ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತತ ಕಥೆ ಮಾಜಿ ಪ್ರದಾನಿಯವರ ಅನುವಾದಿತ ಕಥೆ ಗೊಲ್ಲರ ರಾಮವ್ವ(ಕೊನೆಯ ಭಾಗ) ತೆಲುಗು ಮೂಲ:ಪಿ.ವಿ.ನರಸಿಂಹರಾವ್ ಕನ್ನಡಕ್ಕೆ:ಚಂದಕಚರ್ಲ ರಮೇಶ್ ಬಾಬು ಭಾಗ – ೨ ರಿಂದ                ಭಾಗ- ೩ ಹಾಲು ಕರೆಯೋ ಸಮಯ ಕಳೀತಾ ಇದೆ. ಮನೆ ಹೊರಗಡೆ ಕಟ್ಟಿ ಹಾಕಿದ ಎಮ್ಮೆಗಳು ಕರುಗಳಿಗಾಗಿ ಕೂಗ್ತಾ ಇವೆ. ಹಾಗೇ ಒಳಗಡೆ ಕರುಗಳು ಕೂಡ ವಿಲಪಿಸುತ್ತಿವ ಹಾಲು ಕರೆಯಬೇಕೆನ್ನುವ ಆತ್ರ ಒಂದುಕಡೆ. ಹಸಿವಿನ ಸಂಕಟ ಮತ್ತೊಂದು ಕಡೆ. ಆದರೇ ಹಾಲು ಕರೀತಾ ಇಲ್ಲ ಯಾರೂ. ದಿನಾಲೂ ಆದರೇ ಈ ವೇಳೆಗೆ ಜುಂಯಿಜುಂಯಿ ಅನ್ನುತ್ತ ಕೇಳಿಬರುವ ಪಯಸ್ಸಂಗೀತ ಪೂರ್ತಿ ನಿಂತು ಹೋಗಿದೆ. ಹೆದರಿಕೆಯಿಂದ ಗ್ರಾಮದಲ್ಲಿನ ಎಲ್ಲ ಜೀವ ಲಕ್ಷಣಗಳೂ ಕಾಣದಾಗಿವೆ. ಸಾವಿನ ಸಮಯದ ಕೊನೆಯ ಚಲನೆಯು ಸಹ ಇಲ್ಲ. ಸುಡುಗಾಡಿನಲ್ಲಿಯ ಬೆಂಕಿಯ ಚಟಪಟ ಸಹ ಇಲ್ಲ. ಆ ಗ್ರಾಮದಲ್ಲಿ ಅನಾದಿಕಾಲದಿಂದ ಬರೀ ನಿಶಬ್ದವೇ ಇದ್ದ ಹಾಗೆ ಅನಿಸ್ತಾ ಇದೆ. ರಾಮವ್ವ, ಮಲ್ಲಮ್ಮ ಇಬ್ಬರೂ ಕಾವಲಾಗಿದ್ದಾರೆ. ಯುವಕ ಸುಖವಾಗಿ ನಿದ್ರೆ ಮಾಡ್ತಾ ಇದಾನೆ. ಇರುವೆಯ ಸಪ್ಪಳವಾದರೂ ಎದ್ದು ಬಿಡುವಷ್ಟು ನಿದಾನವಾಗಿದಾರೆ ಆ ಗ್ರಾಮದ ಪ್ರಜೆಗಳು. ಆದರೇ ಆ ಇರುವೆ ಸಹ ಸದ್ದು ಮಾಡ್ತಾ ಇಲ್ಲ. ರಾತ್ರಿ ನಡೆದ ಆ ಭಯಂಕರ ಘಟನೆಗೆ ಕಾರಣನಾದ ಆ ಯುವಕ ಮಾತ್ರ ನಿದ್ರಿಸ್ತಾ ಇದಾನೆ. ಉಳಿದ ಗ್ರಾಮವೆಲ್ಲಾ ಉಸಿರು ಬಿಗಿ ಹಿಡಿದು ಕಾಯ್ತಾ ಇದೆ. ಯಾತಕ್ಕೋ ? ಯಾರಕೋಸ್ಕರವೋ ? ಯಾಕೋ? ಅದೆಲ್ಲಾ.. ಎಲ್ಲರಿಗೂ ಗೊತ್ತು…. ಹಳೇಕಥೆ…. ರಾಮವ್ವ ಯೋಚಿಸುತ್ತಿದ್ದಳು. ಯಾರೋ ಕಾಂಗ್ರೆಸಿನವರು ಊರಿಗೆ ಬಂದಿದಾರಂತ ಹೇಳಿ ಈಗಾಗಲೇ ನಾಲ್ಕು ನಿರ್ದೋಷಿಗಳನ್ನು ಸುಟ್ಟು ಕೊಂದಿದ್ದಾರೆ. ಮತ್ತೆ ಈಗ ! ಇಬ್ಬರು ಪೋಲೀಸರು ಸತ್ತಿದ್ದಾರೆ. ಠಾಣೆ ಭಗ್ನಾವಾಗಿದೆ. ಊರನ್ನೆಲ್ಲಾ ಸುಟ್ಟು ದಗ್ಧ ಮಾಡಿ, ಊರಿನವರನ್ನೆಲ್ಲಾ ಕೊಂದುಹಾಕಿದರೂ ಆಶ್ಚರ್ಯವೇನಿಲ್ಲ. ಅದೊಂದು ಹಬ್ಬಾನೇ ಅವರಿಗೆ ! ಯಾವುದಾದರೊಂದು ಮನೆಗೆ ಪೋಲೀಸರು ಬಂದು ಕೊಲೆ, ಮಾನಭಂಗ ಮಾಡುವುದು, ಪಕ್ಕದ ಮನೆಯವರು ಏನೂ ಮಾತಾಡದ ಹಾಗೆ ಆಗುವುದು, ಹೀಗೆ ಒಂದೊಂದು ಮನೆ ತರ ಎಲ್ಲ ಮನೆಗಳಿಗೂ ಅದೇ ಗತಿಯಾಗುವುದು… ಇದರಿಗಿಂತ ಊರಿನವರನ್ನೆಲ್ಲಾ ಒಂದೇ ಸಲ ಕೊಂದು ಹಾಕೋದು ಒಳ್ಳೇದಲ್ಲಾ ?  ಈ ನಾಯಿ ಸಾವಿಗಿಂತ  ಹತ್ತೂ ಜನದ ಜೊತೆ ಸತ್ತರೂ ಒಳ್ಳೇದೇ ! ಬದುಕಿದ್ರೂ ಒಳ್ಳೇದೇ !  ನಿದ್ದೆಯಲ್ಲಿದ್ದ ಯುವಕನ ತಲೆ ನೇವರಿಸುತ್ತಿದ್ದ ರಾಮವ್ವ ಗೊಣಗಿದಳು. ” ಅಬ್ಬ! ಏನ್ ಹುಡುಗ ! ಇನ್ನಾ ಎಷ್ಟು ಜನ ಇಂಥಾ ಹುಡುಗರು ಸಾಯಬೇಕೋ !” ಹಠಾತ್ತಾಗಿ ಬಜಾರಿನಲ್ಲಿ ಮೋಟಾರ್ ಟ್ರಕ್ಕಿನ ಸದ್ದು ಕೇಳಿಬಂತು. ಎಲ್ಲೆಲ್ಲೂ ಬೂಟುಗಾಲುಗಳ ತಟತಟ ಸದ್ದು ಕೇಳಿಬಂತು. ಏನೋ ಒದರಾಟ, ತುರಕ ಭಾಷೆಯಲ್ಲಿ ಬೈಗುಳ, ದುರ್ಭಾಷೆಗಳು, ಪ್ರಗಲ್ಭಗಳು… ನಡು ನಡುವೆ ಛಟಿಲ್ ಛಟಿಲ್ ಎನ್ನುವ ಚಾವಟಿ ಏಟು…. ” ಅಯ್ಯೋ ! ಸತ್ತೆ !ಸತ್ತೆ! ನಿಮ್ಮ ಗುಲಾಮನು. ನನಗ್ಗೊತ್ತಿಲ್ಲ. ಅಯ್ಯೋ! ಅಮ್ಮಾ! ವಾಮ್ಮಾ!” ಅನ್ನುವ ಕೂಗುಗಳು. ಮುಗಿಲು ಮುಟ್ಟುವ ಆಕ್ರೋಶಗಳು, ಅವುಗಳನ್ನ ಮೀರಿಸುವ ಕ್ರೂರ ಘೋಷಣೆಗಳು, ಒಂದರಮೇಲೊಂದು ಸ್ಬರ್ಥೆಗಿಳಿದಿದ್ದವು. ಕಂಡವರನ್ನು ಕಂಡ ಹಾಗೇ ಬಜಾರಿಗೆ ಎಳೆಯಲಾಗುತ್ತಿತ್ತು. ಎರಡು ಗಳಿಗೆ ಕೆಳಗೆ ಶ್ಮಶಾನವನ್ನ ಹೋಲುತ್ತಿದ್ದ ಗ್ರಾಮ ಈಗ ಯಮಪುರಿಯನ್ನ ಹೋಲುತ್ತಿತ್ತು. ಮಲ್ಲಮ್ಮ ನಡುಗಲಾರಂಭಿಸಿದಳು. ಯುವಕ ದಿಗ್ಗಂತ ಎದ್ದು ಕೂತ. ಅವನ ಗಾಢ ನಿದ್ರೆ ಹಾರಿಹೋಗಿತ್ತು. ಮುದುಕಮ್ಮನ ಕೈಯಿಂದ ರಿವಾಲ್ವಾರ್ ತೊಗೊಂಡು ಅದಕ್ಕೆ ಗುಂಡು ಹತ್ತಿಸಿದ. ಹೊರಗೆ ಕೇಳಬರುತ್ತಿದ್ದ ಗಲಾಟೆ ಒಂದೆರಡು ನಿಮಿಷ ಕೇಳಿದನೋ ಇಲ್ಲವೋ … ಅವನಲ್ಲಿ ಎಲ್ಲಿಲ್ಲದ ಆವೇಶ ಆವರಿಸಿತು. . ಮುದುಕಮ್ಮನ ಸ್ಥಿತಿ ಹೇಳುವ ಹಾಗಿರಲಿಲ್ಲ. ಅದು ಹೆದರಿಕೆಯಾಗಿರಲಿಲ್ಲ. ನೋವಾಗಿರಲಿಲ್ಲ. ದುಃಖವಂತೂ ಆಗಿರಲಿಲ್ಲ. ಅಪೂರ್ವವಾದ ನಿಶ್ಚಲತೆ, ಗಾಂಭೀರ್ಯ ಅವಳಲ್ಲಿ ಪ್ರವೇಶಿಸಿದವು. ಹೊರಗಿನ ಹಾಹಾಕಾರ ಕಿವಿಗಳಿಗೆ ಬೀಳುತ್ತಿದ್ದ ಹಾಗೇ ಅವಳಲ್ಲಿ ಕೂಡ ಒಂದು ರೀತಿಯ ಉದ್ವೇಗ ಕಾಣಿಸಿಕೊಳ್ಳ ತೊಡಗಿತು.  ರಿವಲ್ವಾರಿನಲ್ಲಿ ಗುಂಡು ತುಂಬಿ ಯುವಕ ಎದ್ದು ನಿಂತ. ಬಾಗಿಲ ಬಳಿಗೆ ನಡೆದ. ಚಿಲಕದ ಮೇಲೆ ಕೈಹಾಕಿದ. ತೆಗೆಯಬೇಕೆನ್ನುವಲ್ಲಿ ಅವನ ಕೈಯ ಮೇಲೆ ಮತ್ತೊಂದು ಕೈ ಬಿತ್ತು. ಅದು ಉಕ್ಕಿನ ಕೈ ಎನಿಸುವಷ್ಟು ಗಟ್ಟಿಯಾಗಿ ಅವನ ಕೈಗೆ ತಗುಲಿತು. ಅವನು ಆಶ್ಚರ್ಯದಿಂದ ಹಿಂತುರಿಗಿ ನೋಡಿ “ಆ” ಎಂದ. ಮುದುಕಮ್ಮನದೇ ಆ ಉಕ್ಕಿನ ಕೈ. “ಎಲ್ಲಿಗೆ” ಅಂತ ಪ್ರಶ್ನಿಸಿದಳು ಮುದುಕಮ್ಮ. .. ಯುವಕನ ಮಾತು ಹೊರಡಲಿಲ್ಲ. ತುಪಾಕಿ ಗುಂಡುಗಳ ನಡುವೆ ಹೋರಾಡುವ ಆ ವೀರ ಯುವಕ… ರಾಕ್ಷಸನನ್ನಾದರೂ ಎದುರಿಸುವ ಆ ಶೂರ ಶಿರೋಮಣಿ…. ದೇಶದ ಒಳಿತಿಗಾಗಿ ಪ್ರಳಯವನ್ನಾದರೂ ಧಿಕ್ಕರಿಸುವ ಆ ತರುಣ ಸಿಂಹ… ಎಪ್ಪತ್ತು ವರ್ಷ ವಯಸಿನ ಒಂದು ಮುದುಕಿಯ ಪ್ರಶ್ನೆಗೆ ಅಂಜಿದ. “ಎಲ್ಲಿಗೇನವ್ವಾ? ಆಕಡೆಯೋ ಈಕಡೆಯೋ ಆಗಿಬಿಡಬೇಕು. ಅಲ್ಲಿ ಅಷ್ಟು ಹಿಂಸೆ ನಡೀತಿದ್ರೇ ಅದಕ್ಕೆ ಕಾರಣನಾದ ನಾನು ಅಡಗಿರಬೇಕಾ? ಅಡಗಿದರೂ ಅದೆಷ್ಟು ಹೊತ್ತು ? ನಿನ್ ಮನೆ ಏನು ಹುಡುಕಲ್ಲಾ ?  ನನ್ನಿಂದ ನಿಮಗೂ ಅಪಾಯ. ನನ್ನ ಹೋಗಲು ಬಿಡು ಅವ್ವಾ!” ಮುದುಕಮ್ಮ ಏನೂ ಮಾತಾಡಲಿಲ್ಲ. ಯುವಕನ ಕೈ ಹಿಡಿಕು ಹಿಂದಕ್ಕೆಳೆದಳು. ಮಂತ್ರ ಮುಗ್ಧನ ತರ ಅವನು ಅವಳನ್ನ ಹಿಂಬಾಲಿಸಿದ. ಹೊರಗೆ ಗದ್ದಲ ಜಾಸ್ತಿ ಯಾಯಿತು. ಬೂಟುಗಾಲಿನ ಶಬ್ದ ಗುಡಿಸಿಲ ಹತ್ತಿರವಾಯಿತು. ಮೂರು ನಾಲ್ಕು ಜನ ಗುಡಿಸಿಲನ್ನು ಹಾಸಿ ಪಕ್ಕದ ಮನೆಗೆ ಹೋದರು. ಅದರ ಹಿಂದೇ “ರಾಮೀ ಕೀ ಗುಡ್ಸಿ ಯಹೀಹೈ ” ಎನ್ನುವ ಮಾತು ಕೇಳಿಬಂದಿತು. ಮತ್ತೆ ಯುವಕ ಹೊರಗಿನ ಬಾಗಿಲ ಕಡೆಗೆ ಹೊರಟ. ಆದರೇ ಮುದುಕಮ್ಮ ಅವನನ್ನ ದೂಡಿದಳು. ರಿವಲ್ವಾರ್ ಅವನ ಕೈಯಿಂದ ಕಸಿದುಕೊಂಡಳು. ಮಿಣುಕುತ್ತಿದ್ದ ದೀಪವನ್ನ ಆರಿಸಿದಳು. ಮಲ್ಲಮ್ಮನ್ನ ಕರೆದು ಹೇಳಿದಳು. “ಹುಡುಗೀ ! ನಿನ್ನೆ ಆಲದ ಮರ ಕಟ್ಲಿಕ್ಕೆ ಕೊಟ್ಟಿದ್ದೆನಲ್ಲಾ ? ಆ ಹೊದಿಕೆ ಶಾಲು ತೊಗೊಂಬಾ ! ಎಲ್ಲಿಟ್ಟಿದ್ದೀಯೋ ನೋಡಿ ತೊಗೊಂಬಾ! ಏ ಹುಡುಗಾ ! ಈ ಹೊದಿಕೆ ಉಟ್ಟುಕೋ ! ಶಾಲು ತಲೆಗೆ ಸುತ್ತಿಕೋ ! ಊ ! ಅದೇನದು ಅಷ್ಟು ಹೊತ್ತು ! ಮಲ್ಲೀ ನಿನ್ನ ಕೈಯ ಎರಡೂ ಕಂಕಣ ಅವನಿಗೆ ಕೊಡು. ತೆಳ್ಳಗಿದ್ದಾನೆ. ಹಿಡಿತಾವೇಳು ! ಸರಿ ! ಒಂದು ದಿಷ್ಟಿ ದಾರವಿದ್ದರೇ ಒಳ್ಳೇದಾಗಿತ್ತು ! ಈಗೆಲ್ಲಿ ಸಿಗುತ್ತೆ ಬಿಡು ? ಇಲ್ದಿದ್ರೂ ಸರಿ. ಆ ಹುಡುಗನ ಚಡ್ಡಿ ಗಂಜಿ ಮಡಿಕೆ ಕೆಳಗೆ ಬಚ್ಚಿಡು ಹುಡುಗೀ ! ಆ ! ಗೊಲ್ಲರ ವೇಷ ಹಾಕಿದೀಯಾ ಹುಡುಗಾ ! ಹಾಗೇ ಕಾಣ್ತಾ ಇದೀಯಾ ! ಯಾರಾದ್ರು ಮಾತಾಡ್ಸಿದ್ರೆ ಗೊಲ್ಲರ ತರ ಮಾತಾಡಬೇಕು !” “ಸರಿ ” ಎಂದ ಯುವಕ. ಅವನ ಹಾಗೆ ಅಡಗಿ ಕೆಲಸ ಮಾಡುವವರಿಗೆ ಈ ತರದ ಗೊಲ್ಲರ ವೇಷಗಳು ಮಾಮೂಲೇ. ಯುವಕ ಸಂಸಿದ್ಧನಾದ. ವೇಷ ತಯಾರಾಯಿತು. ಇನ್ನು ಹೇಗಾದರೂ ಹೊರಬೀಳುವುದು ಮಾತ್ರ ಉಳಿದಿತ್ತು. ಮುದುಕಮ್ಮನ ಆಜ್ಞೆಗೆ ಕಾಯುತ್ತಿದ್ದ. ಹಠಾತ್ತಾಗಿ ಬಾಗಿಲ ಮೇಲೆ ದಬಾ ದಬಾ ಅಂತ ನಾಲ್ಕೈದು ಪೆಟ್ಟು ಬಿದ್ದವು. ” ಏ ರಾಮೀ! ಬಾಗಿಲು ಕಿ ಖೋಲ್ ” ಎನ್ನುವ ಕರ್ಕಶ ಸ್ವರ ಕೇಳಿಸಿತು. ಕೆಲವರು ಬೂಟುಗಾಲಿನವರು ಆ ಮನೆ ಸುತ್ತುವರೆದು ನಿಲ್ಲುವ ಸದ್ದು ಕೇಳಿತು. ಇನ್ನೇನಿದೆ ? ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಗೊಲ್ಲರ ವೇಷ ಹಾಕಿದ್ದೆಲ್ಲಾ ವ್ಯರ್ಥಾನೇ. ಯುವಕನ ಕೈ ರಿವಾಲ್ವಾರ್ ಗಾಗಿ ಹುಡುಕಿತು. ಆದ್ರೆ ಮುದುಕಮ್ಮನ್ನ ಕೇಳುವ ಧೈರ್ಯ ಬರಲಿಲ್ಲ. ಮುದುಕಮ್ಮ ಗುಸುಗುಸು ಶುರುಮಾಡಿದಳು. ” ಮಲ್ಲೀ! ಆ ಮೂಲೆಗೆ ಮಂಚ ಹಾಕಿ ಕಂಬಳಿ ಹಾಕು. ಹುಡುಗಾ ! ಅದರಲ್ಲಿ ಮಲಗು. ಊ ! ಮಲಗು “ ಯುವಕನಿಗೇನು ಮಾಡಬೇಕೋ ತೋಚಲಿಲ್ಲ. ಕೊನೆಗೆ ಸಿಕ್ಕಿ ಬೀಳುವುದೇ ಹಣೆಯಲ್ಲಿ ಬರೆದ ಹಾಗಿದೆ. ಮಂಚದ ಮೇಲೆ ಮಲಗುವುದರಿಂದ ಏನು ಪ್ರಯೋಜನವೋ ಅವನಿಗೆ ಅರ್ಥವಾಗಲಿಲ್ಲ. ತಪ್ಪಿದ್ದಲ್ಲದ ಹಾಗೆ ಮಲಗಿದ. ಮತ್ತೆ ಬಾಗಿಲ ಮೇಲೆ ದಬದಬ! “ಏ ರಾಮೀ ! ಬಾಕ್ಲು ತೆಗಿತಿಯಾ ಇಲ್ಲಾ… ಬೇಗ್ನೆ.. ಹರಾಂಜಾದೀ ! ಮಾತಾಡೇ ! ನಿನ್ ಚರ್ಮ ತೆಗಿತೀವಿ ! ಫೌರನ್ ಬಾಕ್ಲು ತೆಗಿದಿದ್ರೆ ತೋಡ್ ದಾಲ್ತೇ ದೇಖ್ “ ಮುದುಕಮ್ಮ ಆಗಲೇ ನಿದ್ರೆಯಿಂದ ಎದ್ದಹಾಗೆ ಆಕಳಿಸುತ್ತಾ ಮೈಮುರಿದ ಹಾಗೆ ಸದ್ದು ಮಾಡುತ್ತಾ ಅಸ್ಪಷ್ಟವಾಗಿ ಆರಂಭಿಸಿದಳು. “ಯಾರಲೇ ಅದು ಅರ್ಧರಾತ್ರಿ ಕಳ್ಳನ ತರ ಬಂದು ಬಾಗಿಲು ಬಡಿಯೋದು ? ಕಳ್ಳ ನನ್ಮಕ್ಳು ಅಂತ ಕಾಣತ್ತೆ. ನಿಮ್ ಮನೆ ಹಾಳಾಗ ! ಪೋಲೀಸಿನೋರು ಗಸ್ತುಗ್ಬಂದ್ರೆ ನಿಮ್ ಬೆನ್ನು ಮುರಿಯತ್ತೆ “ ಹೊರಗಿನವರು ” ನಾವೇ ಪೋಲೀಸಿನವರು” ಅಂತ ಏನೋ ಹೇಳ ಹೋದರು. ಮುದುಕಮ್ಮ ಕೇಳಿಸಿಕೊಳ್ಳಲಿಲ್ಲ. ಗಟ್ಟಿ ಗಟ್ಟಿ ಮಾತು, ನಡುನಡುವೆ ಗುಸುಗುಸು. “ಕಾಲಾ ಹಾಳಾಗಿ ಹೋಯ್ತು! ಯಾರ ಮನೆಯಲ್ಲಿ ಅವ್ರನ್ನ ಮಲಗಾಕೆ ಬಿಡೋದಿಲ್ಲ. ರಾತ್ರಿ ಇಲ್ಲ ಹಗಲಿಲ್ಲ. ಸಾಯಿಸ್ತಾರೆ. ಏ ಹುಡುಗಿ ! ಹುಡುಗನ ಮಂಚಕ್ಕೆ ಆ ದಪ್ಪ ಕಟ್ಟಿಗೆ ಅಡ್ಡ ಇಡು. ನನ್ನೇನ್ ದೋಚಿಕೊಳ್ತೀರೋ ಮುದುಕೀನ್ನ ? ನನ್ಹತ್ರ ಏನಿದೆ ಅಂತ ? ಕಳ್ರಾದರೇ ನನ್ಹತ್ರ ಇರೋ ಒಡವೆ ತಲೆಗಿಷ್ಟು ಅಂತ ತೊಗೊಳ್ಳಿ. ಏಳ್ಳಿಕ್ಕಾಗಲ್ಲ. ಬಾಗಿಲು ಮುರೀತೀರೋ ಹೇಗೆ ? ನಿಲ್ರಿ. ನಿಲ್ರಿ. ನಿಮ್ ಕುದುರೀನ್ನ ಸ್ವಲ್ಪ ಕಟ್ಟಿಹಾಕಿದ್ರೆ ತಪ್ಪಾ? ಏಳ್ಳಿಕ್ಕಾಗದ ಮುಂಡೆ ನಾನು. ಚೆಂಗುಚೆಂಗು ಅಂತ ಕುಣಕೋತಾ ಬರ್ಲಿಕ್ಕೆ? “ಮಲ್ಲೀ! ಇನ್ನೇನೂ ಮಾತಾಡ್ಬೇಡ ! ಹೋಗಿ ಆ ಹುಡುಗನ ಮಗ್ಗುಲಲ್ಲಿ ಮಲಗು! ಊ ! ನಡೀ! ಇನ್ನ ವಡೀರಿ ! ಎದ್ದು ತೆಗೆಯೋವರ್ಗೂ ನಿಮಗೆ ಪುರುಸೊತ್ತಿ ಇಲ್ಲಂದ್ರೇ ವಡದೇ ಬಿಡ್ರಿ. ಮನೆ ಒಳಗ್ಬಂದು ನನ್ಹತ್ರ ಇರೋವೆಲ್ಲಾ ತಲೆಗೊಂದು ಅಂತ ದೋಚಿಕೊಳ್ರಿ…! ದೀಪ ಹಚ್ಚೋಣ ಅಂದ್ರೆ ಒಲೆ ಯಲ್ಲಿ ಬೆಂಕಿ ಇಲ್ಲ. ಈ ಮಲ್ಲಿ ಮುಂಡೆಗೆ ಅದೆಷ್ಟು ಸಲ ಹೇಳಿದೀನಿ ಸಂಜೆ ಹೊತ್ನಾಗೆ ವಲಿ ಆರಿಸಬೇಡ ಅಂತ. ದೇಬೇ ಮುಂಡೆ! ಇನ್ನ ನಿನ್ನೆ ಗಂಡ ಬಂದಿದಾನೆ. ಹಿಡಿಲಿಕ್ಕೇ ಆಗಲ್ಲ. ಏನ್ಕೆಲ್ಸ ಹೇಳಿದ್ರೂ ಕೇಳಿಸಿಕೊಳ್ಳಲ್ಲ. ನಡುವಿನಲ್ಲೇ ಬಿಟ್ಬಿಡ್ತಾಳೆ. ಗಂಡನ್ನ ನೋಡಿ ಮುರಿಸಿಹೋಗ್ತಿದಾಳೆ. ಸೋಗುಲಾಡಿ! ಅವಳ ಮೇಲೆ ಕೈ ಹಾಕಿ ಮಲಗು ಹುಡುಗಾ ! ನೋಡೊವ್ರಿಗೆ ಅನುಮಾನ ಬರಬಾರದು. ಇನ್ನ ನನ್ಕೈಲಾಗಲ್ಲ ತಂದೇ! ಈ ಮಲ್ಲಿಮುಂಡೆ ಏಳಲ್ಲ. ಓ ಮಲ್ಲೀ ! ಓ ಮಲ್ಲಿಗಾ ! ಊಹೂ ! ಇವರು ಏಳಲ್ಲ. ನನಗಾ ದೀಪ ಸಿಗಲ್ಲ ಈ ಕತ್ಲಾಗೆ. ಇವರ ವಯಸಿಗಿಷ್ಟು ! ಬಜಾರಿನಲ್ಲಿ ಇಷ್ಟು ಗದ್ದಲ ಆಗ್ತಿದ್ರೆ ಗೊರಕೆ ಹೊಡೆದು ನಿದ್ರೆ ಮಾಡ್ತಿದಾರೆ. ಈ ತುಂಟ ಹುಡುಗ್ರನ್ನ ಏನ್ಮಾಡ್ಲಿ ? ಕಣ್ಮುಂದೆ ಮಗ, ಸೊಸೆ ಕಣ್ಮುಚ್ಚಿಕೊಂಡು ಹೋದ್ರು. ಈ ಹುಡುಗೀನ್ನ ನನ್ನ ಮಡಿಲಿಗೆ ಹಾಕಿದ್ರು. ಏಟು ಹಾಕಿದ್ರೆ ರಗಳೆ. ಹಾಕದಿದ್ರೆ ಬುದ್ದಿ ಬರಲ್ಲ. ಇದೇನು ಪೀಡೆ ತಂದಿಟ್ಟೆ ತಂದೇ ನನ್ನ ಪ್ರಾಣಕ್ಕೆ ! ಎಲ್ಲಿದೀಯೋಮಗನೇ ! ನನ್ಮಗನೇ! ಮುದುಕಿನ್ನ ಬಿಟ್ಟು ಹೋದೆಯಲ್ಲಾ ಮಗನೇ ! ನಾ ಏನ್ಮಾಡ್ಲಿ ಮಗನೇ! ನನ್ಮಗನೇ!” ಮುದುಕಮ್ಮ ಆರ್ಭಾಟದಲ್ಲಿ ಅಳಲಾರಂಭಿಸಿದಳು. ಹೊರಗಿನವರು ನಾನಾ ತರ ಮಾತಾಡ್ತಾಇದ್ದರು. “ಪಾಪ ಹೋಗ್ಲಿ ! ” ಅಂತ ಒಬ್ಬರೆಂದರೇ ” ಹಾಗೇನಿಲ್ಲ ! ಆ ಮುದುಕಿ ಮಹಾ ಬದ್ಮಾಷ್…” ಅಂತ ಮತ್ತೊಬ್ಬರು, ಹೀಗೆ

ಮಾಜಿ ಪ್ರದಾನಿಯವರ ಅನುವಾದಿತ ಕಥೆ Read Post »

ಅನುವಾದ

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತ ಕಥೆ ಗೊಲ್ಲರ ರಾಮವ್ವ (ಭಾಗ- ಎರಡು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ                                                                 ಭಾಗ – ೨ “ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ. “ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !” ಹೊಸಬ ಮಾತಾಡಲಿಲ್ಲ. ಮುದುಕಮ್ಮ ತಕ್ಷಣ ಮೊಮ್ಮಗಳನ್ನ ಕರೆದಳು. ” ಮಲ್ಲೀ ! ಮಲ್ಲಿಮುಂಡೇ ! ದೀಪ ಹಚ್ಚು ಬೇಗ ! ಏನು ಆಗ್ಲೇ ನಿದ್ರೇನಾ ಹುಡುಗೀ” ದೀಪದ ಮಾತು ಕೇಳಿದ ತಕ್ಷಣ ಹೊಸಬ ಬೆಚ್ಚಿಬಿದ್ದು ಅಂದ. “ಬೇಡ ಬೇಡವ್ವಾ ! ದೀಪ ಹಚ್ಚಬೇಡ ನಿನ್ ಪುಣ್ಯ. ಪೋಲೀಸರು ನನ್ಹಿಂದಿದ್ದಾರೆ. ಹಿಡಿದು ಬಿಡ್ತಾರೆ “ “ಸಾಕು ಸುಮ್ನಿರು ! ಪೋಲೀಸರಿಗಿಂತ ಮುಂಚೆ ಸಾವಿನ ದೇವತೆ ನಿನ್ನ ಹಿಡಿದಾಳೆ ಅಂತ ಕಾಣ್ತದೆ” ಅಂತ ಗದರಿಸಿದಳು. ಮಲ್ಲಮ್ಮ ದೀಪ ಹಚ್ಚಿದಳು. ಮುದುಕಮ್ಮ ಒಂದು ಕಂಬಳಿ ಹಾಸಿದಳು. ದೀಪದ ಬೆಳದಿನಲ್ಲಿ ಬಂದವನನ್ನು ಪರೀಕ್ಷೆಯಾಗಿ ನೋಡಿದಳು. ಬಡಕಲು ಮೈಯ ಯುವಕ… ಹದಿನೆಂಟು ವರ್ಷಕ್ಕಿಂತ ಜಾಸ್ತಿ ಇರಲಿಕ್ಕಿಲ್ಲ… ಎಳೇ ಮೀಸೆ… ಗಂಭೀರತೆ ಸೂಚಿಸುವ ಕಣ್ಣು….ಸುಕುಮಾರವಾದರೂ ಸುನಾಯಾಸವಾಗಿ ಬಗ್ಗಬಲ್ಲ ದೇಹ…. ಸೌಮ್ಯ ಸೌಜನ್ಯದ ಮುಖಮಂಡಲ.. ಇದೆಲ್ಲ ನೋಡಿದ ಮುದುಕಮ್ಮನ ಮೊಗದಲ್ಲಿ ಸೋಜಿಗ ಕಂಡಿತು. “ಒಳ್ಳೆ ರಾಜಕುಮಾರನ ತರ ಐದೀಯಲ್ಲ ಮಗಾ ! ನಿನಗ್ಯಾಕ್ ಬಂತೋ ಈ ಕಷ್ಟ ? ಮಲಗು.. ಮಲಗು… ಈ ಕಂಬಳಿ ಮೇಲೆ ಮಲಗು… ಭಯ ಬೀಳ್ತೀಯಾ ಯಾಕೆ ? ಮಲಗು.. ! ಆ! ಹಾಗೇ.. ಮಲ್ಲಿ ಹುಡುಗೀ ! ಒಲೆಮೇಲೆ ಒಂದು ಗಡಿಗೆಯಲ್ಲಿ ನೀರಿಕ್ಕು. ಏ ಇದೇನೇ ಅಷ್ಟು ಮೆಲ್ಲಗೆ ಕದುಲ್ತಾ ಇದೀಯಾ ? ಇಲ್ಲಿ ಹುಡುಗನ ಜೀವ ಹೋಗ್ತಿದ್ರೆ ಇವಳಿಗಿನ್ನೂ ನಿದ್ರೆ ಮಬ್ಬೇ ಹೋಗ್ಲಿಲ್ಲ. ಊ ! ಇಕ್ಕೀದೀಯಾ ಗಡಿಗೆ ? ಆ ! ಇಲ್ಲಿ ಬಾ… ದೀಪ ಹುಡುಗನ ಹತ್ತಿರ ತಕ್ಕಂಬಾ.. ದೀಪಕ್ಕೂ ನನಗೂ ನಡುವೆ ಆ ದೊಡ್ಡ ಕಟ್ಟಿಗೆ ನಿಲ್ಲಿಸು. ಅದಕ್ಕೆ ಕಂಬಳಿ ಹೊದಿಸು. ಹೊದಿಸಿದೆಯಾ ? ಆ ! ಈಗ ಸ್ವಲ್ಪ ಹುಶಾರಾಗಿದಿಯಾ ಹುಡುಗಿ ! ಗಂಡ ಒಂದು ನಾಲ್ಕು ಸಲ ಮೈ ಮುರಿಯುವಹಾಗೆ ಮಾಡಿದರೇ ಇನ್ನೂ ಚುರುಕಾಗ್ತೀಯಾ ! ಸ್ವಲ್ಪ ಸಂದು ಬಿಟ್ಟು ಒಂದು ಮುಚ್ಚಳ ಕವುಚಿ ಹಾಕು ದೀಪದ ಮೇಲೆ. ಈ ಹುಡುಗನ ಮೇಲೆ ಬೆಳಕು ಇರಬೇಕು. ಮತ್ತೆಲ್ಲಾ ಕತ್ತಲು. ಅದು ಉಪಾಯ ! ಆ ! ಹಾಗೇ ! ಐತೆ ನಿನ್ಹತ್ರ ಜಾಣತನ ! ಗಂಡನ ಹತ್ರ ಒಳ್ಳೆ ಸಂಸಾರ ಮಾಡ್ತಿ ಬಿಡು.. ! ಆಯ್ತಾ ! ಈಗ ಅವನ ಹತ್ರ ಕುತ್ಕೋ ! ಅವನ ಮೈಮೇಲಿನ ಮುಳ್ಳೆಲ್ಲಾ ಮೆಲ್ಲಕ್ಕೆ ತೆಗಿ… ಅದೇನೇ ನಾಚಿಕೆ ನಿಂದು ಅವನ್ನ ಮುಟ್ಲಿಕ್ಕೆ.  ಭಾರೀ ಮಾನವತಿ ಬಿಡು ನೀನು. ನಿನ್ ನಾಚಿಕೆಗಿಷ್ಟ್ ಬೆಂಕಿಹಾಕ್ತು ! ನಿನ್ ನಾಚಿಕೆಯಿಂದ ಅವನ ಜೀವ ತೆಗಿತಿಯೋ ಹೆಂಗೆ ? ನಾಚ್ಕೆ ಅಂತೆ ನಾಚ್ಕೆ ! ಊ ! ಹೇಳಿದ ಕೆಲಸ ಮಾಡೇ ! ಪಾಪ ! ಹೆಣದ ತರ ಬಿದ್ದಿದಾನೆ ! ಅವನ್ನ ನೋಡಿದ್ರೆ ಅಯ್ಯೋ ಪಾಪ ಅನಿಸಲ್ಲಾ ನಿಂಗೆ ಕಳ್ಳಮುಂಡೆ ? ಆ ! ಹಾಗೇ! ನೋವು ಮಾಡ್ಬೇಡ ಅವನಿಗೆ ….!” ಮುದುಕಮ್ಮನ ಗೊಣಗಾಟ ಮಹಾ ಪ್ರವಾಹದ ತರ ಸಾಗಿ ಹೋಗುತ್ತಿತ್ತು. ಅದರಲ್ಲೇ ಬೈಗುಳ. ಅದರಲ್ಲೇ ಹಾಸ್ಯ. ಅದರಲ್ಲೇ ಆಜ್ಞೆ.. ಅವಳ ಆಜ್ಞೆಗಳೆಲ್ಲಾ ಚಕಚಕ ಅಮಲಾಗುತ್ತಿದ್ದವು. ಆ ಯುವಕನು ನಿಜವಾಗಿ ಅರ್ಧ ಪ್ರಾಣನಾಗಿ ಬಿದ್ದಿದ್ದಾನೆ. ಅವನ ಮೈಮೇಲಿನ ಮುಳ್ಳುಗಳನ್ನು ಒಂದೊಂದಾಗಿ ಮಲ್ಲಮ್ಮ ತೆಗೀತಿದ್ದಾಳೆ. ಅವನಿಗೆ ಯಾವುದೋ ಹೊಸ ಲೋಕಕ್ಕೆ ಬಂದು ಬಿದ್ದಂತಿದೆ. ಮತ್ತೆ ಮುದುಕಮ್ಮ ವರಾತ ಹಚ್ಚಿದಳು. ” ಎಲ್ಲಾ ಮುಳ್ಳೂ ಬಂದ್ವಾ? ಭಾರೀ ಕಷ್ಟ ಪಟ್ಟೀಯಾ ಬಿಡು ! ಪುಣ್ಯ ಬಂತು ಬಿಡು ! ನಿನ್ಗೆ ಮುಂದಿನ ವರ್ಷ ಒಂದು ಗಂಡು ಕೂಸು ಹುಟ್ಟುತ್ತೆ ಬಿಡು. ಸರಿ ! ಇಲ್ಲಿ ಹಿಡಿ ! ನೀರು ಬಿಸಿಯಾಗಿದೆ. ಈ ಬಟ್ಟೆ ತೊಗೊಂಡು ಅವನ ಗಾಯ ಎಲ್ಲ ಕಾಸು. ರಕ್ತದ ಕಲೆ, ಮಣ್ಣು ಹೇಂಟೆ ಎಲ್ಲ ತೆಗೆದು ಹಾಕು. ಸ್ನಾನ ಮಾಡಿದ ಹಾಗೆ ಇರಬೇಕು ನೋಡು… ಪಾಪ ! ಎಂಥಾ ಸುಕುಮಾರ ಶರೀರನೇ ಇವಂದು?  ಮುಟ್ಟಿದರೇ ಒಳ್ಳೆ ಅರಳೆ ತರ ತಗುಲ್ತಾ ಐತೆ. ಎಂಥವನಿಗೆ ಎಂಥ ಗತಿ ಬಂತೋ ಪಾಪ !” ನೋಡ್ತಾ ನೋಡ್ತಾ ಮಲ್ಲಮ್ಮನ ಆರೈಕೆಯಿಂದ ಯುವಕ ಚೇತರಿಸಿಕೊಂಡ. ಅವನ ಗಾಯಗಳ ನೋವು ಕಡಿಮೆಯಾಯಿತು. ಮೈಯೆಲ್ಲಾ ಸ್ವಚ್ಛವಾಯಿತು. ಇಷ್ಟರಲ್ಲಿ ಮುದುಕಮ್ಮ ಏನೋ ತಂದಳು. ಯುವಕನ ತಲೆ ದೆಸೆಯಲ್ಲಿ ಕೂತು ಅವನ ತಲೆ ಸವರುತ್ತಾ ಮತ್ತೆ ಗೊಣಗಾಟ ಹಚ್ಚಿದಳು. “ಇನ್ನ ಏಳು ಮಗಾ ! ಕೊಂಚ ಗಂಜಿ ತಣ್ಣನ ಮಜ್ಜಿಗೆಯಲ್ಲಿ ಹಿಸುಕಿ ತಂದೀನಿ…. ಹೊಟ್ಟೆಗೆ ಹಾಕ್ಕೋ…. ಯಾವಾಗಾದ್ರೂ ಕುಡಿದಿದೆಯಾ ಗಂಜಿ? ನೀವೆಲ್ಲ ಅಕ್ಕಿ ತಿನ್ನುವ ಜನ ಅಂತ ಕಾಣತ್ತೆ ! ಆದರೇ ಗೊಲ್ಲರ ರಾಮಿ ಗಂಜಿ ಅಂದ್ರೆ ಏನಂತ ತಿಳಿದೀ? ಹೋಗೋ ಪ್ರಾಣ ಮರಳಿ ಬರ್ತೈತೆ. ನೋಡು ಮತ್ತೆ ! ಜಾತಿ ಕೆಟ್ಹೋಗ್ತದೆ ಅಂತ ಭಯಾನಾ ? ನೀನು ಬ್ರಾಹ್ಮಣನಾದ್ರೂ, ಜಂಗಮನಾದ್ರೂ ಯಾವ ಜಾತಿಯವನಾದ್ರೂ ಸರಿ… ಮುಂಚೆ ಪ್ರಾಣ ಉಳಿಸಿಕೋ… ಅಷ್ಟು ಬೇಕಾದ್ರೇ ಅದೇನೋ ನಾಲಿಗೆ ಮೇಲೆ ಬಂಗಾರದ ಕಡ್ಡಿಯಿಂದ ಸುಡಿಸಿಕೊಂಡ್ರೆ ಮತ್ತೆ ಜಾತಿ ಬರುತ್ತಂತಲ್ಲ.. ಆ ! ಇನ್ನ ಕುಡಿದ್ಬಿಡು ಗಟಗಟ….” ಯುವಕ ಎದ್ದು ಕೂತ. ಮುದುಕಮ್ಮನ ಮಾತುಗಳಿಗೆ ಅವನಿಗೆ ನಗೆ ಬಂತೆನ್ನುವುದಕ್ಕೆ ಅವನ ಮುಖದ ಮೇಲೆ ಕಿರುನಗೆ ಕಾಣಿಸಿಕೊಂಡಿತು. ಅವಳನ್ನ ನೋಡ್ತಾ ಪಾತ್ರೆ ತೊಗೊಂಡ. ಅದರಲ್ಲಿ ನವಜೀವನ ಸಾರವಿರುವ ಹಾಗೆ ಗಟಗಟ ಕುಡಿದ. ಮುದುಕಮ್ಮನ ಮಾತು ಅಕ್ಷರಶಃ ಸತ್ಯವಾಯಿತು…. ಅವನಿಗೆ ಅರ್ಧಪ್ರಾಣ ಬಂದ ಹಾಗಾಯಿತು. ಅವನ ಮುಖ ಅರಳತೊಡಗಿತು. ಕಣ್ಣಲ್ಲಿ ಜೋವನ ಜ್ಯೋತಿ ಬೆಳಗತೊಡಗಿತು. ಮುದುಕಮ್ಮನಿಗೂ ಪೂರ್ತಿ ಸಮಾಧಾನವಾಯಿತು.  ಅವನಕಡೆ ನೋಡ್ತಾ ನೆರಿಗೆ ಬಿದ್ದ ಮೊಗದಿಂದ ನಗ್ತಿದ್ರೆ ನೆರಿಗೆ ಯೆಲ್ಲಾ ಮಾಯವಾದ ಹಾಗೆ ಅನಿಸಿತು. ಕೆಲ ನಿಮಿಷ ಹಾಗೇ ಇದ್ದರು ಆ ಮುವ್ವರೂ….. ಹೊಸಬನ ದೇಹವನ್ನು ಪ್ರೀತಿಯಿಂದ ತಡವುತ್ತಿದ್ದ ಮುದುಕಮ್ಮನ ಕೈ ಆತನ ಚಡ್ಡಿಯ ಕಿಸೆಯ ಹತ್ತಿರ ಹಠಾತ್ತಾಗಿ ನಿಂತುಹೋಯಿತು.  ತಕ್ಷಣ “ಇದೇನೋ ಇದು” ಎನ್ನುತ್ತ ಅವನ ಕಿಸೆಗೆ ಕೈಹಾಕಿ ಒಂದು ಉಕ್ಕಿನ ವಸ್ತು ಹೊರತೆಗೆದಳು. ” ಅದು ರಿವಲ್ವಾರ್ ಅವ್ವಾ ! ಗುಂಡಿನ ತುಪಾಕಿ…” ಅಂದ ಆ ಯುವಕ. ” ಯಾಕ್ಮಗಾ ಈ ತುಪಾಕಿ ? ನಮ್ಮನ್ನ ಕೊಲ್ತೀಯ ಏನು? ” ಅಂದಳು ಮುದುಕಮ್ಮ. ” ಇಲ್ಲವ್ವಾ ! ನಿಮ್ಮನ್ನ ಕೊಲ್ಲೋರ್ನ ಕೊಲ್ಲೋದಕ್ಕೆ ಅದು. ಈ ರಾತ್ರಿ ಇಬ್ಬರು ಪೋಲೀಸರನ್ನ ಕೊಂದೀನಿ. ಮೊನ್ನೆ ನಿಮ್ಮ ಊರಿನಲ್ಲಿ ನಾಲಕ್ಕು ಮಂದಿ ನಿರ್ದೋಷಿಗಳನ್ನ ಕೊಂದಿದ್ದು ಈ ಪೋಲೀಸಿನೋರೇ !” ಮುದುಕಮ್ಮನ ಮುಖಚರ್ಯೆ ವರ್ಣನಾತೀತವಾಗಿ ಬದಲಾದವು. ಮುಂಚೆ ಸ್ವಲ್ಪ ಹೆದರಿಕೆ… ಮತ್ತೆ ಸ್ವಲ್ಪ ಧೈರ್ಯ… ನಂತರ ಉತ್ಸಾಹ… ಅದರ ಬೆನ್ನಿಗೆ ವಿಜಯೋತ್ಸಾಹ.. ಸಾಲಾಗಿ ಕಂಡುಬಂದವು. ಯುವಕ ಮುದುಕಮ್ಮನ ಮುಖವನ್ನ ಸೂಕ್ಷ್ಮವಾಗಿ ನೋಡುತ್ತಿದ್ದ. ಭಾವ ಪರಿವರ್ತನೆ ಆದ ಹಾಗೆಲ್ಲಾ ಅವನ ಮನಸು ಪರಿಪರಿಯಾಗಿ ತರ್ಕಿಸುತ್ತಿತ್ತು. ಈ ವಿಷಯ ಯಾಕಾದ್ರೂ ಹೇಳಿದ್ನಾ? ಎನ್ನುವ ಪಶ್ಚಾತ್ತಾಪ ರೇಖೆ ಸಹ ಅವನ ಮನಸನ್ನು ಒಮ್ಮೆ ಸ್ಪರ್ಶಿಸಿ ಹೋಯಿತು. ಏನನ್ನುತ್ತಾಳೋ ಈ ಮುದುಕಮ್ಮ ? ಶತಾಬ್ದಗಳ ಕಾಲ ದಾಸ್ಯವನುಭವಿಸಿದ ಈ ಗ್ರಾಮೀಣ ದಲಿತರಲ್ಲಿ ತೇಜವೆಲ್ಲಿ ಉಳಿದಿದೆ ? ಇನ್ನು ಈ ಗುಡಿಸಲಿನ ಆಶ್ರಮದಿಂದ ತನಗೆ ಉದ್ವಾಸನೆ ತಪ್ಪಿದ್ದಲ್ಲ ಎಂದು ಅವನಿಗೆ ಅನಿಸಿತು. ಇಬ್ಬರು ಪೋಲೀಸರನ್ನ ಕೊಂದ ಕೊಲೆಗಾರನನ್ನು ಯಾರು ಇಟ್ಟುಕೊಳ್ಳುತ್ತಾರೆ? ಎಷ್ಟು ಜನ ತನ ಜೊತೆಗಾರ ಕಾರ್ಯಕರ್ತರು ಈ ಗ್ರಾಮಸ್ತರ ಪುಕ್ಕಲುತನದಿಂದಾಗಿ ಸಿಕ್ಕಿ ಹಾಕಿಕೊಳ್ಳಲಿಲ್ಲ ? ಯುವಕನ ಮನಸು ಪರಿಪರಿವಿಧವಾದ ವಿತರ್ಕಕ್ಕೆ ಒಳಗಾಗುತ್ತಿತ್ತು. ಸ್ವಲ್ಪ ಹೊತ್ತು ಯೋಚಿಸಿದ ಯುವಕನ ಮನಸು ಧಸಕ್ಕೆಂದಿತು. ” ಇಬ್ಬರ್ನಾ ಕೊಂದಿದ್ದು ? ಮತ್ತೆ ಇನ್ನಿಬ್ಬರು ಉಳಿದರಲ್ಲ ಮಗಾ ! ಅರ್ಧ ಕೆಲಸನೇ ಮಾಡಿದಿ…” ಯುವಕ ಆಶ್ಚರ್ಯಪಟ್ಟ.  ಆತನ ಸುಸಂಪನ್ನ ಮನಸು ಗರ್ವದಿಂದ ಕಲ್ಪನಾಕಾಶದಲ್ಲಿ ಭ್ರಮಣ ಮಾಡಹತ್ತಿತು. ಅವನ ತಾರುಣ್ಯದ ಭಾವುಕತೆ ಆತನನ್ನ ಮೈಮರೆಸಿತು. ಶ್ರೀರಾಮನ ಸ್ಮರಣೆಯಿಂದ ಉಕ್ಕಿ ಏರುವ ಆಂಜನೇಯನ ಮೈ ತರಹ ತನ್ನ ದೇಹ ಸಹ ಏರಿದಂತೆನಿಸಿತು. ರಿವಾಲ್ವಾರ್ ಗಾಗಿ ಕೈ ಚಾಚುತ್ತಾ ..” ಉಳಿದವರ ಕತೆ ಸಹ ಮುಗಿಸ್ತೀನಿ ಕೊಡವ್ವ ” ಅಂದುಬಿಟ್ಟ. ಮುದುಕಮ್ಮ ರಿವಾಲ್ವಾರ್ ತನ್ನ ಹತ್ತಿರ ಇಟ್ಟುಕೊಂಡು ಮಾತು ಪ್ರಾರಂಭಿಸಿದಳು. “ಸಾಕು ಬಿಡು ಇಲ್ಲಿಯವರೆಗೆ ! ಭಾರೀ ಬಹದೂರ್ ನೀನು ! ತಿಂದುಂಡು ಇರಲಿಕ್ಕೆ ಮನಸಾಗದೆ ಪೋಲೀಸರ ಜೊತೆಗೆ ವೈರ ಇಟ್ಕೊಂಡಿದಾನೆ ನೋಡು ತುಂಟ ಹುಡುಗ ! ಯಾಕೆ ನಿಂಗೆ ಈ ಪೋಲೀಸ್ ನೋರ ಜತೆ ಕಾದಾಟ ?” ಯುವಕನೆಂದ ” ನಾನು ಕಾಂಗ್ರೆಸ್ ವಾಲಂಟೀರ್ ಅವ್ವಾ!  ನೈಜಾಮ್ ರಾಜನ ಜೊತೆ ಕಾಂಗ್ರೆಸ್ ನವರು ಹೋರಾಡ್ತಾ ಇದಾರೆ. ಜನತೆ ಎಲ್ಲಾ ಹೋರಾಡ್ತಾ ಇದೆ. “ ಯುವಕನು ಯಾವುದೋ ರಾಜಕೀಯ ಸಿದ್ಧಾಂತದ ಬೋಧನೆ ಶುರುಮಾಡುವ ತರಾ ಇತ್ತು. ಮುದುಕಮ್ಮ ನಡುವಿನಲ್ಲೇ ಬಾಯಿ ಹಾಕಿ ” ಎಲ್ಲಿದೆ ನಿನ್ನ ಹೋರಾಟ ? ಇಲ್ಲಿ ದೊಡ್ಡೋರೆಲ್ಲಾ ಆ ಪೋಲೀಸರನ್ನ ತಮ್ಮ ಮನೆಗಳಲ್ಲೇ ಮಲಗಿಸಿಕೊಳ್ತಾರೆ . ಬಡವರು ಹೋರಾಡಿದ್ರೆ ಏನಾಗ್ತದೋ ?” ” ಬಡವರಿಂದಲೇ ಸಾಗ್ತಾ ಇದೆ ಅವ್ವಾ ಕಾಂಗ್ರೆಸಿನ ಹೋರಾಟ ” ಅಂದ ಯುವಕ. ” ಸರಿ ಹಾಗಾದ್ರೇ ನಿಮ್ಮ ಅದೇನು ಕಾಂಗಿರಿಜೋ ಗೀಂಗಿರಿಜೋ ಅದರಲ್ಲಿ ಯಾರೂ ವಯಸಾದವರೇ ಇಲ್ಲಾ? ಗಡ್ಡ ಮೀಸೆ ನೆರೆತೋರೆಲ್ಲಾ ಎಲ್ಲಿ ಹಾಳಾಗಿದಾರೆ?” “ಅವರೆಲ್ಲಾ ಶಹರಿನಲ್ಲಿರ್ತಾರೆ. ರಾಜನ ಹತ್ತಿರ ಮಾತಾಡ್ತಾರೆ. ಪ್ರಜೆಗಳ ಕಡೆಯಿಂದ ವಾದ ಮಾಡ್ತಾರೆ.. ಅಧಿಕಾರ ಕೊಡುಸ್ತಾರೆ.. ನಾಯಕತ್ವ ಮಾಡ್ತಾರೆ.” ಮುದುಕಮ್ಮ ಬೇಸರದಿಂದ ನಡುವಲ್ಲೇ ” ಏಹೇ ! ಇದೆಲ್ಲ ನನ್ಗೆ ಹಿಡಿಸ್ತಾ ಇಲ್ಲ. ಅಲ್ಲ. ದೊಡ್ಡ ದೊಡ್ಡವರೆಲ್ಲ ಬರೀ ಮಾತಾಡ್ತಾ ಕೂತ್ಕೋತಾರಾ! ಹಸು ಕೂಸುಗಳ್ನ ಪೋಲೀಸರ ಮೇಲಕ್ಕೆ ಕಳುಸ್ತಾರಾ ! ನಿಮ್ಮಂಥವರೇನೋ ನೀವು ಮದುವೆಮಾಡಿಕೊಂಡ ಹೆಂಡಂದರ್ನ ಮುಂಡಾಮೋಚಿಸಲಿಕ್ಕೆ ತುಪಾಕಿ ಹೆಗಲಿಗೆ ಹಾಕಿಕೊಂಡು ತಿರುಗ್ತೀರಾ ? ಎಷ್ಟು ಅನ್ಯಾಯದ ದಿನ ಬಂತು !  ಹಾಳಾಗ್ಹೋಗ್ಲಿ !” ಹಾಗೇ ಸ್ವಲ್ಪ ಹೊತ್ತು ಗೊಣಗಿ ಕೊಂಡು ಶಾಸಿಸಿದಳು. ” ಇಲ್ನೋಡು ! ಇನ್ನು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗು. ಇನ್ನು ಒಂದು ಸರಿಹೊತ್ತು ಇದೆ. ಸ್ವಲ್ಪ ನಿದ್ರೆ ಮಾಡಿದ್ರೆ ಬದುಕ್ತಿಯ. ಏನೇ ಮಲ್ಲೀ ! ನೋಡು. ನಾನು ನೀನು ಈ ರಾತ್ರಿಎಲ್ಲಾ ಕಾವಲಾಗಿರಬೇಕು. ನೀನು ಆ ಕೊನೆಗೆ. ನಾನು ಈ ಕೊನೆಗೆ. ತೂಕಡಿಕೆ ಬಂದರೇ ಜೋಕೆ. ಒಂದು ಕೊಟ್ಟೆ ಅಂದರೇ ದೆವ್ವ ಬಿಡತ್ತೆ. ಆ !”                                                                                                                                                                                                      (ಮುಂದುವರೆಯುತ್ತದೆ)

