿಗೆ ವಿಧಿಸಿದಷ್ಟು ಕಠೋರ ನಿಯಮ ಗಂಡಸಿಗೆ ಇಲ್ಲ. ಅವನು ಮರುಮದುವೆಯಾಗಬಹುದು. ಗಂಡ ಸತ್ತ ಹೆಣ್ಣು ಸತಿ-ಪದ್ಧತಿ ಅನುಸರಿಲ್ಲವಾದರೆ ವಿದವಾ ಪದ್ಧತಿ ಅನುಸರಿಸಲೇಬೇಕು.                 ಬಾಲ್ಯವಿವಾಹ ಪದ್ಧಿತಿಯು, ಸತಿ ಪದ್ದತಿ, ವಿಧವಾ ಪದ್ದತಿಯಂತೆ ಜಾರಿಗೆ ಬಂದಿದ್ದು, ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆ ಮಾಡುವುದು. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವಂತಿಲ್ಲ. ಆದರ್ಶ ಶೀಲವಂತಿಕೆ ಕಾಯ್ದುಕೊಳ್ಳಬೇಕು. ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕುಡದು. ಹಾಗೆ ಮಾಡಿದ್ದೆ ಆದರೆ ಅದೊಂದು ಪಾಪ. ಆದ್ದರಿಂದ ಕನ್ಯೆಯು ಲೈಂಗಿಕಪ್ರಜ್ಞೆ ಜಾಗೃತಗೊಳ್ಳುವ ಮೊದಲೆ ಅವಳ ಮದುವೆ ಮಾಡುವುದು ಒಂದು ವೇಳೆ ಕನ್ಯೆಯು ಪ್ರಜ್ಞಾವಂತಳಾದ ಮೇಲೆ ಬೇರೆ ಜಾತಿಯ ವ್ಯಕ್ತಿಯಲ್ಲಿ ಅನುರಕ್ತಳಾಗಿ ವಿವಾಹವಾದಲ್ಲಿ ಜಾತಿ ಪದ್ಧತಿಗೆ ಕಳಂಕ ತರುವಳು ಅದಕ್ಕೆಂದೆ ಬಾಲ್ಯ ವಿವಾಹ.      ಸ್ವಜಾತಿ ವಿವಾಹದಿಂದ ಜಾತಿಯ ಸೃಷ್ಟಿಯಾಗುತ್ತದೆ. ಸತಿಪದ್ಧತಿ, ವಿದವೆ ಅಥವಾ ವಿಧೂರತನ ಮತ್ತು ಬಾಲ್ಯವಿವಾಹ ಈ ರೀತಿ ಸ್ತ್ರೀ ಪುರುಷರ ನಡುವೆ ತಾರತಮ್ಯವನ್ನು ಅನುಕೂಲಕರವಾಗಿ ಉಪಯೋಗಿಸುತ್ತಾ ಬಂದುದ್ದು, ಹಿಂದೂ ಸಮಾಜದಲ್ಲಿ ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೆ ಅತೀರೇಕ ಸಂಪ್ರದಾಯಗಳಾಗಿ ಎದ್ದು ಕಾಣುತ್ತವೆ. ಈ ಮೂರು ಸಂಪ್ರದಾಯಗಳು ಜಾತಿಯ ಸಂರಕ್ಷಣೆಯ ವಿಧಾನಗಳಾಗಿವೆ. ಈಮೂರು ವಿದಾನಗಳಿಂದಲೆ ಜಾತಿ ಶಾಶ್ವತವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಈ ಮೂರು ಸಂಪ್ರದಾಯಗಳ ಕರಾಳತೆಯನ್ನು  ಅಂಬೇಡ್ಕರರು ಇಲ್ಲಿ ಅಲ್ಲಗಳೆಯಲಾಗದಂತೆ ವಿಶ್ಲೇಷಿಸಿರುವರು. ಅಂಬೇಡ್ಕರರು ಎರಡು ವರ್ಷಗಳ ಅವಧಿಯಲ್ಲಿ ಎರಡು ಮಹಾ ಪ್ರಬಂಧಗಳನ್ನು ಬರೆದು ಒಪ್ಪಿಸಿದ್ದರಿಂದ ಕೊಲಂಬಿಯಾ ವಿಶ್ವವಿಧ್ಯಾಲಯವು ಅವರಿಗೆ ಎರಡು ಎಂ.ಎ. ಪದವಿಗಳನ್ನು ಅನುಗ್ರಹಿಸುತ್ತದೆ. ಅಮೇರಿಕದಲ್ಲಿ ಅವರಿಗೆ ಅಲ್ಲಿನ ಸಂವಿಧಾನ ಅದರಲ್ಲೂ 14 ನೇ ತಿದ್ದುಪಡಿ,ನೀಗ್ರೋ ಜನಾಂಗಕ್ಕೆ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಅಬ್ರಾಹಂ ಲಿಂಕನ್ರ ಹೋರಾಟ ನೀಗ್ರೋಗಳಿಗೆ ಅವರು ತಂದುಕೊಟ್ಟ ಸ್ವಾತಂತ್ರ್ಯ,ಅಲ್ಲದೆ ಭೂಕರ ಟಿ ವಾಷಿಂಗಟನ್ ಜೀವನ ಮತ್ತು ಸಾಧನೆ ಅವರು ನೀಗ್ರೋ ಜನಾಂಗಕ್ಕೆ ಕೊಡಿಸಿದ ಸಮಾನತೆ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಭಾರತದಲ್ಲಿ ತುಳಿತಕೊಳಪಟ್ಟ ನಿಮ್ನ ವರ್ಗದ ಜನರ ಜೀವನ ಸುಧಾರಣೆ, ಕಲ್ಯಾಣ ಸಮಾಜ ಸ್ಥಾಪನೆ ಅವರ ಏಕೈಕ ಗುರಿಯಾಗುತ್ತದೆ. ಬರೋಡಾ ಸಂಸ್ಥಾನದಿಂದ ಬರುತ್ತಿದ್ದ ಶಿಷ್ಯವೇತನದ ಹಣದಲ್ಲಿ ದುಂದು ವೆಚ್ಚಮಾಡದೆ ಮಿತವ್ಯೆಯಮಾಡಿ, ಅರೆ ಹೊಟ್ಟೆಯಲ್ಲಿದ್ದುಕೊಂಡು ದುಡ್ಡು ಉಳಿತಾಯ ಮಾಡಿ ಸಾವಿರಾರು ಪುಸ್ತಕ ಖರೀದಿ ಮಾಡುತ್ತಾರೆ, ಛಲದಿಂದ ಕಠೋರ ಅಧ್ಯಯನ  ಮಾಡುತ್ತಾರೆ, ಪಿ.ಎಚ್.ಡಿ ಪದವಿಗಾಗಿ ಮಹಾಪ್ರಬಂಧ ಬರೆಯಲು ಆರಂಭಿಸುತ್ತಾರೆ. ಕಠಿಣ ಪರಿಶ್ರಮ, ಆಳವಾದ ಅಧ್ಯಯನದಫಲವಾಗಿ 1917 ರಲ್ಲಿ “ರಾಷ್ಟ್ರೀಯ ಡಿವಿಡೆಂಟ್: ಒಂದು ಐತಿಹಾಸಿಕ ಮತ್ತು ವಿಶ್ಲೇಷನಾತ್ಮಕ ಅಧ್ಯಯನ “(National Dividend of India- A Historical and Analytical study) ಎಂಬ ಮಹಾ ಪ್ರಬಂಧವನ್ನು ಬರೆದು ಮಂಡಿಸುವರು. ಈ ಕೃತಿಗೆ “ಬ್ರಿಟಿಷ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ, ವಿಕಾಸ” ಎಂಬ ಮೂಲ ತಲೆಬರಹ ಮತ್ತು ಬ್ರಿಟಿಷ ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ವಿಕೇಂದ್ರಿಕರಣ “ ಎಂಬುದಾಗಿ ಎರಡನೆ ತಲೆಬರಹದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಮಹಾಪ್ರಬಂಧವನ್ನು ತಮಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಮಂಜೂರಿಸಿದ ಬರೋಡಾ ಮಹಾರಾಜರಾದ ಸಯ್ಯಾಜೀ ಗಾಯಕವಾಡ ರವರಿಗೆ ಅರ್ಪಿಸಿರುವರು. ವಿಶ್ವಪ್ರಸಿದ್ಧಅರ್ಥಶಾಸ್ತ್ರಜ್ಞ ಮತ್ತು ಅಂಬೇಡ್ಕರರ ಅಚ್ಚುಮೆಚ್ಚಿನ ಉಪನ್ಯಾಸಕರಾದ ಪ್ರೋ.ಎಡ್ವಿನ್ ಸೆಲಿಗ್ಮನ್ ರವರು ಪುಸ್ತಕಕ್ಕೆ ಮುನ್ನುಡಿ ಬರೆದಿರುವರು. ಹಣಕಾಸಿನ ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷನೆಮಾಡಿ ಬರೆದಂತ ಇಂತಹ ಪ್ರಬಂಧವನ್ನು ಇಲ್ಲಿಯವರೆಗೆ ನೋಡಿಲ್ಲವೆಂದು ಪ್ರೋ. ಸೆಲಿಗ್ಮನ್ ರವರು ಮುಕ್ತಕಂಠದಿಂದ ಹೊಗಳಿರುವರು. ಈ ಮಹಾ ಪ್ರಬಂಧದಲ್ಲಿ ಅಂಬೇಡ್ಕರರು ಭಾರತದ ಅರ್ಥವ್ಯವಸ್ತೆ ಮತ್ತು ಹಣಕಾಸು ವ್ಯವಸ್ಥೆಯನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ. ಒಳ್ಳೆಯ ಆಡಳಿತ –ಒಳ್ಳೆಹಣಕಾಸಿನ ಮೇಲೆ ಅವಲಂಬಿಸಿರುತ್ತದೆ. ಆಡಳಿತ ಎಂಬ ಇಂಜಿನ್ನಿಗೆ ಹಣಕಾಸು ಎಂಬುದು, ಇಂಧನವಾಗಿದೆ ಎಂದು ಹಣಕಾಸು ಆಡಳಿತವನ್ನು ವಿಮರ್ಶೆ ಮಾಡಿರುವರು. ಭಾರತಕ್ಕೆ ಇಂಗ್ಲೆಂಡ ಕೊಟ್ಟ ಕೊಡುಗೆ ಏನು ಎಂಬುದಕಿಂತಲೂ ಇಂಗ್ಲೆಂಡಗೆ ಭಾರತ ಕೊಟ್ಟ ಕೊಡುಗೆ ಆರ್ಥಿಕವಾಗಿ ಅಪಾರವಾಗಿದೆ. ಅಧಿಕ ತೆರಿಗೆಯಿಂದ ಇಂಗ್ಲೆಂಡ ಭಾರತವನ್ನು ಎಷ್ಟು ಲೂಟಿ ಮಾಡಿತು ಎಂದರೆ ಪ್ರಪಂಚದಲ್ಲಿಯೆಭಾರತವು ಒಂದು ಬತ್ತಿಹೋದ ಸ್ಥಳವಾಗಿದೆ ಎಂಬುದಾಗಿ ಹೇಳುತ್ತಾರೆ. ಬ್ರಿಟಿಷರಿಂದ ಶಾಂತಿಯುತ ಆಡಳಿತ ಪದ್ದತಿ, ನ್ಯಾಯಾಂಗ ಪದ್ದತಿ, ಕೊಡುಗೆಗಳಾದರೂ ಭಾರತವನ್ನು ಬಡತನ, ದಾರಿದ್ರ್ಯ ಕೂಪಕ್ಕೆ ತಳ್ಳಿದ್ದು ಘೋರ ಅನ್ಯಾಯವಾಗಿದೆ ಎಂಬುದಾಗಿ ಬ್ರಿಟಿಷರ ಆಡಳಿತವನ್ನು, ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಾ ಜಗತ್ತಿಗೆ ಬಹಿರಂಗ ಗೊಳಿಸಿದ್ದಾರೆ. ಬ್ರಿಟಿಷರ ಮುಖಕ್ಕೆ ಹೊಡೆದಂತೆ ಅಂಕಿ ಅಂಶ ಪ್ರಸ್ತೂತ ಪಡೆಸಿದ್ದಾರೆ. ಈ ಕೃತಿ –ಅಂದು ಎಷ್ಟು ಪ್ರಸಿದ್ದಿ ಹೊಂದಿತ್ತು ಎಂಬುದಕ್ಕೆ, ಅಂದಿನ ಸಂಸದರು, ಶಾಸಕರು ಬ್ರಿಟಿಷ ಆಡಳಿತದ ಬಜೆಟ್ ಮಂಡನೆಯ ಸಮಯದಲ್ಲಿ ಆಕರ ಗ್ರಂಥವಾಗಿ ಬಳಸಲಾಗುತಿತ್ತು. ಅಂಬೇಡ್ಕರರುಒಬ್ಬ ಶ್ರೇಷ್ಠ ಆರ್ಥಿಕ ತಜ್ಞರೆಂಬುದು, ಒಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಲೇಖನಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಬ್ರಿಟಿಷರ ಆಡಳಿತ ಪದ್ಧತಿಯನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿದ್ದು ಯಾವ ಸ್ವಾತಂತ್ರ್ಯ ಹೊರಾಟಗಾರನಿಗಿಂತಲೂ ಕಡಿಮೆಯಾದುದಲ್ಲ ಎಂಬುದನ್ನು ಕೃತಿಯು ಸಾಬೀತು ಪಡಿಸುತ್ತದೆ. ಈ ಕೃತಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರಿಗೆ ಪಿಎಚ್ ಡಿ ಪದವಿಯನ್ನು ನೀಡಿತು.                                                  (ಮುಂದುವರೆಯುವುದು)                                          ಸೋಮಲಿಂಗ ಗೆಣ್ಣೂರ        

Read Post »

