ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) ನನ್ನ ಪ್ರೇಮಿ ಕೇಳುತ್ತಾಳೆ- “ನನ್ನ ಮತ್ತು ಆಗಸದ ನಡುವೆ ಅಂತರವೇನು?” “ಅಂತರವಿಷ್ಟೆ, ಪ್ರಿಯೆ, ನೀನು ನಗುವಾಗ ನಾನು ಆಗಸವನ್ನು ಮರೆತು ಬಿಡುವೆ” ******* ಡಾ.ಗೋವಿಂದ ಹೆಗಡೆ

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ ಎಲೆಯೊಂದಿಗೆ ಧೃಢವಾಗುತ್ತ ದಿಗಂತವೇ ಆಗುವವ ನೀನು ಕ್ಷುದ್ರ ಕಣ್ಣಿನ ಲಫಂಗರು ಯಾಕೆ ನಿನ್ನನ್ನು ಕ್ಷಿತಿಜಕ್ಕೆ ಮಾತ್ರ ಬಂಧಿಯಾಗಿಸಿಡಬೇಕು? ತಮ್ಮ ಕುಂಡಿಯ ಮೇಲಿನ ಮಚ್ಚೆ ಎಣಿಸಲು ಬಾರದ ಇವರಿಗೆ ಬರೀ ಸಾಮಾನ ಪಿಟೀಲು ತುಣ ತುಣಿಸುವುದು ಮತ್ತು ಕುಂಡೆಯ ಡೋಲು ಬಾರಿಸುವುದು ಯಾಕೆ ಬೇಕು? ಬೆರೆಯುವ ಹೆಸರಲ್ಲಿ ಇವರು ಮೈಮೇಲೆ ಹೊದ್ದುಕೊಂಡಿರುವ ಸಂಪತ್ತಿನ ಶಾಲು ಕೊನೆಗೂ ರಾಧಾಬಾಯಿ, ಭೀಮಾಬಾಯಿಯರ ಕರುಣಾಷ್ಟಕ ಕೊನೆಗೂ ಯೆಲ್ಲಮ್ಮನ ತಿರುಪೆ ಪಾತ್ರೆ, ಈ ಚಾಣಾಕ್ಷ ಉರಿಶಿಶ್ನ ಇವರುಗಳ ಪಂಚಾಯತಿ ಹಮಾಲ ಇವರುಗಳ ಗುಡಾಣತುಂಬುವ ಟ್ರಸ್ಟ್ ಇವೇ ಇವರುಗಳ ಎಂಟು ಹೊತ್ತಿನ ಸುಗ್ರಾಸ ಊಟದ ಶಿಬಿರ ನಂತರ ರಾತ್ರಿ ಸ್ವಪ್ನಕ್ಕೆ ಕಾಡಿಗೆ ಹಚ್ಚಿಕೊಂಡು ಸುಗ್ರಾಸ ಸಂಭೋಗ ಪುನಃ ಹೊಸ ದಿನಕ್ಕಾಗಿ ