ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ
ಲೇಖನ ಸಂಗಾತಿ
ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:
ಖಾದಿಯೇತರ ಬಟ್ಟೆಗೂ ಅಸ್ತು ವಿವಾದ
ಡಾ. ಎಸ್.ಬಿ. ಬಸೆಟ್ಟಿ
ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ Read Post »
ಲೇಖನ ಸಂಗಾತಿ
ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:
ಖಾದಿಯೇತರ ಬಟ್ಟೆಗೂ ಅಸ್ತು ವಿವಾದ
ಡಾ. ಎಸ್.ಬಿ. ಬಸೆಟ್ಟಿ
ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ Read Post »
ವಿಡಂಬನೆ
ದೇವರ ಪೂಜೆಯೆಂಬ ನಂಬಿಕೆ ಪ್ರಶ್ನೆ
ಲಕ್ಷ್ಮಿ ದೇವಿ ಪತ್ತಾರ
ದೇವರ ಪೂಜೆಯೆಂಬ ನಂಬಿಕೆ ಪ್ರಶ್ನೆ Read Post »
ವಿಶೇಷ ಲೇಖನ ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ ಸಂಗೀತ ಒಂದು ಅಧ್ಬುತ ಶಕ್ತಿ ನಮ್ಮ ಪುರಾತನ ಋಷಿ ಮುನಿಗಳು ಸಂಗೀತವನ್ನು “ಗಂಧರ್ವ ವಿದ್ಯೆ” ಎಂದೂ “ಸಂಗೀತ ಕಲೆ” ಎಂದೂ ಗುರುತಿಸಿದ್ದಾರೆ. ಸಂಗೀತದ ಮೂಲಕ ಅವರು ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ಅರ್ಥವನ್ನು ಅರಿತು ಕೊಂಡಿದ್ದರು. ಸಂಗೀತದಲ್ಲಿಯ ಅಲೌಕಿಕ ಶಕ್ತಿಯನ್ನು ಗುರುತಿಸಿ, ತನ್ಮೂಲಕ ಶಿವ ಸಾಕ್ಷಾತ್ಕಾರವನ್ನು ಸಾಧಿಸಿದ್ದರು. ಈ ದೃಷ್ಟಿಯಲ್ಲಿ ಅವರಿಗೆ ಸಂಗೀತವು ನಾದಾಂತವೂ ಆಗಿತ್ತು. ವೇದಾಂತವೂ ಆಗಿತ್ತು. ಸಂಗೀತದಲ್ಲಿ ಅಧ್ಯಾತ್ಮಿಕ ರಸಾಭಿವ್ಯಕ್ತಿ ಮತ್ತು ರಸಾನುಭಾವಗಳೇ ಮೂಲವಾದ ಅಂಶಗಳಾಗಿದ್ದವು. ಅಲ್ಲದೆ ನಮ್ಮ ಪುರಾತನ ರಸಋಷಿಗಳಿಗೆ “ರಸ ಗ್ರಹಣಕ್ಕೆ ವ್ಯತಿರಿಕ್ತವಾಗಿ ಅಧ್ಯಾತ್ಮ ಅಥವಾ ದೈವೀ ಸಾಕ್ಷಾತ್ಕಾರವೇ ಸಂಗೀತದ ಚರವೋದ್ದೇಶವಾಗಿತ್ತು” ಎಂಬ ಮಾತು ಭಾರತೀಯ ಸಂಗೀತದ ಇತಿಹಾಸವನ್ನು ಅವಲೋಕಿಸಿದಾಗ ತಿಳಿದು ಬರುತ್ತದೆ. ಸಂಗೀತ ಕಲೆ, ಸ್ವರ, ಭಾವ, ಲಯ ಹಾಗೂ ಶೃತಿಗಳಿಂದ ಕೂಡಿದ ಧ್ವನಿ ಸಮನ್ವಯವಾಗಿದೆ. ಧ್ವನಿಯು ಮಾನವನ ದೈಹಿಕ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಂಡು ಹೋಗುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಸೂಕ್ಷ್ಮತೆಯಿಂದ ನೋಡಿದಾಗ ಎಲ್ಲ ವಿದ್ಯೆ ಮತ್ತು ಕಲೆಗಳು ಈ ಜೀವ ಜಗತ್ತು ಮತ್ತು ದೇವರ ರಹಸ್ಯವನ್ನು ತಿಳಿದುಕೊಳ್ಳುವುದರಲ್ಲಿ ಪರ್ಯಾವಸಾನಗೊಳ್ಳುತ್ತವೆಂಬುದು ಅರಿವಿಗೆ ಬರುತ್ತದೆ. ವಿಜ್ಞಾನವು ವ್ಯಾಖ್ಯೆ ಅಥವಾ ಸೂತ್ರವನ್ನು ಸಮರ್ಥಿಸುತ್ತದೆ. ಸಂಗೀತವು ಕಲಾವಿದನ ರಚನಾತ್ಮಕ ಬುದ್ಧಿಯ ಒಂದು ಭಾಗವಾಗಿಯೂ ರಸಭಾವಾಭಿವ್ಯಕ್ತಿಯ ಒಂದು ಸಚೇತನ ಶಕ್ತಿಯಾಗಿದೆ. ಕಲೆಯು ಭಾವನಾ ಪ್ರಧಾನವಾಗಿರುತ್ತದೆ. ಮೊದಲನೆಯದಾಗಿ ಅದು ವಿಜ್ಞಾನಕ್ಕೆ ವ್ಯತಿರಿಕ್ತವಾಗಿ , ವ್ಯಕ್ತಿನಿಷ್ಠೆವಾಗಿ, ವ್ಯಕ್ತಿಯ ಅಥವಾ ಕಲಾವಿದನ ಸ್ವತಂತ್ರವಾದ ವ್ಯಕ್ತಿತ್ವದ ವಿಕಾಸವರ್ದನೆಗೆ ಅವಕಾಶವನ್ನು ಕಲ್ಪಿಸಿಕೊಡುವುದು, ಸಂಗೀತವು ಒಂದು ವಿಜ್ಞಾನವೇ ಆಗಿದೆ. ಆದರೆ, ಅದರ ಸಿದ್ದಿಗಾಗಿ, ವರ್ಷಗಳ ತಪಸ್ಸು ಅವಶ್ಯವಾಗಿದೆ. ಇಲ್ಲಿ ಕೆಲವು ಸಮಯದಿಂದ ವಿಜ್ಞಾನಿಗಳ ಧ್ಯಾನ ಸಂಗೀತದ ಕಡೆಗೆ ವಾಲುತ್ತಿದೆ. ಆದರೆ, ಸಂಗೀತದ ಕ್ರಿಯಾತ್ಮಕ ಜ್ಞಾನದ ಅಭಾವದಿಂದಾಗಿ ವಿಜ್ಞಾನಿಗಳ ಸಂಗೀತದ ಕಡೆಗೆ ಗಮನ ಕೊಡಲಾಗುತ್ತಿಲ್ಲ. ನಾದದ ವಿಲಕ್ಷಣ ಶಕ್ತಿ ಇನ್ನೂ ಅಪ್ರಕಟಿತವಾಗಿದೆ. ಯಾವಾಗ ಅದು ಪ್ರಕಟವಾಗುವುದೋ ಆಗ ಪ್ರತಿಯೊಬ್ಬರು ಸಂಗೀತವನ್ನು ವಿಜ್ಞಾನವೆಂದು ಸ್ವೀಕಾರಮಾಡುವರು. ಅಣು ಹಾಗು ಪರಮಾಣುವಿನ ಅಸ್ಥಿತ್ವ ಸಂಗೀತದ ಮುಂದೆ ನಗಣ್ಯವಾಗುವುದು. ನಮ್ಮ ಪುರಾತನ ಆಚಾರ್ಯ ಹಾಗೂ ಮಹಿರ್ಷಿಗಳು ಹೈಡ್ರೋಜನ ಬಾಂಬ ತಯಾರಿಸಿಲ್ಲ, ಆದರೆ ಧ್ವನಿ ವಿಜ್ಞಾನದ ಮೇಲೆ ವಿಚಾರ ಮಾಡಿದ್ದಾರೋ ಅದು ಈಗಲೂ ಮಹತ್ವವನ್ನು ಹೊಂದಿದೆ. ನಾದವೇ ಒಂದು ಶಕ್ತಿ ಎನ್ನುವ ವಿಚಾರ ಮಾಡುವ ಅನೇಕ ಗ್ರಂಥಗಳು ಈಗಲೂ ಉಪಲಬ್ದ ಇವೆ. ಇಂಗ್ಲೆಡಿನ ಒಬ್ಬ ಮಹಿಳೆ ಏಲಿಯೆಸ್ ಸಂಗೀತದಿಂದ ದೂರದರ್ಶನದ ಗ್ಲಾಸ್ನ್ನು ಪುಡಿ ಮಾಡಿದ ಆಶ್ಚರ್ಯಕರವಾದ ಪ್ರದರ್ಶನವನ್ನು ನೀಡಿದ್ದರು. ಸ್ಟುಡಿಯೋದಲ್ಲಿ ನಾಲ್ಕು ಗಾಜಿನ ಗ್ಲಾಸಗಳನ್ನು ಇಡಲಾಗಿತ್ತು. ಅವುಗಳನ್ನು ಪುಡಿ ಪುಡಿ ಮಾಡಬೇಕಿತ್ತು. ಏಲಿಯಸ್ ಗಾಯನ ಪ್ರಾರಂಭ ಮಾಡಿದರು, ಸಾವಿರಾರು ಜನ ತಮ್ಮ ತಮ್ಮ ಮನೆಯಲ್ಲಿ ಕುಳಿತು ಈ ದೃಷ್ಯವನ್ನು ನೋಡುತ್ತಿದ್ದರು. ಆದರೆ ಏಲಿಯಸ್ ಸ್ಟುಡಿಯೋದಲ್ಲಿ ಇಡಲಾದ ಗ್ಲಾಸಗಳನ್ನು ಪುಡಿ ಪುಡಿ ಮಾಡಲಾಗಲಿಲ್ಲ. ನಂತರ ಒಬ್ಬ ಮಹಿಳೆ ದೂರದರ್ಶನಕ್ಕೆ ಪತ್ರ ಬರೆದು ಏಲಿಯಾಸ್ ಅವರ ಎತ್ತರದ ಸ್ವರಗಳಿಂದ ನಮ್ಮ ಮನೆಯ ನಾಲ್ಕು ಗ್ಲಾಸಗಳನ್ನು ಪುಡಿ ಮಾಡಿದ್ದಾರೆ ಎಂದು , ಇದಲ್ಲದೆ ಇನ್ನೂ ಅನೇಕ ಮನೆಯಲ್ಲಿ ಇದೇ ರೀತಿ ಏಲಿಯಾಸ್ ಗಾಯನದಿಂದಾಗಿ ಗ್ಲಾಸಗಳು ಒಡೆದು ಪುಡಿಯಾಗಿತ್ತು. ಸಂಗೀತಕ್ಕಿರುವ ಶಕ್ತಿಯೇ ಅಂತದ್ದು. ಅವರು ಮಾಡಿದ ಪ್ರಯೋಗ ಸ್ಟುಡಿಯೋದಲ್ಲಿ ಫಲಿಸಲಿಲ್ಲ. ಸ್ಟುಡಿಯೋದ ಕೋಣೆ ವಿಶೇಷ ಪ್ರಕಾರದಿಂದ ಮಾಡಲಾಗಿತ್ತು. ಆದ್ದರಿಂದ ಧ್ವನಿಯ ಪ್ರಭಾವ ಪೂರ್ಣರೂಪದಿಂದ ಗ್ಲಾಸ ಮೇಲೆ ಆಗಲಿಲ್ಲ. ಆದರೆ ಮನೆಯಲ್ಲಿ ಕುಳಿತು ಕೇಳುತ್ತಿದ್ದವರ ಮನೆಯ ಗ್ಲಾಸಗಳ ಮೇಲೆ ಪ್ರಭಾವ ಬೀರಿರುವುದು ಆಶ್ಚರ್ಯ ಹಾಗೂ ಸಂತೋಷದ ಸಂಗತಿ. ಭಾರತೀಯ ಸಂಗೀತ ಸಾಹಿತ್ಯದಲ್ಲಿ ತಾನಸೇನ ಅವರಿಗೆ ಸಂಬಂಧಿಸಿದಂತೆ ಅನೇಕ ಚಮತ್ಕಾರಿಕ ಘಟನೆಗಳು ಇವೆ. ಅದರಲ್ಲಿ ದೀಪಕರಾಗವನ್ನು ಹಾಡಿ ದೀಪ ಬೆಳಗಿಸಿದ್ದಾಗಿರಬಹುದು, ಮೇಘರಾಗದಿಂದ ಮಳೆಯನ್ನು ತರಿಸಿದ್ದು, ಕೊಳಲನಾದದಿಂದ ಪಶು, ಪಕ್ಷಿಗಳು ತಲೆದೂಗಿದ್ದು, ಸಂಗೀತದಿಂದ ಸಮುದ್ರದ ಅಬ್ಬರದ ಅಲೆಗಳನ್ನು ಸಹ ಶಾಂತಗೊಳಿಸುವ ಶಕ್ತಿಯಿದೆ. ಅಲ್ಲದೆ ವಾಯುವಿನ ವೇಗವನ್ನು ಕಡಿಮೆಗೊಳಿಸುವ ಶಕ್ತಿ ಸಂಗಿತಕ್ಕಿದೆ. ಹೇಗೆ ಸಂಗೀತ ಭೌತಿಕ ತತ್ವಗಳನ್ನು ಸಮನ್ವಯಗೊಳಿಸುತ್ತೋ ಹಾಗೆ ಆಧ್ಯಾತ್ಮಿಕ ತತ್ವಗಳನ್ನು ಸಮನ್ವಯಗೊಳಿಸುತ್ತದೆ. ಸ್ಥೂಲ ಹಾಗೂ ಸೂಕ್ಷ್ಮ ಎರಡೂ ಸೃಷ್ಠಿ, ಸಂಗೀತದ ಶಕ್ತಿಯ ಆಧಿನದಲ್ಲಿದೆ. ಈ ಸತ್ಯವನ್ನು ಸ್ಟೀವೆನ್ಸನ್ ಅವರು ಸಹ ಸ್ವೀಕಾರ ಮಾಡಿದ್ದಾರೆ. ಅವರು ತಮ್ಮ “ಪೈಸ ಪಾಯಿಪ್ಪ” ಎನ್ನುವ ಲೇಖನದಲ್ಲಿ ಪ್ರಕೃತಿ ದೇವನ ಕಲ್ಪನೆಯನ್ನು ಮಾಡಿದ್ದಾರೆ. ದಕ್ಷಿಣದ “ಅನ್ನಮಲಾಯಿ” ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಕೆಲವು ವಿದ್ಯಾರ್ಥಿಗಳು ಸಂಗೀತ ಮೂಲಕ ಸಸ್ಯಗಳ ಮೇಲೆ ಅದ್ಭುತವಾದ ಸಂಶೋಧನೆಯನ್ನು ಮಾಡಿದ್ದಾರೆ. ಒಂದೆ ತರಹದ ಎರಡು ಗಿಡಗಳನ್ನು ತೆಗೆದುಕೊಂಡು, ಒಂದು ಗಿಡಕ್ಕೆ ಪ್ರತಿ ದಿನವು ಸಂಗೀತದ ಸ್ವರಗಳ ಮೂಲಕ ಗಿಡಗಳನ್ನು ಸಂರಕ್ಷಿಸಿದರು ಹಾಗೂ ಇನ್ನೊಂದು ಗಿಡಕ್ಕೆ ಪ್ರಕೃತಿದತ್ತವಾಗಿ ಬೆಳೆಯಲು ಬಿಟ್ಟರು. ಈ ಪ್ರಯೋಗವನ್ನು ಮಾಡಿದಾಗ ಸಂಗೀತದ ಸ್ವರಗಳನ್ನು ಆಲಿಸಿದಂತ ಗಿಡವು ೧೦ ಪಟ್ಟು ಚೆನ್ನಾಗಿ ಬೆಳೆದಿರುವುದು ಕಂಡು ಬಂದಿತು. ಇಂದಿನ ದಿನಗಳಲ್ಲಿ ಕೆಲವರು ಪಶು-ಪಕ್ಷಿ ಹಾಗೂ ಹುಳು-ಹುಪ್ಪಟ್ಟಿಗಳ ಧ್ವನಿಯನ್ನು ಧ್ವನಿ ಮುದ್ರಿಸುತ್ತಿದ್ದಾರೆ. ಇದರಿಂದ ಅವರಿಗೆ ಸಂಗೀತ ಪ್ರಭಾವದ ಅನುಸಂಧಾನದಲ್ಲಿ ಸಹಾಯತೆ ಸಿಗುತ್ತದೆ. ಚೀನಾದ ಚಾಂಗಪೊ ಅವರು ಹುಳುಗಳ ಅನೇಕ ಧ್ವನಿ ಮುದ್ರಣ ಮಾಡಿದ್ದಾರೆ. ಅನೇಕ ಹುಳುಗಳು ಸಂಗೀತವನ್ನು ಬಹಳ ಪ್ರೇಮಿಸುತ್ತವೆ. ಹೀಗಾಗಿ ಸೊಳ್ಳೆಗಳು ಮಧುರವಾದ ಸಂಗೀತವನ್ನು ಕೇಳಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತವೆಯಂತೆ. ರಾಗ ಪದ್ಧತಿಯನ್ನು ಕುರಿತು ೯ ನೇ ಶತಮಾನದಲ್ಲಿ ಮತಂಗ ಮುನಿಯು ಹೀಗೆ ಹೇಳಿದ್ದಾರೆ ‘ರಾಗವು ಸುಮಧುರವಾದ ಧ್ವನಿಯ ಸಂಯೋಜನೆಯಾಗಿದ್ದು, ಮಾನವನ ಹೃದಯವನ್ನು ಪ್ರಪುಲ್ಲಿತವಾಗಿ ಮಾಡುವ ಶಕ್ತಿ ಹೊಂದಿದೆ. ಯಾವುದಾದರೂ ಒಂದು ರಾಗವನ್ನು ಪದೇ ಪದೇ ಶ್ರವಣ ಮಾಡುವುದರಿಂದ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಯಾಗಿ ರೋಗ ಪೀಡಿತ ನರಗಳಿಗೆ ಹಾಗೂ ಸ್ನಾಯುಗಳಿಗೆ ವಿಶೇಷ ಸಂವೇದನೆಯನ್ನು ನೀಡಿ ಅವುಗಳಲ್ಲಿ ಹೆಚ್ಚಿನ ರಕ್ತ ಪರಿಚಲನೆಯನ್ನು ಹಾಗೂ ಶಕ್ತಿಯನ್ನು ಉಂಟು ಮಾಡುತ್ತದೆ. ಹೀಗಾಗಿ, ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವ ಅದ್ಭುತವಾದ ಶಕ್ತಿಯಿದೆ’. ಪಾಶ್ವಿಮಾತ್ಯರಿಗೆ ಅನಾದಿ ಕಾಲದಿಂದಲೂ ಆರೋಗ್ಯ ಮತ್ತು ಸಂಗೀತದ ಮಧ್ಯೆ ಇರುವ ಸಂಬಂಧ ಎಂತದ್ದು ಎನ್ನುವ ತಿಳುವಳಿಕೆ ಇತ್ತು. ಉದಾಹರಣೆಗೆ : ಗ್ರೀಕರ ‘ಅಪೊಲೋ” ,ಸಂಗೀತ ಮತ್ತು ಕಲೆಗೆ ಮಾತ್ರವಲ್ಲ ಗುಣಪಡಿಸುವ ಕ್ರಿಯೆಗೆ ಆಧಿದೇವನಾಗಿರುವುದು. ಸಂಗೀತದಿಂದ ಅನೇಕ ರೋಗಗಳು ಗುಣವಾಗುತ್ತಾ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಪ್ರತಿಯೊಬ್ಬ ವೈದ್ಯರು ಸಂಗೀತ ಪ್ರೀಯರು ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಗೀತವನ್ನು ಕೇಳಿಸುತ್ತಾರೆ. ಪ್ರತಿಯೊಂದು ರಾಗಕ್ಕೂ ಒಂದೊಂದು ರೋಗ ಗುಣಪಡಿಸುವ ಶಕ್ತಿ ಇದೆ. ಸಾವೇರಿ ರಾಗವನ್ನು ಅರ್ಥೆಟಿಸ್ನಿಂದ ಬಳಲುವವರಿಗೆ ಕೇಳಿಸಿದ್ದಾದರೆ, ಹೆಚ್ಚಿನ ಪರಿಣಾಮ ಕಂಡು ಬರುತ್ತದೆ. ಮಧ್ಯಮಾವಲತಿಯು ಉತ್ತೇಜಿತ ಮನಸ್ಸನ್ನು ಶಾಂತಗೊಳಿಸುತ್ತದೆ. ಕಫ ದೋಷಕ್ಕೆ ಸಂಬಂಧಿಸಿದ ಖಾಯಿಲೆಗಳಾಗಿರುವ ಅಸ್ತಮಾ, ಕೆಮ್ಮು, ಶೀತ, ಕ್ಷಯರೋಗ ಮುಂತಾದ ಸಮಸ್ಯೆಗಳಿಗೆ ಭೈರವಿ ರಾಗವು ಅತ್ಯಂತ ಉಪಯುಕ್ತವಾಗಿದೆ. ಮಲ್ಹಾರ ರಾಗದಿಂದ ಸಿಟ್ಟು ಮತ್ತು ಒತ್ತಡಗಳು ದೂರಾದರೆ ಜೈಜೈವಂತಿ ಹಾಗೂ ಸೌರವ ರಾಗದಿಂದ ಮಾನಸಿಕ ರೋಗವನ್ನು ಕಡಿಮೆ ಮಾಡುತ್ತವೆ. ಶ್ರೀರಾಗದಿಂದ ಎಸಿಡಿಟಿ ಶಮನವಾಗುತ್ತದೆ. ಹಿಂಡೋಳ ರಾಗವನ್ನು ಆಲಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಈ ರಾಗವು ಯಕೃತ ಸಂಬಂಧಿ ಕಾಯಿಲೆಗಳಿಗೆ ಮದ್ದಾಗುತ್ತದೆ. ಪಾಶ್ಚಿಮಾತ್ಯರದೇ ಆದ ಪೈಥಾಗೋರಸ್ ತತ್ವ ಶಾಸ್ತ್ರ ದರ್ಶನವು ಭಾರತೀಯ ಅನಾಹತನಾದ ಪರಿ ಕಲ್ಪನೆಯನ್ನು ಬಹು ಪಾಲು ಹೋಲುತ್ತದೆ. ಅರಿಸ್ಟಾಟಲ್ ಮತ್ತು ಪ್ಲೆಟೊನ ಬರಹಗಳಲ್ಲಿಯೂ ಸಂಗೀತ ಹಾಗೂ ಆರೋಗ್ಯದ ಸಂಬಂಧವನ್ನು ಚರ್ಚಿಸಲಾಗಿದೆ. ಇದಲ್ಲದೆ ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಖ್ಯಾತಿಯನ್ನು ಪಡೆದಿದೆ. ಭಾರತೀಯ ಸಂಗೀತದಲ್ಲಿ ತತ್ವಶಾಸ್ತ್ರ ಮನೋಶಾಸ್ತ್ರ ಸೌಂದರ್ಯ ಶಾಸ್ತ್ರ ಎಲ್ಲವೂ ಸಮ್ಮಿಳಿತವಾಗಿದೆ. ಭಾರತೀಯ ಸಂಗೀತದ ರಾಗಗಳು ಸಾಮಗಾನ ರೂಪದಲ್ಲಿದ್ದವು ಮೇಲೆ ಹೇಳಿದ್ದಂತೆ ಭಾರತದಲ್ಲಿ “ರಾಗ ಚಿಕಿತ್ಸೆ” ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಚೆನೈನ ‘ನಾವ್ ಸೆಂಟ್’ ನಲ್ಲಿ ನಾದರೋಗವನ್ನು ಶಾಸ್ತಿಯವಾಗಿ, ಅಭ್ಯಶಿಸಲಾಗುತ್ತದೆ. ಸಂಗೀತವು ಮಾನವನ ದೇಹದ ಪ್ರತಿಯೊಂದು ಹಂತದ ಚೇತನಕ್ಕೆ ಸಂಚಲತೆಯನ್ನು ಉಂಟು ಮಾಡುತ್ತದೆ ಎನ್ನುವುದಕ್ಕೆ ನಾದಯೋಗದಲ್ಲಿಯ ಈ ಪರಿಕಲ್ಪನೆ ಹೆಚ್ಚು ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಸಂಗೀತ ಚಿಕಿತ್ಸೆಯನ್ನು ಬಳಸಲಾಗುತ್ತಿದೆ. ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಸಂಗೀತ ಚಿಕಿತ್ಸೆಯದೇ ಒಂದೇ ವಿಭಾಗವಿದ್ದು ಅಲ್ಲಿ ಅಧಿಕ ರಕ್ತದೊತ್ತಡ, ಉಗ್ಗು, ನೋವು, ಮೈಗ್ರೇನ, ತಲೆ ನೋವು, ಅರ್ಥಟಿಸ್ ಹೀಗೆ ಇನ್ನೂ ಅನೇಕ ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಒಮ್ಮೆ ಹಿಂಸಾಕಾರಕವಾದ ಸಿಂಹದ ಮೇಲೆ ಭಾರತೀಯ ಸಂಗೀತದ ಆಚಾರ್ಯ ಪಂಡಿತ ಓಂಕಾರನಾಥ ಠಾಕೂರ ಅವರು ಲಖನೌದ ಮೃಗಾಲಯದಲ್ಲಿ ಒಂದು ಪ್ರಯೋಗವನ್ನು ಮಾಡುತ್ತಾರೆ. ಸಿಂಹದ ಹತ್ತಿರ ಹೋದಾಗ ಆ ಸಿಂಹವು ಮುಖದಲ್ಲಿ ಹಿಂಸಾಕಾರಕ ಭಾವನೆಯಿತ್ತು, ಆದರೆ ಕೋಮಲ ಗಾಂಧಾರದ ವಿಶೇಷ ಪ್ರಯೋಗದ ಮೂಲಕ ಆ ಸಿಂಹದ ಕಣ್ಣಲ್ಲಿ ಕೆಲವೇ ಕ್ಷಣಗಳ ನಂತರ ಪರಿವರ್ತನೆ ಆಗ ತೊಡಗಿತು. ಅದರ ಕಣ್ಣಿನಲ್ಲಿ ವಾತ್ಸಲ್ಯಮಯವಾದ ಭಾವನೆ ಪ್ರಕಟವಾಗತೊಡಗಿತು. ಹೀಗೆ ಸಂಗೀತಕ್ಕಿರುವ ಅದ್ಭುತ ಶಕ್ತಿಯಿಂದ ಏನೆಲ್ಲ ಪವಾಡಗಳು ನಡೆಯುತ್ತಿವೆ, ನಡೆದಿವೆ. ಸಂಗೀತವು ಅನೇಕ ರೋಗಗಳನ್ನು ಶಮನ ಮಾಡುವಲ್ಲಿ, ಮನಸ್ಸಿನ ಅಹ್ಲಾದತೆಗೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಲು, ಒತ್ತಡ ದೂರ ಮಾಡುವಲ್ಲಿ, ನೋವನ್ನು ಉಪಶಮನ ಮಾಡುವಲ್ಲಿ, ನೆನಪಿನ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗಿದೆ. ಸಂಗೀತದ ಬೆಳಗಿನ ರಾಗಗಳು ದಿನವಿಡೀ ಉಲ್ಲಾಸದಿಂದ ಇರಲು ಸಹಾಯ ಮಾಡಿದರೆ, ಸಾಯಂಕಾಲದ ರಾಗಗಳು ದಿನದ ಬಳಲಿಕೆಯನ್ನು ನಿವಾರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಉತ್ತಮ ಸಂಗೀತದಿಂದ ಗರ್ಭದಲ್ಲಿರುವ ಮಗುವಿನ ಭಾವನೆಗಳಿಗೆ ಸ್ಪಂದಿಸಿ, ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುತ್ತದೆ. ಒಟ್ಟಿನಲ್ಲಿ ಸಂಗೀತದಲ್ಲಿ ಅದ್ಭುತವಾದ ಶಕ್ತಿ ಇದೆ ಎನ್ನುವುದು ನೂರಕ್ಕೆ ನೂರು ಸತ್ಯ. ಇಹಪರಗಳಲ್ಲಿ ಜೀವನ ಸಾರ್ಥಕ ಮಾಡಿಕೊಳ್ಳುವ ಸಾಧನಾ ಮಾರ್ಗಗಳಲ್ಲಿ ಶ್ರೇಷ್ಠತಮವಾದ ಸಂಗೀತ. ಭಾರತೀಯರ ಬದುಕು ಸಂಗೀತಮಯವಾಗಿದೆ. ಕಲೆಗಳಲ್ಲಿ ಅತಿ ಶ್ರೇಷ್ಟವಾದ, ದೈವದತ್ತವಾದ ಕಲೆ ಎಂದರೆ ಸಂಗೀತವೆಂದೆ ಹೇಳಬಹುದು. ಸಂಗೀತ ನಮ್ಮ ಮನಸ್ಸಿನ ಮೆಲೆ ನೇರವಾಗಿ ಹಾಗೂ ಆ ಕ್ಷಣದಲ್ಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಮಾನವರು ಸಹ ಹಾಡುಗಳನ್ನು ಮೆಲಕು ಹಾಕುತ್ತಾರೆ. ಗೋವುಗಳನ್ನು ಕಾಯುವ ಗೋಪಾಲಕರಿಂದ ಪಂಡಿತರವರೆಗೂ ಸಹ ಹಾಡುಗಳನ್ನು ಮೆಲುಕು ಹಾಕುತ್ತಾರೆ. ಯಾವುದಾದರೊಂದು ಒಳ್ಳೆಯ ಸಂಗೀತವನ್ನು ಕೇಳಿದಾಗ ಮನಸ್ಸು ಎಷ್ಟೆ ಮುನಿಸಿಕೊಂಡಿರಲಿ, ಆಳುತ್ತಿರಲು, ಖಿನ್ನತೆಯಿಂದ ಕೂಡಿರಲಿ, ಸಂಗೀತ ಮನಸ್ಸನ್ನು ಮುಟ್ಟಿ ಅಳು, ಮುನಿಸು, ಖಿನ್ನತೆಯನ್ನು ದೂರಮಾಡಿ ಸಂತೋಷ ಸಾಗರದಲ್ಲಿ ತೇಲಿಸುತ್ತದೆ. ಸಂಗೀತದಲ್ಲಿರುವ ಸಾಹಿತ್ಯ ನಮ್ಮನ್ನು ಚಿಂತೆಗಳಿಂದ ದೂರ ಮಾಡುತ್ತದೆ. ಸಂಗೀತಗಾರರು ರಾಗಗಳನ್ನಾಗಲು, ಕೃತಿಗಳನ್ನಾಗಲಿ ಪ್ರಸ್ತುತ ಪಡಿಸುವಾಗ ಉಸಿರಾಟದಿಂದ ಪ್ರಾಣ ವಾಯು ಹೆಚ್ಚಾಗಿ, ರಕ್ತ ಪರಿಚಲನೆ ಸುಗಮವಾಗುತ್ತದೆ ಮತ್ತು ಪಚನ ಶಕ್ತಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಸಂಶೋಧಕರು. ಅದರಲ್ಲೂ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವಾಗ ಗಾಯಕರು ಅಡಿನಾಭಿಯಿಂದ ಉಸಿರೆಳದುಕೊಂಡು ಹಾಡುವುದರಿಂದ ಉದರದ ಎಲ್ಲ ಅವಯವಗಳಿಗೂ ವ್ಯಾಯಾಮವಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿರುವ, ಸಾಹಿತ್ಯದಲ್ಲಿ ಭಗವಂತನ ವರ್ಣನೆ, ಭಕ್ತಿಯ ಪರಾಕಾಷ್ಠೆ ನಮ್ಮನ್ನು ಋಣಾತ್ಮಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಡಾ.ಸುನಂದಾ ಬಿ.ಸಾಲವಾಡಗಿ
ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ Read Post »
ಜುಗಲ್ ಬಂದಿ ಗಜಲುಗಳ ಬಗ್ಗೆ
ಮಂಡಲಗಿರಿ ಪ್ರಸನ್ನ
ಜುಗಲ್ ಬಂದಿ ಗಜಲುಗಳ ಬಗ್ಗೆ Read Post »
ಲೇಖನ
ಭಾರತದ ಅಪ್ರತಿಮ ಸಮಾಜ
ಸುಧಾರಕ ಬಾಲ ಗಂಗಾಧರ ತಿಲಕ
ಭಾರತಿ ಕೇದಾರಿ ನಲವಡೆ.
ಭಾರತದ ಅಪ್ರತಿಮ ಸಮಾಜ ಸುಧಾರಕ ಬಾಲ ಗಂಗಾಧರ ತಿಲಕ Read Post »
ಲೇಖನ
ಪಥವ ಬದಲಿಸೋಣವಲ್ಲವೇ…….
ಅನುರಾಧಾ ಶಿವಪ್ರಕಾಶ್
ಪಥವ ಬದಲಿಸೋಣವಲ್ಲವೇ……. Read Post »
ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ
ಮುಕ್ತಕ ಕವಯಿತ್ರಿಯಾದ ಕಮಲಾ ರಾಜೇಶ್ ಅವರಿಗೆ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್( ರಿ) ಬೆಂಗಳೂರು ಸಂಸ್ಥೆಯು ನಾಲ್ಕನೇ ಮಹಿಳಾ ಸಾಂಸ್ಕೃತಿಕ ಸಮಾವೇಶಕ್ಕೆ ಸರ್ವಾಧ್ಯಕ್ಷೆಯಾಗಿ ಆಯ್ಕೆ
ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ Read Post »
ಲೇಖನ ಇಂದಿನ ಶಿಕ್ಷಕ ಸುಮಾ ಕಿರಣ್ ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು ಶಾಲೆಗಳಲ್ಲಿ ಬೆಂಚು, ಕುರ್ಚಿಯ ವ್ಯವಸ್ಥೆ ಇರದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪದ್ಧತಿ ಇತ್ತು. ಬಹುಶಃ ಇದಕ್ಕೆ ಕಾರಣ ವಿದ್ಯಾರ್ಥಿಗಳಾದ ನಾವು ಅಧ್ಯಾಪಕರ ಸರಿ ಸಮಕ್ಕೆ ಕುಳಿತುಕೊಳ್ಳದೆ ವಿನಯ, ವಿಧೇಯತೆಯನ್ನು ರೂಡಿಸಿಕೊಳ್ಳಲಿ… ಎಂದಿರಬಹುದೇನೊ! ಹಾಗೆಯೇ ನಮ್ಮ ಅಧ್ಯಾಪಕರ ಬಗೆಗೆ ಅಪಾರ ಗೌರವ, ಪ್ರೀತಿ, ಭಯ-ಭಕ್ತಿ ಎಲ್ಲವೂ ತುಂಬಿರುತ್ತಿತ್ತು. ಅಧ್ಯಾಪಕರೊಂದಿಗೆ ವಾದ ಮಾಡುವುದಿರಲಿ; ಅಧ್ಯಾಪಕರು ಅಷ್ಟು ದೂರದಲ್ಲಿ ಕಂಡರೂ ಸಾಕು ನಮ್ಮ ತೊಡೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಅಧ್ಯಾಪಕರು ನೀಡುತ್ತಿದ್ದ ಶಿಕ್ಷೆಗಳು ಕೂಡ ಅಷ್ಟೇ ಕಠಿಣವಾಗಿ ಇರುತ್ತಿತ್ತು. ಇನ್ನೊಂದು ಬಾರಿ ಅಂತಹ ತಪ್ಪು ಮಾಡದಂತೆ ಸದಾ ಎಚ್ಚರಿಸುವ ರೀತಿಯಲ್ಲಿ ಶಿಕ್ಷೆಗಳು ಇರುತ್ತಿದ್ದವು. ಅಧ್ಯಾಪಕರ ಬಗ್ಗೆ ಕೇವಲ ನಮಗೆ ಮಾತ್ರವಲ್ಲ ಮನೆ ಮಂದಿ, ಊರವರಿಗೆಲ್ಲ ಗೌರವ ಭಾವ. ಮನೆಯಲ್ಲಿ ನಾವೇನಾದರೂ ಅಧ್ಯಾಪಕರ ಬಗ್ಗೆ ದೂರು ಹೇಳಿದ್ದೆ ಆದರೆ, ಮನೆಯವರಿಂದ ನಮಗೇ ನಾಲ್ಕು ಗುದ್ದು ಬಿದ್ದು ನಮ್ಮ ಬಾಯಿ ಮುಚ್ಚುತ್ತಿತ್ತು. ಎಲ್ಲಿಯಾದರೂ ಅಧ್ಯಾಪಕರನ್ನು ನಮ್ಮ ಪಾಲಕರು ಕಂಡದ್ದೇ ಆದರೆ, ಅವರ ಬಾಯಿಯಿಂದ ಬರುತ್ತಿದ್ದ ಒಂದೇ ಪದ “ಗಂಡಿಗ್ ಸಮ ನಾಲ್ಕು ಹಾಕಿ ಮೇಷ್ಟ್ರೇ, ಹೇಳಿದ್ದ್ ಕೆಂತಿಲ್ಲ “. ಇನ್ನು ಅಧ್ಯಾಪಕ ವೃತ್ತಿ ಎನ್ನುವುದು ಗೌರವಕ್ಕೆ ಪಾತ್ರವಾದ ವೃತ್ತಿಯಾಗಿತ್ತು. ಶ್ರೇಷ್ಠ ವೃತ್ತಿ ಎಂಬ ಹೆಗ್ಗಳಿಕೆ ಕೂಡ ಇತ್ತು. “ಶಿಕ್ಷಕರು” ಎಂದರೆ ಊರಿನಲ್ಲೆಲ್ಲ ಒಂದು ಘನತೆ ಇತ್ತು. ಅವರ ಮಾತಿಗೆ ಊರವರು ಬೆಲೆ ಕೊಡುವ ಜೊತೆಗೆ ಶಿಕ್ಷಕರು ಊರಿನಲ್ಲಿರುವ ಎಲ್ಲರ ಮನೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿರುತ್ತಿದ್ದರು. ಶಿಕ್ಷಕರಿಗೆ ದೊರಕುತ್ತಿದ್ದ ಈ ಪರಿಯ ಪ್ರೀತಿ, ಗೌರವಗಳಿಂದಾಗಿ ಮುಂದಿನ ತಲೆಮಾರಿನವರೂ ಶಿಕ್ಷಕರಾಗುವ ಕನಸು ಕಾಣುತ್ತಿದ್ದರು ಎಂದರೆ ತಪ್ಪಾಗಲಾರದೆನೋ? ಮಿತ್ರರೇ, ಈಗ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅವಲೋಕಿಸೋಣವೇ? ಅಧ್ಯಾಪಕರೊಂದಿಗೆ ವಾದಿಸುವ, ಅಧ್ಯಾಪಕರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವ ಇಂದಿನ ವಿದ್ಯಾರ್ಥಿಗಳಿಂದ ಅದ್ಯಾವ ಪರಿಯ ವಿನಯ ವಿಧೇಯತೆಗಳನ್ನು ನಿರೀಕ್ಷಿಸಲು ಸಾಧ್ಯ ನೀವೇ ಹೇಳಿ! ಇನ್ನು ತಮ್ಮ ಮಕ್ಕಳ ಶಿಕ್ಷಕರ ಬಗ್ಗೆ ಪಾಲಕರಿಗೇ ಕಿಂಚಿತ್ತು ಗೌರವವಿಲ್ಲ. ಮಕ್ಕಳ ಎದುರಿನಲ್ಲಿ ಅವರ ಶಿಕ್ಷಕರನ್ನು ಏಕವಚನದಲ್ಲಿ ಹೀಯಾಳಿಸುವಾಗ ಮಕ್ಕಳಿಗಾದರೂ ಗೌರವ ಅದೆಲ್ಲಿಂದ ಮೂಡಬೇಕು? ಪಾಲಕರಾದ ನಾವು, ನಮ್ಮ ಹಿರಿಯರು ಅದ್ಯಾವ ಪರಿಯ ವಿನಯದಿಂದ ನಮ್ಮ ಶಿಕ್ಷಕರೊಂದಿಗೆ ವ್ಯವಹರಿಸುತ್ತಿದ್ದರು ಎಂಬುದನ್ನು ಈ ಕ್ಷಣಕ್ಕೆ ಮರತೇ ಬಿಟ್ಟಿರುತ್ತೇವೆ. ಇನ್ನು ತಮ್ಮ ಶಾಲಾ ಮಕ್ಕಳಿಗೆ ಹೊಡೆಯುವುದಂತಿರಲಿ; ಗಟ್ಟಿಯಾಗಿ ಗದರಿದರೂ ಅದೊಂದು ಅಪರಾಧದಂತೆ ಕಂಡು, ಅಧ್ಯಾಪಕರು ಮಹಾನ್ ಅಪರಾಧಿಗಳಂತೆ ಬಿಂಬಿತರಾಗುತ್ತಾರೆ. “ನನ್ನ ಮಗುವಿಗೆ ನಿಮ್ಮ ಶಿಕ್ಷಕರು ಗದರಿದರಂತೆ? ಅವನು ಶಾಲೆಗೆ ಬರಲು ಒಪ್ಪುತ್ತಿಲ್ಲ” ಎಂದು ಶಾಲಾ ಪ್ರಾಂಶುಪಾಲರೊಂದಿಗೆ ದೂರುವ ಪಾಲಕರು ಕ್ಷಣ ಕಾಲ ಹಿಂತಿರುಗಿ ನೋಡಿದ್ದರೆ… ಕೋಲಿನಲ್ಲಿ ಬಾಸುಂಡೆ ಬರುವಂತೆ ಬಡಿದಾಗಲೂ ಚಕಾರವೆತ್ತದ ನಮ್ಮ ಪಾಲಕರು ಕಣ್ಮುಂದೆ ತೇಲುತ್ತಾರೆ. ಇಂದಿನ ಮಕ್ಕಳಿಗೆ ಅವರು ತಪ್ಪು ಮಾಡಿದಾಗ ತಿದ್ದಲು ಅವಶ್ಯಕವಾದ ಸಣ್ಣ ಮಟ್ಟದ ದಂಡನೆ ಪಾಲಕರಿಂದ ಯಾ ಶಿಕ್ಷಕರಿಂದ ಆಯಾ ಕಾಲಕ್ಕೆ ವಿಧಿಸಲ್ಪಡದೆಯೇ ಇರುವುದರಿಂದಲೇ ನಾಗರಿಕ ಸಮಾಜದಲ್ಲಿ ತಪ್ಪಿನ ಮೇಲೆ ತಪ್ಪು ಎಸಗುತ್ತಾ ಕಾನೂನಿನ ಕುಣಿಕೆಗೆ ಸಿಲುಕಿ ಪೋಲೀಸರಿಂದ ಹೊಡೆತ ತಿನ್ನುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ! ಮಕ್ಕಳಿಗೆ ಹೊಡೆಯಬಾರದು, ಬೈಯಬಾರದು… ಇದನ್ನೆಲ್ಲ ಹೇಗೋ ಶಿಕ್ಷಕರು ಸಹಿಸಿಯಾರು. ಆದರೆ, ಬೋರ್ಡ್ ಮೇಲೆ ಬರೆದ ನೋಟ್ಸ್ ಅನ್ನು ಮಗು ಬರೆಯದಿದ್ದಾಗಲೂ ಅದು ಶಿಕ್ಷಕರದ್ದೆ ತಪ್ಪು! ಮಗುವಿನ ನೋಟ್ಸ್ ಪೂರ್ಣಗೊಳಿಸುವುದು, ಮಗು ಉತ್ತಮ ಅಂಕ ಗಳಿಸುವುದು… ಎಲ್ಲದಕ್ಕೂ ಹೊಣೆಗಾರರು ಶಿಕ್ಷಕರೇ! ಗಮನಿಸಿ – ಮನೆಯಲ್ಲಿ ಇರುವ ನಮ್ಮ ಒಂದೇ ಮಗುವಿನ ನೋಟ್ಸ್ ಅನ್ನು ಪೂರ್ಣಗೊಳಿಸುವಲ್ಲಿ ಸಹಕರಿಸಲು ಆಗದ ಪಾಲಕರು ನಾವು. ಅದೇ ಒಬ್ಬ ಶಿಕ್ಷಕ ತರಗತಿಯಲ್ಲಿರುವ ನಲವತ್ತು ವಿದ್ಯಾರ್ಥಿಗಳನ್ನು ನೋಡಬೇಕು. ಅದೂ ಕೇವಲ ಒಂದೇ ತರಗತಿಯಲ್ಲ! ಅಂತಹ ಕನಿಷ್ಠ ಆರು ತರಗತಿಗಳನ್ನು ಪ್ರತಿನಿತ್ಯ ಗಮನಿಸಬೇಕು ಎಂದಾದರೆ ನಿಜಕ್ಕೂ ಶಿಕ್ಷಕರ ಬಗ್ಗೆ ಕರುಣೆ ಮೂಡುವುದಿಲ್ಲವೇ? ಮಿತ್ರರೇ, ಒಬ್ಬ ಶಿಕ್ಷಕ ಕೂಡ ಎಲ್ಲರಂತೆ ಸಾಮಾನ್ಯ ಮನುಷ್ಯ! ತನ್ನ ವೃತ್ತಿಯ ಮೇಲಿನ ಗೌರವ, ಪ್ರೀತಿ, ಬದ್ಧತೆಯಿಂದ ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ನಗುನಗುತ್ತಾ ಎದುರಿಸುವ ಕಲೆಗಾರಿಕೆ ಶಿಕ್ಷಕನಿಗೆ ಕರಗತವಾಗಿರುತ್ತದೆ. ಹಾಗೆಂದು ಪಾಲಕರಾದ ನಾವು ಎಲ್ಲ ತಪ್ಪುಗಳನ್ನು ಶಿಕ್ಷಕರ ಕುತ್ತಿಗೆಗೆ ಕಟ್ಟಿ ನಿರಾಳವಾಗಿ ಇರಲು ಸಾಧ್ಯವೇ? ಖಂಡಿತ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಶಿಕ್ಷಣ ಸಂಸ್ಥೆಗಳ ಮೇಲೆ ಸುರಿದಿದ್ದೇವೆ. ಹಾಗೆಂದು ಶಿಕ್ಷಕರು ನಾವು ಬಯಸಿದಂತೆ ಇರಬೇಕು ಎಂಬುದು ಯಾವ ಪರಿಯ ನ್ಯಾಯ? ಕ್ಷಣ ಕಾಲ ಯೋಚಿಸಿ, ನೀವು ಮಹಾನಗರಗಳಲ್ಲಿ ಇದ್ದರೆ ಈ ಅನುಭವ ಖಂಡಿತ ನಿಮಗಾಗಿರುತ್ತದೆ. ನೀವು ವೃತ್ತಿ ನಿರತರಾಗಿದ್ದು ನಿಮ್ಮ ಒಂದು ಮಗುವನ್ನು ನೋಡಿಕೊಳ್ಳಲು ಆಯಾಗಳಿಗೆ ತಿಂಗಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಚೆಲ್ಲಿರುತ್ತೀರಿ. ಆದರೆ, ಒಬ್ಬ ಖಾಸಗಿ ಶಾಲಾ ಶಿಕ್ಷಕ/ಅಧ್ಯಾಪಕ ಇದಕ್ಕೂ ಕಡಿಮೆ ಸಂಬಳಕ್ಕೆ ಪ್ರತಿದಿನ ಪ್ರತಿ ತರಗತಿಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಧಾರಿಸಿ, ಅವರ ಎಲ್ಲ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿ, ಕ್ಷಣ ಕ್ಷಣಕ್ಕೂ ಅವರೆಡಗೆ ಕಾಳಜಿ ತೋರಿ, ಊಟದಿಂದ ಹಿಡಿದು ಪಾಠದವರೆಗೆ ಗಮನಿಸುತ್ತಾರೆ. ಅಂತಹ ಶಿಕ್ಷಕರ ಬಗ್ಗೆ ನಮಗದೆಷ್ಟು ಗೌರವ ಅಭಿಮಾನವಿರಬೇಕು. ಈಗಲಾದರೂ ಈ ಬಗ್ಗೆ ಯೋಚಿಸೋಣವೇ?? ಸುಮಾ ಕಿರಣ್
You cannot copy content of this page