ಕನಕ ಜಯಂತಿ ವಿಶೇಷ ಅಮರೇಶ.ಮ.ಗೊರಚಿಕನವರ ದಾಸಶ್ರೇಷ್ಠ ಭಕ್ತ ಕನಕದಾಸ- ಹಾವೇರಿ ಜಿಲ್ಲೆಯ ಬ್ಯಾಡ ಊರುಉದಯಿಸಿದರು ಕನಕರೆಂಬ ದಾಸ ಶ್ರೇಷ್ಠರುದಾಸ – ದಾಸರಲ್ಲೇ ಶ್ರೇಷ್ಠದಾಸರಿವರುಸಮಾಜದ ಒಳಿತಿಗೆ ಅವತಾರ ಪುರುಷನಂತೆ ಧರೆಗಿಳಿದರು ಬೀರಪ್ಪ ನಾಯಕ ಬಚ್ಚಮ್ಮರಉದರದಲಿ ಜನಿಸಿದಿರುತಿರುಪತಿ ತಿಮ್ಮಪ್ಪ ದೇವರಆಶೀರ್ವಾದದ ಸ್ವರೂಪ ಇವರು ಬಂಕಾಪುರದಲಿ ಅಕ್ಷರಾಭ್ಯಾಸಶ್ರೀನಿವಾಸಚಾರ್ಯರ ಪ್ರಿಯ ಶಿಷ್ಯಆಧ್ಯಾತ್ಮಿಕ ಗುರು ಶ್ರೀ ವ್ಯಾಸರಾಯರುಸಾಹಿತ್ಯ ,ತರ್ಕ, ಮೀಮಾಂಸೆಯಲಿ ಚತುರರು ಯುದ್ದದಲಿ ಗಾಯಗೊಂಡುಮೂಡಿತು ವೈರಾಗ್ಯದಂಡನಾಯಕನ ವೃತ್ತಿಗೆ ವಿರಾಮ ನೀಡಿಕೊಂಡುದಾಸ ಶ್ರೇಷ್ಠ ದೊರೆತದ್ದು ನಮ್ಮ ಸೌಭಾಗ್ಯ ಕಾಗಿನೆಲೆ ಆದಿಕೇಶವರಾಯರಪರಮ ಭಕ್ತರು ಕನಕದಾಸರುಕಾವ್ಯ ಕೀರ್ತನೆಯ ಹರಿಕಾರರು ಉಗಾಭೋಗ,ಮಂಡಿಗೆ ರಚಿಸಿದರು ಆರಾಧ್ಯ ದೇವ ಉಡುಪಿಯ ಶ್ರೀಕೃಷ್ಣಪರಮ ಭಕ್ತನಿಗೆ ತೋರಿದ ದಿವ್ಯ ದರುಶನಉಡುಪಿಯ ಮಠದಲ್ಲಿ ಇಂದಿಗೂ ಇದೆಕನಕನ ಕಿಂಡಿ ಎಂದು ಪ್ರಸಿದ್ಧವಾಗಿದೆ ಜಾತಿಯ ಮದವೇರಿದ ಮನುಜರಿಗೆ ಪಾಠವಾದರುಕುಲ-ಕುಲವೆಂದು ಹೊಡೆದಾಡದಿರಿ ಎಂದು ಸಾರಿ ಹೇಳಿದರುಕುಲದ ನೆಲೆಯ ಪ್ರಶ್ನಿಸಿದ ಕನಕದಾಸರುಜಾತಿ ವ್ಯವಸ್ಥೆಯ ನಿರ್ಮೂಲನೆಯ ಹರಿಕಾರರಾದರು ಮೋಹನ ತರಂಗಿಣಿ,ನಳ ಚರಿತ್ರೆಹರಿಭಕ್ತಿಸಾರ, ರಾಮಧಾನ್ಯ ಚರಿತೆಹಾಡಿ ಹೊಗಳಿದರು ಮುಗಿಯುವುದಿಲ್ಲ ಕಥೆದಾಸಶ್ರೇಷ್ಠ ಭಕ್ತ ಕನಕದಾಸರ ಮಹಾಕಥೆ ——————– ಅಮರೇಶ.ಮ.ಗೊರಚಿಕನವರ