ಮಾಜಿ ಪ್ರದಾನಿಯವರ ಅನುವಾದಿತ ಕಥೆ Read Post »

ಅನುವಾದ

ಗೊಲ್ಲರ ರಾಮವ್ವ

ಅನುವಾದಿತ ಕಥೆ ಗೊಲ್ಲರ ರಾಮವ್ವ(ಭಾಗ- ಒಂದು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಪಿ.ವಿ.ನರಸಿಂಹರಾವ್ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ ತಂದಿದ್ದಾರೆ. ಒಟ್ಟು ೧೭ ಭಾಷೆ ಬಲ್ಲವರಾಗಿದ್ದರು. ಕನ್ನಡಕ್ಕೆ: ರಮೇಶ್ ಬಾಬು ಚಂದಕ ಚರ್ಲ ಢಾಂ…..ಢಾಂ…..ಢಾಂ…! ಬಾಂಬುಗಳ ಸ್ಫೋಟದಿಂದ ಅರ್ಧ ರಾತ್ರಿಯ ಪ್ರಶಾಂತ ವಾತಾವರಣ ಕದಡಿತು. ಎಲ್ಲೆಡೆ ತುಂಬಿನಿಂತ ನೀರವತೆಯನ್ನು ಆ ಧ್ವನಿ ತರಂಗಗಳು ಒಂದು ವಿಚಿತ್ರ ಸಂಚಲನವನ್ನೆಬ್ಬಿಸಿ ಶೂನ್ಯದಲ್ಲಿ ವಿಲೀನ ಮಾಡಿದವು. ಗಾಢ ನಿದ್ರೆಯಲ್ಲಿದ್ದ ಗ್ರಾಮವೆಲ್ಲಾ ಒಮ್ಮೆಲೇ ತತ್ತರಿಸಿ ಹೋಯಿತು. ಮಕ್ಕಳಾದಿಯಾಗಿ ಎಲ್ಲಾರೂ ಗೋಳಿಟ್ಟರು. ನಿದ್ದೆಯ ಮಂಪರಿನಲ್ಲಿ ಏನು ನಡೆಯುತ್ತಿದೆಯೋ ಯಾರಿಗೂ ತಿಳಿಯುತ್ತಿಲ್ಲ. ಏನೋ ನೋವು… ಏನೋ ಕಳವಳ… ಏನೋ ಹೆದರಿಕೆ. ಆದರೂ ಎಲ್ಲಾ ಅಗಮ್ಯಗೋಚರ. ಊರಿನವರಿಗೆಲ್ಲಾ ಯಾವುದಾದರೂ ದುಃಸ್ವಪ್ನ ಬಿದ್ದು ಎಲ್ಲರೂ ಒಟ್ಟಿಗೆ ಎದ್ದು ಕೂತಿದ್ದಾರಾ ಎನ್ನುವಷ್ಟು ಗಲಿಬಿಲಿ ಯಾಗಿತ್ತು ಆ ಎರಡು ನಿಮಿಷಗಳಲ್ಲಿ…. ಇಷ್ಟು ಗೊಂದಲ ವಾದರೂ ಬಜಾರು ಮಾತ್ರ ನಿರ್ಮಾನುಷ್ಯ ವಾಗೇ ಇತ್ತು. ಬಾಗಿಲು ತೆಗೆದು ಹೊರಗೆ ನೋಡಬೇಕೆನ್ನುವವರ ಕೈಗಳು ಸಹಿತ ಚಿಲಕ ಗಳ ಮೇಲೆ ಹೋಗುತ್ತಿದ್ದ ಹಾಗೇ ಜಡವಾಗಿದ್ದವು. ಬೇಜಾರಿನಿಂದ ಆಚೆ ಈಚೆ ಹಾರುವ ಹಕ್ಕಿಗುಂಪು, ಅವುಗಳ ರೆಕ್ಕೆಗಳ ಪಟಪಟ ಸದ್ದು, ಊರಿನ ಎಲ್ಲ ಹಿತ್ತಲುಗಳಿಂದ ಕೇಳಿಬರುತ್ತಿದ್ದ ನಾಯಿಗಳ ಬೊಗಳಿಕೆ, ದೊಡ್ಡಿಗಳಲ್ಲಿ ಮೆಲಕು ಹಾಕುತ್ತಿದ್ದ ದನಕರುಗಳ ಸಪ್ಪಳ. ಅಲ್ಲಲ್ಲಿ ಬೇಲಿಗಳನ್ನೆಲ್ಲ ತುಳಿದು ಓಡುತ್ತಿದ್ದ ಕೋಣಗಳ ಗೊರಸುಗಳ ಘರ್ಷಣೆ- ಇವುಮಾತ್ರ ನಂತರ ಕೇಳಿಬಂದವು.  ಸದ್ದು ಕೇಳಿದ ತಕ್ಷಣ ಗೋಳಿಟ್ಟ ಗ್ರಾಮಸ್ಥರಾರೂ ಅದೇನೋ ದಿವ್ಯ ಜ್ಞಾನ ಬೋಧಿತರ ತರ ಕಿಮ್ಮೆನ್ನಲಿಲ್ಲ. ಕಿಮ್ಮೆನಲಿಲ್ಲ ನಿಜ. ಆದರೇ ಹಸುಗೂಸುಗಳೂ ಸೇರಿ ಅಲ್ಲಿ ಯಾರೂ ನಿದ್ರೆ ಮಾಡಲಿಲ್ಲ. ಏನೋ ಗುಸು ಗುಸು .. ಏನೋ ಸಂಜ್ಞೆಗಳು.. ಏನೋ ಅಸಹಾಯಕ ನೋಟ… ಏನೋ ಕೇಳಿಸದಂಥ ಹರಕೆಗಳು. ತಾಯಿಗಳು ಮಕ್ಕಳಿಗೆ “ಶ್ರೀರಾಮರಕ್ಷ” ಎನ್ನುತ್ತ ದೃಷ್ಟಿ ತೆಗೆದರು. ಮಕ್ಕಳ ಹೆದರಿಕೆ ಹೋಗಲಾಡಿಸಲು ಅವರ ಅಂಗಾಲಿನ ಧೂಳು ತೆಗೆದು ಅವರ ಹಣೆಗೆ ಹಚ್ಚಿದರು. ಬೆನ್ನು ನೇವರಿಸಿದರು. ಆದರೇ ಮಕ್ಕಳ ಹೆದರಿಕೆಗೆ ಉಪಾಯ ಹೇಳುವ ತಾಯಂದರಿಗೆ ತಮ್ಮ ಹೆದರಿಕೆ ಹೋಗಲಾಡಿಸುವ ಉಪಾಯವೇ ಗೊತ್ತಾಗಲಿಲ್ಲ. ಹಣೆಗೆ ಬೊಟ್ಟಿಡುತ್ತಿದ್ದ ಕೈಗಳ ಬಳೆಗಳು ಗಲಗಲ ಎನ್ನುತ್ತಲೇ ಇದ್ದವು. ಕಾಲಿನ ಪಟ್ಟಿಗಳು ಕೂಡ ಕೊಂಚ ಝೇಂಕರಿಸುತ್ತಲೇ ಇದ್ದವು. ಅದೊಂದು ವಿಚಿತ್ರ ಪ್ರಳಯ…ಅದೊಂದು ಕ್ಷಣಿಕ ಮೃತ್ಯು ತಾಂಡವ….. ಅದೊಂದು ಅಸ್ಥಿರೊತ್ಪಾತ….. ಒಂದು ಗಂಟೆ ಕಳೆಯಿತು.  ಎಂದಿನಹಾಗೇ ಸುತ್ತೂ ಅಂಧಕಾರ ಆವರಿಸಿತು. ಚಿಮ್ಮಂಡಿ ಹುಳಗಳು ಏಕಶೃತಿಯಲ್ಲಿ ಹಾಡುತ್ತಿವೆ. ಎಲ್ಲಾ ಎಂದಿನ ಹಾಗೇನೇ ! ಆದರೇ ನಿದ್ರೆ ಮಾತ್ರ ಊರಿನ ಹತ್ತಿರ ಸುಳಿದಿರಲಿಲ್ಲ. ಗೊಲ್ಲರ ರಾಮವ್ವ ತನ್ನ ಗುಡಿಸಲಲ್ಲಿ ಕತ್ತಲಲ್ಲೇ ಕುಳಿತಿದ್ದಾಳೆ. ಅವಳ ಕೈಕಾಲುಗಳು ನಡುಗುತ್ತಿವೆ. ಸ್ವಲ್ಪ ಅವಳ ವಯಸ್ಸಿನಿಂದ, ಮತ್ತೆ ಸಲ್ಪ ಭಯದಿಂದ. ಅವಳ ಮಡಿಲಲ್ಲಿ ಒಬ್ಬ ಹದಿನೈದು ವರ್ಷದ ಹುಡುಗಿ ಹುದುಗಿಕೊಂಡು ಮಲಗಿದ್ದಾಳೆ. “ಅವ್ವಾ! ಈಗ ಇದೇನ್ ಸಪ್ಪಳಾನೇ ?” ಮೆತ್ತಗೆ ಕೇಳಿತು ಆ ಹುಡುಗಿ. “ನಿನ್ಗ್ಯಾಕೇ ಮೊದ್ದುಮುಂಡೇ !ಇದೇನು ? ಅದೇನು?… ಬರೀಕೇಳೋದೇ ….ಏನೋ ಮುಳುಗಿಹೋದ ಹಾಗೆ ಎಲ್ಲಾ ನಿನಗೇ ಬೇಕು “ ಆ ಹುಡುಗಿ ಮತ್ತೆ ಮಾತಾಡುವ ಸಾಹಸ ಮಾಡಲಿಲ್ಲ. ಮತ್ತೆ ಕೆಲ  ನಿಮಿಷದ ನಂತರ ಮುದುಕಿ ತನ್ನಲ್ಲಿ ತಾನೇ ಗೊಣಗಲು ಶುರುಮಾಡಿದಳು. ” ಏನಂದ್ಕೊಂಡಿಯೇ ತಾಯೀ ! ಹಾಳು ಕಾಲ ಬಂತು. ನೀವೆಲ್ಲ ಹೇಗೆ ಬದುಕ್ತೀರೋ ಏನೋ? ಈ ತುರುಕರ ಜತೆ ಒಳ್ಳೆ ಸಾವು ಬಂತು… ಮೊನ್ನೆ ನಾಲ್ಕು ಮಂದಿನ್ನ ಗುಂಡು ಹೊಡೆದು ಕೊಂದ್ರು. ಮತ್ತೆ ಇವತ್ತು ಕೂಡ ಅಂಥದೆ ಅಘಾಯಿತ್ಯ ಮಾಡ್ಯಾರೋ ಏನೋ ! ಅದೇನ್ ಹೋಗೋ ಕಾಲಾನೋ ಇವರಿಗೆ” ಮತ್ತೆ ನಿಶ್ಶಬ್ದ. ರಾಮವ್ವ, ಮಲ್ಲಮ್ಮ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮುಳುಗಿಹೋದರು. ನಿದ್ರೆಗೆ ಮಾತ್ರ ಬಹಿಷ್ಕಾರ ಹಾಕಿಯಾಗಿತ್ತು. ಎಪ್ಪತ್ತು ದಾಟಿದ ರಾಮವ್ವನಿಗೂ ಜಾಗರೆಣೆನೇ. ಹದಿನೈದು ವಯಸ್ಸಿನ ಮಲ್ಲಮ್ಮನಿಗೂ ಜಾಗರಣೆನೇ. ಅಷ್ಟರಲ್ಲಿ ಕಿಟಿಕೀಯನ್ನ ಯಾರೋ ತಟ್ಟಿದರು. ಕಿಟಿಕಿ ಅಂದರೇ ಅದರದೆಷ್ಟು ತ್ರಾಣ ? ಬೆಳಕಿನ ಸಲುವಾಗಿ ಗೋಡೆಯಲ್ಲಿ ಕೊರೆದ ಒಂದು ತೂತಷ್ಟೇ. ಅದಕ್ಕೆ ಗೆದ್ದಲು ಹತ್ತಿದ ಯಾವುದೋ ಕಟ್ಟಿಗೆಯಲ್ಲಿ ಮಾಡಿದ ಎರಡು ಚಿಕ್ಕ ಬಾಗಿಲು. ಅದೇ ಆ ಗುಡಿಸಲಿಗೆ ಕಿಟಿಕಿ. ಆ ಸದ್ದಿಗೆ ಇಬ್ಬರೂ ಬೆಚ್ಚಿಬಿದ್ದು ಕುಳಿತರು. ಕೂತಲ್ಲಿಯೇ ಶ್ವಾಸ ಬಿಗಿಹಿಡಿದು ಜಾಗ್ರತೆಯಾಗಿ ಕೇಳತೊಡಗಿದರು. ಕಿಟಿಕಿ ಬಾಗಿಲು ಗಾಳಿಗೆ ಹೊಡೆದುಕೊಂಡವೋ ಅಥವಾ ಯಾವ ಬೆಕ್ಕೇನಾದರೂ ಅದನ್ನ ಸರಿಸಿತೋ ಅಂತ ! ಮತ್ತೆ ಅದೇ ಸದ್ದು. ಈಸಲ ಸಂಶಯವೆನಿಸಲಿಲ್ಲ. ಯಾರೋ ಕಿಟಿಕಿ ಬಾಗಿಲು ಹೊಡೆಯುತ್ತಿರುವುದು ನಿಜ. ಅದು ಗಾಳಿ ಅಲ್ಲ. ಬೆಕ್ಕಂತೂ ಅಲ್ಲವೇ ಅಲ್ಲ. ಏನು ಮಾಡೋದು? ಒಂದೂ ತೋಚಲಿಲ್ಲ. ಮತ್ತೆ ಸದ್ದು ಕೇಳಿಸಿತು.ಈ ಸಲ ದೊಡ್ಡದಾಗೇ ಕೇಳಿಸಿತು. ಯಾವುದೋ ಸ್ಥಿರ ಸಂಕಲ್ಪದೊಂದಿಗೆ ತಟ್ಟಿದಹಾಗೆ. ಇನ್ನು ಲಾಭವಿಲ್ಲ. ಮುದುಕಿ ನಿದಾನವಾಗಿ ಏಳತೊಡಗಿದಳು. ಮಲ್ಲಮ್ಮನಿಗೆ ಎದೆ ಹೊಡೆತ ಜೋರಾಯಿತು. ಅವ್ವನನ್ನು ಹಿಡಿದುಕೊಂಡು ಕಂಪಿಸುವ ದನಿಯಲ್ಲಿ “ನಂಗೆ ಭಯವಾಗ್ತಿದೆ ಅವ್ವಾ ” ಅಂತ ಮಾತ್ರ ಅಂದಳು. “ಹಾಗೇ ಇರು. ಅದೇನೋ ನೋಡೋಣ.” ಮುದುಕಮ್ಮ ದೃಢ ನಿಶ್ಚಯದಿಂದ ಎದ್ದಳು. ಅಭ್ಯಾಸ ಬಲದಿಂದ ಕತ್ತಲಲ್ಲೇ ಕಿಟಿಕಿ ಹತ್ತಿರ ಸೇರಿದಳು. ಒಳಗಿನ ಚಿಲಕ ತೆಗೆಯುತ್ತಾ ” ಯಾರು” ಅಂದಳು. ಅವಳ ಆ ಪ್ರಶ್ನೆ ಮುಗಿಯುತ್ತಿದ್ದ ಹಾಗೇ ಅವಳ ಬಾಯಿ ಮುಚ್ಚಲ್ಪಟ್ಟಿತು. ತಕ್ಷಣ ಒಬ್ಬ ವ್ಯಕ್ತಿ ಆ ಇಕ್ಕಟ್ಟಾದ ಸಂದಿನಿಂದ ಅತಿ ಕಷ್ಟದಲ್ಲಿ ನುಸುಳಿ ಬಂದ. ಅವನ ಕಾಲು ನೆಲಕ್ಕೆ ತಾಗುತ್ತಿರುವ ಹಾಗೇ ಒಳಗಿನ ಚಿಲಕವನ್ನು ಹಾಕಿದ. ಮುದುಕಮ್ಮ ಹಾಗೇ ನಿಂತಿದ್ದಳು. ಇನ್ನೊಂದು ಕಡೆ ಮಲ್ಲಮ್ಮ ಕಣ್ಣು ಮುಚ್ಚಿ ಕತ್ತಿಯ ಇರಿತಕ್ಕಾಗಿ ಕಾಯುತ್ತಿರುವ ಹಾಗೆ ಬಿದ್ದಿದ್ದಳು. ಕತ್ತಲಲ್ಲಿ ಏನೋ ಕಾಣ್ತಾಇಲ್ಲ. ಮುದುಕಮ್ಮನಿಗೆ ಮಾತ್ರ ಸಂಶಯವೇ ಇರಲಿಲ್ಲ. ಗತಾನುಭವವೇ ಎಲ್ಲಾ ಹೇಳ್ತಾ ಇತ್ತು. ಪೋಲೀಸರವನೋ ಅಥವಾ ರಜಾಕಾರ್ ತುರುಕುವರವನೋ ಮನೆಯೊಳಗೆ ಬಂದಿದ್ದಾನೆ. ಇನ್ನೇನಿದೆ ? ತನಗೆ ಸಾವು ತಪ್ಪುವುದಿಲ್ಲ. ಮುದ್ದಾಗಿ ಬೆಳೆಸಿದ ಮೊಮ್ಮಗಳಿಗೆ ಮಾನ ಭಂಗ ತಪ್ಪುವುದಿಲ್ಲ. ಈ ರಾಕ್ಷಸರನ್ನು ಯಾರು ಎದುರಿಸುತ್ತಾರೆ….? ತಾನು ಗದ್ದಲ ಮಾಡಿದರೇ ಪಕ್ಕದ ಮನೆಯವರು ಕೇಳಿಸ್ಕೋತಾರಾ ? ಇಲ್ಲ. ಅದೆಲ್ಲ ಕನಸಿನ ಮಾತು. ಅವರವು ಮಾತ್ರ ಪ್ರಾಣಗಳಲ್ಲಾ ? ಅವರ ಮನೆಯಲ್ಲಿ ಮಾತ್ರ ಹರೆಯದ ಹುಡುಗಿಯರಿಲ್ಲಾ ? ಆವತ್ತು ಶಾನುಭೋಗರ ಮಗಳ್ನ ಬಲಾತ್ಕಾರದಿಂದ ಹೊತ್ಕೊಂಡು ಹೋದಾಗ ಯಾರಿಗೇನು ಮಾಡಲಾಗಿತ್ತು? ಯಾರಡ್ಡ ಬರಲಿಕ್ಕಾಯಿತು? ಈಗ ತನಗೆ ಮಾತ್ರ ಯಾರು ದಿಕ್ಕಾಗ್ತಾರೆ …? ಒಂದು ನಿಮಿಷದಲ್ಲಿ ಮುದುಕಮ್ಮ ಇಷ್ಟೆಲ್ಲಾ ಆಲೋಚಿಸಿದಳು. ಇನ್ನು ನಡೆಯೋದು ಅವಳಿಗೆ ಸ್ಪಷ್ಟವಾಗಿ ಕನ್ನಡಿಯಲ್ಲಿಯ ತರ ಕಾಣಿಸಲಾರಂಭಿಸಿತು. ತಾನು ಸತ್ತರೂ ಸರಿಯೇ… ತಂದೆ ತಾಯಿ ಇಲ್ಲದ ಈ ಮಲ್ಲಿಗಾದ್ರೂ ಮಾನಭಂಗ ತಪ್ಪಿದ್ರೇ… ತಾನು ಇಷ್ಟು ದಿನ ಸಾಕಿ ಸಲಹಿದ್ದು ಈ ರಾಕ್ಷಸನ ಕೈಗೆ ಕೊಡಲಿಕ್ಕಾ ? ಮುದುಕುಮ್ಮ ಕಣ್ಣೀರು ಹಾಕುತ್ತಾ ಕೊರಡಿನ ತರ ನಿಂತಳು. ವೃದ್ಧಾಪ್ಯದ ನಡುಗು ಸಹ ತಾನಾಗಿಯೇ ನಿಂತುಹೋಯಿತು. ಮುದುಕಮ್ಮನಿಗೂ, ಆ ವ್ಯಕ್ತಿಗೂ ಸುಮಾರು ಎರಡು ಗಜ ದೂರವಿತ್ತು. ಹೀಗೆ ಆಲೋಚಿಸುತ್ತಿರುವಾಗಲೇ ಆತ ಅವಳ ಕಡೆಗೆ ಎರಡು ಹೆಜ್ಜೆ ಹಾಕಿದ. ಕತ್ತಲಲ್ಲೂ ನೇರವಾಗಿ ಸಮೀಪಿಸುತ್ತಿದ್ದಾನೆ. ಅವಳಿಗೆ ಆಕಾಶವೇ ಮೇಲೆ ಬಿದ್ದಂತಾಯಿತು. ಇನ್ನೊಂದು ಹೆಜ್ಜೆಯಲ್ಲಿ ತನ್ನ ಬದುಕು ಕೊನೆಗಾಣುತ್ತದೆ. ಮತ್ತೆ ಮಲ್ಲಿ….! ಅತಿ ಕಷ್ಟದಲ್ಲಿ ಮುದುಕಮ್ಮ “ಅಯ್ಯಾ ” ಎನ್ನುವವಳಿದ್ದಳು. ಆದರೇ ಮತ್ತೆ ಅವಳ ಬಾಯಿ ಮುಚ್ಚಲ್ಪಟ್ಟಿತು. ಆ ಕ್ಷಣದಲ್ಲಿ ತನಗೆ ಗೊತ್ತಿದ್ದ ದೇವರನ್ನೆಲ್ಲಾ ನೆನೆದಳು. ತನ್ನ ಮೊಮ್ಮಗಳ ಸಲುವಾಗಿ. ಅಷ್ಟರಲ್ಲಿ ಆ ವ್ಯಕ್ತಿಯ ಗುಸುಗುಸು ಕೇಳಿಬಂತು ಮುದುಕಮ್ಮನ ಕಿವಿಯಲ್ಲಿ ” ಸದ್ದು ಮಾಡಬೇಡ. ನಾನು ಕಳ್ಳನಲ್ಲ. ರಜಾಕಾರನಲ್ಲ. ಪೋಲೀಸರವನೂ ಅಲ್ಲ. ನಿಮ್ಮನ್ನೇನೂ ಮಾಡಲ್ಲ. ಸದ್ದು ಮಾತ್ರ ಮಾಡಬೇಡ. “ “ಅಬ್ಬಾ ! ಏನೂ ಮೋಸ ಇವರದು ! ನಂಬಿಸಿ ಕುತ್ತಿಗೆ ಕೊಯ್ಯಲು ನೋಡುತ್ತಿದ್ದಾನೆ ಇವನು. ಸವಿ ಮಾತಿನಲ್ಲಿ ಮುದಗೊಳಿಸಿ ಮಲ್ಲೀನ್ನ…. ಅಬ್ಬ ! ಯಾವುದಕ್ಕೂ ಹೇಸುವುದಿಲ್ಲ ಈ ರಾಕ್ಷಸರು. ಮೊದಲು ಸಿಹಿ ಮಾತು. ಅದಾಗದಾದರೇ ಬೇರೇ ಉಪಾಯ. ಅದೇ ವರಸೆ ಅಲ್ಲಾ… “ ಯಾವುದಾದರಾಗಲೀ ಅಂತ ಮುದುಕಮ್ಮ ಅವನ ಎರಡೂ ಕಾಲು ಹುಡುಕಿದಳು. ದೀನವಾಗಿ ಬೇಡಿಕೊಂಡಳು.  ” ನಿನ್ನ ಗುಲಾಮಳು ನಾನು. ನಿನ್ನ ಮೆಟ್ಟು ಹೊರ್ತೀನಿ. ನನ್ ತಲೆ ಬೇಕಾದ್ರೇ ತೊಗೋ. ಹುಡುಗೀನ್ನ ಮಾತ್ರ ಮುಟ್ಟಬೇಡ. ನಿನ್ನ ತಂಗಿ ಅಂತ ತಿಳ್ಕೋ. ನಿನ್ ಕಾಲಿಗೆ ಬೀಳ್ತೀನಿ “ “ಇಲ್ಲವ್ವಾ ! ನಾನು ಹೇಳ್ತಿದ್ರೆ ನಂಬ್ತಾ ಇಲ್ಲ ಯಾಕೆ ? ನಾನು ನೀನು ಹೇಳಿದ ಯಾವ ದುಷ್ಟನೂ ಅಲ್ಲ. ನಿನ್ನ ಹಾಗೇ ತೆಲುಗಿನವನು. ಹೌದು. ಶುದ್ಧ ತೆಲುಗಿನಲ್ಲೇ ಮತಾಡ್ತಾ ಇದಾನೆ. ಮುದುಕಮ್ಮನಿಗೆ ಇನ್ನುವರೆಗೋ ಇಷ್ಟು ಒಳ್ಳೆ ತೆಲುಗು ಮಾತಾಡಿದ ರಜಾಕಾರ್ ಕಂಡುಬಂದಿರಲಿಲ್ಲ. ಬರೀ ಬಂದೂಬಾರದ ತೆಲುಗು ಮಾತಾಡುವ ನಿಜಾಮಿನ ತುರುಕರನ್ನೇ ನೋಡಿದ್ದಳಾಕೆ. ಹಾಗಾದರೇ ಇವನು ರಜಾಕಾರ್ ಅಲ್ಲವೆಂದೇ ಚರ್ಚೆ ಮಾಡಿಕೊಂಡಳಾಕೆ. ಕೆಲ ನಿಮಿಷಗಳಾದರೂ ಸಾವು, ಮಾನಭಂಗ ತಪ್ಪಿದವು ! ಮುದುಕಮ್ಮನಿಗದೇ ಇಂದ್ರಜಾಲವೆನಿಸಿದವು. ಮಾನವನ ಹೃದಯಲ್ಲಿರುವ ಅಡಗಿರೋ ಅಜೇಯ ಆಶಾವಾದ ಶಕ್ತ ಆಕೆಗೆ ಆಸರೆಯಾಯಿತು. ಬಂದ ಮನುಷ್ಯ ಎಷ್ಟು ಹೊಸಬನಾದರೂ, ಆತ ಬಂದ ಪರಿಸ್ಥಿತಿಗಳು ಎಷ್ಟು ಅನುಮಾನಾಸ್ಪದವಾಗಿದ್ದರೂ ಅದೇಕೋ ಮುದುಕಮ್ಮನಿಗೆ ಮಾತ್ರ ಅವನನ್ನು ನಂಬಬಹುದೆನಿಸಿತು.  ಅದು ವಿಶ್ವಾಸವಲ್ಲ. ವಿಶ್ವಾಸೇಚ್ಛೆ. ವಿಪತ್ತಿನ ಸ್ಥಿತಿಯಲ್ಲಿ ಕಾಣಿಸಿದ ಏಕೈಕ ಆಧಾರ. ಅದನ್ನು ಹೇಗೆ ಬಿಟ್ಟಾಳು? ಬಂದ ಮನಷ್ಯನ ಕಾಲು ಹಿಡಿದ ಮುದುಕಮ್ಮ ಮೆಲ್ಲ ಮೆಲ್ಲಗೆ ಏಳುತ್ತಾ, ಅವನ ಮೊಣಕಾಲು, ಸೊಂಟ, ಎದೆ, ಬೆನ್ನು, ಮುಖ, ತಲೆ ತಡವಿದಳು. ಮೈಮೇಲೆ ಒಂದು ಚಡ್ಡಿಮಾತ್ರವಿತ್ತು. ಅಂಗಿ ಇಲ್ಲ. ಮೈಯೆಲ್ಲ ನಾನಾ ತರದ ಹುಲ್ಲು, ಮಣ್ಣು ಮೆತ್ತಿಕೊಂಡಿತ್ತು. ದೇಹದ ಎಲ್ಲಾ ಕಡೆ ಗಾಯಗಳಾಗಿದ್ದವು. ಕೆಲ ಕಡೆಯಿಂದ ಇನ್ನೂ ರಕ್ತ ಒಸರುತ್ತಿದ್ದು ರಕ್ತ ಮುದುಕಮ್ಮನ ಕೈಗಂಟಿತು. ಕೆಲವು ಕಡೆ ಯಾವಾಗೋ ಜಿನುಗಿ ಅಟ್ಟಿ ಕಟ್ಟಿದ ರಕ್ತದ ಕುರುಹು ಕೈಗೆ ತಗುಲುತ್ತಿತ್ತು. ಮೈಯೆಲ್ಲಾ ಜ್ವರದಿಂದ ಕುದಿಯುತ್ತಿತ್ತು. ಮುಖದ ತುಂಬಾ ಬೆವರು. ಉಸಿರು ಸಹ ಕಷ್ಟದಲ್ಲಿ ಆಡುತ್ತಿದ್ದ ಹಾಗಿತ್ತು. ನಡುನಡುವೆ ಅವನಿಗರಿವಿಲ್ಲದ ಹಾಗೇ ನರಳುವಿಕೆ ಹೊರಬರುತ್ತಿತ್ತು. ಎದೆಯಂತೂ ತಿದಿಯಂತೆ ಏರಿಳಿಯುತ್ತಿತ್ತು. ತನ್ನ ಸ್ಪರ್ಶದಿಂದಲೇ ಮುದುಕಮ್ಮನಿಗೆ ಗೊತ್ತಾಯಿತು. ಈ ವ್ಯಕ್ತಿ ನಿಸ್ಸಹಾಯಕ. ಯಾವುದೋ ಆಪತ್ತಿನ ಸ್ಥಿತಿಯಲ್ಲಿದ್ದ ಶರಣಾಗತ ಅಂತ. ಇಷ್ಟು ತಿಳಿದ ತಕ್ಷಣ ಮುದುಕಮ್ಮನ ಮನಃಸ್ಥಿತಿ ಗಟ್ಟಿಯಾಯಿತು. ಕಾಯಕವು ಎದ್ದು ನಿಂತಿತು. ಅನಿರ್ವಚನೀಯವಾದ ಪರಿವರ್ತನೆ ಉಂಟಾಯಿತು. ಐದು ನಿಮಿಷದ ಕೆಳಗೆ ಮೊಮ್ಮಗಳ ಶೀಲ ರಕ್ಷಣೆಯ ಸಲುವಾಗಿ ಅವನ ಕಾಲು ಹಿಡಿದು “ನಾನು ನಿನ್ನ ಗುಲಾಮಳು. ನಿನ್ನ ಕಾಲಿಗೆ ಬೀಳ್ತೀನಿ” ಎಂದು ಬೇಡಿದ ಮುದುಕಮ್ಮ ಈಗ ಆಶ್ಚರ್ಯ ಮತ್ತು ಸಹಾನುಭೂತಿ ಮಿಶ್ರಿತ ಸ್ವರದಲ್ಲಿ ” ಇದೇನ್ ಗತಿನೋ ನಿಂದು?

ಗೊಲ್ಲರ ರಾಮವ್ವ Read Post »

ಅನುವಾದ

ಬೆಳೆಸಲಾಗದ ಮಕ್ಕಳು

ಅನುವಾದಿತ ಕಥೆ ಬೆಳೆಸಲಾಗದ ಮಕ್ಕಳು ತೆಲುಗು ಮೂಲ: ಸಿ.ಹೆಚ್.ವಿ. ಬೃಂದಾವನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ. ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. ಹಾಗೇ ಯೋಚಿಸಿ ತಾನಂತೂ ಒಂದು ನಿರ್ಣಯಕ್ಕೆ ಬಂದಾಗಿತ್ತು. ತನ್ನ ಗಂಡನ ಒಪ್ಪಿಗೆ ಮತ್ತು  ಪ್ರೋತ್ಸಾಹ ಇಲ್ಲದೆ ಬರೀ ತನ್ನ ನಿರ್ಣಯ ದಿಂದ ಏನು ನಡೆಯುತ್ತೆ ? ಈಗಿನ ತನ್ನ ಈ ಪರಿಸ್ಥಿತಿಗೆ ತಾನು ಹೇಗೆ ಬಂದೆ ಎಂಬುದು ಒಮ್ಮೆ ಪಾರ್ವತಿಯ ಮುಂದಕ್ಕೆ ಬಂದಿತು.            *     *     *      *     *     * ತಾನು ಕ್ರಿಸ್ಟಫರ್ ಮದುವೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದರು. ಆದರೇ ತಮ್ಮ ತಂದೆ ತಾಯಿಯರನ್ನು ಹೇಗೆ ಒಪ್ಪಿಸುವುದೋ ಗೊತ್ತಾಗಲಿಲ್ಲ. ಪಾರ್ವತಿ ಅವರದು ಒಂದು ಸಾಧಾರಣ ಕೆಳಮಟ್ಟದ ಕುಟುಂಬ. ತಂದೆ ಟೈಲರು. ತಾಯಿ ಒಂದು ಹಾಸ್ಟೆಲಿನಲ್ಲಿ ಆಯಾ ಆಗಿದ್ದಳು. ಅವರಿಬ್ಬರ ಸಂಪಾದನೆ ಸೇರಿಸಿದರೂ ಸಂಸಾರ ನಡೆಸಲು ಅಲ್ಲಿಂದಲ್ಲಿಗೆ ಸರಿ ಹೋಗುತ್ತಿತ್ತು. ಪಾರ್ವತಿ ಮನೆಗೆ ದೊಡ್ಡ ಮಗಳು. ಅವಳ ನಂತರ ಒಬ್ಬ ತಂಗಿ, ತಮ್ಮ. ಪಾರ್ವತಿ ಎಸ್ಸೆಸ್ಸಿ ಓದುವಾಗ ಕ್ರಿಸ್ಟಫರ್ ನ ಪರಿಚಯ ವಾಯಿತು. ಪಿಯುಸಿ ಮೊದಲನೆ ವರ್ಷ ಆ ಪರಿಚಯ ಹಾಗೇ ಮುಂದುವರೆದು ಪ್ರೀತಿಯಾಯಿತು. ಎರಡನೇ ವರ್ಷಕ್ಕೆ ಬಂದ ಮೇಲೆ ಮದುವೆಯಾಗ ಬೇಕೆಂಬ ಅಭಿಪ್ರಾಯ ಬೇರೂರಿ ಒಂದು ನಿರ್ಣಯಕ್ಕೆ ಬಂದರು ಇಬ್ಬರೂ. ಕ್ರಿಸ್ಟಫರ್ ಒಬ್ಬ ಮೆಕಾನಿಕ್. ಕರೆಂಟಿನ ಕೆಲಸ ದಿಂದ ಹಿಡಿದು, ಮೋಟಾರ್ ಗಳು, ಮೊಬೈಲ್ ಗಳು ಹೀಗೆ ಅವನು ಮಾಡದ ರಿಪೇರಿ ಕೆಲಸವೇ ಇರಲಿಲ್ಲ. ಕೈಯಲ್ಲಿ ಯಾವಾಗಲೂ ಕೆಲಸ ಇರುತ್ತಿತ್ತು. ಆತನ ವರಮಾನದಿಂದ ಮನೆ ನಡೆಯುವುದಕ್ಕೆ ಏನೂ ತೊಂದರೆಯಿರಲಿಲ್ಲ. ಹಾಗೇ ತಾನು ಸಹ ತಂದೆ ಹತ್ತಿರ ಟೈಲರ್ ಕೆಲಸ ಕಲೆತಿದ್ದಳು. ಒಂದು ಹೊಲಿಗೆ ಮಶೀನ ತಂದು ಮನೆಯಲ್ಲಿಟ್ಟುಕೊಂಡರೇ ತಾನು ಸುತ್ತ ಮುತ್ತ ಹೆಂಗಸರ ಮತ್ತು ಮಕ್ಕಳ ಬಟ್ಟೆ ಹೊಲೆಯಬಹುದು. ತನಗೇನೂ ಅಂಥಾ ದೊಡ್ಡ ಆಶೆಗಳಿರಲಿಲ್ಲ. ತನ್ನ ಮೆಚ್ಚಿದ ಕ್ರಿಸ್ಟೊಫರ್ ಜೊತೆ ಜೀವನ ಸಜಾವಾಗಿ ನಡೆದು ಹೋದರೇ ಸಾಕು ಎಂದುಕೊಂಡಿದ್ದಳು. ಆ ತರ ನಂಬಿಕೇನೂ ಪಾರ್ವತಿಗಿತ್ತು. ಆದರೇ ಇಬ್ಬರ ಕಡೆಯ ತಂದೆ ತಾಯಿ ಒಪ್ಪಲಿಲ್ಲ. ಆದರೂ ಇವರಿಬ್ಬರು ಮುಂದುವರೆದು ಮದುವೆ ಮಾಡಿಕೊಂಡು ಸಂಸಾರ ಹೂಡಿದರು. ಕ್ರಮೇಣ ದೊಡ್ಡವರು ಹಾದಿಗೆ ಬರುತ್ತಾರೆಂದು ಅವರ ನಂಬಿಕೆ ಯಾಗಿತ್ತು. ಅದೃಷ್ಟ ವಶಾತ್ ಅವರಿಗೆ ದೊಡ್ಡವರಿಂದ ಕಿರುಕುಳವಾಗಲೀ, ಬೆದರಿಕೆಯಾಗಲೀ ಏನೂ ಬರಲಿಲ್ಲ. ಬೇರೇ ಬೇರೇ ಧರ್ಮಕ್ಕೆ ಸೇರಿದವರಾದರೂ ಅವರ ಪ್ರೀತಿಯ ಮುಂದೆ ಅವು ಯಾವುದೂ ಅಡ್ಡಿ ಬರಲಿಲ್ಲ. ಹಾಗೆ ಅವರ ಸಂಸಾರಕ್ಕೆ ಆರು ವರ್ಷ ವಾಗಿತ್ತು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಹುಟ್ಟಿದರು. ಆದರೇ ಅವತ್ತು ನಡೆದ ಘಟನೆ ಅವರ ಜೀವನ ವನ್ನೇ ಬುಡಮೇಲು ಮಾಡಿತ್ತು. ಮಗ ಸ್ಕೂಲಿಗೆ ಹೋಗಿದ್ದ. ಮೂರು ವರ್ಷದ ಮಗಳೊಂದಿಗೆ ಪಾರ್ವತಿ ಮುಂದಿನ ಕೋಣೆಯಲ್ಲಿ ಕೂತಿದ್ದಳು. ಒಳಗೆ ಕ್ರಿಸ್ಟಫರ್ ಗ್ಯಾಸ್ ಒಲೆಗೆ ಏನೋ ರಿಪೇರಿ ಮಾಡ್ತಿದ್ದ. ಇದ್ದಕ್ಕಿದ್ದಹಾಗೇ ಗ್ಯಾಸ್ ಸಿಲಿಂಡರ್ ಸಿಡಿದು, ಕ್ರಿಸ್ಟಫರ್ ಗೆ ಮೈಯೆಲ್ಲಾ ಸುಟ್ಟು ಅವನು ಚೀರಿದ ಶಬ್ದಕ್ಕೆ ತಾನು ಒಳಗೆ ಹೋದಳು. ತಕ್ಷಣ ಕ್ರಿಸ್ಟಫರನ್ನು ಆಸ್ಪತ್ರೆ ಗೆ ಸೇರಿಸಿದರು. ಪ್ರಾಣಾಪಾಯ ವಿಲ್ಲದಿದ್ದರೂ ಅವನ ಮುಖ, ಎದೆ, ಕೈ ಎಲ್ಲಾ ಸುಟ್ಟಿದ್ದು ಅವುಗಳೆಲ್ಲಾ ಮಾಯಲು ಕೆಲ ಸಮಯವೇ ಹಿಡಿಯಿತು. ಆ ಆರೆಂಟು ತಿಂಗಳು ಪಾರ್ವತಿ ನರಕ ಬಾಧೆ ಅನುಭವಿಸಿದಳು. ಮಕ್ಕಳನ್ನು ನೋಡಿಕೊಳ್ಳುವುದು, ಆಸ್ಪತ್ರೆಗೆ ಹೋಗುವುದು, ಗಂಡನ ಆರೈಕೆ, ಮನೆ ಖರ್ಚು, ಆಸ್ಪತ್ರಿಯ ಖರ್ಚು- ಇವೆಲ್ಲವುಗಳಿಂದ  ಪಾರ್ವತಿ ಭಯಂಕರವಾದ ನೋವು ಅನುಭವಿಸಿದಳು. ಹೇಗೋ ಪ್ರಾಣದೊಂದಿಗೆ ಹೊರಬಿದ್ದ ಕ್ರಿಸ್ಟೊಫರ್. ಕೆಲಸ ಮುಂದುವರೆಸಲು ಕೈಗಳು ಸಹಕರಿಸುತ್ತಿರಲಿಲ್ಲ. ತುಂಬಾ ಸಾಲ ಮಾಡಿಯಾಗಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಒಬ್ಬ ಲೇಡೀ ಡಾಕ್ಟರ್ ತನ್ನ ನರ್ಸಿಂಗ್ ಹೋಮಿನಲ್ಲಿ ಆಯಾ ಕೆಲಸ ಕೊಟ್ಟರು. ದಿನ ಕಳೆಯುತ್ತಿದ್ದವು. ಇಪ್ಪತ್ತೈದು ವರ್ಷ ತುಂಬುವ ಮುನ್ನವೇ ಪಾರ್ವತಿ ಕಹಿ ಅನುಭವಗಳ ಮೂಟೆ ಹೊತ್ತಿದ್ದಳು. ಎದೆಗಾರಿಕೆಯಿಂದ ಪರಿಸ್ಥಿತಿಗಳನ್ನು ಎದುರಿಸಿದಳು. ಕ್ರಿಸ್ಟೊಫರ್ ಗೆ ಕೂಡ ಅವಳಮೇಲೇ ಅತೀವ ಪ್ರೀತಿ, ಗೌರವ ಉಂಟಾಗಿತ್ತು. ಮನೆ ನಡೆಸಲು, ಮಕ್ಕಳನ್ನು ಓದಿಸಲು, ಕ್ರಿಸ್ಟೋಫರ್ ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಎಲ್ಲದಕ್ಕೂ ಹಣ ಬೇಕು. ಹಣ!  ಹಣ! ಹಣ! ಅದು ತಮ್ಮ ಶಕ್ತಿಗೆ ಮೀರಿತ್ತೆಂದು ಅವರಿಬ್ಬರಿಗೂ ಗೊತ್ತಿತ್ತು. ಅಂಥಾ ಸಮಯದಲ್ಲಿ ಪಾರ್ವತಿ ಕೆಲಸ ಮಾಡುವ ಆಸ್ಪತ್ರಿಯ ಡಾಕ್ಟರ್ ಅವಳ ಮುಂದೆ ಒಂದು ಪ್ರಸ್ತಾವ ವಿಟ್ಟಳು. ಅದು ಕೇಳಿದ ಪಾರ್ವತಿ ಬೆರಗಾದಳು. “ನಿನ್ನ ಊಹೆಗೂ ನಿಲುಕದಷ್ಟು ಹಣ ಬರುತ್ತದೆ. ಯೋಚಿಸು! ನಿನಗೆ ಈಗ ತುಂಬಾ ಹಣದ ಆವಶ್ಯಕತೆ ಇದೆ” ಅಂದಳು ಡಾಕ್ಟರ್. “ಇದು ತಪ್ಪಲ್ವಾ ಡಾಕ್ಟ್ರೇ? ಎಷ್ಟು ಹಣದ ಅಡಚಣೆ ಇದ್ರೂ …. ಇಂಥಾ ಕೆಲಸ ಮಾಡೋದು ನ್ಯಾಯವೇನಾ?” ಅಂದಳು ಪಾರ್ವತಿ. ” ಇದರಲ್ಲಿ ತಪ್ಪಾಗಲೀ, ನೀತಿಬಾಹಿರತನವೇನೂ ಇಲ್ಲ ಪಾರ್ವತೀ ! ಹೆಂಗಸರಿಗೆ ಮುವ್ವತ್ತೈದು ವರ್ಷದ ವರೆಗೂ ಗರ್ಭ ಧರಿಸುವ ಶಕ್ತಿ ಇರುತ್ತದೆ. ನಿನಗಿನ್ನೂ ಇಪ್ಪತ್ತೇಳು. ಕಷ್ಟ ಜೀವಿಯಾದ ಕಾರಣ ಮೈಕೈ ಗಟ್ಟಿಯಾಗಿದೆ. ಯಾವ ತರದ ಪ್ರಮಾದವೂ ಇರುವುದಿಲ್ಲ. ಎರಡು ಲಕ್ಷ ಕೊಡ್ತೇವೆ ಅಂತಿದಾರೆ. ನಿನ್ನ ಕಷ್ಟ ಎಲ್ಲಾ ಕಳೆದುಹೋಗತ್ತೆ. ಒಪ್ಪಿಕೋ ” ಅಂದರು ಡಾಕ್ಟರ್. ಪಾರ್ವತಿ ಇನ್ನೂ ಸಂಶಯ ಪಡ್ತಾನೇ ಇದ್ರೆ ” ನಿನಗೇನಾದ್ರೂ ಮಾಡಬಾರದ ಕೆಲಸ ಮಾಡು ಅಂತ ಹೇಳ್ತಾ ಇದೀನಾ ಪಾರ್ವತೀ ? ಗಂಡನಿಗೆ ಗೊತ್ತಿಲ್ಲದ ಹಾಗೆ ಹಾದರ ಮಾಡ್ಲಿಕ್ಕೆ ಹೇಳ್ತಿದೀನಿ ಅಂತ ತಿಳಿದಿದ್ದೀ ಏನೋ ? ಇದಕ್ಕೆ ನಿನ್ನ ಗಂಡನ ಒಪ್ಪಿಗೆ ಬೇಕೇ ಬೇಕು. ಆತನ್ನ ಕರ್ಕೊಂಡು ಬಾ. ನಾನು ಮಾತಾಡ್ತೀನಿ. ” ಅಂದರು ಡಾಕ್ಟರ್. “ನನ್ನ ಗಂಡನ ಜೊತೆ ಮಾತಾಡ್ತೀನಿ ” ಅಂದಳು ಪಾರ್ವತಿ. ಈಗ ಅದೇ ವಿಷಯ ಗಂಡನ ಹತ್ತಿರ ಹೇಳಿ ಆತನ ಮುಖ ನೋಡಸಾಗಿದಳು ಪಾರ್ವತಿ. ಅವನಿಗೆ ಹೇಳುವ ಮುಂಚೆ ಎರಡು ದಿನ ತನ್ನಲ್ಲೇ ತೀವ್ರ ವಾಗಿ ಆಲೋಚನೆ ಮಾಡಿದ್ದಳು ಪಾರ್ವತಿ. ಮೊದಲಿನ ಅಚ್ಚರಿಯ ಕ್ಷಣಗಳ ನಂತರ ಕ್ರಿಸ್ಟಫರ್ ಸಹ ಯೋಚಿಸಿ “ಡಾಕ್ಟರಮ್ಮ ಏನೂ ನಮ್ಮನ್ನು ಮಾಡಬಾರದ ಕೆಲಸ ಮಾಡಲು ಹೇಳುವುದಿಲ್ಲ ಅಲ್ಲಾ ? ಯಾವುದಕ್ಕೂ ಅವರ ಜೊತೆ ಮಾತಾಡೋಣ… ಅವರು ಏನು ಹೇಳ್ತಾರೋ ಕೇಳೋಣ. ಇವತ್ತು ಸಂಜೆ ಹೋಗೋಣ. ” ಅಂದ. ಡಾಕ್ಟರರ್ ಎದುರಿನಲ್ಲಿ ಪಾರ್ವತಿ ಮತ್ತು ಕ್ರಿಸ್ಟಫರ್ ಕೂತಿದ್ದಾರೆ. ಮುಖ ವೆಲ್ಲಾ ಸುಟ್ಟುಹೋಗಿ, ವಿಕಾರವಾಗಿದ್ದ ಕ್ರಿಸ್ಟಫರ್ ತಲೆ ಅಡಿ ಹಾಕಿ ತುಂಬಾ ಆತ್ಮ ನ್ಯೂನತಾ ಭಾವದಿಂದ ಕೂತಿದ್ದಾನೆ. “ನೀನ್ಯಾಕೆ ತಲೆ ತಗ್ಗಿಸಿ ಕೂತಿದ್ದೀಯಾ ಕ್ರಿಸ್ಟಫರ್ ? ನೀನೊಬ್ಬ ಶ್ರಮಜೀವಿ. ಅಕಸ್ಮಾತ್ತಾಗಿ ಅಪಘಾತವಾಗಿದೆ. ಅಪಘಾತ ಯಾರ ಜೀವನದಲ್ಲಾದ್ರೂ ಆಗಬಹುದು. ಹಾಗಂತ ನೀವಿಬ್ಬರೂ ಕುಂದದೇ ಪರಿಸ್ಥಿತಿಗಳನ್ನ ಎದುರಿಸಿದ್ದೀರಿ. ಇಬ್ಬರಿಗೂ ಮತ್ತೊಬ್ಬರ ಮೇಲೆ  ಅನುರಾಗ, ಆಪೇಕ್ಷೆ ಇದೆ. ನಿಮ್ಮ ಸಂಸಾರ ನೋಡಿದರೇ ನನಗೇ ಮೆಚ್ಚುಗೆಯಾಗತ್ತೆ. ನಿಮಗೆ ಹೇಗಾದರು ಸಹಾಯ ಮಾಡಬೇಕು ಅಂತ ಅಂದುಕೊಂಡು ಈ ವಿಷಯ ಪಾರ್ವತಿಗೆ ಹೇಳಿದೆ. ನಿಮಗೂ ಹೇಳ್ತೀನಿ ಕೇಳಿ. ಐರ್ಲಂಡಿನ ಇಬ್ಬರು ದಂಪತಿಗಳು ನನ್ನ ಹತ್ತಿರ ಬಂದಿದ್ದಾರೆ. ಅವರಿಗೆ ಮದುವೆಯಾಗಿ ಒಂಬತ್ತು ವರ್ಷವಾದ್ರೂ ಮಕ್ಕಳಾಗಿಲ್ಲ. ಶಾಸ್ತ್ರೀಯವಾದ ಕೃತ್ರಿಮ ಪದ್ಧತಿಯ ಮೂಲಕ ಸಂತಾನ ಪಡೆಯಲು ನನ್ನ ಹತ್ತಿರ  ಬಂದಿದ್ದಾರೆ. ತುಂಬಾ ಶ್ರೀಮಂತರು. ಆ ಹೆಂಗಸಿಗೆ ಗರ್ಭಧಾರಣವಾಗುವ ಅವಕಾಶವಿಲ್ಲ. ಆದಕಾರಣ ಇತರೆ ಹೆಂಗಸಿನ ಗರ್ಭದಿಂದ ಸಂತಾನ ಹೊಂದಲು ನಿಶ್ಚಯಿಸಿದ್ದಾರೆ. ಈ ಪದ್ಧತಿಯಲ್ಲಿ ಗರ್ಭ ಧರಿಸುವ ಹೆಣ್ಣಾಗಲೀ, ಗಂಡಾಗಲೀ ಒಬ್ಬರನ್ನೊಬ್ಬರು ಹತ್ತಿರವಾಗುವ ಆವಶ್ಯಕತೆ ಇರುವುದಿಲ್ಲ.  ಆತನ ಜನ್ಯು ಕಣಗಳನ್ನ ಟೆಸ್ಟ್ ಟ್ಯೂಬಿನಲ್ಲಿ ಶೇಕರಣೆ ಮಾಡಿ ಪಾರ್ವತಿಯ ಗರ್ಭದಲ್ಲಿ ಫಲದೀಕರಣದ ಸಲುವಾಗಿ ಇಡಲಾಗುತ್ತೆ. ನಂತರ ಪಾರ್ವತಿ ಒಂಬತ್ತು ತಿಂಗಳು ಆ ಮಗುವನ್ನ ಹೊತ್ತು, ಹೆತ್ತು ಅವರಿಗೆ ಕೊಡಬೇಕಾಗುತ್ತೆ. ಈ ಕೆಲಸಕ್ಕೆ ನಾನು ಹೇಳಿದ್ರೇ ತುಂಬಾ ಜನ ಮುಂದೆ ಬರ್ತಾರೆ. ನೀವು ಬಡತನದಲ್ಲಿದೀರಿ ಮತ್ತು ಪಾರ್ವತಿ ಗಟ್ಟಿ ಮುಟ್ಟು ಹೆಂಗಸು ಮತ್ತೆ ಇದರಲ್ಲಿ ಯಾವ ತರದ ಅಪಾಯ ಏನೂ ಇಲ್ಲಾದ್ದರಿಂದ ನಾನು ನಿಮಗೆ ಹೇಳಿದೀನಿ. ಇನ್ನು ನಿಮ್ಮಿಷ್ಟ. ಇದರಲ್ಲಿ ಸೆಂಟಿಮೆಂಟಾಗಲೀ, ನೀತಿ ಬಾಹಿರತನವಾಗಲೀ, ಗುಟ್ಟಾಗಲೀ ಏನೂ ಇಲ್ಲ. ಆಲೋಚನೆ ಮಾಡಿ.” ಎಂದರು ಡಾಕ್ಟರ್ ಉಮ. “ನಾವು ಸಹ ಆಲೊಚನೆ ಮಾಡಿಯೇ ಬಂದಿದ್ದೇವೆ. ನಮಗೆ ಒಪ್ಪಿಗೆ ಇದೆ ” ಎಂದರು ಪಾರ್ವತಿ ಕ್ರಿಸ್ಟಫರ್. “ಗುಡ್. ಅವರು ನಿಮಗೆ ಇಪ್ಪತ್ತೈದು ಸಾವಿರ ಮುಂಗಡವಾಗಿ ಕೊಡುತ್ತಾರೆ. ಗರ್ಭ ಕಟ್ಟಿದೆ ಅಂತಾದ ಮೇಲೆ ಐವತ್ತು ಸಾವಿರ ಕೊಡ್ತಾರೆ. ಮಗುವನ್ನು ಅವರಿಗೆ ಒಪ್ಪಿಸಿದ ಮೇಲೆ ಉಳಿದದ್ದು ಕೊಡ್ತಾರೆ. ಇದರ ಮಧ್ಯದಲ್ಲಿ ಪಾರ್ವತಿಯ ಆಹಾರ ಮತ್ತು ವೈದ್ಯಕೀಯ ಖರ್ಚೆಲ್ಲಾ ಅವರೇ ನೋಡಿಕೊಳ್ತಾರೆ. ನೀವಿನ್ನು ನಿಶ್ಚಿಂತಾರಾಗಿರಿ.” ಎಂದರು ಡಾಕ್ಟರ್ ಉಮ.                                    *   *   *   *   * ಎಲ್ಲಾ ಅಂದುಕೊಂಡ ಹಾಗೇ ಆಯಿತು. ಒಂಬತ್ತು ತಿಂಗಳೂ ಒಳ್ಳೆ ಆಹಾರ, ವೈದ್ಯಕೀಯ ನೆರವು ಮನಸಾರೆ ಕೊಡಿಸಿದರು ಆ ಐರಿಷ್ ದಂಪತಿಗಳು. ಡಾಕ್ಟರ್ ಉಮ ಸಹ ತುಂಬಾ ಮುತುವರ್ಜಿಯಿಂದ ಪ್ರಸವವನ್ನು ಮಾಡಿಸಿದರು. ಮಗುವನ್ನು ಪಾರ್ವತಿ ಕೈಯಿಂದಲೇ ಆ ದಂಪತಿಗಳಿಗೆ ಕೊಡಿಸಿದರು. ಅವರು ಮಾತು ಕೊಟ್ಟ ಹಾಗೇ ಅವರಿಂದ ಹಣ ಕೊಡಿಸಿದರು. ಪಾರ್ವತಿ ಮಾತ್ರ ಹಣವನ್ನು ಕ್ರಿಸ್ಟಫರ್ ಗೆ ಕೊಟ್ಟು, ಒಂಬತ್ತು ತಿಂಗಳು ತನ್ನ ಶರೀರದ ಭಾಗವಾಗಿದ್ದು, ತನ್ನ ರಕ್ತದಲ್ಲಿ ರಕ್ತವಾಗಿದ್ದು, ತನ್ನ ಕರುಳಿನ ಬಳ್ಳಿಯಗಿ ಹೊರಗೆ ಬಂದ ಆ ಮಗುವನ್ನ ತದೇಕವಾಗಿ ನೋಡುತ್ತಾ, ಕಣ್ಣೀರಿನೊಂದಿಗೆ ಆ ದಂಪತಿಗಳಿಗೆ ಒಪ್ಪಿಸುತ್ತಾ ಅವರ ಕಡೆಗೆ ನೋಡಿದಳು. ಅವರಿಬ್ಬರೂ ಮಗುವನ್ನ ಪಡೆದ ಆನಂದದಲ್ಲಿ, ಅತ್ತ ಡಾಕ್ಟರರನ್ನಾಗಲೀ, ಇತ್ತ ತನ್ನನ್ನಾಗಲೀ ನೋಡದೇ, ಮಗುವಿನ ಕಡೆಗೇ ನೋಡ್ತಾ ಮಗುವನ್ನ ತೆಗೆದುಕೊಂಡರು. ಕಥೆ ಸುಖಾಂತವಾಯಿತು.                          * * * * * * * * * * * * * * * ಒಂದು ವರ್ಷ ಕಳೆದ ನಂತರ ಡಾಕ್ಟರ್ ಉಮ ಪಾರ್ವತಿ ಯನ್ನ ಕೇಳಿದರು. “ಮತ್ತೊಂದು ಇಂಥ ಕೇಸು ಬಂದಿದೆ. ಒಪ್ಕೊತಿಯಾ ಪಾರ್ವತಿ ” ಅಂತ. ಪಾರ್ವತಿ ಚಿಕ್ಕ ಮುಖ ಮಾಡಿಕೊಂಡು ” ನಮ್ಮವರನ್ನು ಕೇಳಿ ಹೇಳ್ತೀನಿ ” ಅಂದಳು. ಈಗ ಪಾರ್ವತಿಗೆ ಹಣದ ಅಡಚಣೆ ಇಲ್ಲ. ಬಂದ ಹಣದಲ್ಲಿ ಸಾಲವೆಲ್ಲಾ ತೀರಿಸಿದರು. ಕ್ರಿಸ್ಟಫರ್ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದ್ದು, ಅವನು ತನ್ನ ಮಾಮೂಲಿನ ಕೆಲಸ ಮಾಡಿಕೊಳ್ಳುತ್ತಾ ಚೆನ್ನಾಗೇ ಹಣ ಗಳಿಸ್ತಿದ್ದ. ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಪಾರ್ವತಿ ಆಸ್ಪತ್ರಿಯಲ್ಲಿ ತನ್ನ ಕೆಲಸ ಮುಂದುವರೆಸಿದ್ದಳು. “ಯಾಕೆ ? ನಿನ್ನ ಆರೋಗ್ಯ ಚೆನ್ನಾಗಿದೆ. ಇನ್ನೊಂದು ಹೆರಿಗೆ ತಡೆದುಕೊಳ್ಳುವ ಶಕ್ತೀನೂ ಇದೆ. ಒಪ್ಪಿಕೋ” ಅಂದರು ಡಾಕ್ಟರ್. “ನಮ್ಮವರನ್ನ ಕೇಳ್ಬೇಕು” ಪಾರ್ವತಿ ಇನ್ನೂ ಅನುಮಾನಿಸುತ್ತಲೇ ಇದ್ದಳು. “ಚೆನ್ನಾಗಿ ಹಣ ಬರುತ್ತೆ. ಒಳ್ಳೆ ಲಾಭಾನೇ

ಬೆಳೆಸಲಾಗದ ಮಕ್ಕಳು Read Post »

ಅನುವಾದ

ತಕ್ಕ ಪಾಠ

ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.ಎಲ್ಲೋ ನೋಡಿದ ಮುಖ ! ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು. ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ. ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು. ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು. ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು. ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು. ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು. ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ. ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ. ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು. “ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ. ನಂತರ

ತಕ್ಕ ಪಾಠ Read Post »

ಅನುವಾದ

ಹೃದಯ ಭಾಷೆ

ಅನುವಾದಿತ ಕಥೆ ಹೃದಯ ಭಾಷೆ ತೆಲುಗು ಮೂಲ: ಕಳ್ಳೆ ವೆಂಕಟೇಶ್ವರ ಶಾಸ್ತ್ರಿ                               ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಬೆಳೆಗ್ಗೆ ಐದು ಗಂಟೆಗೆ ಆತ ತನ್ನ ಫ್ಲಾಟಿನಿಂದ ಹೊರಗಡೆ ಬಂದ. ಆತನ ಫ್ಲಾಟ್ ತುಂಬಾ ಚಿಕ್ಕದು. ಗ್ರೌಂಡ್ ಫ್ಲೋರ್ ನಲ್ಲಿತ್ತು. ಒಂದು ಹಾಲು, ಒಂದು ಮಲಗುವ ಕೋಣೆ, ಅಡುಗೆಮನೆ, ಬಾತ್ರೂಮ್ ಕಮ್ ಟಾಯ್ಲೆಟ್ ಇವು ಅದರ ಭಾಗಗಳು. ಬಾಗಿಲು ಮುಚ್ಚಿ, ಚಿಲಕವಿಟ್ಟು ಅದಕ್ಕೆ ಬೀಗ ಹಾಕಿದ. ಹೊರಗಡೆ ಇನ್ನೂ ಕತ್ತಲಿತ್ತು. ಬೆತ್ತದ ಆಸರೆಯಿಂದ ಸದ್ದಿಲ್ಲದೇ ಬೇಗಬೇಗ ನಡೆಯುತ್ತಿದ್ದ. ಆತನ ಹೆಗಲಿಗೆ ಕ್ಯಾನ್ವಾಸಿನ ಹೆಗಲು ಚೀಲ ನೇತಾಡುತ್ತಿತ್ತು. ಆತನ ಹೆಸರೇನು ಅಂತ ಅಲ್ಲಿರುವವರಿಗೆ ಗೊತ್ತಿರಲಿಲ್ಲ. ಆ ಫ್ಲಾಟ್ ಆತನ ಸ್ವಂತದ್ದೇ. ಹಾಗಾದರೇ, ಆತನನ್ನು ಏನಂತ ಕರೆಯುತ್ತಾರೆ ? ಆತನನ್ನು ಯಾರೂ ಕರೆಯುವುದಿಲ್ಲ. ಇನ್ನೂ ಹೇಳಬೇಕಾದರೆ ಆತನ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಇನ್ನುವರೆಗೂ ಆತನನ್ನು ಕರೆಯುವ ಅಗತ್ಯವೇ ಬಿದ್ದಿರಲಿಲ್ಲ ಅಲ್ಲಿ ವಾಸಿಸುವವರಿಗೆ. ಆತನ ವಯಸ್ಸು ಹೆಚ್ಚುಕಡಿಮೆ ಅರವತ್ತು ದಾಟಿ ಎಪ್ಪತ್ತರ ಒಳಗೆ ಇರಬಹುದು. ಆ ವಯಸ್ಸಿಗೆ ತಕ್ಕ ಹಾಗೆ, ಅತಿ ಸಾಧಾರಣವಾಗೇ ಇರುತ್ತಾನೆ ಆತ. ಆದರೇ…. ಯಾವಾಗಲೂ ಒಂದೇ ತರ ಇರುವುದಿಲ್ಲ . ಸ್ವಲ್ಪ ದಿವಸ ಮೀಸೆ ಇಟ್ಟಿದ್ದರೆ, ಮತ್ತೆ ಕೆಲದಿನ ತೆಗೆದಿರುತ್ತಾನೆ. ಒಂದು ದಿನ ಬೋಳಉತಲೆಯೊಂದಿಗೆ ಪ್ರತ್ಯಕ್ಷವಾದರೆ, ಮತ್ತೆ ಕೆಲ ದಿನ ಉದ್ದ ಕೂದಲಿನ ಸಾಧುವಿನ ತರ ಕಾಣಿಸಿಕೊಳ್ಳುತ್ತಾನೆ. ಆತನ ದಿರಿಸು ಬಹು ವಿಚಿತ್ರ. ಪೈಜಾಮಾ, ಜುಬ್ಬಾ ಧರಿಸಿದ್ದು, ತಲೆಗೆ ವಿದೇಶೀ ಟೋಪಿ ಇಡುತ್ತಾನೆ. ಒಮ್ಮೊಮ್ಮೆ ಪಂಚೆ ಉಟ್ಟು, ಮೇಲೆ ಶಲ್ಯ ಹಾಕಿ ತಿರುಗುತ್ತಾನೆ. ಮತ್ತೊಮ್ಮೆ ಯಾವುದೋ ನಾಮ ಹಣೆಯಮೇಲೆ ಧರಿಸಿರುತ್ತಾನೆ. ಸರಿ….. ಈಗ ಆತ ಎತ್ತ ಹೋಗುತ್ತಿದ್ದಾನೆ ? ನೇರ ಪಾರ್ಕಿನ ಕಡೆಗೆ ಹೋಗುತ್ತಿದ್ದಾನೆ. ಆ ದಾರಿಯಲ್ಲಿ ಆತನನ್ನು ನೋಡಿ ಬೊಗಳಲು ನಾಯಿಗಳಿಲ್ಲ. ಎಲ್ಲವನ್ನು ಮುನಿಸಿಪಾಲಿಟಿಯವರು ಎಲ್ಲೋ ಸಾಗಿಸಿದ್ದಾರೆ. ಆದರೆ ಅದು ಆತನ ದೂರುಗಳಿಂದಲೇ ಆದದ್ದು ಎಂದು ಅವರಿಗೆ ಗೊತ್ತಿಲ್ಲ. ಇದೋ…. ದಿನಾ ಬೆಳಗ್ಗೆ ಪತ್ರಿಕೆ ಹಾಕುವ ಹುಡುಗರು ವೇಗವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದಾರೆ. “ ಇವರುಗಳೆಲ್ಲ ಕನ್ನಡಿಗಳನ್ನು ತೊಗೊಂಡು ಹೋಗುತ್ತಿದ್ದಾರೆ. ಕನ್ನಡಿಯೊಳಗೆ ನೋಡಿಕೊಳ್ಳದಿದ್ದರೆ ಜನರಿಗೆ ಏನೂ ಅರ್ಥವಾಗುವುದಿಲ್ಲ, ಪಾಪ “ ಅಂದುಕೊಂಡ ಆತ. ಆತ ಅಷ್ಟೇ….. ದಿನಪತ್ರಿಕೆಯನ್ನು ’ ಕನ್ನಡಿ’ ಅಂತ ಕರೆಯುತ್ತಾನೆ. ಜನಗಳ ಮನೋಭಾವಗಳಿಗೆ ಕನ್ನಡಿ ಹಿಡಿಯುವುದು ಮತ್ತು ಜಗತ್ತಿನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಕನ್ನಡಿಯಂತೆ ತೋರಿಸುವುದು ದಿನಪತ್ರಿಕೆಗಳೇ ಆದ ಕಾರಣ ಆತ ಅವುಗಳಿಗೆ ಆ ಹೆಸರು ಇಟ್ಟುಕೊಂಡಿದ್ದಾನೆ. ಆತನ ವ್ಯವಹಾರವೇ ಅಷ್ಟು ! ಎಲ್ಲಾ ಸಂಕೇತ ಭಾಷೆಯಲ್ಲಿರುತ್ತೆ. ಆತ ಬರೆದಿಟ್ಟುಕೊಳ್ಳುವ ದಿನಚರಿ ಸಹ ಅದೇ ಭಾಷೆಯಲ್ಲಿರುತ್ತದೆ. ಈ ಅಭ್ಯಾಸ ಆತನಿಗೆ ಹೇಗೆ ಬಂತೋ ಯಾರಿಗೂ ಗೊತ್ತಿಲ್ಲ. ಆತ ಸಂದಿಗಳಲ್ಲಿ ನಡೆಯುವುದಿಲ್ಲ. ಮುಖ್ಯರಸ್ತೆಯ ಮೇಲೇನೇ. ಅದೂ ಸಹ ಮಾರ್ನಿಂಗ್ ವಾಕ್ ಮತ್ತು ಜಾಗಿಂಗ್ ಗಳ ಸಮ್ಮಿಶ್ರಣವಾಗಿರುತ್ತೆ. ಆತ ಹೀಗೆ ಎಷ್ಟು ದಿನಳಿಂದ ಅಥವಾ ಎಷ್ಟು ವರ್ಷಗಳಿಂದ ಮಾಡುತ್ತಿದ್ದಾನೋ ಯಾರಿಗೂ ಗೊತ್ತಿಲ್ಲ. ಇದೀಗ ಆ ಮಸೀದಿ ಪಕ್ಕದ ಮುಖ್ಯರಸ್ತೆಯ ಮೇಲಿನ ಕಾಫೀ ಹೋಟಲ್ ತೆಗೀತಿದ್ದಾರೆ. ಅದೋ ತೆಗೆದರು…..! “ ಹೌದು. ಕಷಾಯ ಕುಡಿದು ತುಂಬಾ ದಿನ ಆಯ್ತು. ನಡಿ. ಅಂತರಾತ್ಮಕ್ಕೆ ಹೋಗಿ ಸ್ವಲ್ಪ ಗಂಟಲಿಗೆ ಹಾಕೋಣ.” ಅಂತ ಹೇಳಿತು ಅವನ ಒಳ ಮನಸ್ಸು. ಅಂತರಾತ್ಮ… ಇದು ಆತ ಹೊಟೆಲಿಗೆ ಇಟ್ಟುಕೊಂಡ ಹೆಸರು….. ಅದರಲ್ಲಿ ಹೋಗಿ ಕೂತ. ಮಾಣಿ ಬಂದ ತಕ್ಷಣ “ ಕಷಾಯ” ಅಂದ. ಅವನಿಗೆ ಕನ್ನಡ ಬರುವುದಿಲ್ಲ. ಏನು ? ಎನ್ನುವ ಹಾಗೆ ಕೈಯಿಂದ ಸನ್ನೆ ಮಾಡ್ದ. ಆತ ಗೋಡೆಯ ಮೇಲಿದ್ದ ಪದಾರ್ಥಗಳ ಪಟ್ಟಿಯ ಬಳಿಗೆ ಹೋಗಿ ಕಾಫಿ ಅಂತ ಇದ್ದ ಕಡೆಗೆ ಬೆಟ್ಟು ಮಾಡಿ ತೋರಿಸಿದ. “ ಓಹೋ ! ಕಾಫೀ ಕ್ಯಾ….” ಅಂತ ತನ್ನಲ್ಲೇ ನಗೆಯಾಡುತ್ತ ಹೋದ ಅವನು. ಕಾಫಿ ಕುಡಿದ ಮೇಲೆ “ ಕವಡೆ ” ಕೊಟ್ಟು ಹೊರಬಂದ. ಕವಡೆ ಎಂದರೆ ದುಡ್ಡು… ಕಿಸೆಯಲ್ಲಿ ಕವಡೆ ಕಾಸಿಲ್ಲ ಅಂತಾರಲ್ಲ…. ಅದಕ್ಕೆ ದುಡ್ಡಿಗೆ ಕವಡೆ ಅಂತ ಹೆಸರಿಟ್ಟುಕೊಂಡಿದ್ದಾನೆ ಆತ. ಮತ್ತೆ ನಡೆಯಲು ಮೊದಲಿಟ್ಟ .  ಕೆಲ ಯುವಕರು ಟೀ ಷರ್ಟ್ ಮತ್ತು ಷಾರ್ಟ್ ಧರಿಸಿ ಜಾಗಿಂಗ್ ಗೆ ಬರುತ್ತಿದ್ದರು. ತನ್ನಲ್ಲೇ ನಕ್ಕ ಆತ. ಯಾಕೆ ಅಂತ ಅವನಿಗೂ ಗೊತ್ತಿಲ್ಲ. ಬಹುಶಃ ಒಂದು ಕಾಲದಲ್ಲಿ ತಾನು ಸಹ ಇದೇ ರೀತಿ ಯೌವನದಲ್ಲಿ ತುಂಬಿ ತುಳುಕುತ್ತಾ ಹೋರಿಯ ತರ ಓಡುತ್ತಿದ್ದ, ಈಗ ’ ನೆರಳು ’ ಬಿದ್ದು ತನಗೆ ಸಾಧ್ಯವಾಗುತ್ತಿಲ್ಲ ಎನ್ನುವ ಭಾವ ವಿರಬಹುದು. ನೀವೆಲ್ಲರೂ ನಾಳೆ ಇದೇ ’ ನೆರಳು’ ನಿಮ್ಮಮೇಲೆ ಬೀಳುವಾಗ ನನ್ನ ಹಾಗೆ ಆಗುತ್ತೀರಿ ಎನ್ನುವ ಇನ್ನೊಂದು ಭಾವ ಸಹ ಇರಬಹುದು. ನೆರಳು ಎಂದರೆ ಮುಪ್ಪು ಅಂತ ಅವನರ್ಥ. ಪಾರ್ಕಿನೊಳಗೆ ಕಾಲಿಟ್ಟ. ಒಳಗೆ ಎಂಥಾ ಒಳ್ಳೆ ಸಂಗೀತ ! ಪಾರ್ಕಿನಲ್ಲಿ….. ಆ ಸಮಯದಲ್ಲಿ ಸಂಗೀತನಾ… ಅಂತ ನೀವು ಕೇಳಬಹುದು. ಪ್ರಶಾಂತತೆಗೆ ಆತನ ನಿಘಂಟುವಿನಲ್ಲಿಯ ಹೆಸರು ಸಂಗೀತ…… ಪ್ರಶಾಂತತೆಗಿಂತ ಮಿಗಿಲಾದ ಇಂಪಾದ ಸಂಗೀತ ಬೇರೇ ಇರಲಾರದು ಅಂತ ಆತನ ಅಚಲ ನಂಬಿಕೆ. ಹೂಗಿಡಗಳ ನಡುವೆ ಹಾಕಿದ ಬಂಡೆಗಳ ಮೇಲೆ ನಡೆಯುತ್ತಿದ್ದ. ಪಕ್ಕಕ್ಕೆ ನೋಡುತ್ತಾ “ ಈ ಹುಡುಗೀರು ಇನ್ನೂ ಏಳ್ಳಿಲ್ಲ ಅಂತ ಕಾಣತ್ತೆ….. ಮಲ್ಕೊಳ್ಳಿ.  ನಿದ್ರೆಮಾಡಿ.  ಸೊಗಸಾದ ಕನಸು ಕಾಣಿರಿ ಹಾಯಾಗಿ…. ನನ್ನ ಮುದ್ದು ಹುಡುಗಿಯರೇ “ ಅಂದ. ಹೌದು. ಮತ್ತೆ……ಆ ರಸಿಕನ ಹೃದಯದ ಭಾಷೆಯ ಪ್ರಕಾರ ಹೂಗಳು ಮತ್ತು ಹುಡುಗಿಯರೂ ಒಂದೇ….. ಹಾಗಾದರೆ ಹುಡುಗಿಯರಿಗೆ ಏನು ಹೆಸರಿಟ್ಟಿದ್ದಾನೋ ಅಂತ ನಿಮಗೆ ಸಂದೇಹವಾಗಬಹುದು ಅಲ್ಲವೇ ! ಅದೋ ನೋಡಿ…. ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗೀರು ಸ್ಕಿಪ್ಪಿಂಗ್ ಮಾಡ್ತಾ ಇದ್ದರು. “ ಹಾಯ್ ಚಾಕ್ಲೆಟ್ಸ್ “ ಅಂತ ಸಂಬೋಧಿಸಿದ. ಅವರು ಸಣ್ಣಗೆ ನಕ್ಕರು. ಹುಡುಗೀರಿಗೆ ಚಾಕ್ಲೆಟ್ ಗಳೆಂದರೆ ಇಷ್ಟ ಅಲ್ಲವಾ ! ಅದಕ್ಕೆ ಅವರಿಗೆ ಆ ಹೆಸರು. ಅಲ್ಲಿಗೆ ಆತನಿಗೆ ನಡೆದು ನಡೆದು ಸಾಕಾಯಿತು. ಕಾಲು ಹರಿಯುತ್ತಿದೆ ಎನಿಸಿತು. ಒಂದು ಮಂಚದ ಮೇಲೆ ಕುಳಿತುಕೊಂಡ…. ಪಾರ್ಕಿನಲ್ಲಿಯ ಕಲ್ಲಿನ ಸೋಫಾಗಳೆಲ್ಲಾ ಆತನಿಗೆ ಮಂಚಗಳೇ. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಧ್ಯಾನದಲ್ಲಿ ಮಗ್ನನಾದ. ಸಮಯ ಆರುಗಂಟೆಯಾಯಿತು. ಬೆಳಕಿನ ಕಿರಣಗಳು ಜಗತ್ತನ್ನು ಬೆಳಗಲು ಶುರುಮಾಡಿದ್ದವು. ಹತ್ತು ನಿಮಿಷದ ನಂತರ ಕಣ್ಣು ಬಿಟ್ಟು ಅಲ್ಲಿಂದ ಎದ್ದ. ಮತ್ತೆ ನಡಿಗೆ. ತೋಟದಲ್ಲಿ ಸುತ್ತಾಡುತ್ತಾ ಯಾವುದೋ ಹಾಡು ಹಾಡಿಕೊಳ್ಳುತ್ತಿದ್ದ. ಆತನ ಪಕ್ಕಕ್ಕೆ ನಡೆಯುತ್ತಿದ್ದ ಐವತ್ತರ ಪ್ರಾಯದ  ಹೆಂಗಸು ಆತನ ರಾಗವನ್ನು ಉತ್ಸುಕತೆಯಿಂದ ಆಲಿಸಿದಳು. ಏನೂ ಅರ್ಥವಾಗಲಿಲ್ಲ. ಯಾವುದೋ ಹಳೆಯ ಹಾಡಿನ ಅಣಕ ಅದು. ಆದರೇ ಪದಗಳು ಅರ್ಥವಾದಹಾಗೆ ಅನಿಸಲಿಲ್ಲ. ಅದು ಆತನ ಸಂಕೇತ ಭಾಷೆಯಲ್ಲಿತ್ತು. ಮೆಲ್ಲಗೆ ತನ್ನಲ್ಲಿ ತಾನೇ ನಕ್ಕು, ಸರಸರಾ ಆತನನ್ನ ದಾಟಿ ಹೋದಳು. ಸೌಂದರ್ಯ ಬೆಣ್ಣೆಯಹಾಗೆ… ಕರಗಿಹೋಗುತ್ತಿರುತ್ತೆ. ಆದರೆ ಆನಂದ ಪಾಯಸದ ತರ ಒಂದು ದಿವ್ಯ ಅನುಭವ. ಜೀವನ ಒಂದು ಪ್ರವಾಹ. ಇವೆಲ್ಲ ಸೇರಿಸಿ ಹಾಡಿದ ಅಣಕ ಹಾಡು ಯಾರಿಗೆ ತಾನೇ ಅರ್ಥವಾದೀತು ? ಬೆಳ್ಳನೆ ಬೆಳಗಾಯಿತು. ಚುರುಕಾಗಿ ನಡೆಯುತ್ತಿದ್ದ ಆತ ಒಂದು ಕ್ಷಣ ಶಾಕ್ ಹೊಡೆದವರ ಹಾಗೆ ಎದೆಯ ಮೇಲೆ ಕೈಯಿಟ್ಟುಕೊಂಡು ಕಲ್ಲಿನ ತರ ಹಾಗೇ ನಿಂತು ಬಿಟ್ಟ. ಎದೆಗೆ ಯಾರೋ ಮೊನಚಾದ ಭರ್ಜಿಯಿಂದಿ ತಿವಿದಹಾಗೆ ಅನಿಸಿತು. ಆತನಿಗೆ ಹೃದಯಾಘಾತವಾಗಿತ್ತು. ಅದು ಆತನಿಗೆ ಮೊದಲನೆಯಸಲ ಅನುಭವಕ್ಕೆ ಬಂದಿತ್ತು. ಹಣೆಯ ಮೇಲೆ ಬೆವರು ಮಡುಗಟ್ಟಿತು. ಮೈಯಲ್ಲೆಲ್ಲಾ ಛಳುಕು ಬಂದಂತಾಯಿತು. ದೇಹ ಬೆಂಡಾಗುತ್ತಿತ್ತು. ನೆಲಕ್ಕೆ ಕುಸಿದ. ಯಾರೋ ಆತನ ಮುಖಕ್ಕೆ ನೀರು ಚೆಲ್ಲಿ, ಎಬ್ಬಿಸಿ ಕೂರಿಸಿದರು. ಕಣ್ಣು ತೆಗೆದು ನೋಡಿ ಎದುರಲ್ಲಿ ಕಂಡ ಮಧ್ಯವಯಸ್ಸಿನ ವ್ಯಕ್ತಿಯನ್ನೊಮ್ಮೆ ಕೃತಜ್ಞತೆಯಿಂದ ನೋಡಿದ. “ ಧಾರೆ….ಧಾರೆ…. “ ಎಂದ. “ಏನಂದ್ರಿ ?” ಆ ಉಪಕಾರಿ ಕೇಳಿದ. ಅವನ ಕೈಲಿದ್ದ ಬಾಟಲಿಯ ಕಡೆಗೆ ನೋಡುತ್ತಾ ಆತ “ ಧಾರೆ “ ಎಂದ. ಅರ್ಥ ಮಾಡಿಕೊಂಡವನ ಹಾಗೆ ಅವನು ಆ ಬಾಟಲ್ ಎತ್ತಿ ನೀರು ಕುಡಿಸಿದ. ಗುಟುಕು ಹಾಕುತ್ತಾ ಕುಡಿದು ಚೇತರಿಸಿಕೊಂಡ. ತನ್ನ ಪ್ರಾಣ ಉಳಿಸಿದವನಿಗೆ ಕೈಯೆತ್ತಿ ನಮಸ್ಕರಿಸುತ್ತಾ “ ರತ್ನಗಳು “ ಎಂದ. ಕೃತಜ್ಞತೆಗಳು ರತ್ನದ ಹಾಗೆ ಅಂತ ಅವನಿಗೆ ಗೊತ್ತಾಗದೇ ಈತನನ್ನ ಹುಚ್ಚನನ್ನ ನೋಡುವ ಹಾಗೆ ನೋಡಿ ನಕ್ಕ ಅವನು. ನಮ್ಮ ಕತೆಯ ನಾಯಕ ತನ್ನ ಬೆತ್ತದ ಸಹಾಯದಿಂದ ಮೇಲೆದ್ದ. ಆ ಹೊಸಬ ಮುಂದಕ್ಕೆ ಸಾಗಿದ. ಮತ್ತೆ ನಡೆಯಲು ಮೊದಲು ಮಾಡಿದ. ಆದರೆ ತುಂಬಾ ಹೊತ್ತು ನಡೆಯಲಾಗಲಿಲ್ಲ ಆತನಿಗೆ. ಒಂದು ಆಟೋ ನಿಲ್ಲಿಸಿ, ಹತ್ತಿ “ ನಡೆ ” ಎನ್ನುವ ಹಾಗೆ ಸನ್ನೆ ಮಾಡಿದ. “ ಎಲ್ಲಿಗೆ ?” ತನ್ನ ಕಿಸೆಯಿಂದ ಒಂದು ವಿಜಿಟಿಂಗ್ ಕಾರ್ಡ್ ತೆಗೆದು ಅವನಿಗೆ ತೋರಿಸಿದ. ಅದರಲ್ಲಿ ಆತನ ಹೆಸರಿಲ್ಲ. ಅದು ನೀಲಿಮಾ ಟವರ್ಸಿನ ವಿಳಾಸವಿರುವ ಕಾರ್ಡ್. ಅದರ ಮೇಲಿನ ಒಂದು ಮೂಲೆಯಲ್ಲಿ ಪೆನ್ನಿನಿಂದ ೧೦೧ ಅಂತ ಬರೆದಿತ್ತು. ಹತ್ತು ನಿಮಿಷಗಳಲ್ಲಿ ಆಟೋ ಅಪಾರ್ಟ್ ಮೆಂಟಿನ ಮುಂದೆ ನಿಲ್ಲುತ್ತಲೇ, ಆತ ಹಣ ಕೊಟ್ಟು ತನ ಮನೆಗೆ ನಡೆದ. ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಏನೋ ನೆನಪಾಗಿ ಹಿಂತಿರುಗಿದ. ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಟೀ ಹೋಟಲ್ ಕಡೆಗೆ ನಡೆದ. ಅದರ ಪಕ್ಕಕ್ಕೆ ಒಂದು ಟೆಲಿಫೋನ್ ಬೂತ್ ಇತ್ತು. ಗಾಜಿನ ಬಾಗಿಲು ತೆಗೆದು ಅದರಲ್ಲಿ ಹೋಗಿ ಕೂತ. ಮೈ ದಣಿವಿನಂದ ನಡುಗುತ್ತಿತ್ತು. ಕಿಸಿಗೆ ಕೈಹಾಕಿ ಯಾವುದೋ ಕಾಗದ ಹೊರಗೆ ತೆಗೆದ. ಅದರಲ್ಲಿಯ ಯಾವುದೋ ಫೋನ್ ನಂಬರ್ ನೋಡಿ ಅದನ್ನ ಅಲ್ಲಿ ಕುಳಿತಿದ್ದ ಹುಡುಗಿಗೆ ತೋರಿಸಿದ. ಆ ಹುಡುಗಿ ಆ ನಂಬರ್ ನ ತನ್ನ ಹತ್ತಿರವಿದ್ದ ಕಾಗದದ ಮೇಲೆ ಬರೆದುಕೊಂಡಳು. ಆತ ಏನೋ ನೆನಪಿಸಿಕೊಳ್ಳುವ ಹಾಗೆ ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ ಅಂತ ಕಂಡಿತು. ತನ್ನ ಕಿಸೆಯಲ್ಲಿಯ ವಿಜಿಟಿಂಗ್ ಕಾರ್ಡ್ ತೆಗೆದು ಅವಳಿಗೆ ಕೊಟ್ಟು “ ಈ ವಿಳಾಸಕ್ಕೆ ಒಂಬತ್ತು ಗಂಟೆಗೆ ಬರಲಿಕ್ಕೆ ಹೇಳು” ಎನ್ನುವ ಹಾಗೆ ಸನ್ನೆ ಮಾಡಿದ. ಅವಳಿಗೆ ಅರ್ಥವಾಯಿತು. ಫೋನ್ ರಿಂಗಾಗುತ್ತಿತ್ತು. ನಿಮಿಷದ ನಂತರ “ ಹಲೋ “ ಎಂದಳು ಆ ಹುಡುಗಿ. ಆತ ಅವಳ ಕಡೆಗೇ ನೋಡುತ್ತಿದ್ದ. “ ಹಲೋ….. ಈ ನಂಬರ್ ಯಾರದು ಸರ್.  ಲಾಯರ್ ಪರಮಹಂಸ ಅವರದಾ ? ಇಲ್ಲಿ ನೀಲಿಮ ಟವರ್ಸಿನ  ೧೦೧ ನೇ ಫ್ಲಾಟಿನ ಯಾರೋ ಹಿರಿಯರು ಫೋನ್ ಮಾಡ್ತಾ ಇದಾರೆ. ನಿಮ್ಮನ್ನ ಅವರ ಮನೆಗೆ ಒಂಬತ್ತು ಗಂಟೆಗೆ ಬರಲು ಹೇಳ್ತಾ ಇದ್ದಾರೆ “ ಆಕಡೆಯಿಂದ “ ಆಯಿತು” ಅಂತ ಕೇಳಿಸುತ್ತಲೇ ಫೋನ್ ಇಟ್ಟು “ ಬರ್ತಾರಂತೆ” ಎಂದಳು. ಆತ ಹಣ ಆಕೆಯ ಕೈಯಲ್ಲಿಟ್ಟು “ ರತ್ನಗಳು, ವಜ್ರಗಳು “ ಅಂತ ಹೇಳಿ ಹೊರಬಂದ. ಆ ಹುಡುಗಿ ಸ್ವಲ್ಪ ವಿಚಿತ್ರವಾಗಿ, ಸ್ವಲ್ಪ ಭಯದಿಂದ, ಸ್ವಲ್ಪ ಮುಜುಗರದಿಂದ, ಆಸಕ್ತಿಯಿಂದ ನೋಡುತ್ತಲೇ ಇದ್ದಳು. ಆತ ಮನೆ ಸೇರಿ ಬೀಗ ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡ. ಲಾಯರ್ ತಪ್ಪದೇ ಬರುತ್ತಾರೆಂದು ಆತನಿಗೆ ಗೊತ್ತು. ಆತನಿಗೀಗ ನಿಜವಾಗ್ಲೂ ಆತಂಕ ಹೆಚ್ಚಿತ್ತು. ತನಗೆ ಮೊದಲನೆಯ