ಇತರೆ

ಧಾರಾವಾಹಿ ಆವರ್ತನ ಅದ್ಯಾಯ-46 .ಆವತ್ತು ದೇವರಕಾಡಿನಲ್ಲಿ ನೆರೆದ ಭಕ್ತಾದಿಗಳೆದುರು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿ ಬಂದಿದ್ದ ಗುರೂಜಿಯವರು ಅಲ್ಲಿನ ನಾಗ ಭವನ ನಿರ್ಮಾಣದ ಕಾಮಗಾರಿಯನ್ನು ಶಂಕರನಿಗೆ ಒಪ್ಪಿಸಲು ಇಚ್ಛಿದರು. ಆದ್ದರಿಂದ ಅಂದು ಬೆಳಿಗ್ಗೆ ಅವನನ್ನು ತಮ್ಮ ಬಂಗಲೆಗೆ ಬರಹೇಳಿದರು. ಗುರೂಜಿಯವರು ದೇವರಕಾಡಿನ ದೊಡ್ಡ ಪ್ರಾಜೆಕ್ಟ್‍ನ್ನು ಕೈಗೆತ್ತಿಕೊಂಡಿರುವುದು ಶಂಕರನಿಗೂ ಗೊತ್ತಿತ್ತು. ಅಲ್ಲದೇ ಅದರ ಕೆಲಸವನ್ನು ಅವರು ತನಗೇ ಕೊಡುತ್ತಾರೆಂಬುದೂ ಅವನಿಗೆ ಖಚಿತವಿತ್ತು. ಹಾಗಾಗಿ,‘ಶಂಕರಾ ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಮಾತಾಡಲಿಕ್ಕಿದೆ ಮಾರಾಯಾ, ಬೇಗ ಬಂದುಬಿಡು!’ ಎಂದು ಗುರೂಜಿಯವರು ಆಪ್ತವಾಗಿ ಕರೆದಾಗ ಅವನೂ ಅಷ್ಟೇ ನಮ್ರತೆಯಿಂದ, ‘ಆಯ್ತು ಗುರೂಜಿ. ಇನ್ನೊಂದು ಅರ್ಧ ಗಂಟೆಯಲ್ಲಿ ನಿಮ್ಮ ಮುಂದಿರುತ್ತೇನೆ!’ ಎಂದವನು ಕೂಡಲೇ ಸ್ನಾನ ಮಾಡಿ ಬಿಳಿಯ ಮಡಿಯುಟ್ಟು ಅವರ ಬಂಗಲೆಗೆ ಹೊರಟು ಬಂದಿದ್ದ. ಶಂಕರ ತಮ್ಮನ್ನು ಕಂಡಾಗಲೆಲ್ಲ ತೋರಿಸುತ್ತಿದ್ದ ವಿಶೇಷ ಗೌರವವನ್ನೂ ಮತ್ತವನ ಈ ಹೊತ್ತಿನ ವೇಷಭೂಷಣನ್ನೂ ಕಂಡ ಗುರೂಜಿಯವರಿಗೆ ಅವನ ಬಗ್ಗೆ ಹೆಮ್ಮೆಯೆನಿಸಿತು. ಅಷ್ಟೊತ್ತಿಗೆ ಕೆಲಸದವಳು ತಂದಿಟ್ಟ ಕಾಫಿಯನ್ನು ಶಂಕರನಿಗೆ ಕುಡಿಯಲು ಹೇಳುತ್ತ ಮಾತಿಗಾರಂಭಿಸಿದರು. ‘ಶಂಕರ, ಆ ನಾಗದೇವನ ದಯೆಯಿಂದ ನಿನ್ನ ಭಾಗೀವನದ ಸಮೀಪದ ದೇವರಕಾಡನ್ನು ಜೀರ್ಣೋದ್ಧಾರ ಮಾಡುವ ದೊಡ್ಡ ಜವಾಬ್ದಾರಿಯೊಂದು ನಮ್ಮ ಮೇಲೆ ಬಿದ್ದಿದೆ ಮಾರಾಯಾ. ಈ ಪ್ರಾಜೆಕ್ಟು ಕಡಿಮೆಯೆಂದರೂ ಮೂವತ್ತು ಕೋಟಿಗೂ ಮೀರಿದ್ದು ಮಾತ್ರವಲ್ಲದೇ ನಮ್ಮ ಜೀವಮಾನದಲ್ಲೇ ಅದು ಬಹಳ ದೊಡ್ಡ ವ್ಯವಹಾರ ಮಾರಾಯಾ! ಹಾಗಾಗಿ ನಮಗೆ ನಿನ್ನ ಸಂಪೂರ್ಣ ಸಹಕಾರ ಬೇಕು. ಅದರ ಕೆಲಸಕಾರ್ಯಗಳು ನಾಳೆಯಿಂದಲೇ ಶುರುವಾಗುತ್ತವೆ! ಎಂದು ಹೆಮ್ಮೆಯಿಂದ ಹೇಳಿದರು. ಗುರೂಜಿಯವರು ತಮ್ಮ ಬುದ್ಧಿಶಕ್ತಿ ಮತ್ತು ಚಾಣಾಕ್ಷತೆಯಿಂದ ತನಗಿಂತಲೂ ವೇಗವಾಗಿ ಮೇಲೇರಿದುದನ್ನು ಕಾಣುತ್ತ ಬಂದಿದ್ದ ಶಂಕರ ಮೊದಮೊದಲು ಅವರ ಮೇಲೆ ತೀವ್ರ ಮಸ್ಸರಗೊಂಡಿದ್ದನಾದರೂ ಕೊನೆಕೊನೆಗೆ ಅವರ ಸಾಮಥ್ರ್ಯಕ್ಕೆ ವಿಧಿಯಿಲ್ಲದೆ ಶರಣಾಗಿಬಿಟ್ಟಿದ್ದ. ಹಾಗಾಗಿ ಅವರು ತನ್ನ ಶಾಲಾ ಸಹಪಾಠಿ ಎಂಬುದೂ ಅವನಲ್ಲಿ ಗೌಣವಾಗಿ ಅವರ ಮೇಲೆ ಎಲ್ಲರಂತೆ ಭಯಮಿಶ್ರಿತ ಗೌರವಾದರಗಳು ಮೂಡಿದ್ದವು. ಆದ್ದರಿಂದ ಇವತ್ತು ಅವರೆದುರು ನಮ್ರನಾಗಿ ಕುಳಿತಿದ್ದವನು, ‘ಅಲ್ಲ, ಗುರೂಜಿ ನಿಮ್ಮ ಶಕ್ತಿ, ಸಾಮಥ್ರ್ಯದ ಬಗ್ಗೆ ಯಾರಾದರೂ ಮಾತಾಡಲಿಕ್ಕುಂಟಾ ಹೇಳಿ? ನೀವು ಮನಸ್ಸು ಮಾಡಿದರೆ ಯಾವ ಕಾರ್ಯವನ್ನಾದರೂ ಚಿಟಿಕೆ ಹೊಡೆದಂತೆ ಸಾಧಿಸಬಲ್ಲಿರಿ ಅಂತ ಇಡೀ ಊರಿಗೇ ಗೊತ್ತಿರುವ ಸಂಗತಿಯವಲ್ಲವಾ! ಬಹುಶಃ ಆ ಗುಣ ನಿಮ್ಮ ರಕ್ತದಲ್ಲೇ ಬಂದಿರಬೇಕು. ಹಾಗಾಗಿಯೇ ಅಲ್ಲವಾ ನೀವು ನನ್ನ ಹಳೆಯ ದೋಸ್ತಿ ಎನ್ನುವುದನ್ನೂ ಮರೆತು ನಾನು ನಿಮ್ಮ ಭಕ್ತನಾಗಿರುವುದು…!’ ಎಂದು ನಗುತ್ತ ಹೊಗಳಿದ. ಅವನ ಆ ಮಟ್ಟದ ಪ್ರಶಂಸೆಗೆ ಗುರೂಜಿಯವರು ಉಬ್ಬಿದರು. ಆದರೂ ಗಂಭೀರವಾಗಿ,‘ಅದೆಲ್ಲ ಸರಿ ಮಾರಾಯಾ. ಈಗ ಮುಖ್ಯ ವಿಷಯಕ್ಕೆ ಬರುವ. ಏನೆಂದರೆ, ಆ ನಾಗ ಪರಿವಾರ ದೈವಗಳ ದೇವಸ್ಥಾನ ನಿಮಾರ್ಣದ ಕೆಲಸವನ್ನು ನಿನಗೇ ಒಪ್ಪಿಸಬೇಕೆಂದಿದ್ದೇವೆ. ಅದು ನಿನ್ನಿಂದ ಸಾಧ್ಯವಾಗುತ್ತದಾ ಹೇಳು…?’ ಎಂದು ಸಂಶಯದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಅವರು ರಪ್ಪನೆ ತನ್ನ ಕೆನ್ನೆಗೆ ಹೊಡೆದಂತಾಯಿತು. ಸ್ವಲ್ಪಹೊತ್ತು ಮಂಕಾಗಿ ಕುಳಿತುಬಿಟ್ಟ. ಏಕೆಂದರೆ ಕಟ್ಟಡ ಕಾಮಗಾರಿಯ ವಿಷಯದಲ್ಲಿ ಶಂಕರನಷ್ಟು ನಿಪುಣರೂ, ಅನುಭವಸ್ಥರೂ ಆವಾಗ ಈಶ್ವರಪುರದ ಸುತ್ತಮುತ್ತ ಯಾರೂ ಇರಲಿಲ್ಲ. ಆದರೂ ಅವನು ಈವರೆಗೆ ಸಣ್ಣಪಟ್ಟ ಮನೆಗಳನ್ನು ಮತ್ತು ಕೆಲವು ಬಂಗಲೆಗಳನ್ನು ಹೆಚ್ಚೆಂದರೆ ಐದಾರು ಅಂತಸ್ತಿನ ಕಟ್ಟಡಗಳನ್ನೂ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದನಾದರೂ ಅವೆಲ್ಲಕ್ಕಿಂತ ಭಿನ್ನವಾದ ಹಾಗೂ ಬೃಹತ್ತಾದ ಕಾಮಗಾರಿಯನ್ನೆಂದೂ ಮಾಡುವ ಅವಕಾಶ ಅವನಿಗೆ ದೊರಕಿರಲಿಲ್ಲ. ಆದ್ದರಿಂದ ಎಂದಾದರೊಂದು ದಿನ ತನ್ನೂರಿನ ಕಟ್ಟಡ ಕಾಮಗಾರಿ ಕ್ಷೇತ್ರವೇ ತನ್ನನ್ನು ಕಂಡು ಹುಬ್ಬೇರಿಸುವಂಥ ದೊಡ್ಡ ನಿರ್ಮಾಣವೊಂದನ್ನು ತಾನು ಮಾಡಿ ತೋರಿಸಬೇಕು! ಎಂಬ ಹೆಬ್ಬಯಕೆಯೊಂದೂ ಅವನನ್ನು ಸದಾ ಕಾಡುತ್ತಿತ್ತು. ಹೀಗಿರುವಾಗ ಇಂದು ಗುರೂಜಿಯವರು ಅವನ ಸಾಮಥ್ರ್ಯದ ಮೇಲೆಯೇ ಅಪನಂಬಿಕೆ ತೋರಿಸಿದ್ದು ಅವನಿಗೆ ಬೇಸರವನ್ನು ತರಿಸಿತ್ತು. ‘ಇದೇನೀದು ಗುರೂಜಿ… ನಿಮ್ಮಿಂದ ಇಂಥ ಮಾತಾ? ಕಟ್ಟಡದ ಕೆಲಸದಲ್ಲಿ ನನ್ನ ಅನುಭವ ಯಾವ ಮಟ್ಟದ್ದು ಅಂತ ನಿಮಗಿನ್ನೂ ತಿಳಿದಿಲ್ಲವಾ!’ ಎಂದು ಅಸಹನೆಯಿಂದ ಕೇಳಿದ. ಆಗ ಗುರೂಜಿಯವರಿಗೆ ತಮ್ಮ ತಪ್ಪಿನರಿವಾಯಿತು. ‘ಛೇ,ಛೇ! ಹಾಗಲ್ಲ ಮಾರಾಯಾ ನಾವು ಹೇಳಿದ್ದು. ನಿನ್ನ ಕೆಲಸದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಇದು ಬಹಳ ದೊಡ್ಡ ಕೆಲಸ ಮತ್ತು ನಾವಿಬ್ಬರು ಈತನಕ ಮಾಡಿ ಅನುಭವವೇ ಇಲ್ಲದ ವ್ಯವಹಾರವಲ್ಲವಾ? ಹಾಗಾಗಿ ನಮ್ಮ ಬಾಯಿಂದ ಹಾಗೆ ಬಂತಷ್ಟೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಈ ಪ್ರಾಜೆಕ್ಟನ್ನು ನೀನೇ ಯಶಸ್ವಿಯಾಗಿ ನಡೆಸಿಕೊಡುತ್ತಿ ಅಂತ ಭರವಸೆಯಿದೆ ನಮಗೆ! ನಾಳೆ ಪುಷ್ಯ ನಕ್ಷತ್ರ, ಮಕರಸಂಕ್ರಮಣ. ಶುಭಕಾರ್ಯಕ್ಕೆ ಪ್ರಶಸ್ತವಾದ ದಿನ. ಬೆಳಿಗ್ಗೆ ಬೇಗನೇ ಬಂದು ಬಿಡು. ದೇವರ ಪೂಜೆ ಮುಗಿಸಿ ನಿನಗೆ ಪ್ರಸಾದವನ್ನೂ ಸ್ವಲ್ಪ ಮುಂಗಡವನ್ನೂ ಕೊಡುತ್ತೇವೆ. ಕೂಡಲೇ ಕೆಲಸ ಆರಂಭಿಸು. ಹ್ಞಾಂ! ಇನ್ನೊಂದು ಮಾತು. ಆ ಪ್ರದೇಶದ ಕಾಡು ಕಡಿಸುವ ಕೆಲಸವನ್ನೂ ನೀನೇ ವಹಿಸಿಕೊಳ್ಳಬೇಕು ಮಾರಾಯಾ. ಆ ದರಿದ್ರ ಹಾಡಿಯೊಳಗೆ ಸಿಕ್ಕಾಪಟ್ಟೆ ಮೃಗಗಳಿವೆ ಅಂತ ಮೊನ್ನೆ ಬನ ಜೀರ್ಣೋದ್ಧಾರದ ನಾಂದಿ ಮಾಡಲು ಹೋದಾಗ ತಿಳಿಯಿತು. ಆವತ್ತು ಶೀಂಬ್ರಗುಡ್ಡೆಯ ನಿನ್ನ ಲೇಔಟು ಮಾಡುವಾಗ ಅದ್ಯಾರೋ ನಿನ್ನ ಪುರಂದರಣ್ಣನ ತಂಡದ ಕಾಡು ಮನುಷ್ಯರು ಬಂದಿದ್ದರು ಅಂತ ಹೇಳಿದ್ದೆಯಲ್ಲ, ಅವರನ್ನೇ ಕರೆಯಿಸಿ ಅವರ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿಬಿಡು…!’ ಎಂದು ಜೋರಾಗಿ ನಕ್ಕಾಗ ಶಂಕರನೂ ಧ್ವನಿಗೂಡಿದ. ‘ಅಂದಹಾಗೆ ಕಾಡು ಕಡಿಸುವ ಕೆಲಸವನ್ನು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಬಿಟ್ಟು ಶುರು ಮಾಡು. ಅದಕ್ಕೂ ಒಂದು ಒಳ್ಳೆಯ ದಿನವನ್ನು ಗೊತ್ತುಪಡಿಸಿದ್ದೇವೆ!’ ಎಂದ ಗುರೂಜಿಯವರು ತಟ್ಟನೆ ಗಂಭೀರವಾದರು. ಬಳಿಕ, ‘ಶಂಕರಾ, ಈಗ ಬಹಳ ಮುಖ್ಯವಾಗಿ ದೇವಸ್ಥಾನದ ಕಟ್ಟಡಕ್ಕೆ ಬೇಕಾಗುವ ಉತ್ತಮವಾದೊಂದು ದೊಡ್ಡ ಬಂಡೆಯನ್ನು ಹುಡುಕುವುದು ನಮ್ಮ ಮೊದಲ ಕೆಲಸ ನೋಡು! ಯಾಕೆಂದರೆ ನಾವು ಹಮ್ಮಿಕೊಂಡಿರುವ ಆ ದೇವಸ್ಥಾನದ ನಿರ್ಮಾಣವು ಏಕಶಿಲೆಯಿಂದಲೇ ಆಗಬೇಕೆಂಬ ನಿಯಮವಿದೆ. ಹಾಗಾಗಿ ಮೊದಲು ನೀನು ಅದನ್ನು ಹುಡುಕಬೇಕು! ಆನಂತರ ದೇವಸ್ಥಾನದೊಳಗಿನ ಕಾಷ್ಠಶಿಲ್ಪಕ್ಕೆ ಉತ್ತಮವಾದ ಮರಮುಟ್ಟುಗಳೂ ಬೇಕಾಗುತ್ತವೆ. ಅದಕ್ಕೆ ಸ್ವಲ್ಪ ಮಟ್ಟದ ಮರಗಳು ಆ ಕಾಡಿನಲ್ಲಿಯೇ ಸಿಗುತ್ತವೆ. ಉಳಿದದ್ದನ್ನು ಬೇರೆಡೆಯಿಂದ ಹೊಂದಿಸಿಕೊಂಡರಾಯ್ತು’ ಎಂದರು. ಗುರೂಜಿಯವರ ಮಾತು ಕೇಳಿದ ಶಂಕರನಲ್ಲಿ ಉತ್ಸಾಹ ಚಿಮ್ಮಿತು. ‘ಆಯ್ತು, ಆಯ್ತು ಗುರೂಜಿ. ನೀವು ಹೇಗೆ ಹೇಳುತ್ತೀರೋ ಹಾಗೆ. ನಾಳೆ ಬರುತ್ತೇನೆ. ಕೆಲಸ ಆದಷ್ಟು ಬೇಗ ಶುರು ಮಾಡುವ!’ ಎಂದವನು ಉಗುರುಸುತ್ತಿನಿಂದ ಊದಿಕೊಂಡಿದ್ದ ಅವರ ಬಲಗಾಲ ದಪ್ಪ ಹೆಬ್ಬೆರಳನ್ನು ಭಕ್ತಿಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡು ಹಿಂದಿರುಗಿದ. ಆಗ ಗುರೂಜಿಯವರ ತುಟಿಯಂಚಿನಲ್ಲಿ ಹೆಮ್ಮೆಯ ನಗುವೊಂದು ಹೊಮ್ಮಿತು. ಮರುದಿನ ಮುಂಜಾನೆ ಶಂಕರ ಸಮಯಕ್ಕೆ ಸರಿಯಾಗಿ ಗುರೂಜಿಯವರ ಬಂಗಲೆಗೆ ಬಂದ. ಅವರು ಅವನನ್ನು ವರಾಂಡದಲ್ಲಿ ಕುಳ್ಳಿರಿಸಿ ತಮ್ಮ ಮನೆ ದೇವರ ಪೂಜೆಗೆ ಕುಳಿತವರು, ಬರೋಬ್ಬರಿ ಅರ್ಧ ಗಂಟೆಯ ವಿಶೇಷ ಪೂಜೆಯೊಂದನ್ನು ನೆರವೇರಿಸಿದ ಬಳಿಕ ಬೆಳ್ಳಿಯ ಹರಿವಾಣದಲ್ಲಿ ಗಂಧಪ್ರಸಾದವನ್ನೂ ಎರಡು ಸಾವಿರ ಮುಖಬೆಲೆಯ ನೋಟಿನ ಐದು ಕಟ್ಟುಗಳನ್ನೂ ಇರಿಸಿ ತಂದು ನಗುತ್ತ ಶಂಕರನಿಗೆ ನೀಡಿದರು. ಅದನ್ನವನು ಭಕ್ತಿಯಿಂದ ಸ್ವೀಕರಿಸಿ, ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿ ತನ್ನ ಕಾರು ಹತ್ತಿದ. ತಮ್ಮಿಂದ ನಿರ್ಮಾಣಗೊಳ್ಳಲಿರುವ ನಾಗನ ಇಡೀ ದೇವಸ್ಥಾನವು ಏಕಶಿಲೆಯಿಂದಲೇ ಅರಳಬೇಕು. ಆ ಶಿಲೆಗಳಲ್ಲಿ ಮತ್ತು ಒಳಗಿನ ಕಾಷ್ಠಶಿಲ್ಪಗಳಲ್ಲಿ ನಾಗಪುರಾಣಕ್ಕೆ ಸಂಬಂಧಿಸಿದ ಮತ್ತು ನಾಗಾರಾಧನೆಯ ಪ್ರಾಚೀನತೆಯನ್ನು ಸಾರುವಂಥ ಸಹಸ್ರಾರು ಬಗೆಯ ಕಲಾಕೃತಿಗಳು ಅದ್ಭುತವಾಗಿ ಕೆತ್ತನೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ವಿಶೇಷ ಭಯಭಕ್ತಿಯನ್ನು ಮೂಡಿಸುವಂತಿರಬೇಕು. ಆ ಮಟ್ಟದ ತಮ್ಮ ಸಾಧನೆಯನ್ನು ಕಂಡು ಊರಿನ ಇನ್ನಿತರ ದೇವಸ್ಥಾನಗಳ ಮುಖ್ಯಸ್ಥರೆಲ್ಲರೂ ವಿಸ್ಮಯದಿಂದ ಮೂಗಿನ ಮೇಲೆ ಬೆರಳಿಡುವಂತಾಗಬೇಕು! ಎಂಬುದು ಗುರೂಜಿಯವರ ಹೆಬ್ಬಯಕೆಯಾಗಿತ್ತು. ಆದ್ದರಿಂದ ಶಂಕರನೂ ಅವರ ಮಹದಾಸೆಯನ್ನು ನೆರವೇರಿಸಲು ಹೊರಟವನು, ಮೊದಲನೆಯದಾಗಿ ದೊಡ್ಡ ಬಂಡೆಯೊಂದರ ಹುಡುಕಾಟಕ್ಕಿಳಿದ. ತನ್ನ ಕಟ್ಟಡಗಳ ಅಡಿಪಾಯ ಕೆಲಸದ ತಂಡದ ಹಲವರಲ್ಲಿ ಆ ಕುರಿತು ವಿಚಾರಿಸುತ್ತ ಬಂದ. ಆದ್ದರಿಂದ ಅವರಲ್ಲಿ ತಮಿಳುನಾಡಿನ ತಂಗವೇಲು ಎಂಬವನು ಈಶ್ವರಪುರದ ಅಂಚಿನಲ್ಲಿರುವ ಕಾರ್ಗಲ್ಲು ಎಂಬ ಗ್ರಾಮದ ಒಂದು ಕಡೆ ಅಂಥದ್ದೊಂದು ಬೃಹತ್ತ್ ಬಂಡೆ ಇರುವುದು ತನಗೆ ಗೊತ್ತಿದೆ ಎಂದು ಶಂಕರನಿಗೆ ತಿಳಿಸಿದ. ಹಾಗಾಗಿ ಶಂಕರ ಮರುದಿನ ಬೆಳಿಗ್ಗೆಯೇ ಗುರೂಜಿಯವರ ಪ್ರಸಾದವನ್ನು ತನ್ನ ಹೊಸ ಇನ್ನೋವಾ ಕಾರಿನಲ್ಲಿಟ್ಟುಕೊಂಡು ತಂಗವೇಲುವಿನೊಂದಿಗೆ ಅತ್ತ ಹೊರಟ. ತಂಗವೇಲು ಬಹಳ ವರ್ಷಗಳ ಹಿಂದೊಮ್ಮೆ ತನ್ನ ಮೊದಲಿನ ಮಾಲಿಕನೊಡನೆ ಕಾರ್ಗಲ್ಲಿನ ಯಾವುದೋ ಒಂದು ಸಣ್ಣ ಊರಿನಲ್ಲಿದ್ದ ಆ ಬಂಡೆಯನ್ನು ನೋಡಲು ಹೋಗಿದ್ದ. ಆದರೆ ಈಗ ಅವನು ಅಲ್ಲಿನ ದಾರಿಯನ್ನು ಮರೆತಿದ್ದ. ಊರು ಕಾರ್ಗಲ್ಲು ಮತ್ತು ಬಂಡೆಯ ಮಾಲಿಕ ಸುರೇಂದ್ರಯ್ಯ ಎಂಬುದು ಮಾತ್ರ ಗೊತ್ತಿತ್ತು. ಹಾಗಾಗಿ ಧೈರ್ಯ ಮಾಡಿ ಶಂಕರನನ್ನು ಕರೆದುಕೊಂಡು ಹೊರಟ. ಆದರೆ ಕಾರ್ಗಲ್ಲು ಸಮೀಪಿಸುತ್ತಲೇ ಮತ್ತೆ ಮುಂದೆ ಹೋಗಲು ಅವನಿಗೆ ದಿಕ್ಕು ಹೊಳೆಯಲಿಲ್ಲ. ಆದ್ದರಿಂದ, ‘ಇನ್ನು ಸ್ವಲ್ಪ ಮುಂದೆ ಹೋಗುವ ಸಂಗರಣ್ಣ. ಇನ್ನು, ಇನ್ನೂ ಸ್ವಲ್ಪ ಹೋಗುವ…!’ ಎನ್ನುತ್ತ ತನಗೆ ತಿಳಿಯದ ದಾರಿಯನ್ನೇ ಅವನಿಗೂ ತೋರಿಸುತ್ತ ಕೊನೆಯಲ್ಲಿ ಅವನ ದಾರಿಯನ್ನೂ ತಪ್ಪಿಸಿಬಿಟ್ಟ. ಅಷ್ಟೊತ್ತಿಗೆ ಶಂಕರ ಅಳಂದೂರು ಚರ್ಚಿನ ರಸ್ತೆ ಹಿಡಿದಿದ್ದವನು ಇನ್ನು ಇವನನ್ನು ನಂಬಿದರಾಗದು ಎಂದುಕೊಂಡು ಅಲ್ಲೇ ಎದುರಿಗೆ ಸಿಕ್ಕಿದ ಗೂಡಂಗಡಿಯೊಂದರ ಮುಂದೆ ಕಾರು ನಿಲ್ಲಿಸಿದ ಹಾಗೂ ಕಾರಿನೊಳಗೆ ಕುಳಿತುಕೊಂಡೇ ತಾನು ಹೋಗಬೇಕಾದ ಬಂಡೆಯ ವಿಳಾಸವನ್ನು ಗತ್ತಿನಿಂದ ಅಂಗಡಿಯವನಲ್ಲಿ ವಿಚಾರಿದ. ಆದರೆ ಅಂಗಡಿಯವನು ಇವನ ಅಹಂಕಾರವನ್ನು ಕಂಡು ತಾನೂ ಎದ್ದು ಬಾರದೆ, ‘ಅಯ್ಯಯ್ಯಾ… ನೀವು ಎಂಥದು ಮಾರಾಯ್ರೇ ತುಂಬಾ ಮುಂದೆ ಬಂದು ಬಿಟ್ಟಿದ್ದೀರಲ್ಲಾ…! ಆ ಊರಿನ ಹೆಸರು ಗೋಳಿಬೆಟ್ಟು ಅಂತ. ಒಂದು ಕೆಲ್ಸ ಮಾಡಿ. ಈಗ ಬಂದ ದಾರಿಯಲ್ಲೇ ಸುಮಾರು ಹಿಂದೆ ಹೋಗಿ. ಆಗ ಕುಂಟಲಪಾಡಿ ಅಂತ ಸಿಗುತ್ತದೆ. ಅಲ್ಲಿ ಒಂದುಕಡೆ ಮಣ್ಣಿನ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಆ ವಿಳಾಸ ಸಿಗುತ್ತದೆ ನೋಡಿ…’ ಎಂದು ತನ್ನ ಹಲ್ಲಿಲ್ಲದ ಬೊಚ್ಚು ಬಾಯಿಬಿಟ್ಟು ನಗುತ್ತ ವಿವರಿಸಿದ. ಅವನ ನಗುವನ್ನು ಕಂಡ ಶಂಕರನಿಗೆ ಅವನು ತನ್ನನ್ನು ಗೇಲಿ ಮಾಡಿದನೆಂದೇ ಅನ್ನಿಸಿ ಮೈಯೆಲ್ಲ ಉರಿಯಿತು. ಆದ್ದರಿಂದ ಅವನನ್ನು ತಿರಸ್ಕಾರದಿಂದ ದಿಟ್ಟಿಸುತ್ತ ಸರ್ರನೆ ಕಾರು ತಿರುಗಿಸಿದ. ಶಂಕರನ ಕೊಬ್ಬು ಕಂಡು ಅಂಗಡಿಯವನಿಗೂ ಸಿಟ್ಟು ಬಂತು. ಅವನು ಥೂ! ಬೇವರ್ಸಿ ನಿನ್ನ ಚರ್ಬಿಯೇ…! ಎಂದು ಉಗಿಕೊಂಡ. ಆದರೆ ಶಂಕರನ ಕೋಪ ಹಾಗೆಯೇ ಕೊರೆಯುತ್ತಿದ್ದುದು ತಟ್ಟನೇ ತಂಗವೇಲುವಿನ ಮೇಲೆ ತಿರುಗಿತು.‘ಹೇ, ತಂಗವೇಲು ಇದೆಂಥದನಾ ನಿನ್ನ ಕರ್ಮ? ಎಡ್ರಸ್ ಗೊತ್ತಿಲ್ಲದಿದ್ದರೆ ಇಲ್ಲ ಅಂತ ಹೇಳಬೇಕು. ಅದನ್ನು ಬಿಟ್ಟು, ‘ಸ್ವಲ್ಪ ಹೋಗುವ, ಸ್ವಲ್ಪ ಹೋಗುವ ಅಂತ ಎಲ್ಲಿಗೆ ನಿನ್ನ ಅಪ್ಪನ ಮನೆಗೆ ಕರ್ಕೊಂಡು ಹೋದದ್ದಾ…? ಸುಮ್ಮನೆ ನಾಯಿ ಸುತ್ತಿದ ಹಾಗೆ ಸುತ್ತಿಸಿದೆಯಲ್ಲ ಮಂಡೆ ಸಮ ಉಂಟಾ ನಿಂಗೆ…? ಎಂದು ಕೆಟ್ಟದಾಗಿ ಬೈದುಬಿಟ್ಟ. ಅದನ್ನು ಕೇಳಿದ ತಂಗವೇಲು ಪೆಚ್ಚಾಗಿ ಹಲ್ಲುಗಿಂಜುತ್ತ ಕುಳಿತ. ಅಷ್ಟರಲ್ಲಿ ಕುಂಟಲಪಾಡಿ ಎದುರಾಯಿತು. ಅಲ್ಲಿ ಸುಮಾರು ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕುಂಟಾಲ ಹಣ್ಣಿನ ಮರಗಳಿಂದ ತುಂಬಿದ ದಟ್ಟ ಹಾಡಿಗಳಿದ್ದವು. ಅಲ್ಲೇ ಬಲಕ್ಕೊಂದು ಮಣ್ಣಿನ ಒಳದಾರಿ ಕಾಣಿಸಿತು. ಆ ಪ್ರದೇಶವನ್ನು ನೋಡಿದ ತಂಗವೇಲುವಿಗೆ ಹಿಂದೆ ತಾನು ಬಂದಿದ್ದ ನೆನಪು ಈಗ ತಟ್ಟನೆ ಮರುಕಳಿಸಿತು. ‘ಓಹೋ… ಸಂಗರಣ್ಣಾ ಇದೇ ದಾರಿ, ಇದೇ ದಾರಿ. ಈಗ ತಿಳೀತು ಬಿಡಿ!’ ಎಂದು ತನ್ನ ಎಣ್ಣೆಗಪ್ಪಿನ ಮೂತಿಯನ್ನು ಊರಗಲ ಮಾಡಿಕೊಂಡು ಸಂಜೆಯ ಮಬ್ಬು ಬಾನಿನಲ್ಲಿ ಮಿಂಚುವ ಶುಕ್ರಗ್ರಹದಂಥ ನಗುವಿನಿಂದ ಹೇಳಿದ. ಆಗ

Read Post »

ಇತರೆ

‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.

‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ರಚನೆ: ಡಾ. ವರದರಾಜಚಂದ್ರಗಿರಿಮತ್ತುಸಾ.ದಯಾ ಪ್ರಸ್ತುತಿ : ಕನ್ನಡಕಲಾಕೇಂದ್ರ, ಮುಂಬೈ. ಸಮಯ- ಸಂರ‍್ಭ, ನವಿಮುಂಬಯಿಕನ್ನಡಸಂಘ, ವಾಶಿ, ನವಿಮುಂಬಯಿ , ಮೊನ್ನೆದಿನಆಯೋಜಿಸಿದರ‍್ನಾಟಕರಾಜ್ಯೋತ್ಸವಕರ‍್ಯಕ್ರಮದಂದು ರೂಪಕದಲ್ಲಿ ನೃತ್ಯರೂಪಕ, ಸಂಗೀತರೂಪಕ ಇರುವಂತೆ, ಕಾವ್ಯವಾಚನ-ಗಾಯನ- ನಟನೆಯ ಮೂಲಕ ‘ರಂಗರೂಪಕ’ವನ್ನು ಸಾಧ್ಯವಾಗಿಸಿ ಸಾದರಪಡಿಸಿದವರು ಕಳೆದ ಮೂರು ದಶಕಗಳಿಂದ ಮುಂಬಯಿನ ಕನ್ನಡ ತುಳು ರಂಗಭೂಮಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವಸೃಜನಶೀಲ ನಾಟಕಕಾರ, ನಟ, ನಿರ‍್ದೇಶಕ, ಕವಿಮಿತ್ರ ಸಾ.ದಯಾ ಎಂಬ ಸರಳ ವಿರಳ ಸಹೃದಯಿ. ಹಿನ್ನೆಲೆ ಸಂಗೀತ ಸರ್ವ   ಹೊಣೆ ಹೊತ್ತು ತಮ್ಮ ಮಧುರಕಂಠದಿಂದ ಬೇಂದ್ರೆಯವರ ಗೇಯಗೀತೆಗಳ ಭಾವಲಹರಿಯ ನಾದತರಂಗಗಳನ್ನು ಸಭಾಂಗಣದಲಿ ಪಸರಿಸಿದವರು ವಾಸು.ಜೆ.ಮೊಯಿಲಿ.ಸಂಕೋಚದ ಸ್ವಭಾವದ ಈತ ರಾತ್ರಿಶಾಲಾ ದಿನಗಳಿಂದಲೇ ಹಾಡನ್ನು ಗೀಳಾಗಿಸಿಕೊಂಡವರು.ಗೆಳೆಯರಿಂದ ಅಂದಿನಿಂದಲೂ ಮುಂಬೈನ ಪಿ.ಬಿ.ಶ್ರಿನಿವಾಸ್ ಅಂತಲೇ ಕರೆಯಿಸಿಕೊಂಡು,ಎಲೆಮರೆಯಲ್ಲೇ ಇರುವ ಇವರನ್ನು ಮುಂಬೈಯಲ್ಲಿ(ಪರಿಚಿತರೇ), ಮುಖ್ಯ ಕಾರ‍್ಯಕ್ರಮಗಳನಡುವಿನಸಮಯದಲ್ಲಿ ‘ಫಿಲ್ಲರ್‘ ತರಹ ಹಾಡನ್ನು ಹಾಡಲು ಉಪಯೋಗಿಸಿಕೊಂಡವರೇಹೆಚ್ಚು !!! ಹೇಳಲೇಬೇಕಾದುದುಅಂದು ರೂಪಕದಲ್ಲಿ ಪಾಲುಗೊಂಡ ಪುಟ್ಟ ಪುಟ್ಟ ಮಕ್ಕಳಾದ ಪ್ರತೀಕ್ಷಾ, ಸುನಿಧಿ, ಸಾಕ್ಷೀ, ಸನಾತನ್, ಪ್ರಥ್ವಿ.ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯ ಇವರಲ್ಲಿ ಹೆಚ್ಚಿನವರ ಮಾತೃಭಾಷೆ ಕನ್ನಡ ಅಲ್ಲ.ಬೆರಳೆಣಿಕೆಯ ತಾಲೀಮಿನಲ್ಲಿ ತಮ್ಮ ತಮ್ಮ ಪಾಲಿನದನ್ನು ಶ್ರದ್ದೆಯಿಂದ     ನಿರ‍್ವಹಿಸಿದ ಮಕ್ಕಳ ಹುರುಪು, ಉತ್ಸಾಹ ಚೇತೋಹಾರಿಯಾಗಿತ್ತು.ತಾಲೀಮಿಗೆ ದೂರ ದೂರದಿಂದ ಅವರನ್ನು ಕರೆತರುವ ಹೆತ್ತವರ ಸಹನೆ,ಕೊಡುಗೆಯೂಮಹತ್ತರವಾದುದ್ದೇ. ಸಾ.ದಯಾ. ಅವರ ಐದು ವರ್ಷದ  ಮಗ ಮೊಹಿನೀಷ್, ತಬಲದಲ್ಲಿ ಸಾಥ್   ನೀಡಿದ ಅವರ ಹಿರಿಯ ಮಗ ರಾಘವೇಂದ್ರ ದೂರದ ದೊಂಬಿವಲಿಯಿಂದ ಬರುವ ಪಾಡು; ಸಂಘದ ಕಾರ್ಯದರ್ಶಿ ಆಗಿದ್ದು ಗುರುತರ ಜವಾಬ್ದಾರಿಯ ಹೊರೆ ಹೊತ್ತ ಜಗದೀಶ್ ರೈಯವರು ತಮ್ಮ ಪೂರ‍್ಣ ಪರಿವಾರದ(ಮಡದಿ ಬಬಿತಾ ರೈ, ಮಗಳು ಸಾನ್ವಿ, ಮಗ ಸಾತ್ವಿಕ್) ಜೊತೆ ರೂಪಕದಲ್ಲಿ ತೊಡಗಿಸಿಕೊಂಡದ್ದು ಅವರ ಬದ್ಧತೆ ಬಗ್ಗೆ ಶರಣೆನ್ನದೆ ಬೇರೆ ಮಾತಿಲ್ಲ. ಮಕ್ಕಳ ನೃತ್ಯವಿನ್ಯಾಸ ಮಾಡಿ, ಕೆಲವೊಂದು ಹಾಡಿಗೆ ತಮ್ಮ ಲಾಲಿತ್ಯಪೂರ‍್ಣ ಭಾವಾಭಿನಯ ನೃತ್ಯದ ಮೂಲಕ ರೂಪಕದ ಸೊಬಗಿಗೆ ರಂಗೇರಿಸಿದ ಕಲಾವಿದೆ ಸಹನಾ ಭಾರದ್ವಾಜ್,ಹಾರ‍್ಮೋನಿಯಂನಲ್ಲಿ ಶಿವಾನಂದ ಶೆಣೈ, ತಬಲಾದಲ್ಲಿ ಮರಾಠಿಗ ಶುಭಂ, ಕಲಾವಿದರಾದ ಗಣೇಶ್ಕುಮಾರ, ಮಧುಸೂದನ ಟಿ.(ಕನ್ನಡಕಲಾ ಕೇಂದ್ರದ ಅಧ್ಯಕ್ಷರು), ಬೆಳಕಿನಲ್ಲಿ ಸಹಕರಿಸಿದವರು ವೆಂಕಟ, ಪ್ರಸಾಧನದಲ್ಲಿ ಮಂಜುನಾಥ ೧ ಶೆಟ್ಟಿಗಾರ ಬಳಗ, ಇವರೆಲ್ಲರ ಸೃಜನಶೀಲ ಕೊಡುಗೆ ಮುಖ್ಯವಾದದ್ದು. ನೇಪಥ್ಯದಲ್ಲಿ  ಸುಚೇತಾ ಶೆಟ್ಟಿ, ವೀಣಾ ಭಟ್  ಇವರ ನೆರವು ನೆನೆಸುವಂತಹದ್ದೇ. ಪಶ್ಚಿಮೋತ್ತರ ಮುಂಬೈನ ದೂರದ ಕಾಂದವಲಿಯಿಂದ ವಾಶಿನವಿ ಮುಂಬೈಗೆ ಸುಮಾರು ೪೫ ಕಿ.ಮಿ. ದಾರಿಯನ್ನು ಕ್ರಮಿಸಲು ಏನೆಂದರೂ ಎರಡು ತಾಸು ಬೇಕೇಬೇಕು. ತಾಲೀಮಿಗೆ ನಾಲ್ಕಾರು ಬಾರಿ ತಮ್ಮ ಕಾರಿನಲಿ ಡ್ರೈವ್ಮಾಡಿಕೊಂಡೊಯ್ದು ಕರೆತರುತಿದ್ದ ಕಲಾವಿದ ಗೆಳೆಯ ಗಣೇಶ್ಕುಮಾರರ ತಾಳ್ಮೆ ಅಪಾರವಾದುದು. ಅವರ ಸಹನೆ ಸಹಕಾರಕ್ಕೊಂದು ಸಲಾಮ್. ……………….. ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಹೌದಲ್ಲ, ಭಾವ ಅದೊಂದು ಭೃಂಗದಂತೆ, ಮಿಂಚಿ ಮಾಯವಾಗುವಂತಹದ್ದು.ಆದರೆ ಕವಿ ಅಂತಹ ಮಿಂಚನ್ನೂ ಹಿಡಿದಿರಿಸಬಲ್ಲ! ಕಾವ್ಯ ಭಾವ ಕನ್ನಡಿಯ ಮೂಲಕ‘ ಅರ‍್ಥವಿಲ್ಲ ಸ್ವರ‍್ಥವಿಲ್ಲ ಬರಿಯ ಭಾವಗೀತ’ ಎಂಬ ಜೀವನ ದರ್ಶನವನ್ನು   ಮಾಡಿಸಬಲ್ಲ ದಾರ‍್ಶನಿಕನೂ ಹೌದು.  ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂಬ ಸುಸೂತ್ರ ಸಂಸಾರಕೆ ಮೂಲಬೀಜ ಮಂತ್ರದ ಸೂತ್ರದಾರಿಯೂ ಹೌದು. ‘ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ ಹಾಲ್ಜೇನು ಸುರಿಯೋಣ, ಕುಣಿಯೋಣು ಬಾರಾ, ಕುಣಿಯೋಣು ಬಾ ಎಂದು ಬದುಕಿನ ಸಂತಸವನ್ನು ಕುಣಿಕುಣಿದು ಅನುಭವಿಸಲು ಹಾರೈಸುವಂತೆ,ಸಂಸಾರಸಾಗರದಾಗ ಕವಿ ಪಟ್ಟ ದು:ಖ ದುಮ್ಮಾನಗಳ ಹೊರೆ ಭಾರವೇನು ಕಡಿಮೆಯದಲ್ಲ. ‘ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ?’ ಆಗ ತಾನೆ ಹುಟ್ಟಿದ ಇನ್ನೊಂದು ಮಗುವೂ ಕಣ್ಣು ಮುಚ್ಚಿದಾಗ, ಮಡದಿಯ ಆ ಕರುಳು ಹಿಂಡುವ ನೋಟವನ್ನು ನೋಡಲಾರದ ಕವಿಕರುಳು ಮಿಡಿವ ಬಗೆಯದು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದಾ, ನುಣ್ಣನೆ ಎರಕಾವ ಹೋಯ್ದಾ” ಸುಮಾರು ನೂರಾ ಎರಡು ವರ‍್ಷಗಳ ಹಿಂದೆ ಸಾಧನಕೇರಿಯ ಮನೆ ಅಂಗಳದಿಂದ ಕವಿ ಕಂಡ, ಕಾಣಿಸುವ, ಸೂರ‍್ಯೋದಯ ವರ‍್ಣನೆಯಲ್ಲಿ ತೇಲಿಸುವ, ಇದು ಬರಿ ಬೆಳಗಲ್ಲೋ ಅಣ್ಣಾ ಎಂಬ ಅನೂಹ್ಯ ಅದ್ಭುತಕೆ ಸರಿಸಾಟಿಯಾದ ಕಾವ್ಯವೆಲ್ಲಿ? ಬೆಳಗಲ್ಲಿ ಅದ್ಯಾತ್ಮ ದರ್ಶನಗೈವ ಕವಿ ಸಂಜೆಹೊತ್ತಲ್ಲಿ ; ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ, ಆಗ ಸಂಜೆಯಾಗಿತ್ತ’ ಅಂತ ಕಣ್ಣ ಮಿಟಿಕಿಸುವ ತುಂಟತನಕ್ಕೂ ಕಡಿಮೆ ಇಲ್ಲ. ತಾನೊಲಿದವಳ ಮೊಗದ ಮೇಲೆ ನಗೆನವಿಲು ಆಡುವುದನ್ನು ಕಾಣುವ ಕವಿಯ ಕಲ್ಪನಾ ಕಾಣ್ಕೆಗೆ ಮಿಗಿಲುಂಟೇ ? ಸಾಮಾನ್ಯರ ಪಾಲಿನ ಸಹಜ ಪ್ರೇಮಭಾವ ಮೆರೆವ ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು…’ ಎಂಥ ಮಧುರ ಮಧುರ ಪ್ರೇಮಾಲಾಪವಿದು..! ಪ್ರೇಮದ ಮುಂದಿನ ಹೆಜ್ಜೆ ಪ್ರಣಯವಲ್ಲವೇ. ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತ್ತಿದೆ ಸೂರ‍್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ…..’ ಕವಿ ಪ್ರಣಯ ಭಾವವನ್ನು ವ್ಯಕ್ತಪಡಿಸುವ ಪರಿ ನೋಡಿ! ಆದರೆ ಇಲ್ಲಿ ಎಲ್ಲವೂ ಸರಿ ಇರುವುದೇ? ಇಲ್ಲ.ಸಮಾಜದಲ್ಲಿ ಮಾನವ ಪ್ರೇರಿತ ಅತಿರೇಕಕ್ಕೆ ಕೆರಳುವ ಕವಿಯೊಳಗಿನ ರುದ್ರವೀಣೆ ಮಿಡಿಯುವ ಬಗೆ; ‘ಧರ‍್ಮಾಸನಹೊರಳುತಿವೆ’ ಸಿಂಹಾಸನ ಉರುಳುತಿವೆ, ಜಾತಿಪಂಥ ತೆರಳುತಿವೆ ಮನದ ಮರೆಯಲಿ, ಯಾಕೋ ಕಾಣೆ ರುದ್ರವೀಣೆ ಮಿಡಿಯುತ್ತಿರುವುದು…’ ಹೀಗೆ ತನ್ನ ಸುತ್ತಲ ಆಗುಹೋಗುಗಳಿಗೆ ಕಣ್ಣಾದ,ಕಿವಿಯಾದ ಕವಿ ನೊಂದಿದ್ದಾರೆ, ಮರುಗಿದ್ದಾರೆ ಮತ್ತು ಪ್ರತಿಭಟಿಸಲೂ ಹಿಂಜರಿಯದೆ ಧ್ವನಿಯಾಗಿದ್ದಾರೆ. ಕವಿ ಜನರ ನಡುವೆ,ಜನರೊಂದಿಗೇಬದುಕುವವನು ಸಂವಹನಿಸುವವನು. ಆಗ ಹೊರಹೊಮ್ಮುವ ಜನಪದೀಯ ಹಿಗ್ಗಿನ ಹಾಡೇ; ‘ಮಲ್ಲೀಗಿ ಮಂಟಪದಾಗ, ಗಲ್ಲಗಲ್ಲ ಹಚ್ಚಿಕೂತು, ಮೆಲ್ಲ ದನಿಲೆ ಹಾಡೋಣಂತ, ಯಾರಿಗೂ,ನಾವು ಯಾರಿಗೂ ಹೇಳೋಣು ಬ್ಯಾಡ.’. ಜನಸಾಮಾನ್ಯರ ಹಾಡಾಗುವುದು ಹೀಗೆ. ‘ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ….’ ಎಂದು ಮೈದಡವಿ ಎಚ್ಚರಿಸುವ ಕವಿ ಸ್ವತ: ಒಂದು ಕಡೆ ಹೀಗೆ ಹೇಳುತ್ತಾರೆ, “ಈ ಬೇಂದ್ರೆ ಇನ್ನೂ ಬದುಕಿದ್ದಾನೆ. ಏಕೆ ಬದುಕಿದ್ದಾನೆ  ಅಂದ್ರೇ, ಹಿಂದಿನವರೆಲ್ಲ ಏನು ಹೇಳಿದ್ದಾರೆ ಅದನ್ನ ಹೇಳೋದಕ್ಕೆ ಬದುಕಿದ್ದಾನೆ…” ….. ಇಂತಹ ಸಶಕ್ತವಾದ ಸ್ಕ್ರಿಪ್ಟ್, ನಾಡಿನ ಧೀಮಂತ ಕವಿವರ‍್ಯರ ಬದುಕನ್ನು ಅವರದ್ದೆ ಕವಿತೆಗಳ ಮೂಲಕ ಎಳೆಎಳೆಯಾಗಿ ತೆರೆದಿಡುವಲ್ಲಿ ಮುಖ್ಯ ಭೂಮಿಕೆ ನಿರ‍್ವಹಿಸುತ್ತದೆ. ಲೇಖಕದ್ವಯರಾದ ಡಾ.ವರದರಾಜಚಂದ್ರಗಿರಿ ಮತ್ತು ಸಾ.ದಯಾರಿಗೆ ವಂದನೆಗಳು, ಅಭಿನಂದನೆಗಳು. …… ಕವಿವರ‍್ಯ ದ.ರಾ.ಬೇಂದ್ರೆಯವರುಬದುಕಿದ್ದರೆ ಅವರಿಗೀಗ ೧೨೫. ಹೌದು, ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಕಾವ್ಯಪ್ರಿಯರ ಅಕ್ಕರಾಸ್ಥೆಯಲಿ ಮತ್ತೆಮತ್ತೆ ಉಸಿರಾಡುತ್ತಲೇ ಇರುತ್ತಾನೆ. ಈ ಅಂಬೋಣವನ್ನು ಅಕ್ಷರಶ:  ಸಾಕ್ಷಾತ್ಕಾರಗೊಳಿಸಿ ಮುದ ನೀಡಿದ ನಾದಮಯ ಸಂಜೆಯಾಗಿತ್ತು…. ಅಂಬಿಕಾತನಯದತ್ತ ಕೇವಲ ರೂಪಕವಲ್ಲ, ಬದುಕಿನುದ್ದಕೂ ಕವಿ ಪ್ರತಿಪಾದಿಸುವ, ಅನುಭಾವ ಜೀವನದರ‍್ಶನವಾಗಿದೆ. ನೆರೆದ ಸುಮಾರು ೨೫೦ ಮಂದಿ ನವಿಮುಂಬೈ ಕನ್ನಡಸಂಘದ ಬಂಧುಗಳಲ್ಲಿ ಹೆಚ್ಚಿನವರಿಗೆ ಈ ರಂಗ ರೂಪಕದ ಪರಿಕಲ್ಪನೆಯೇ ಹೊಸತು. ಆದರೆ ಆ ಒಂದು ತಾಸು ಸಭಾಂಗಣದಲ್ಲಿ ಪಿನ್ಡ್ರಾಪ್ಸೈಲೆನ್ಸ್. ಕೊನೆಯಲ್ಲಿ ಹೆಚ್ಚಿನವರ ನಿಂತು ಕರತಾಡನ ಮಾಡುವುದನ್ನು ವೀಕ್ಷಿಸುವ ಆ ಕ್ಷಣದ ಆನಂದ ವರ‍್ಣನಾತೀತ… ಇಷ್ಟೆಲ್ಲ ಸೋಜಿಗ ಸಾಧ್ಯವಾದದ್ದು ಕವಿಶ್ರೇಷ್ಠ ಅಂಬಿಕಾತನಯದತ್ತರಕಾವ್ಯ ಭಾವವಿಲಾಸದ ಸಂಭ್ರಮದಿಂದಲೇ ಅಲ್ಲವೆ. ಗೋಪಾಲತ್ರಾಸಿ ..

‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ. Read Post »

ಇತರೆ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು

ಭಾರತೀಯ ಸಿನಿಮಾ ರಂಗದ ಅಪ್ರತಿಮ ಪ್ರತಿಭಾವಂತ ನಟಿಯಲ್ಲೊಬ್ಬರಾದ
ಸಿಲ್ಕ್ ಸ್ಮಿತಾ ಬದುಕಿದ್ದಿದ್ದರೆ ಇವತ್ತಿಗೆ ಅರವತ್ತೊಂದು ವರ್ಷಗಳಾಗುತ್ತಿದ್ದವು.

ತೆರೆಯ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಉಗ್ರ ಸಮರ್ಥಕ ಸ್ತ್ರೀ ಪಾತ್ರಗಳ ಕೋಪ, ದ್ವೇಷವನ್ನು ಸಹಿಸಿಕೊಂಡು ಅವಮಾನದಿಂದ ಏಕಾಂಗಿಯಾಗಿ ಮರೆಯಾಗುತ್ತಿದ್ದ ಸ್ಮಿತ ನಿಜ ಜೀವನದಲ್ಲೂ ಅದೇ ರೀತಿಯ ಏಕಾಂಗಿತನಕ್ಕೆ ಬಲಿಯಾದವರು.

ಈ ಅಪ್ರತಿಮ ಪ್ರತಿಭಾವಂತೆ, ಸುಂದರಿ, ಹೃದಯವಂತ ಕಲಾವಿದೆಯನ್ನು ಭಾರತದ ಚಿತ್ರರಂಗ stereotypical characters ಗಳಲ್ಲೆ ಕಳೆದು ಹಾಕಿತು. ಒಂಟಿಯಾಗಿಸಿತು.

ಬೇರೆ ಜನಪ್ರಿಯ ನಟಿಯರಾಗಿದ್ದರೆ ಅರವತ್ತು ತುಂಬಿದ ಕಾರಣಕ್ಕೆ ಶುಭಾಶಯಗಳ ಹೊಳೆಯೆ ಹರಿದಿರುತ್ತಿತ್ತು.
ಸಿಲ್ಕ್ ಸ್ಮಿತಾ ಅವರಿಗೆ ಶುಭಾಶಯಗಳನ್ನು ಹೇಳುವುದಕ್ಕೂ ಹಿಂದು ಮುಂದು ನೋಡುವ ಮಡಿವಂತ ಸಮಾಜದಲ್ಲಿ ಇವತ್ತಿಗೂ ನಾವಿದ್ದೇವೆ.

ಆದರೆ ಆಕೆ ಇವೆಲ್ಲವನ್ನು ಮೀರಿ ಹೋಗಿ ಅಮರರಾಗಿದ್ದಾರೆ.


ಎಲ್.ಎಚ್.ಲಕ್ಷ್ಮಿನಾರಾಯಣ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ? ಇಂಥ ಸಂಗತಿಗಳ ಬಗ್ಗೆ ಗಂಡಸರಲ್ಲಿ ಇರುವಷ್ಟು ಧೈರ್ಯ ಮತ್ತು ಉದಾಸೀನದ ಬುದ್ಧಿಯು ನಾವು ಹೆಂಗಸರಲ್ಲಿ ಯಾಕಿಲ್ಲ…? ಅಥವಾ ಇದ್ದರೂ ಆ ಮನಸ್ಥಿತಿಯನ್ನು ತೋರಿಸಿಕೊಳ್ಳಲು ನಾವೇ ಹೆದರುತ್ತಿದ್ದೇವೋ ಹೇಗೇ…? ನನ್ನ ಹಿರಿಯರ ಕಾಲದಿಂದಲೂ ನಾನು ನೋಡುತ್ತ ಬಂದಿದ್ದೇನೆ, ತಮ್ಮ ಕುಟುಂಬದ ಯಾವುದೇ ತೊಂದರೆ, ತಾಪತ್ರಯಗಳಿರಲಿ ಅಥವಾ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಆಚಾರ ವಿಚಾರಗಳೇ ಇರಲಿ ಎಲ್ಲದಕ್ಕೂ ನನ್ನಂಥ ಹೆಂಗಸರೇ ಹೆಚ್ಚುಹೆಚ್ಚಾಗಿ ಬಲಿಯಾಗುತ್ತ ಒದ್ದಾಡುತ್ತಾರೆ. ಯಾವುದೇ ಒಂದು ನಂಬಿಕೆ ಅಥವಾ ಮೂಢ ವಿಚಾರಗಳನ್ನೇ ಆಗಲಿ ಯಾರಾದರೂ ನಮ್ಮ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತ ಹೋದರೆಂದರೆ ಅವರಾಡುವ ಸಂಗತಿಯ ಸತ್ಯಾಸತ್ಯತೆಯನ್ನು ಚೂರೂ ತರ್ಕಿಸಲು, ಸ್ವಂತ ಬುದ್ಧಿಯಿಂದ ನಿರ್ಧರಿಸಲು ಹೋಗದೆ ಅಂಥವರನ್ನು ನಾವು ಕಣ್ಣುಮುಚ್ಚಿ ನಂಬುತ್ತ ಅವರ ಬಲೆಗೆ ಬೀಳುತ್ತೇವೆ ಯಾಕೆ? ಅಂದರೆ ನನ್ನಂಥವರಿಗೆ ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ ಶಕ್ತಿಯೇ ಇಲ್ಲವೆಂದಾ ಈ ಜನರ ಯೋಚನೆ…?- ಎಂದೆಲ್ಲ ಅಶಾಂತಿಯಿಂದ ಚಿಂತಿಸುತ್ತ ನಡೆಯುತ್ತಿದ್ದ ಸುಮಿತ್ರಮ್ಮನ ಒಳಮನಸ್ಸಿನಲ್ಲಿ ಕೊನೆಗೆ ನರಹರಿಯ ವಿಚಾರಗಳೇ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದಂತೆ ತೋರುತ್ತಿತ್ತು.    ಹೌದು, ಹೌದು. ನರಹರಿ ನನಗಿಂತ ಕಿರಿಯ ವಯಸ್ಸಿನವನು ಎನ್ನುವುದೇನೋ ಸರಿ. ಆದರೆ ಅವನು ಹೇಳಿದ್ದರಲ್ಲಿ ಬಹಳ ಅರ್ಥವೂ ಇದೆ ಎಂದೆನ್ನಿಸುತ್ತದೆ. ಅದನ್ನೆಲ್ಲ ತಾಳ್ಮೆಯಿಂದ ವಿಚಾರ ಮಾಡುವಾಗ ಗೊಂದಲ ಕಳೆದು ಮನಸ್ಸು ಹಗುರವಾಗುತ್ತದೆ. ಹಾಗಾದರೆ ಆ ನಾಗರಹಾವಿನ ವಿಷಯದಲ್ಲಿ ತಾವು ಈವರೆಗೆ ಅಂದುಕೊಂಡಿದ್ದೆಲ್ಲ ಬರೇ ಭ್ರಮೆಯಾ…? ತಮ್ಮ ಮುತ್ತಜ್ಜನ ಕಾಲದಿಂದಲೂ ಅವರೆಲ್ಲ ನಂಬಿಕೊಂಡು ಬಂದಿದ್ದು, ‘ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗರಹಾವು ಮಾತ್ರವೇ!’ ಎಂದಲ್ಲವಾ! ಹಾಗಾದರೆ ನನ್ನ ಮನೆಯೊಳಗೆ ಬಂದ ಆ ಹಾವು ನರಹರಿಯ ಪ್ರಕಾರ ಕೇವಲ ಒಂದು ಸರೀಸೃಪವೆಂದಾದರೆ ನಮ್ಮ ಹಿರಿಯರು ನಂಬಿ, ಪೂಜಿಸಿಕೊಂಡು ಬಂದಂಥ ಆ ನಾಗನೆಂಬ ಶಕ್ತಿ ಯಾವುದು…? ಎಂದು ಆಳವಾಗಿ ಮತ್ತು ಧೈರ್ಯವಾಗಿ ಯೋಚಿಸಿದರು. ಆದರೆ ತಟ್ಟನೆ ಅವರಿಗೆ ಉತ್ತರ ಸಿಗದಿದ್ದಾಗ ಮತ್ತೆ ಪೂರ್ವಾಗ್ರಹಿತ ಗೊಂದಲಕ್ಕೇ ಬಿದ್ದರು. ಅದೇ ತಳಮಳದಿಂದ ಮನೆಗೆ ಬಂದು ಬಾಗಿಲು ತೆಗೆದು ಇನ್ನೇನು ಒಳಗಯಿಡಬೇಕು ಎಂಬಷ್ಟರಲ್ಲಿ ಮತ್ತೊಂದು ಆಘಾತ ಅವರನ್ನಪ್ಪಳಿಸಿತು!   ಈ ಹಿಂದೆ ಎರಡು ಬಾರಿ ಮನೆಯೊಳಗೆ ಬಂದು ಸುಮಿತ್ರಮ್ಮನನ್ನು ನಖಶಿಕಾಂತ ಬೆದರಿಸಿ ಹೋಗಿದ್ದ ಅದೇ ಸರ್ಪವು ಇವತ್ತು ಅವರ ಮನೆಯೊಳಗೆ, ಮುಖ್ಯ ದ್ವಾರದ ಗೋಡೆಯ ಮೂಲೆಯಲ್ಲಿ ಮೈಯೊಡ್ಡಿ ಮಲಗಿತ್ತು. ಆದರೆ ಸುಮಿತ್ರಮ್ಮನ ಆಕಸ್ಮಿಕ ಪ್ರವೇಶದಿಂದ ಬೆಚ್ಚಿಬಿದ್ದು ಎದ್ದ ಹಾವು ಇಂದು ಕೂಡಾ ತನ್ನ ಅತೀ ಸಮೀಪದಲ್ಲಿ ಅವರನ್ನು ಕಂಡದ್ದು ದಿಕ್ಕು ತೋಚದೆ ಭೀಕರವಾಗಿ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತುಬಿಟ್ಟಿತು. ಹಾವನ್ನು ಕಂಡ ಸುಮಿತ್ರಮ್ಮನಿಗೆ ಕಣ್ಣು ಕತ್ತಲಿಟ್ಟಿತು. ಜೋರಾಗಿ ಚೀರಿ ಅಂಗಳಕ್ಕೆ ಜಿಗಿದರು. ಅದನ್ನು ಕಂಡ ಹಾವು ಇನ್ನಷ್ಟು ಕಂಗಾಲಾಗಿ ಸರ್ರನೇ ಹೆಡೆಯನ್ನು ಮಡಚಿ ಉಸಿರುಗಟ್ಟುವಂತಿದ್ದ ತನ್ನ ಉಬ್ಬಿದ ಹೊಟ್ಟೆಯನ್ನು ಕಷ್ಟಪಟ್ಟು ಎಳೆದುಕೊಂಡು ಸರಸರನೇ ಹೊರಗೆ ಹರಿದು ಕಣ್ಮರೆಯಾಯಿತು. ಹಾವು ಹೊರಟು ಹೋದುದನ್ನು ಕಂಡ ಸುಮಿತ್ರಮ್ಮ ತೆಂಗಿನ ಕಟ್ಟೆಯ ಮೇಲೆ ಕುಸಿದು ಕುಳಿತು ಅಳತೊಡಗಿದರು. ಸ್ವಲ್ಪಹೊತ್ತಲ್ಲಿ ಸಮಾಧಾನಗೊಂಡವರಿಗೆ ಆ ಹಾವಿನ ಹೊಟ್ಟೆಯು ಉಬ್ಬಿದ್ದುದು ಕಣ್ಣ ಮುಂದೆ ಸುಳಿಯಿತು. ತಟ್ಟನೆ ಏನೋ ಅನುಮಾನ ಬಂದು ಗಡಿಬಿಡಿಯಿಂದೆದ್ದು ಒಳಗೆ ಧಾವಿಸಿದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಕಂಗಾಲಾದರು!    ‘ವಯಸ್ಸಾದ ಅಪ್ಪ ಅಮ್ಮನಿಂದ ತಾನೂ, ತಮ್ಮನೂ ಸಂಸಾರ, ದುಡಿಮೆ ಅಂತ ಯಾವಾಗಲೂ ದೂರವೇ ಇರುತ್ತೇವೆ. ಆದ್ದರಿಂದ ಅವರಿಗೆ ನಮ್ಮ ನೆನಪು ಬಂದಾಗಲೆಲ್ಲ ಈ ಬೆಕ್ಕಿನ ಮೂಲಕವಾದರೂ ಸ್ವಲ್ಪ ನೆಮ್ಮದಿ ಕಾಣಲಿ!’ ಎಂದುಕೊಂಡು, ಮುಂಬೈಯಲ್ಲಿದ್ದ ಸುಮಿತ್ರಮ್ಮನ ಮಗಳು ಹೊರ ದೇಶದ ತಳಿಯೊಂದರ ಮರಿಯನ್ನು ಹದಿನೈದು ಸಾವಿರ ರೂಪಾಯಿ ಕೊಟ್ಟು ತಂದು ಹೆತ್ತವರಿಗೆ ಪ್ರೀತಿಯಿಂದ ಉಡುಗೊರೆ ನೀಡಿದ್ದಳು. ಸುಮಿತ್ರಮ್ಮನೂ ಅದನ್ನು ಬಹಳ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಅಂಥ ಬೆಕ್ಕು ಇವತ್ತು ಅವರ ಕಣ್ಣಮುಂದೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಸತ್ತುಬಿದ್ದಿತ್ತು! ಅದಕ್ಕೆ ಹಾವು ಕಚ್ಚಿರುವುದು ಖಚಿತವಾಗಿ ದುಃಖದಿಂದ ಅವರ ಕರುಳು ಹಿಂಡಿದಂತಾಗಿ ಅದನ್ನು ಪ್ರೀತಿಯಿಂದ ಎತ್ತಿಕೊಳ್ಳಲು ಮನಸ್ಸು ತುಡಿಯಿತು. ಆದರೆ ಹಾವು ಕಚ್ಚಿದ್ದನ್ನು ನೆನೆದವರಿಗೆ ಅದನ್ನು ಮುಟ್ಟಲೇ ಭಯವಾಯಿತು. ರಪ್ಪನೆ ಬೆಕ್ಕಿನ ಕಳೇಬರದ ಪಕ್ಕ ಕುಸಿದು ಕುಳಿತು, ‘ಅಯ್ಯಯ್ಯೋ ದೇವರೇ…!’ ಎಂದು ಗೋಳಿಟ್ಟರು. ಅಷ್ಟರಲ್ಲಿ ಬೆಕ್ಕಿನ ಮರಿಗಳ ನೆನಪಾಯಿತು. ಅಳುತ್ತಲೇ ಅವುಗಳ ಕೋಣೆಗೆ ಓಡಿದರು. ಅಲ್ಲಿ ಎರಡು ದಿನಗಳ ಹಿಂದಷ್ಟೇ ಕಣ್ಣು ಬಿಟ್ಟಿದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಕಾಣೆಯಾಗಿದ್ದವು! ಒಂದು ಮರಿ ಮಾತ್ರ ಯಾವುದರ ಪರಿವೆಯೂ ಇಲ್ಲದೆ ಗಾಢ ನಿದ್ದೆಯಲ್ಲಿತ್ತು. ಅದನ್ನು ಕಂಡು ಮತ್ತೊಮ್ಮೆ ರೋಧಿಸಿದರು. ಮರುಕ್ಷಣ ಅವರಿಗೆ ಆ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದು ಚಚ್ಚಿ ಕೊಲ್ಲುವಷ್ಟು ಕೋಪ ಉಕ್ಕಿತು. ಆದರೆ ಅದು ಸಾಧ್ಯವಿರಲಿಲ್ಲವಾದ್ದರಿಂದ, ‘ಆ ಹಾವಿನ ಸಂತಾನವೂ ನಿಸ್ಸಂತಾನವಾಗಿ ಹೋಗಲಿ…!’ ಎಂದು ಶಪಿಸಿದರು. ಅಷ್ಟರಲ್ಲಿ ಅವರಿಗೊಂದು ಸಂಗತಿ ಹೊಳೆಯಿತು. ಅಂದರೆ, ಇಷ್ಟು ದಿನಗಳಿಂದ ಆ ಹಾವು ನನ್ನ ಬೆಕ್ಕಿನ ಮರಿಗಳನ್ನು ತಿನ್ನುವುದಕ್ಕಾಗಿಯೇ ಹಠ ಹಿಡಿದು ಒಳಗೆ ಬರುತ್ತಿದ್ದುದಾ…? ಎಂದು ಯೋಚಿಸಿದವರಿಗೆ ಒಮ್ಮೆಲೇ ಆಘಾತವಾಯಿತು! ಅಯ್ಯೋ, ಪರಮಾತ್ಮಾ…! ಇಂಥದ್ದೊಂದು ಹಾಳು ಸರೀಸೃಪವನ್ನೂ ತಾನು ದೇವರು ದಿಂಡರು ಅಂತ ಅಂದುಕೊಂಡಿದ್ದಲ್ಲದೇ ಅದನ್ನೇ ಊರಿಡೀ ಜಾಗಟೆ ಬಾರಿಸಿಕೊಂಡು ತಿರುಗಾಡಿದೆನಲ್ಲಾ…? ಎಂದೆನ್ನಿಸಿ ನಾಚಿಕೆ, ಅವಮಾನದಿಂದ ಹಿಡಿಯಾದರು. ಆದರೆ ಮರುಕ್ಷಣ, ‘ಛೇ, ಛೇ! ತಪ್ಪು ತಪ್ಪು! ಅಷ್ಟು ಬೇಗ ಯಾವ ನಿರ್ಧಾರಕ್ಕೂ ಬರಬೇಡ ಸುಮಿತ್ರಾ!’ ಎಂದು ಅವರೊಳಗೆ ಯಾರೋ ಜೋರಾಗಿ ಗದರಿಸಿದಂತಾಯಿತು. ಹಾಗಾಗಿ ಮರಳಿ ಭಯವೋ, ಪಶ್ಚಾತ್ತಾಪವೋ ತಿಳಿಯದೆ ನೊಂದುಕೊಂಡರು. ಬಳಿಕ ಮತ್ತೆ, ಯಾಕೆ, ಯಾಕೆ ಅಂದುಕೊಳ್ಳಬಾರದು? ಆ ಹಾವು ನಿಜಕ್ಕೂ ದೇವರ ಹಾವೇ ಆಗಿದ್ದಿದ್ದರೆ ತಾನು ತನ್ನ ಮಗುವಿಂತೆ ಸಾಕಿ ಬೆಳೆಸಿದ ಬೆಕ್ಕನ್ನು ಕಚ್ಚಿ ಸಾಯಿಸಿ ಅದರ ಮರಿಗಳನ್ನೂ ಕೊಂದು ತಿಂದು ಹೋಗುತ್ತಿತ್ತಾ…? ಎಂದು ಕೋಪದಿಂದ ಅವುಡುಗಚ್ಚಿದರು.    ಮತ್ತೆ ಯೋಚನೆ ಬಂತು. ಅಯ್ಯೋ ಭಗವಂತಾ…! ನಮ್ಮ ಹಿರಿಯರು ಅನಾದಿಕಾಲದಿಂದಲೂ ನಾಗದೇವರು ಎಂದು ಪೂಜಿಸುತ್ತ ಬಂದಿರುವ ಹಾವೊಂದು ಬೆಕ್ಕಿನ ಮರಿಗಳನ್ನೂ ತಿನ್ನುತ್ತದಾ…!? ಥೂ, ಥೂ, ಏನಿದು ಅಸಹ್ಯ! ಇಂಥ ಹಾವಿನ ಬಗ್ಗೆಯೂ ತಾನು ಬೇಡದಿದ್ದನ್ನೆಲ್ಲ ಊಹಿಸಿಕೊಂಡು ಅದೇ ಸಂಶಯವನ್ನು ನಿವಾರಿಸಿಕೊಳ್ಳಲು ಆ ಕಳ್ಳ ಗುರೂಜಿಯಲ್ಲಿಗೂ ಹೋಗಿ ಬಂದೆನಲ್ಲ…! ಆ ಮನುಷ್ಯನಾದರೂ ಏನು ಮಾಡಿದ? ಬಣ್ಣಬಣ್ಣದ ಮಾತಾಡಿ ನಮ್ಮಿಂದ ಲಕ್ಷಗಟ್ಟಲೆ ಸುಲಿದವನು ಈಗ ಮತ್ತೆ ನಾಗಬನ ಜೀರ್ಣೋದ್ಧಾರದ ಹೆಸರಿನಲ್ಲೂ ಊರಿನವರನ್ನೆಲ್ಲ ನುಣ್ಣಗೆ ಬೋಳಿಸಲು ಹೊರಟಿದ್ದಾನೆ ಅವಿವೇಕಿ! ಎಂದು ಗುರೂಜಿಯ ಮೇಲೂ ಕಿಡಿಕಾರಿದರು. ಆದರೆ ಬಳಿಕ, ಥೂ! ತಾನಾದರೂ ಮಾಡಿದ್ದೇನು? ಹಾವು ಮನೆಯೊಳಗೆ ಹೊಕ್ಕಿದ್ದನ್ನು ವಠಾರವಿಡೀ ಟಾಂ! ಟಾಂ! ಮಾಡಿಕೊಂಡು ಬಂದೆನಲ್ಲದೇ ಅದೇ ವಿಚಾರವಾಗಿ ಆ ಬಡಪಾಯಿ ರಾಧಾಳ ಕುಟುಂಬವನ್ನೂ ಅನಾವಶ್ಯಕವಾಗಿ ನೋಯಿಸಿಬಿಟ್ಟೆ. ಪಾಪ ಅವರು ಯಾರಿಗೇನು ಅನ್ಯಾಯ ಮಾಡಿದ್ದರು!’ ಎಂದು  ತೊಳಲಾಡುತ್ತ ಕಣ್ಣೀರಿಟ್ಟರು.     ಆದರೂ ವಯಸ್ಸಾದ ಅವರ ಮನಸ್ಸು ಅಷ್ಟುಬೇಗನೇ ತಮ್ಮ ಪೂರ್ವಿಕರ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಿರಾಕರಿಸಲು ಒಪ್ಪಲಿಲ್ಲ. ಆದ್ದರಿಂದ ಈ ಸರೀಸೃಪಜೀವಿಯು ನಾಗನಲ್ಲದಿದ್ದರೇನಾಯ್ತು? ನಮ್ಮವರು ತಲೆತಲಾಂತರದಿಂದ ಪೂಜಿಸಿಕೊಂಡು ಬಂದಂಥ ಆ ನಾಗಶಕ್ತಿಯೊಂದನ್ನು ಮನುಷ್ಯ ಮಾತ್ರನಿಂದ, ‘ಇಲ್ಲ!’ ಎನ್ನಲು ಸಾಧ್ಯವಿದೆಯಾ? ಆ ದೈವಶಕ್ತಿಯು ಖಂಡಿತಾ ಇದೆ. ಅಷ್ಟು ತಿಳಿಯದೆ ನಮ್ಮ ಹಿರಿಯರು ಅವನನ್ನು ನಂಬಿ ಪೂಜಿಸಿಕೊಂಡು ಬಂದಿದ್ದಾರಾ…? ಏನೇ ಇರಲಿ. ನಮ್ಮ ಸನಾತನ ಸಂಪ್ರದಾಯವನ್ನು ನಾವು ಎಂದಿಗೂ ಮರೆಯಬಾರದು ಮತ್ತು ಬಿಟ್ಟುಕೊಡಲೂಬಾರದು. ಇನ್ನು ಮುಂದೆ ತಾನು ಆಚರಿಸುವ ಪೂಜೆ ಪುನಸ್ಕಾರಗಳೇನಿದ್ದರೂ ಆ ಅವ್ಯಕ್ತಶಕ್ತಿ ನಾಗದೇವನಿಗೆಂದೇ ಭಾವಿಸಿದರಾಯ್ತು ಎಂದು ಯೋಚಿಸಿ ಸ್ವಲ್ಪ ಸಮಾಧಾನಚಿತ್ತರಾದ ಸುಮಿತ್ರಮ್ಮ ಕೂಡಲೇ ಗಂಡನಿಗೆ ಕರೆ ಮಾಡಿ ಅಳುತ್ತ ವಿಷಯ ತಿಳಿಸಿದರು. (ಮುಂದುವರೆಯುವುದು) ಗುರುರಾಜ್ ಸನಿಲ್