ಹೃದಯ ಭಾಷೆ Read Post »

ಅನುವಾದ

ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ ಬಿಂಬವಿತ್ತು ನಿನ್ನ ಹಾಗೆ ಚಾಳೀಸುನನಗೂ ಬಂದಿದೆ ಈಗಕಚೇರಿಯ ನನ್ನ ಕುರ್ಚಿಯ ಹಿಂದೆನಿನ್ನ ಪಟ ತೂಗು ಹಾಕಿರುವೆ ಕಣ್ಣಾಡಿಸುವೆ ಹೆಣ್ಣಿನ ಮೇಲೆರಿಗಿದರಕ್ಕಸರ ಎಫ್ ಐ ಆರ್ಪ್ರತಿಗಳ ಮೇಲೆಪಾನಮತ್ತ ಪಿಶಾಚಿ ಪತಿಯಕತೆ ಹೇಳುವ ಡಿ ಐ ಆರ್ ನಪುಟಗಳ ಮೇಲೆಹತ್ತಿಕ್ಕುವೆ ಎದೆಯೊಳಗೆಭುಗಿಲೇಳುವ ಹೊನಲಅದು ಪಾದಮಸ್ತಕಾದಿಯಾಗಿ ಹರಿದುಪೆನ್ನಿನ ತುದಿಯಲ್ಲಿ ಸ್ತಬ್ದವಾಗುವುದು ಬಾಪೂ ನಿನ್ನ ಚರಿತೆಅರಿವುದೆಷ್ಟು ಸುಖವೋಆ ಹಾದಿಯ ತುಳಿವಸುಖವೂ ನನ್ನೀ ಆತ್ಮಕ್ಕಿರಲಿ My Gandhi.. Bald head,spectacled eyes,A stick in hands,A smile on ur wrinkled face,Gandhi you were born as aGrandpa in me. You were in a photoOn a wall of the chamberOf our headmaster.Even I could reach youThrice in a year. When we were eating a ladduAfter scrubbing the frame,Cleaning the glass,Decorating with a garland,And hailing a JaiSweetness in my mouth,And happiness filled my heart. You too grew along with me,Grandpa became a Mahatma,You became an embodimentOf simple truth,non violenceAnd lit our path. At a time when there wasWarmth in veins, spirit in the heart,Dreamt of swimming against the tide,Your image was in my eyes. Now I too have gotspectacles like you.Hanging a portrait of yoursOn the wall behind my chairIn my office. I am glancing the FIRsOf the devils who pouncedUpon the girls.DIR pages telling the storiesOf drunken demonic husbands. I Control the flamming riverIn my heart,that flows throughoutFrom head to toeand settles at the tip of the pen. Bapu, how cheerful I becomeknowing your story,Let the same happiness fill my soul,While treading your path. *******************************

Read Post »

ಅನುವಾದ

ಜಾನ್ ಮಿಲ್ಟನ್ ಕವಿತೆಯ ಅನುವಾದ

ಅಂಧಕಾರದೊಳಗಿಂದ ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್ ಕನ್ನಡಕ್ಕೆ ವಿ.ಗಣೇಶ್ ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದುಬಾಳ ಪುಟಗಳ ತಿರುವಿದರೆ ಬರಿ ಕತ್ತಲುಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗಬೆಳಗಿಸಲು ಛಲ ಹೊತ್ತು ನಿಂತೆ ನಾನು ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆಕಾಣಿಕೆಯ ರೂಪದಲಿ ನಾನು ಪಡೆದಿರುವೆಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆಬೇರೆ ರೂಪದಿ ಕೊಡಲು ಮುಡುಪನಿಡುವೆ. `ಕಷ್ಟವೇನೇ ಇರಲಿ ಕಾಯಕವ ನೀ ಮಾಡುಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂಅದನು ಮರೆತಿಹ ನಾನು ಬರಿದೆ ಕಾಲವ ಕಳೆದೆವ್ಯರ್ಥವಾಯಿತು ನನ್ನ ಬದುಕು ಹೀಗೆ ನೀನು ಪ್ರೀತಿಯಲಿತ್ತ ಆ ನಿನ್ನ ನೇಗಿಲನುಉಳುವ ಕಾರ್ಯಕೆ ಈಗ ಬಳಸುತಿರುವೆಇದಕಿಂತ ಮಿಗಿಲಾದ ನಿನ್ನ ಸೇರುವ ಮಾರ್ಗನನ್ನ ಮತಿಗೆಟುಕದದು ಕೇಳು ಪ್ರಭುವೆ ಕಾಯಕವೆ ಕೈಲಾಸ ಎಂಬ ಮಂತ್ರವನರಿತುನಿನ್ನ ಸೇವೆಯ ಮಾಡಲೆನ್ನನನುಗೊಳಿಸು ದೇವನಿನ್ನೊಲವಿನಾ ತೊರೆಯು ಶರಧಿಯೋಪಾದಿಯಲಿಹರಿವುದು ಎಲ್ಲೆಡೆಯಿಂದ ನನ್ನ ಕಡೆಗೆ. ********************************* On His Blindness: John Milton

ಜಾನ್ ಮಿಲ್ಟನ್ ಕವಿತೆಯ ಅನುವಾದ Read Post »

You cannot copy content of this page

Scroll to Top