Read Post »

ಇತರೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

ಶ್ರೀಸಿರಿವೆನ್ನಲ‌ ಸೀತಾರಾಮಶಾಸ್ತ್ರಿಯವರುತೆಲುಗಿನಖ್ಯಾತಚಲನಚಿತ್ರಗೀತೆರಚನಾಕಾರರು. ಇವರು೩೦-೧೧-೨೦೨೧ರಂದುಮರಣಿಸಿದರು. ಈಸಂತಾಪದಸಂದರ್ಭದಲ್ಲಿಅವರಿಗೆಅವರದೇಗೀತೆಯಅನುವಾದದಮೂಲಕಸಂಗಾತಿ ಪತ್ರಿಕೆಶ್ರದ್ಧಾಂಜಲಿಅರ್ಪಿಸುತ್ತದೆ

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ. Read Post »

ಇತರೆ

ಶಿಶುಗೀತೆ

ಶಿಶುಗೀತೆ ಚೈತ್ರಾ ತಿಪ್ಪೇಸ್ವಾಮಿ ಗಾಳಿ ಬೇಕಣ್ಣ ನಮಗೆ ಗಾಳಿಯು ಬೇಕಣ್ಣಬದುಕಲು ನಮಗೆ ಗಾಳಿಯು ಬೇಕಣ್ಣ||ಪ|| ಗಾಳಿಯಿಲ್ಲದೆ ಯಾರು ಉಳಿಯರುಅದುವೆ ನಮ್ಮ ಪ್ರಾಣವಾಯುವುಕ್ಷಣವೂ ತೊರೆದು ಉಳಿಯಲಾರೆವು.||ಗಾಳಿಯು|| ಶುದ್ಧ ಗಾಳಿಯು ದೇಹಕೆ ಉತ್ತಮಪರಿಸರದಿಂದಲೆ ಗಾಳಿಯ ಹರಿವುಚೆಂದದಿ ಗಿಡಮರ ಬೆಳೆಸಬೇಕಣ್ಣ.|| ಗಾಳಿಯು|| ಮೀರಿದ ಜನಸಂಖ್ಯೆ ಭೂಮಿ ಮೇಲೆಹೆಚ್ಚಿದೆ ವಾಹನ ರಸ್ತೆಯ ತುಂಬಾಕೆಟ್ಟಿದೆ ಗಾಳಿ ವಿಷಾನಿಲ ಸೇರುತ.||ಗಾಳಿಯು|| ಮಲಿನಗೊಂಡ ಗಾಳಿಯ ಸೇವಿಸಿಶ್ವಾಸ ರೋಗಗಳು ಬಂದವು ನೋಡಿಮಲಿನ ತಡೆದರ ನಮಗೆ ಉಳಿವು.‌‌‌‌ ||ಗಾಳಿಯು||

ಶಿಶುಗೀತೆ Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-4 ಬಾಲ್ಯ ಉನ್ನತ ವ್ಯಾಸಂಗ  ತಂದೆಯ ಸಾವು ಅಂಬೇಡ್ಕರರಿಗೆ ಮರೆಯಲಾಗದ ದು:ಖವನ್ನುಂಟು ಮಾಡಿತು. ತಂದೆಯ ನೆನಪು ಮರುಕಳಿಸುತಿತ್ತು. ಆದರೂ ಅವರಲ್ಲಿ ಉನ್ನತ ವ್ಯಾಸಂಗದ ಮಹತ್ಪಾಕಾಂಕ್ಷೆ ಉತ್ಕಟಗೊಂಡಿತು. ಅದೇ ಸಂದರ್ಭದಲ್ಲಿ ಬರೋಡಾದ ಮಹಾರಾಜರು ನಾಲ್ಕು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಪ್ರಕಟಣೆಯಲ್ಲಿ ಕರಾರೊಂದನ್ನು ಹಾಕಿದ್ದರು ಅದೇನೆಂದರೆ ಮಹಾರಾಜರು ಕೊಡುವ ಶಿಷ್ಯವೇತನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು, ಬೇರೆಯದಕ್ಕೆ ಹಣ ಬಳಸಿಕೊಳ್ಳುವಂತಿಲ್ಲಅಲ್ಲದೆ ವಿದ್ಯಾರ್ಜನೆ ಪೂರ್ಣಗೊಳಿಸಿ ಬಂದನಂತರ ಬರೋಡಾ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸುವುದಾಗಿ ಕರಾರು ಪತ್ರ ಬರೆದು ಕೊಡುವುದಾಗಿತ್ತು. ಮಹಾರಾಜರು ಮುಂಬಯಿಗೆ ಬಂದಾಗ ಅಂಬೇಡ್ಕರರು ಅವರನ್ನುಭೇಟಿಯಾಗಿ ಮನವಿ ಅರ್ಜಿ ಕೊಡುವರು, ಆಯ್ಕೆ ಪಟ್ಟಿ ಪ್ರಕಟಿಸಿದಾಗ ನಾಲ್ಕು ವಿದ್ಯಾರ್ಥಿಗಳಲ್ಲಿ ಅಂಬೇಡ್ಕರರ ಹೆಸರು ಆಯ್ಕೆ ಪಟ್ಟಿಯಲ್ಲಿತ್ತು. ಇದು ಅವರಿಗೆ ಎಲ್ಲಿಲ್ಲದ ಹರ್ಷ ತಂದುಕೊಟ್ಟಿತು. ಇದು ಅಂಬೇಡ್ಕರರ ಅದೃಷ್ಟವಾಗಿರದೆ ಭಾರತದ ಜನರ ಅದೃಷ್ಟವಾಗಿತ್ತು, ಪ್ರಜಾಪ್ರಭುತ್ವದ ಅದೃಷ್ಟವಾಗಿತ್ತು ಏಕೆಂದರೆ ಶ್ರೇಷ್ಠ ಸಂವಿಧಾನ     ರಾಜಕೀಯ ಪರಿಣತರೊಬ್ಬರನ್ನು ದೇಶ ಪಡೆಯುವಂತಾಯಿತು.ಆದ್ದರಿಂದ ಬರೋಡಾದ ಮಹಾರಾಜ ಮೂರನೆ ಸಯ್ಯಾಜಿ ಗಾಯಕವಾಡರವರು ಪ್ರಾತ:ಸ್ಮರಣೀಯರಾಗಿದ್ದಾರೆ.            1913 ರ ಜೂನ 4 ರಂದು ಅಂಬೇಡ್ಕರರು ಬರೋಡಾ ಸಂಸ್ಥಾನಕ್ಕೆ ಹೋಗಿ ಕರಾರು ಒಪ್ಪಂದ ಪತ್ರಕ್ಕೆ ಸಹಿಹಾಕಿ ಬಂದು ಅಮೇರಿಕ್ಕಾಕೆ ಹೋಗಲು ಸಿದ್ದರಾದರು. ರಮಾಬಾಯಿ, ಅಮೇರಿಕಾ ಎಷ್ಟು ದೂರ ಇದೆ ಎಂದು ಪ್ರಶ್ನಿಸಿದಾಗ ಅಂಬೇಡ್ಕರರು ಮಡದಿಯ ಮುಗ್ದ ಪ್ರಶ್ನೆಗೆ ಅದೇನು ನಿನ್ನ ತವರುಮನೆ ದಾಪೊಲಿಯಷ್ಟು ದೂರ ಅಂತಾ ತಿಳಿದು ಕೊಂಡಿದ್ದಿಯಾ, ಅಮೇರಿಕಾಗೆ ಹೋಗಿ ತಲುಪ ಬೇಕಾದರೆ ತಿಂಗಳು ಗಟ್ಟಲೆ ಹಡಗು ಪ್ರಯಾಣ ಮಾಡಬೇಕು ಎಂದರು. ಅಷ್ಟು ದೂರ ಹೋಗಬೇಕೆ? ಇಲ್ಲಿಯೇ ಓದಬಾರದೆ? ಎಂದು ರಮಾಬಾಯಿ ಮತ್ತೆ ಕೇಳಿದಾಗ, ರಮಾ ಇಲ್ಲಿನ ಜಾತಿ ವ್ಯವಸ್ಥೆ ನನಗೆ ಸಾಧನೆ ಮಾಡಲು ಬಿಡುವುದಿಲ್ಲ. ನಾನು ಜ್ಞಾನಿಯಾದರೆ ಮಾತ್ರ ಜನರು ನನ್ನ ಮಾತು ಕೇಳುತ್ತಾರೆ ,ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುವುದು ಪ್ರತಿಯೋಬ್ಬ ವ್ಯಕ್ತಿಯ ಜೀವನದಲ್ಲಿ ಅವಕಾಶವೆನ್ನುವುದು ಒಮ್ಮೆ ಮನೆಬಾಗಿಲನ್ನು ತಟ್ಟುತ್ತದೆ. ಆಗಲೆ ಅಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬರೋಡಾ ಮಹಾರಾಜರು ನನಗೆ ಅಂತಹ  ಒಂದು ಅವಕಾಶ ಕಲ್ಪಿಸಿ ಶಿಷ್ಯವೇತನ ಮಂಜೂರಿಸಿದ್ದಾರೆ. ಎಲ್ಲವು ಒಳ್ಳೆಯದಾಗುತ್ತದೆ ಎಂದು ರಮಾಬಾಯಿಗೆ ಧೈರ್ಯ ತುಂಬಿ ಅಮೇರಿಕಾಕ್ಕೆ ಹೊರಡುವರು. ಯಶವಂತ ಹಿರಿಯ ಮಗ ಇನ್ನು ಚಿಕ್ಕವನು, ಎರಡನೆ ಮಗು ಹೊಟ್ಟೆಯಲ್ಲಿ ಬೆಳೆಯುತಿತ್ತು, ರಮಾಬಾಯಿ ಯಾವುದಕ್ಕೂ ಎದೆಗುಂದದೆ ಪತಿಯನ್ನು ಉನ್ನತ ವ್ಯಾಸಂಗ ಮಾಡಲು ಅಮೇರಿಕಾಗೆ ಕಳುಹಿಸಿಕೊಟ್ಟರು.           ಅಂಬೇಡ್ಕರರು 1913 ರ ಕೊನೆಯ ವಾರದಲ್ಲಿ ಅಮೇರಿಕಾದ ನ್ಯೂಯಾರ್ಕ ನಗರ ತಲುಪಿದರು. ಮೊದಮೊದಲು ಒಂದೆರಡು ಕಡೆ ಹಾಸ್ಟೆಲ್ ನೋಡಿಕೊಂಡರು, ಅಲ್ಲಿ ಅವರಿಗೆ ಊಟ ಒಗ್ಗದೆ ಇದ್ದುದರಿಂದ ಕೊನೆಗೆ ಲಿವಿಂಗ್ ಸ್ಟನ್ ಎಂಬಲ್ಲಿ ಬಂದು ಉಳಿದುಕೊಂಡರು. ಅಲ್ಲಿಯೇ ನಾವೆಲ್ ಬಾತೆನಾ ಎಂಬ ಪಾರ್ಸಿಯೊಬ್ಬನ ಪರಿಚಯವಾಯಿತು. ನಾವೆಲ್ ಬಾತೆನಾ ಕೊನೆಯವರೆಗೂ ಅಂಬೇಡ್ಕರರ ಆತ್ಮೀಯ ಸ್ನೇಹಿತರಾಗಿ ಉಳಿದರು. ಕೊಲಂಬಿಯಾ ವಿಶ್ವವಿದ್ಯಾಲಯವು ಅಂದು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದು. ಅಂಬೇಡ್ಕರರಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಹೊಸ ಪ್ರಪಂಚವನ್ನು ತೆರೆದಿಟ್ಟಿತು. ಅಸ್ಪೃಶ್ಯತೆಯ ಕರಾಳತೆ ಅಲ್ಲಿರಲಿಲ್ಲ, ಎಲ್ಲಿ ಬೇಕಾದಲ್ಲಿ ತಿರುಗಾಡಬಹುದು, ಕೂಡ್ರಬಹುದು, ಮುಟ್ಟಬಹುದು,ಮೇಲು-ಕೀಳು, ಉಚ್ಚ-ನೀಚ ಭೇದ ಭಾವ ಇಲ್ಲದ ಹೊಸ ಜಗತ್ತನ್ನು ಕಂಡರು. ಬಟ್ಟೆ ಹಾಸಿದ ಡೈನಿಂಗ ಟೇಬಲ್ ಕುರ್ಚಿ ಮೇಲೆ ಕುಳಿತು ಊಟ ಮಾಡುವುದು ಅವರಿಗೆ ಬಹಳ ಇಷ್ಟವಾಯಿತು. ನೀನು ಅಸ್ಪೃಶ್ಯ ಮುಟ್ಟಬೇಡ ಮೈಲೀಗೆಯಾಗುತ್ತದೆ ಎಂಬ ತೆಗಳಿಕೆಯ ಮಾತುಗಳು ಅಲ್ಲಿರಲಿಲ್ಲ. ಸ್ವತಂತ್ರ ವಾತಾವರಣ ಅಂಬೇಡ್ಕರರಿಗೆ ಹೊಸ ಬದುಕನ್ನು ತಂದುಕೊಟ್ಟಿತು.             ಶಿಷ್ಯವೇತನ ಅವಧಿ ಮುಗಿಯುವುದರೊಳಗೆ ಓದು ಪೂರ್ಣಗೊಳಿಸಬೆಕೆಂಬ  ಗುರಿಯೊಂದಿಗೆ  ಅಂಬೇಡ್ಕರರು ದಿನಕ್ಕೆ 18 ಗಂಟೆಗಳ ಕಾಲ ಕಷ್ಟಪಟ್ಟು ಅಧ್ಯಯನ ಮಾಡತೊಡಗಿದರು. ಹೊಸ ಪುಸ್ತಕ ಕೈಗೆ ಸಿಕ್ಕಿತೆಂದರೆ ಸಾಕು ಅನ್ನ ನೀರು ಮರೆತು ಓದಿ ಪೂರ್ಣಗೊಳಿಸುತ್ತಿದ್ದರು. ಅಲ್ಲಿನ ಬೃಹತ ಗ್ರಂಥಾಲಯದ ಬಹುತೇಕ ಪುಸ್ತಕಗಳನ್ನು ಓದಿ ಮುಗಿಸುತ್ತಾರೆ. ಲಾಲ ಲಜಪತರಾಯರು ಭಾರತದ ಸ್ವಾತಂತ್ರದ ಹೋರಾಟದ ಅಗ್ರ ನಾಯಕರು. ಅವರು ಅಮೇರಿಕದಲ್ಲಿ ಇದ್ದುದರಿಂದ ದಿನಾಲು ಗ್ರಂಥಾಲಯಕ್ಕೆ ಬರುತ್ತಿದ್ದರು.  ಲಾಲ ಲಜಪತರಾಯರು ತದೇಕ ಚಿತ್ತದಿಂದ ಓದುತ್ತ ಕುಳಿತಿರುತ್ತಿದ್ದ ಯುವಕನ ಹತ್ತೀರ ಒಂದು ದಿನ ಬಂದು ಎಷ್ಟೊಂದು ಗಹನವಾಗಿ ಅಧ್ಯಯನ ಮಾಡುತ್ತಿದ್ದಿಯಾ, ಯಾರು ನೀನು ಎಂದು ವಿಚಾರಿಸಿದರು. ಅಂಬೇಡ್ಕರರು ತಮ್ಮ ಪರಿಚಯ ಮಾಡಿಕೊಂಡರು. ಲಾಲ ಲಜಪತರಾಯರು ಅಂಬೇಡ್ಕರರ ಅಧ್ಯಯನ ಕಂಡು ಹೆಮ್ಮೆ ಪಡುತ್ತಾ ಲಾಲ ಹರದಯಾಳರ ಮುಖಂಡತ್ವದಲ್ಲಿ ನಡೆಯುತ್ತಿರುವ ಗದ್ಧಾರ ಪಕ್ಷಕ್ಕೆ ಸೇರಿಕೊಂಡು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಕರೆ ಕೊಡುತ್ತಾರೆ . ಅಂಬೇಡ್ಕರರು ಉತ್ತರಿಸುತ್ತಾ ತಾನು ಬರೋಡಾ ಮಹಾರಾಜರ ಶಿಷ್ಯವೇತನದಲ್ಲಿ ಓದಲು ಬಂದಿದ್ದು ಕಲಿಯುವುದನ್ನು ಬಿಟ್ಟು ಅವರಿಗೆ ದ್ರೋಹ ಮಾಡುವುದಿಲ್ಲ, ಓದು ಮುಗಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿ ಓದಲು ಮಗ್ನನಾದರು.    ಈಷ್ಟ ಇಂಡಿಯಾ ಕಂಪನಿಯ ಆಡಳಿತ ಮತ್ತು ಅರ್ಥ ವ್ಯವಸ್ಥೆ ಕುರಿತು ಆಳವಾಗಿ ಅಧ್ಯಯನಮಾಡಿ, ಸತತ ಪರಿಶ್ರಮದಿಂದ 1915 ರಲ್ಲಿ “ಪ್ರಾಚೀನ ಭಾರತದ ವಾಣಿಜ್ಯ” (Ancient Indian commerce)  ಎಂಬ ಪ್ರಬಂಧವನ್ನು ಬರೆದು ಮಂಡಿಸಿದರು. ವಿಶ್ವವಿದ್ಯಾಲಯವು  ಅಂಬೇಡ್ಕರರಿಗೆ ಎಂ.ಎ ಪದವಿಯನ್ನು ನೀಡಿತು. ನಿಮ್ನವರ್ಗದ ವಿದ್ಯಾರ್ಥಿಯೊಬ್ಬ ಹೊರದೇಶದಲ್ಲಿ ಪಡೆದ ಎಂ.ಎ ಪದವಿ ಮಹಾನ್             ಸಾಧನೆಯಾಯಿತು. ಭಾರತದ ವಾಣಿಜ್ಯ ಸಂಬಂಧಗಳು ಪ್ರಾಚೀನ ಕಾಲದಲ್ಲಿ, ಮಧ್ಯಯುಗದಲ್ಲಿ ಹಾಗೂ ಬ್ರಿಟೀಷ ಅರಸೊತ್ತಿಗೆಯ ಮುಂಚಿನ ಕಾಲದಲ್ಲಿ ಹೇಗೆ ವ್ಯಾಪಿಸಿತು ಎಂಬುದನ್ನು ಎಳೆ ಎಳೆಯಾಗಿ ಪ್ರಬಂಧದಲ್ಲಿ ಬಿಚ್ಚಿಟ್ಟಿದ್ದಾರೆ. ಬ್ರಿಟೀಷರು ಈಷ್ಟ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರಕ್ಕಾಗಿ ಆಗಮಿಸಿ ಸಂಪದ್ಭರಿತ ಭಾರತವನ್ನು ಲೂಟಿ ಮಾಡುತ್ತಾ ತನ್ನ ಸಾಮ್ರಾಜ್ಯ ಶಾಹಿ ಅರಸೋತ್ತಿಗೆಯ ನೀತಿಯಿಂದ ದೇಶ ಕಬಳಿಸಿದ್ದನ್ನು ವಿವರಿಸುತ್ತಾರೆ.       ಉದಾಹರಣೆ ಸಹಿತವಾಗಿ ಬ್ರಿಟೀಷರ ಆಡಳಿತ ಡಕಾಯಿತರ ಮತ್ತು ಕ್ರೂರ ದೊರೆಗಳ ಆಡಳಿತವಾಗಿದೆ ಎನ್ನುತ್ತಾ ಛಾಟಿ ಭೀಸುತ್ತಾ ತೆರಿಗೆಯನ್ನು ಹೇರಿದರು, ಹೇಗೆ ಯುದ್ದಗಳ ಕರ್ಚುವೆಚ್ಚ ಹೇರುತ್ತಾ, ಸೈನ್ಯ ಸ್ಥಾಪಿಸಿ ಸಂಪದ್ಭರಿತ ಭಾರತವನ್ನು ಹೇಗೆ ದೋಚಿದರೆಂಬುವುದನ್ನು ಸ್ಪಷ್ಟವಾಗಿ ಬರೆಯುತ್ತಾರೆ. ಇದು ಅಂದಿನ ಯಾವ ಸ್ವಾತಂತ್ರ್ಯ ಹೋರಾಟಗಾರರಿಗಿಂತಲೂ  ಕಡಿಮೆಯಾಗಲಾರದು. ಅವರ ದೇಶ ಪ್ರೇಮದ ಸಾಕ್ಷಿಯಾಗಿ ಈ ಕೃತಿನಿಲ್ಲುತ್ತದೆ.                 ಸೋಮಲಿಂಗ ಗೆಣ್ಣೂರ                                 

Read Post »

ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-44 ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ ಬಂದು ಬಿದ್ದಿದ್ದವು. ಮುಖ್ಯವಾಗಿ ಲಕ್ಷ್ಮಿದೇವಿಯ ಕಟಾಕ್ಷವು ಅವರ ಮೇಲೆ ಇನ್ನಿಲ್ಲದಂತೆ ಆಗಿತ್ತು! ಹಾಗಾಗಿ ಈಗ ಅವರ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ. ಅಳತೆಗೆ ಮೀರಿದಷ್ಟು ಆಸ್ತಿಯಿದೆ. ಎರಡೋ ಮೂರೋ ವಿದೇಶಿ ಕಾರುಗಳಿವೆ. ಶಂಕರನದಕ್ಕಿಂತಲೂ ದೊಡ್ಡ ಬಂಗಲೆಯಿದೆ. ಊರಿನ ಕೆಲವಾರು ಕಡೆ ಎಕರೆಗಟ್ಟಲೆ ಜಮೀನು ಕೊಂಡಿದ್ದಾರೆ. ಸಮಾಜ ಮತ್ತು ಸರಕಾರದ ಮಾನ್ಯತೆ ಪಡೆಯಲೆಂಬಂತೆ ಉಗ್ರಾಣಿಬೆಟ್ಟಿನಲ್ಲಿ ಕೊಂಡಿದ್ದ ಒಂದೂವರೆ ಎಕರೆ ತೋಟವನ್ನು ಕೋಮಲದೇವಿ ಎಂಬ ಸಮಾಜ ಸೇವಕಿಯ ‘ಕರುಣಾಳು ಬಾ ಬೆಳಕೇ!’ ಎಂಬ ವೃದ್ಧಾಶ್ರಮಕ್ಕೆ ಬಾಡಿಗೆಯಿಲ್ಲದೆ ಕೊಟ್ಟಿದ್ದಾರೆ. ಊರ ಪರವೂರ ಜನಾಭಿವೃದ್ಧಿ ಮತ್ತು ಧಾರ್ಮಿಕಾಭಿವೃದ್ಧಿ ಚಟುವಟಿಕೆಗಳಿಗೆ ಮನಸೋಇಚ್ಛೆ ದಾನಧರ್ಮಗಳನ್ನು ಮಾಡುತ್ತ ಬಂದಿದ್ದಾರೆ. ಅಂದು ತಮ್ಮ ಪುಟಗೋಸಿ ಗೆಳೆಯ ಶಂಕರ, ‘ಗುರೂಜೀ!’ ಎಂದು ಕರೆದ ಹೆಸರಿಗೆ ತಕ್ಕಂತೆ ನಾಡಿನಾದ್ಯಂತ ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹೀಗಿದ್ದ ಗುರೂಜಿಯವರ ಈ ಎಲ್ಲಾ ಚಟುವಟಿಕೆ ಮತ್ತು ಕಾರ್ಯಸಾಧನೆಗಳನ್ನು ಅಂತರ್ಜಾಲದ ಮೂಲಕವೇ ಕಣ್ಗಾವಲಿಟ್ಟು ಅಧ್ಯಯನ ಮಾಡುತ್ತ ಬಂದಿರುವ ಉತ್ತರ ಭಾರತದಾಚೆಗಿನ ಯಾವುದೋ ಅನಾಮಧೇಯ ವಿಶ್ವವಿದ್ಯಾಲಯವೊಂದು ತಮ್ಮ ವಿದ್ಯಾ ಸಂಸ್ಥೆಗೆ ಗುರೂಜಿಯವರು ಪ್ರೀತಿಯಿಂದ ನೀಡಿದ ಎರಡು ಲಕ್ಷ ರೂಪಾಯಿಗಳ ಉದಾರ ದೇಣಿಗೆಯ ಕೃತಜ್ಞಾರ್ಥವಾಗಿ ಅವರಿಗೆ ‘ಗೌರವ ಡಾಕ್ಟರೇಟ್’ ಪದವಿಯನ್ನೂ ನೀಡಿ ಗೌರವಿಸಿದೆ. ಹಾಗಾಗಿ ಈಗ ಜನರು ಅವರನ್ನು, ‘ಡಾಕ್ಟರ್ ಏಕನಾಥ ಗುರೂಜಿ!’ ಎಂದೂ ಕರೆಯುತ್ತಾರೆ. ಜನರ ಬಾಯಿಯಿಂದ ತಮ್ಮ ಹೆಸರನ್ನು ಆ ಮಾದರಿಯಲ್ಲಿ ಕೇಳುವಾಗ ಗುರೂಜಿಯವರಿಗೆ ತಮ್ಮ ಜನ್ಮ ಸಾರ್ಥಕವಾದಂತೆನ್ನಿಸುತ್ತದೆ. ತಾವೆಂದಾದರೂ ಈ ಮಟ್ಟದ ಯಶಸ್ಸಿನ ಶಿಖರವೇರುತ್ತೇವೆ ಎಂದು ಕನಸು ಮನಸಿನಲ್ಲಾದರೂ ಅಂದುಕೊಂಡಿದ್ದುಂಟಾ? ಇದೆಲ್ಲ ನಾವು ನಂಬಿದ ನಾಗ ಪರಿವಾರ ದೈವಗಳ ಅನುಗ್ರಹವಲ್ಲದೆ ಮತ್ತೇನು? ಎಂದು ತಮ್ಮ ಬಿಡುವಿನ ಸಮಯದಲ್ಲೆಲ್ಲ ಯೋಚಿಸುತ್ತ ಖುಷಿಯಿಂದ ತನ್ಮಯರಾಗುತ್ತಾರೆ. ಗುರೂಜಿಯವರ ಇಂಥ ಯಶಸ್ಸಿಗೆ ಶಂಕರನಂಥ ಅನೇಕ ಬಿಲ್ಡರ್‍ಗಳು, ಗುತ್ತಿಗೆದಾರರು, ಸಾಫ್ಟ್‍ವೇರ್ ಇಂಜಿನೀಯರ್‍ಗಳು, ವಿವಿಧ ಉದ್ಯಮಿಗಳು, ಒಂದಷ್ಟು ಪ್ರಸಿದ್ಧ ವೈದ್ಯರು, ಮನೋದುರ್ಬಲರು, ಕೊಲೆಗಡುಕರು, ವಂಚಕರು ಮತ್ತು ಅಮಾಯಕ ಬಡ ಜನರಿಂದ ಹಿಡಿದು ನಾಡಿನ ಕೆಲವಾರು ಸಚಿವರು ಹಾಗೂ ಶಾಸಕರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಸಹಕಾರ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ಗುರೂಜಿಯವರಿಗೆ ಇವರೆಲ್ಲರ ಮೇಲೂ ಅಪಾರ ಅಭಿಮಾನವಿದೆ. ಆದರೆ ಆವತ್ತು ತಾವು ಪೆದುಮಾಳರಿಗೆ ವಿದಾಯ ಹೇಳಿ ಮುಂಬೈಯಿಂದ ಹಿಂದಿರುಗುವಾಗ, ‘ಇಂದಲ್ಲ ನಾಳೆ ನಿಮ್ಮ ಕಣ್ಣ ಮುಂದೆ ನಿಮಗಿಂತಲೂ ಎತ್ತರಕ್ಕೆ ಬೆಳೆದು ತೋರಿಸದಿದ್ದರೆ ನನ್ನ ಹೆಸರು ಏಕನಾಥನೇ ಅಲ್ಲ. ಆ ದಿನವನ್ನು ಎಣಿಸುತ್ತಿರಿ!’ ಎಂದು ನೋವಿನಿಂದ ಶಪಥ ಮಾಡಿ ಬಂದಿದ್ದು ಇವತ್ತಿಗೂ ಅವರನ್ನು ಕಾಡುತ್ತದೆ. ಅದೇ ಕಾರಣಕ್ಕೋ ಏನೋ ಎಂಬಂತೆ ಅವರ ಹೆಸರು ಬಹಳ ಬೇಗನೇ ಮುಂಬೈ ನಗರಕ್ಕೂ ಹಬ್ಬಿತ್ತು. ಮುಂಬೈಯ ಖ್ಯಾತ ಉದ್ಯಮಿ ಯಶಪಾಲರ ಬಂಗಲೆಯಲ್ಲಿ ಕೆಲವು ವಿಶೇಷ ಹೋಮ ಹವನಗಳನ್ನು ನಡೆಸಿಕೊಡಲು ಗುರೂಜಿಯವರಿಗೆ ಆಹ್ವಾನ ಬಂದಿತು. ಅಂದು ಬೆಳಿಗ್ಗೆ ತಮ್ಮ ಕಛೇರಿಗೆ ಆಗಮಿಸಿದ ಯಶಪಾಲರನ್ನು ಕುಳ್ಳಿರಿಸಿಕೊಂಡ ಗುರೂಜಿಯವರು ನಿಧಾನವಾಗಿ ತಮ್ಮ ಪಂಚಾಂಗ ಮತ್ತು ಜ್ಯೋತಿಷ್ಯ ಪುಸ್ತಕಗಳನ್ನು ತಿರುವಿ ಹಾಕುತ್ತ ಮುಂಬೈ ಕಾರ್ಯಕ್ರಮಕ್ಕೆ ದಿನ ಗೊತ್ತುಪಡಿಸಲೂ ಮತ್ತು ಹಣಕಾಸಿನ ಚೌಕಾಶಿಗೂ ಒಂದು ಗಂಟೆ ಸಮಯವನ್ನು ವಿನಿಯೋಗಿಸಿಕೊಂಡರು. ಬಳಿಕ ಅವರನ್ನು ತೃಪ್ತಿಪಡಿಸಿ ಕಳುಹಿಸಿಕೊಟ್ಟವರು ತಮ್ಮೊಳಗೆ ಸುಪ್ತವಾಗಿ ಹೊಗೆಯಾಡುತ್ತಿರುವ ಪೆದುಮಾಳರ ಮೇಲಿನ ಸೇಡನ್ನು ಇನ್ನು ಕೆಲವೇ ದಿನಗಳಲ್ಲಿ ತೀರಿಸಿಕೊಳ್ಳಲಿಕ್ಕಿದೆ! ಎಂದುಕೊಂಡು ವಿಲಕ್ಷಣ ಖುಷಿಪಟ್ಟು ಉದ್ವೇಗಗೊಂಡರು. ಆ ದಿನವೂ ಬಂದದುಬಿಟ್ಟಿತು. ಆವತ್ತು ಅತಿಯಾದ ಚಡಪಡಿಕೆಯಲ್ಲಿದ್ದ ಗುರೂಜಿಯವರು ವಿಮಾನದ ಮೂಲಕ ಮುಂಬೈಗೆ ಹಾರಿದರು. ಯಶಪಾಲರ ಪೂಜೆಗಳನ್ನು ತರಾತುರಿಯಲ್ಲಿ ಮುಗಿಸಿಕೊಟ್ಟರು. ಅಲ್ಲೇ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಕೂಡಲೇ ಪೆದುಮಾಳ ಗುರುಗಳ ಮನೆಗೆ ಧಾವಿಸಿದರು. ಅಂದು ನಿರ್ಗತಿಕ ಹುಡುಗನಿಂದ ಪ್ರಾಣಿಯಂತೆ ದುಡಿಸಿಕೊಂಡು ಉಟ್ಟ ಬಟ್ಟೆಯಲ್ಲೇ ಹೊರಗೆ ದಬ್ಬಿದ ವಂಚಕ ಗುರುವಿಗೆ ಇವತ್ತು ತಮ್ಮ ಸಾಧನೆ ಮತ್ತು ಶ್ರೀಮಂತಿಕೆ ಎಂಥದ್ದೆಂಬುವುದನ್ನು ತೋರಿಸಬೇಕು. ಅದನ್ನು ನೋಡಿ ಆ ಮುದುಕ ಹಾರ್ಟ್ ಅಟ್ಯಾಕ್ ಆಗಿ ನರಳುವುದನ್ನು ತಾವು ಕಣ್ಣಾರೆ ಕಂಡು ಒಳಗೆ ಧಗಧಗಿಸುವ ಸೇಡಿನ ಜ್ವಾಲೆಯನ್ನು ತಣಿಸಿಕೊಳ್ಳಬೇಕು ಎಂದು ಯೋಚಿಸುತ್ತ ಪೆದುಮಾಳರ ಮನೆಯ ಬಾಗಿಲಿಗೆ ಬಂದು ನಿಂತು ಕರೆಗಂಟೆ ಬಾರಿಸಿದರು. ತುಸುಹೊತ್ತಿನ ನಂತರ ಮುದುಕಿಯೊಬ್ಬಳು ಮೆಲ್ಲನೆ ಬಂದು ಬಾಗಿಲು ತೆರೆದಳು. ಗುರೂಜಿಯವರನ್ನು ಪ್ರಶ್ನಾರ್ಥಕವಾಗಿ ದಿಟ್ಟಿದಳು. ಆದರೆ ಗುರೂಜಿಯವರಿಗೆ ಆಕೆ ಪೆದುಮಾಳರ ಪತ್ನಿ ಅನಸೂಯಮ್ಮ ಎಂದು ತಟ್ಟನೆ ಗುರುತು ಸಿಕ್ಕಿತು. ಆದರೆ ಆಕೆ, ‘ಯಾರು ಬೇಕಾಗಿತ್ತು… ಎಲ್ಲಿಂದ ಬಂದಿರಿ…?’ ಎಂದು ಗುರೂಜಿಯ ಗುರುತು ಹತ್ತದೆ ಪ್ರಶ್ನಿಸಿದಳು. ಆಗ ಗುರೂಜಿಯವರ ಮುಖದಲ್ಲಿ ವ್ಯಂಗ್ಯ ನಗುವೊಂದು ಹೊಮ್ಮಿತು. ಆವತ್ತು ತನ್ನ ಗಂಡನೊಂದಿಗೆ ಸೇರಿ ಈ ಮುದುಕಿಯೂ ತಮ್ಮನ್ನು ಎಷ್ಟೊಂದು ಬಗೆಯಲ್ಲಿ ಹಿಂಸಿಸುತ್ತಿದ್ದಳು! ತಮ್ಮನ್ನು ಆಜನ್ಮ ಗುಲಾಮನಂತೆ ನಡೆಸಿಕೊಂಡು ಹೊಟ್ಟೆಬಟ್ಟೆಗೂ ಸರಿಯಾಗಿ ಕೊಡದೆ ನೋಯಿಸುತ್ತಿದ್ದಳಲ್ಲ ಇವಳು! ಎಂದುಕೊಂಡವರ ಮನಸ್ಸು ಕಹಿಯಾಯಿತು. ‘ಹೌದೌದು. ನಿಮಗೆ ಹೇಗೆ ಗುರುತು ಹತ್ತೀತು ಹೇಳಿ…? ನಮ್ಮ ಏಳಿಗೆಯೇ ಆ ಮಟ್ಟಕ್ಕಾಗಿಬಿಟ್ಟಿದೆಯಲ್ಲ! ಹಾಗಾಗಿ ಯಾರೀಗೂ ಪಕ್ಕನೆ ನಮ್ಮ ಪರಿಚಯವಾಗಲಿಕ್ಕಿಲ್ಲ ಬಿಡಿ. ನಮ್ಮ ಗುರುತನ್ನು ನಾವೇ ಹೇಳಿಕೊಳ್ಳುತ್ತೇವೆ ಕೇಳಿ!’ ಎಂದು ಅಸಡ್ಡೆಯಿಂದ ಅನ್ನುತ್ತ ಅನಸೂಯಮ್ಮನ ಹಿಂದೆಯೇ ಒಳಗೆ ನಡೆದರು. ಅಷ್ಟು ಕೇಳಿದ ಆಕೆ ತಟ್ಟನೆ ಹಿಂದಿರುಗಿ ಗುರೂಜಿಯವರನ್ನು ಅವಕ್ಕಾಗಿ ದಿಟ್ಟಿಸಿದರು. ಆಗ ಗುರೂಜಿ ಮರಳಿ ಹಮ್ಮಿನಿಂದ ನಕ್ಕವರು, ‘ಅರೆರೇ, ಗಾಬರಿಯಾಗಬೇಡಿ ಅನಸೂಯಮ್ಮಾ… ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಕನಾಥ ಎನ್ನುವ ಒಬ್ಬ ನತದೃಷ್ಟ ಹುಡುಗ ನಿಮ್ಮ ಈ ಮನೆಯಲ್ಲಿ ಚಾಕರಿಗಿದ್ದ ನೆನಪುಂಟಾ…?’ ಎಂದು ಅವರನ್ನು ಇರಿಯುವಂತೆ ದಿಟ್ಟಿಸುತ್ತ ಕೇಳಿದರು. ಆಗ ಗುರುಪತ್ನಿಗೆ ತಟ್ಟನೆ ನೆನಪಾಯಿತು. ಆದರೆ ಮರುಕ್ಷಣ ಗುರೂಜಿಯವರ ವೇಷಭೂಷಣವನ್ನೂ ಅವರ ಮೈಕೈಯಲ್ಲಿ ನೇತಾಡುತ್ತಿದ್ದ ಚಿನ್ನಾಭರಣವನ್ನೂ ಕಂಡ ಅನಸೂಯಮ್ಮನಿಗೆ ದಿಗಿಲಾಗಿಬಿಟ್ಟಿತು! ‘ಓ ದೇವ, ದೇವಾ…, ನೀನಾ ಮಾರಾಯಾ…! ನನಗೆ ಮೊದಲು ಗುರುತೇ ಸಿಕ್ಕಲಿಲ್ಲ ನೋಡು. ನೀನೆಂಥದು ಮಾರಾಯಾ ಇಷ್ಟೊಂದು ಬದಲಾಗಿದ್ದು! ಅದೆಂಥದು ವ್ಯವಹಾರ ನಿನ್ನದು…?’ ಎಂದು ಬೊಚ್ಚು ಬಾಯಿ ಬಿಟ್ಟುಕೊಂಡು ಪ್ರಶ್ನಿಸಿದರು. ‘ವ್ಯವಹಾರವೆಂಥದು, ನಾವು ಕಲಿತ ವಿದ್ಯೆಯೇ ನಮ್ಮನ್ನು ಈ ಮಟ್ಟಕ್ಕೇರಿಸಿತು. ಹ್ಞಾಂ! ಆದರೆ ನಿಮ್ಮ ಗಂಡನಿಂದ ಕಲಿತ ಆ ಪೊಟ್ಟು ಶಾಸ್ತ್ರವಲ್ಲ. ನಾವೇ ನಮ್ಮೂರಿನಲ್ಲಿ ಅನೇಕ ವರ್ಷಗಳ ಕಾಲ ಹಠ ಹಿಡಿದು ಕಲಿತ ವಿದ್ಯೆಯಿಂದಲೇ ಇಷ್ಟೆಲ್ಲ ಆದುದು! ಅದೇನು ನಿಮ್ಮ ಗಂಡನಿಗೆ ಮಾತ್ರ ದೇವರು ದಿಂಡರ ವೈಹಿವಾಟು ಮಾಡಲು ಬರುವುದಾ? ನಮಗೆ ಸಾಧ್ಯವಿಲ್ಲವಾ… ಎಲ್ಲಿದ್ದಾರೆ ಅವರು…? ಒಮ್ಮೆ ನೋಡಬೇಕಲ್ಲ ಅವರನ್ನು. ಹೊರಗೆ ಕರೆಯಿರಿ ನೋಡುವ!’ ಎಂದು ನಂಜು ಕಾರುತ್ತ ಹೇಳಿದರು. ಗುರೂಜಿಯವರ ಅಂಥ ಅಹಂಕಾರದ ಮಾತುಗಳನ್ನು ಕೇಳಿದ ಅನಸೂಯಮ್ಮನ ಜೋಲು ಮೋರೆ ತಟ್ಟನೆ ಕಳೆಗುಂದಿತು. ಆದರೂ ಸಂಭಾಳಿಸಿಕೊಂಡು, ‘ಅಯ್ಯೋ ಮಾರಾಯಾ…ಅವರ ಕಥೆ ಏನು ಹೇಳುವುದು. ಅವರು ಚಾಪೆ ಹಿಡಿದು ಐದು ವರ್ಷವಾಗುತ್ತ ಬಂತು…!’ ಎಂದರು ದುಃಖದಿಂದ. ಅಷ್ಟು ಕೇಳಿದ ಗುರೂಜಿಯವರಿಗೆ ಒಮ್ಮೆಲೇ ನಿರಾಶೆಯಾಯಿತು. ‘ಹೌದಾ,… ಏನಾಯ್ತು, ಯಾವುದಾದ್ರೂ ಕಾಯಿಲೆಯಾ…?’ ‘ಕಾಯಿಲೆಯೋ ಕಸಾಲೆಯೋ ದೇವರೇ ಬಲ್ಲ. ಅದೊಂದು ದೊಡ್ಡ ಕಥೆ. ಹೇಳುತ್ತೇನೆ ಕುಳಿತುಕೋ. ಬಾಯಾರಿಕೆ ತಗೊಳ್ಳುತ್ತೀಯಾ…?’ ‘ಸದ್ಯಕ್ಕೇನೂ ಬೇಡ. ಗುರುಗಳಿಗೇನಾಯ್ತು ಹೇಳಿ!’ ‘ಹೇಳುತ್ತೇನೆ…’ ಎಂದ ಅನಸೂಯಮ್ಮ ಗುರೂಜಿಯೆರೆದುರು ಕುಳಿತುಕೊಳ್ಳುತ್ತ ವಿಷಯ ಆರಂಭಿಸಿದರು. ‘ಕೆಲವು ವರ್ಷಗಳ ಹಿಂದೆ ಬಾಂದ್ರಾದ ಲೇಡಿಸ್ ಬಾರೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ನಡೆಯಿತಲ್ಲ ಗೊತ್ತುಂಟಾ ನಿನಗೆ?’ ‘ಹೌದಾ…? ಇಲ್ವಲ್ಲಾ. ಯಾರು ಮಾಡಿದ್ದು…?’ ‘ಯಾರೂಂತ ಗೊತ್ತಿಲ್ಲ. ಅದನ್ನು ಮಾಡಿಸಿದ್ದು ಮಾತ್ರ ಅದೇ ಹೊಟೇಲು ಮಾಲಿಕ ಎಂಬ ಸುದ್ದಿ ಹಬ್ಬಿತ್ತು. ಅದು ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿಯಿತು. ಅವರು ಅವನ ಮೇಲೆ ಕೇಸು ಹಾಕಿದರು. ಆದರೆ ಹೊಟೇಲು ಶೇಟಿನ ದುಡ್ಡಿನ ಬಲತ್ಕಾರದ ಮುಂದೆ ಅವರ ಕೇಸು ಪುಸ್ಕಾಯಿತು. ಅದರಿಂದ ಆ ಜನರು ಹತಾಶರಾದರು. ಆದರೂ ಹಠ ಬಿಡದೆ ಅವನನ್ನು ಯಾವುದಾದರೂ ರೀತಿಯಲ್ಲಿ ಸರ್ವನಾಶ ಮಾಡಲು ಹೊರಟವರು ಇಲ್ಲಿನ ಒಬ್ಬ ದೊಡ್ಡ ಮಂತ್ರವಾದಿಯನ್ನು ಹಿಡಿದು ಅವನಿಗೆ ಭಯಂಕರ ಮಾಟ ಮಾಡಿಸಿದರಂತೆ! ಅದು ಹೊಟೇಲು ಶೇಟಿಗೂ ಗೊತ್ತಾಯಿತು. ಅವನು ಕೂಡಲೇ ಇವರ ಹತ್ತಿರ ಓಡಿ ಬಂದು ದುಃಖವನ್ನು ತೋಡಿಕೊಂಡ. ಇವರಿಗೆ ಮೊದಲೇ ಆ ಮಂತ್ರವಾದಿಯ ಮೇಲೆ ಅಸಮಾಧಾನವಿತ್ತು. ಅದೇ ನೆಪದಿಂದ ಇವರು ಕೂಡಾ ಯಾವುದೋ ಭೀಕರ ತಾಂತ್ರಿಕವಿಧಿಯೊಂದನ್ನು ಆಚರಿಸಿ, ಆ ಹೆಣ್ಣು ಹೆತ್ತವರು ಹೊಟೇಲು ಮಾಲಿಕನ ಮೇಲೆ ಪ್ರಯೋಗಿಸಿದ್ದ ಕೃತ್ರಿಮವನ್ನು ಉಚ್ಛಾಟಿಸಿಬಿಟ್ಟರು! ಆದರೆ ಈ ವಿಷಯವೂ ಅದು ಹೇಗೋ ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿದುಬಿಟ್ಟಿತು. ಆದ್ದರಿಂದ ಆವತ್ತೊಮ್ಮೆ ಸೂರ್ಯ ಕಂತುವ ಹೊತ್ತಿನಲ್ಲಿ ಅವರು ಐದಾರು ಮಂದಿ ತಲೆಕೂದಲು ಕೆದರಿಸಿಕೊಂಡು ಮನೆಗೆ ಬಂದವರು ಅಂಗಳದಲ್ಲಿ ನಿಂತುಕೊಂಡು ನಮ್ಮನ್ನು ಹೊರಗೆ ಕರೆದು ಅಸಭ್ಯವಾಗಿ ಬೈಯ್ಯುತ್ತ ಬೊಬ್ಬೆಯಿಟ್ಟು ಅಳುತ್ತ, ‘ನಮ್ಮ ಮಕ್ಕಳ ಶೀಲವನ್ನೂ, ಅವರ ಬದುಕನ್ನೂ ಹಾಳು ಮಾಡಿದ ಆ ರಾಕ್ಷಸನೂ, ನೀನೂ ಸರ್ವನಾಶವಾಗಿ ಹೋಗುತ್ತಿರಾ ನೋಡುತ್ತಿರಿ!’ ಎಂದು ನೆಲಕ್ಕೆ ಕೈ ಅಪ್ಪಳಿಸಿ ಶಪಿಸುತ್ತ ಅಂಗಳವಿಡೀ ಹೊರಳಾಡಿ ಗಲಾಟೆಯೆಬ್ಬಿಸಿ ಹೊರಟು ಹೋದರು. ಆವತ್ತಿನಿಂದ ಇವರಿಗೇನಾಯಿತೋ? ಎಲ್ಲರೊಂದಿಗೂ ಮಾತುಕಥೆಯನ್ನು ನಿಲ್ಲಿಸಿಬಿಟ್ಟರು. ಇದಾದ ಮೇಲೆ ಸ್ವಲ್ಪ ಸಮಯದ ನಂತರ ದಿನವಿಡೀ ಮಲಗಿಕೊಂಡೇ ಇರತೊಡಗಿದರು. ಹಾಗೆ ಒಮ್ಮೆ ಮಲಗಿದವರು ಮುಂದೆ ಮಲಗಿಯೇಬಿಟ್ಟರು. ಸುಮಾರು ಬಗೆಯ ಔಷಧಿ ಉಪಚಾರಗಳನ್ನೆಲ್ಲ ಮಾಡಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ!’ ಎಂದು ಅನಸೂಯಮ್ಮ ನಿಟ್ಟುಸಿರುಬಿಟ್ಟರು. ಪೆದುಮಾಳರ ಕಥೆಯನ್ನು ಕೇಳಿದ ಗುರೂಜಿಯವರ ಮನಸ್ಸಿಗೇನೋ ಒಂಥರಾ ಹಿಂಸೆಯಾಯಿತು. ಅದರ ಬೆನ್ನಿಗೆ ಆವತ್ತು ಬುಕ್ಕಿಗುಡ್ಡೆಯ ದೇವರಕಾಡಿನಲ್ಲಿ ನಂದಿಮರದ ಕೊಂಬೆಯೊಂದು ತಲೆಯ ಮೇಲೆ ಮುರಿದು ಬೀಳಲಿದ್ದಾಗ ಕಾಣಿಸಿಕೊಂಡಂಥ ಹೆದರಿಕೆಯೂ ಮತ್ತದೇ ರೀತಿಯ ಎದೆ ತಿವಿದಂಥ ನೋವೂ ಮರಳಿ ಕಾಣಿಸಿಕೊಂಡಿದ್ದರೊಂದಿಗೆ ಮೈಕೈಯೆಲ್ಲ ತಣ್ಣಗೆ ಬೆವರಿ ಉಸಿರುಗಟ್ಟಿದಂತಾಯಿತು. ಆಗ ಮತ್ತಷ್ಟು ಭಯಪಟ್ಟರು. ಆದರೆ ಮರುಕ್ಷಣ, ‘ಅರೇರೇ, ನಾವೇನು ಇವರಂತೆ ಅಮಾಯಕರ ಮೇಲೆಲ್ಲ ಮಾಟಮಂತ್ರ ಪ್ರಯೋಗಿಸಿ ಮೇಲೆ ಬಂದವರಾ…? ಅಂಥದ್ದು ಒಂದೆರಡು ಘಟನೆಗಳು ನಮ್ಮಿಂದಲೂ ನಡೆದಿರಬಹುದಾದರೂ ಅದರ ಹತ್ತು ಪಟ್ಟು ದಾನಧರ್ಮಗಳನ್ನು ಮಾಡುತ್ತ ಬಂದಿದ್ದೇವೆ. ಮತ್ತ್ಯಾಕೆ ಹೆದರಬೇಕು!’ ಎಂದು ಧೈರ್ಯ ತಂದುಕೊಂಡರು. ಆಗ ಅವರ ಹೃದಯವು ಯಥಾಸ್ಥಿತಿಗೆ ಬಂತು. ‘ಅವರೀಗ ಎಲ್ಲಿದ್ದಾರೆ…?’ ಎಂದು ಅನಸೂಯಮ್ಮನನ್ನು ಕೇಳಿದರು. ‘ಒಳಗೆ ಮಲಗಿದ್ದಾರೆ ಮಾರಾಯಾ. ನೋಡುತ್ತೀಯಾ ಬಾ. ಆದರೆ ಅವರಿಗೆ ಪಕ್ಕನೆ ಯಾರ ಗುರುತೂ ಹತ್ತುವುದಿಲ್ಲ. ಹತ್ತಿದರೂ ಮಾತಾಡುವುದಿಲ್ಲ!’ ಎಂದು ಹತಾಶೆಯಿಂದ ಹೇಳಿದ ಅನಸೂಯಮ್ಮ ಎದ್ದು ಒಳಗೆ ನಡೆದರು. ‘ಮಾತನಾಡದಿದ್ದರೆ ತೊಂದರೆಯಿಲ್ಲ. ಅವರನ್ನು ನೋಡಲೇಬೇಕೆಂಬ ದೊಡ್ಡ ಆಸೆಯಿಂದ ಬಂದಿದ್ದೇವೆ!’ ಎನ್ನುತ್ತ ಗುರೂಜಿಯವರು ಅವರನ್ನು ಹಿಂಬಾಲಿಸಿದರು. ಅಲ್ಲಿ ಒಳಕೋಣೆಯಲ್ಲಿ ಹಳೆಯ ಮಂಚದ ಮೇಲೆ ಮಲಗಿದ್ದ ಪೆದುಮಾಳರು ಎಲುಬಿನ ಚಕ್ಕಳವಾಗಿದ್ದರು. ಅವರ ಅವಸ್ಥೆಯನ್ನು ಕಂಡ ಗುರೂಜಿಯವರಿಗೆ ತೀವ್ರ ನಿರಾಶೆಯಾಯಿತು. ಏಕೆಂದರೆ ಅವರ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ನೋಡಿ ಗುರುಗಳು ಹೊಟ್ಟೆ ಉರಿದುಕೊಂಡು ಕೊರಗಬೇಕು

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-3 ಬಾಲ್ಯ [1:03 pm, 24/11/2021] ಸಂಗಾತಿ ಸಾಹಿತ್ಯ ಪತ್ರಿಕೆ: ರಾಮಜಿ ಸಕ್ಪಾಲರು ಮಗನನ್ನು ಹೆಚ್ಚು ಹೆಚ್ಚು ಓದಿಸಬೇಕು, ಸಮಾಜಕ್ಕೆ ಬೆಳಕು ನೀಡುವಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಮಹಾದಾಶೆಯೊಂದಿಗೆ ಕಷ್ಟ ಪಟ್ಟು ಕಲಿಸಿದರು. “ಬೆಳೆವ ಸಿರಿ ಮೊಳಕೆಯಲ್ಲಿಯೇ ಕಾಣು”ವಂತೆ ಭೀಮನು ಶ್ರಮ ಪಟ್ಟು ಓದಿ 1907 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದನು. ನಿಮ್ನ ವರ್ಗದ ಹುಡುಗನೊಬ್ಬ ಮಾಡಿದ ಮೊದಲ ಮಹಾಸಾಧನೆ ಇದಾಗಿತ್ತು. ಅಸ್ಪೃಶ್ಯ ಬಾಲಕನು ಆ ಕಾಲದಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದ್ದು ದೊಡ್ಡ ಸುದ್ದಿಯಾಗಿದ್ದಲ್ಲದೆ. ಈ ಸಾಧನೆ ಭೀಮನಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ಎಸ್.ಕೆ.ಬೊಳೆಯವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ನಡೆಸಿ ಭೀಮನನ್ನು ಸನ್ಮಾನಿಸಿದರು. ತಂದೆಯ ಸ್ನೇಹಿತರಾದ ಕೃಷ್ಣಾಜಿ ಅರ್ಜುನ ಕೇಳುಸ್ಕರ್ ಅವರು ಸಮಾರಂಭದಲ್ಲಿ ಮಾತನಾಡುತ್ತಾ  ಭೀಮನನ್ನು ಗುಣಗಾಣ ಮಾಡಿದರು. ಚಾರ್ನಿ ರಸ್ತೆಯ ಉಧ್ಯಾನದಲ್ಲಿ ಭೀಮನನ್ನು ಆಗಾಗ ಭೇಟಿ ಮಾಡಿ ಓದಲು             ಪುಸ್ತಕ ತಂದುಕೊಟ್ಟಿದ್ದನ್ನು ಸ್ಮರಿಸಿದರು. ಅದೇ ಸಂದರ್ಭದಲ್ಲಿ ತಾವೇ ಬರೆದ “ಬುದ್ದನ ಜಿವನ ಚರಿತ್ರೆ” ಪುಸ್ತಕವನ್ನು ಪ್ರಶಸ್ತಿಯಾಗಿ ಭೀಮನಿಗೆ ಕೊಟ್ಟರು, ಭಗವಾನ ಬುದ್ದನ ಜೀವನ ಚರಿತ್ರೆ ಭೀಮನು ಭವ್ಯ ಭಾರತಕ್ಕೆ ಸಮಾನತೆಯ ಬೆಳಕಾಗುವ ಸೂರ್ಯನುದಯದ ಸಂಕೇತವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೆ ಭೀಮನು ಗಣ್ಯ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ರಾಮಜಿ ನೋಡುತ್ತಾ ಆನಂದಿತರಾದರು. ಮಗನ ಈ ಸಾಧನೆ ಕಂಡು ಕಣ್ಣಂಚಿನಲ್ಲಿ ಆನಂದ ಬಾಷ್ಪ ತುಂಬಿ ಬಂತು ಅವರು ಪಟ್ಟ ಶ್ರಮ ಸಾರ್ಥಕವಾಗಿತ್ತು.          ಬಾಲ್ಯ ವಿವಾಹ ಪದ್ದತಿ ಅಂದು ಪ್ರಚಲಿತದಲ್ಲಿತ್ತು. ಭೀಮನಿಗೆ ಹದಿನೇಳು ವರ್ಷ ತುಂಬಿದ್ದರಿಂದ ಮಗನ ಮದುವೆ ಮಾಡಲು ರಾಮಜಿ ನಿರ್ಧರಿಸಿದರು, ದಾಪೋಲಿಯಲ್ಲಿ ವಾಸವಿದ್ದ ಬಿಕುವಾಲಂಗಕರ್ ಮನೆಗೆ ಪರಿಚಿತರೊಬ್ಬರ ಮೂಲಕ ಹೋಗಿ, ಅವರ ಸಾಕು ಮಗಳಾದ ರಮಾಬಾಯಿಯನ್ನು ಭೀಮನಿಗೆ ತಂದು ಕೊಳ್ಳಲು ನೋಡಿಕೊಂಡು ಬರುತ್ತಾರೆ. ರಮಾಬಾಯಿ ಸರಳ ಸಜ್ಜನಿಕೆಯ ಒಂಬತ್ತು ವರ್ಷ ತುಂಬಿದ ಹೆಣ್ಣು ಮಗಳು ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೆ ಬೆಳೆದು ಬಂದವಳು. ತಂದೆ – ತಾಯಿ ಆಗಲೆ ತೀರಿ ಹೋಗಿದ್ದರು. ಅನಾಥ ಮಗಳನ್ನು ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳಲು ನಿಶ್ಚಯಿಸಲಾಗಿತ್ತು. ಅಸ್ಪೃಶ್ಯರಿಗೆ  ಮದುವೆ ಮಾಡಿಕೊಳ್ಳಲು ಸವರ್ಣಿಯರು ಅಂದು ಮದುವೆ ಮಂಟಪಗಳನ್ನು ಕೊಡುತ್ತಿರಲಿಲ್ಲ. ಬೈಕುಳ ಎಂಬ ಸ್ಥಳದಲ್ಲಿ ಸ್ಥಳ ಹಗಲಿನಲ್ಲಿಮೀನುಮಾರಾಟದ ಸಂತೆ ನಡೆಯುತ್ತಿತ್ತು. ರಾತ್ರಿ ವೇಳೆ ಬೇಕುಳದ ಶೆಡ್ ಒಂದರಲ್ಲಿ ಭೀಮರಾವ ಅಂಬೇಡ್ಕರ್ರ ಮದುವೆ ರಮಾಬಾಯಿಯೊಂದಿಗೆ ನೆರವೇರಿತು. ಮೀನಿನ ಕೊಳಚೆ ವಾಸನೆಯಲ್ಲಿಯೆ  ಗತ್ಯಂತರವಿಲ್ಲದೆ ಬೆಳಕು ಮೂಡುವುದರೊಳಗೆ ಆರತಕ್ಷತೆಯ ಕಾರ್ಯ ಮುಗಿಸಲಾಯಿತು.       ಮಕ್ಕಳ ಮದುವೆ ನಂತರ ಪರೇಳ ಡಾಬಕ ಚಾಳದಿಂದ  ಪರೇಳದ ನಗರಾಭೀವೃದ್ಧಿ ಮಂಡಳಿ ವಠಾರದ ಮಹಡಿಯೊಂದರಲ್ಲಿ ಎದುರುಬದರು ಇರುವ ಎರಡು ಕೋಣೆಗಳನ್ನು ಬಾಡಿಗೆ ಹಿಡಿದು ರಾಮಜಿ ಸ್ಥಳಾಂತರ ಗೊಂಡರು. ಇನ್ನು ಹೆಚ್ಚು ಹೆಚ್ಚು ಓದಬೇಕೆಂಬ ಅಂಬೇಡ್ಕರ್ರ ಮಹತ್ವಾಕಾಂಕ್ಷೆಗೆ ಮದುವೆ ಅಡ್ಡಿಯಾಗುವುದಿಲ್ಲ. ಎಲ್ಪಿನ್ ಸ್ಟನ್ ಕಾಲೇಜು ವಿಭಾಗದಲ್ಲಿ ಇಂಟರ್ ಮಿಡಿಯೇಟ್ ತರಗತಿಗೆ ಸೇರಿ ಅಂಬೇಡ್ಕರರು ಓದು ಮುಂದುವರೆಸಿದರು. ಭೀಮನ ವಿಧ್ಯಾಭ್ಯಾಸಕ್ಕೆ ರಾಮಜೀ ಬೆನ್ನೆಲುಬಾಗಿ ನಿಂತರು. ಅಣ್ಣಂದಿಯರಿಬ್ಬರೂ ಕಲಿಯುದನ್ನು ಬಿಟ್ಟು ಕೆಲಸಕ್ಕೆ ತೊಡಗಿ ತಮ್ಮನ  ವಿಧ್ಯಾಭ್ಯಾಸಕ್ಕೆ ಕುಟುಂಬ ನಿರ್ವಹಣೆಗೆ ಆಸರೆಯಾದರು. ಅಂಬೇಡ್ಕರ್ ರ ಆರೋಗ್ಯ ಹದಗೆಟ್ಟಿದ್ದರಿಂದ ಒಂದು ವರ್ಷ ಅವರ ಶಿಕ್ಷಣ ಕುಂಠಿತಗೊಂಡಿತು, ಆದರೂ ಊಟ ತಿಂಡಿ, ಅನಾರೋಗ್ಯ, ಬಡತನ ಯಾವುದನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ಪಟ್ಟು ಓದಿ ಇಂಟರ್ ಮಿಡಿಯೇಟ್ ಶಿಕ್ಷಣ ಪೂರ್ಣಗೊಳಿಸುತ್ತಾರೆ. ರಾಮಜಿ ಸಕ್ಪಾಲರಿಗೆ ವಯಸ್ಸಾಗುತ್ತಾ ಬಂದಿದ್ದರಿಂದ ದುಡಿಯುವ ಶಕ್ತಿ ಇಲ್ಲದಂತಾಗಿ ಆದಾಯವು ಕಡಿಮೆಯಾಗುತ್ತ ಆರ್ಥಿಕ ಮುಗ್ಗಟ್ಟು ಹೆಚ್ಚಿತು. ಭೀಮನ ಬುದ್ದಿ ಮತ್ತು ಅಪಾರ ಜ್ಞಾನದಾಹ, ಕಲಿಯುವ ಆಸಕ್ತಿ ಗಮನಿಸಿದ ರಾಮಜಿ ಸಕ್ಪಾಲರು ಹೇಗಾದರೂ ಮಾಡಿ ಭೀಮನಿಗೆ ಪದವಿ ಶಿಕ್ಷಣ ಕೊಡಿಸಬೇಕೆಂದು ತಿರ್ಮಾನಿಸಿ, ಗೆಳೆಯ ಕೇಳುಸ್ಕರವರನ್ನು ಭೇಟಿಮಾಡಿ ಮಗನ ವಿಧ್ಯಾಭ್ಯಾಸದ ಕುರಿತು ಚರ್ಚಿಸಿದರು. ರೋಗಿ ಬಯಸಿದ್ದು ಅದೇ ವೈದ್ಯ ಹೇಳಿದ್ದು ಅದೇ ಎಂಬಂತೆ ಬರೋಡಾದ ಮಹಾರಾಜರು ನಿಮ್ನ ವರ್ಗದ ವಿಧ್ಯಾರ್ಥಿಗಳಿಗೆ ಕಲಿಯಲು ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದರು, ಇದನ್ನು ಸದುಪಯೋಗ ಪಡಿಸಿಕೊಂಡು ಕೇಳುಸ್ಕರರು ಬರೋಡದ ಮಹಾರಾಜರು ಮುಂಬಯಿಗೆ ಬಂದಾಗ ಅವರನ್ನು ಸಂಪರ್ಕಿಸಿ ಅಂಬೇಡ್ಕರರನ್ನು ಕರೆದುಕೊಂಡು ಹೋಗಿ ಭೇಟಿಮಾಡಿಸಿದರು. ಸಂದರ್ಶನದಲ್ಲಿ ಬರೋಡಾ ಮಹಾರಾಜರು ಕೇಳಿದ  ಎಲ್ಲ ಪ್ರಶ್ನೆಗಳಿಗೆ ಅಂಬೇಡ್ಕರರು ಸಮರ್ಪಕವಾಗಿ ಉತ್ತರಿಸಿದ್ದರಿಂದ ಮಹಾರಜರು ಸಂತೃಪ್ತರಗೊಂಡು ಅಂಬೇಡ್ಕರ್ ಅವರಿಗೆ  ಮಾಸಿಕ 25 ರೂಪಾಯಿ ಶಿಷ್ಯವೇತನ ಮಂಜೂರು ಮಾಡಿದರು. ಅವರು ವಿಧ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡಿದ ಬರೋಡದ ಮಹಾರಾಜರು ಅಂಭೇಡ್ಕರ್ ರಿಗೆ ಎಂದೆಂದಿಗೂ ಆಪದ್ಬಾಂಧವರಾದರು.     ಭಾರತದ ಸ್ವಾತಂತ್ರ್ಯ ಚಳವಳಿ ತೀವೃಗೊಂಡಿತು, ಬ್ರಿಟೀಷರ ದಬ್ಬಾಳಿಕೆ ಹೆಚ್ಚುತ್ತಾ ಸಾಗಿತು, ಬ್ರಟೀಷ ಸರ್ಕಾರ ಟಿಳಕರನ್ನು ಮಾಂಡಲೆ ಸೆರೆಮನೆಯಲ್ಲಿ,ಸಾವರ್ಕರ ಸಹೋದರರನ್ನು ಅಂಡಮಾನ್ ಜೈಲಿನಲ್ಲಿ ಬಂಧನಕ್ಕೊಳಪಡಿಸಿದ್ದರು.  ಯುವ ಅಂಬೇಡ್ಕರರ ಮನಸ್ಸಿನ ಮೇಲೆ ಸ್ವಾತಂತ್ರ್ಯ ಚಳುವಳಿ ಮತ್ತು ಅಸ್ಪೃಶ್ಯತೆಯ ಕರಾಳ ಅವಮಾನಗಳು ಪರಿಣಾಮ ಬೀರಿದವು.ಅತ್ತ್ಯೂನ್ನತ ಶಿಕ್ಷಣ ಪಡೆದು, ಅಪಾರ ಜ್ಞಾನ ಸಂಪಾದಿಸಿದಾಗ ಮಾತ್ರ ಜನರು ತನ್ನ ಮಾತು ಕೇಳುತ್ತಾರೆ.  ಆಗ ಸಮಾಜ ಬದಲಾವಣೆ ಮಾಡಲು, ದೇಶದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬುದನ್ನು ಅರಿತುಕೊಂಡರು. ಅಂಬೇಡ್ಕರರು ಜೀವನದ ಹಂಗು ತೊರೆದು ಓದತೊಡಗಿದರು.  ಇಂಗ್ಲೀಷ್, ಪರ್ಷಿಯನ್ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಶ್ರಮ ಪಟ್ಟು 1912ರಲ್ಲಿ ಬಿ.ಎ. ಪದವಿ ಪಾಸು ಮಾಡಿದರು.  ಅಂಬೇಡ್ಕರರು ಓದುವ ವಿದ್ಯಾರ್ಥಿಗಳಿಗೆ ಆದರ್ಶರಾಗಿದ್ದಾರೆ.  ನಿಮ್ನ ವರ್ಗದ ವಿದ್ಯಾರ್ಥಿಯೊಬ್ಬ ಮೊದಲ ಬಾರಿಗೆ ಬಿ.ಎ. ಪದವಿ ಪಡೆದಿದ್ದು, ಅಸಾಮಾನ್ಯ ಸಾಧನೆಯಾಯಿತು.        ಶಿಷ್ಯವೇತನ ಪಡೆದ ವಿದ್ಯಾರ್ಥಿ ಬರೋಡಾ ಮಹಾರಾಜರಲ್ಲಿ ಕೆಲಸ ನಿರ್ವಹಿಸಬೇಕೆಂಬ ಒಪ್ಪಂದದಂತೆ ಬಿ.ಎ. ಪಧವೀಧರರಾಗಿದ್ದ ಅಂಬೇಡ್ಕರರು ಬರೋಡಾ ಸಂಸ್ಥಾನದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು.  ರಾಮಜೀ ಸಕ್ಪಾಲ್ ರಿಗೆ ನೌಕರಿಗೆ ಹೋಗುವುದು ಇಷ್ಟವಿರುವುದಿಲ್ಲ. ಭಿಮನು ಇನ್ನೂ ಹೆಚ್ಚಿಗೆ ಓದಬೇಕು ಎಂಬುದು ಅವರ ಬಯಕೆಯಾಗಿತ್ತು.  ಆದರೆ, ಅಂಬೇಡ್ಕರರು ಬರೋಡಾಗೆ ಹೋಗಲು ಸಿದ್ದರಾದರು . ವಯೋವೃದ್ಧ ರಾಮಜೀ ಸಕ್ಪಾಲರಿಗೆ ಮಗ ತಮ್ಮನ್ನು ಬಿಟ್ಟು ನೌಕರಿಗೆ ದೂರ ಹೋಗುತ್ತಿದ್ದಾನೆಂದು ದು:ಖಿತರಾದರು. ಇತ್ತ ಅಂಬೇಡ್ಕರರಿಗೂ ಮೊದಲಬಾರಿಗೆ ವಯಸ್ಸಾದ ತಂದೆಯನ್ನು, ಮಡದಿಯನ್ನು, ಬಂದು-ಬಳಗವನ್ನು ಅಗಲಿ ದೂರದ ಊರಿಗೆ ಹೋಗುತ್ತಿರುವುದು ದು:ಖ ತುಂಬಿ ಕಣ್ಣಲ್ಲಿ ನೀರು ತಂದುಕೊಂಡು ಹೊರಟರು. ರಾಮಜೀ ಸಕ್ಪಾಲರು ಹೃದಯಭಾರದಿಂದ ಅಂತಿಮವಾಗಿ ಏನೋ ಅನ್ನುವಂತೆ ಕೈ ಎತ್ತಿ ಮಗನನ್ನು ಬಿಳ್ಕೋಟ್ಟರು.     ಅಂಬೇಡ್ಕರರ ಮೇಲಿನ ಅಪಾರ ಪ್ರೀತಿ ಮಗನನ್ನು ಬರೋಡಕ್ಕೆ ಕಳುಹಿಸಿ ಕೊಟ್ಟನಂತರ ರಾಮಜೀ ಸಕ್ಪಾಲ್ ರಿಗೆ ಹೆಚ್ಚಿನ ಚಿಂತೆಗೀಡುಮಾಡಿತು. ಅದೇ ಚಿಂತೆಯಲ್ಲಿ ಅವರು ಹಾಸಿಗೆ ಹಿಡಿದರು ಅತ್ತ ಬರೋಡಾಕ್ಕೆ ಹೋದ  ಅಂಬೇಡ್ಕರರು ಪದೆಪದೆ ತಂದೆಯ ನೆನಪನ್ನು ತಂದುಕೊಂಡು ಅವರ ತಂದೆಯ ಆರೋಗ್ಯದ ಬಗ್ಗೆ ಚಿಂತಿಸತೊಡಗಿದರು. ಅಂಬೇಡ್ಕರರು ಬರೋಡಕ್ಕೆ ಬಂದು ಹದಿನೈದು ದಿನಗಳು ಉರುಳಿದ್ದವು, ಆಗಲೇ ತಂದೆಯ ಆರೋಗ್ಯ ಹದಗೆಟ್ಟಿದೆ ಕೂಡಲೇ ಅಲ್ಲಿಂದ ಹೊರಟು ಬರಬೇಕೆಂದು ತಂತಿ ಸಂದೇಶ ಬಂದಿತು. ಇದರಿಂದ ವ್ಯಾಕುಲಗೊಂಡ ಅಂಬೇಡ್ಕರರು ತಂದೆಯನ್ನು ಕಾಣುವ ಕಾತುರದಿಂದ ಆತುರಾತುರವಾಗಿ ಬಂದು ರೈಲು ಹತ್ತಿ ಕುಳಿತರು. ಅನಾರೋಗ್ಯದಿಂದ ಹಾಸಿಗೆ ಹಿಡಿದ ತಂದೆಯನ್ನು ಕಾಣಲು ಹೊರಟಿದ್ದ ಅಂಬೇಡ್ಕರರು ದಾರಿಮಧ್ಯ ಸೂರತ್ ರೈಲು ನಿಲ್ದಾಣದಲ್ಲಿ ಹಣ್ಣು ಹಂಪಲು ಕೊಂಡುಕೊಳ್ಳಲು ರೈಲಿನಿಂದ ಕೆಳಗಿಳಿದು ಹಣ್ಣು ಹಂಪಲು ಮಾರುವ ಅಂಗಡಿಯೊಂದರ ಬಳಿ ಬರುತ್ತಾರೆ. ಇನ್ನೇನು ಅಂಗಡಿಯವನು ಹಣ್ಣು ಹಂಪಲು ಕಟ್ಟಿಕೊಡುವುದರೊಳಗೆ ರೈಲು ಹೊರಟುಬಿಟ್ಟಿತು. ಸ್ವಲ್ಪದರಲ್ಲಿಯೆ ರೈಲು ತಪ್ಪಿಸಿಕೊಂಡು ನಂತರದ ರೈಲು ಹಿಡಿದು ಮುಂಬಯಿಗೆ ಮರುದಿನ ಬೆಳಿಗ್ಗೆ ಮನೆಗೆ ಬಂದು ತಲುಪಿದರು.       ಮಗ ಮನೆಗೆ ಬಂದ ಸುದ್ದಿ ಕೇಳಿ ಮಲಗಿದ್ದ ಹಾಸಿಗೆಯಿಂದಲೆ ಕಣ್ಣರಳಿಸಿ ಭೀಮನತ್ತ ರಾಮಜೀ ಸಕ್ಪಾಲರು ನೋಡಿದರು. ಹಾಸಿಗೆಯಿಂದ ಮೇಲೆಳಲು ಪ್ರಯತ್ನಿಸಿದರು ಆದರೆ ತೀರ ನಿತ್ರಾಣಗೊಂಡಿದ್ದರು ಮೇಲೆ ಎದ್ದು ಕೂಡ್ರಲು ಆಗಲಿಲ್ಲ.ಅವರ ಹಾಸಿಗೆ ಪಕ್ಕದಲ್ಲಿಯೆ ಬಂದು ಕುಳಿತ ಭೀಮನನ್ನು ಕಣ್ ತುಂಬಾ ನೋಡಿ ಏನೋ ಹೇಳಬೇಕು,ಏನೋ ಮಾತಾಡಬೇಕು ಅಂತಾ ಪ್ರಯತ್ನಿಸಿದರು, ಆದರೆ ಮಾತನಾಡಲು ಅವರಿಗೆ ಆಗಲಿಲ್ಲ. ಆರೋಗ್ಯ ತೀರ ಹದಗೆಟ್ಟಿತು ಬಹಳ ಪ್ರಯತ್ನಮಾಡಿ ಕೈ ಮೇಲೆತ್ತಿ ಅಂಬೇಡ್ಕರರನ್ನು ನೋಡುತ್ತಾ, ತಲೆ ಸವರುತ್ತಾ, ಬೆಣ್ಣು ಸವರುತ್ತಾ ಜಗಕ್ಕೆ ಬೆಳಕಾಗು ಎಂಬಂತೆ ಆಶೀರ್ವಾದ ಮಾಡಿದರು.ಸ್ವಲ್ಪ ಸಮಯದಲ್ಲಿಯೆ ಅವರ ಪ್ರಾಣಪಕ್ಷಿ ಹಾರಿಹೊಯಿತು. ರಾಮಜೀ ಸಕ್ಪಾಲರು 1913 ರ ಪೇಬ್ರುವರಿ 2 ರಂದು ಕೊನೆಯುಸಿರು ಎಳೆದರು. ತಂದೆಯ ಸಾವು ಅಂಬೇಡ್ಕರರಿಗೆ ಆಘಾತವನ್ನುಂಟುಮಾಡಿತು. ಬಿಕ್ಕಿ ಬಿಕ್ಕಿ ಅತ್ತರು. ತಂದೆಯ ಸಾವು ಅವರಿಗೆ ಆಕಾಶವೆ ಕಳಚಿ ಬಿದ್ದಂತೆಯಾಯಿತು.ಜೀವನ ಪೂರ್ತಿ ಬೆನ್ನೆಲುಬಾಗಿ ನಿಂತ ಏಕೈಕ ಜೀವ ಎಂದರೆ ರಾಮಜೀ ಸಕ್ಪಾಲರಾಗಿದ್ದರು. ತಂದೆಯ ಆಸರೆ ಮಾರ್ಗದರ್ಶನ ಇನ್ನಿಲ್ಲವಾಯಿತು. ಸೂರ್ಯಚಂದ್ರರಿರುವರೆಗೂ ಹೆಸರನ್ನುಳಿಸುವ ಮಹಾಪುರುಷ ಮಗನೊಬ್ಬನನ್ನು ಈ ಪ್ರಪಂಚಕ್ಕೆ ಕೊಟ್ಟ ರಾಮಜೀ ಸಕ್ಪಾಲರ ಹೆಸರು ಅಜರಾಮರವಾಯಿತು.                                                  (ಮುಂದುವರೆಯುವುದು)              ……….           —————————          ಸೋಮಲಿಂಗ ಗೆಣ್ಣೂರ               

Read Post »

You cannot copy content of this page

Scroll to Top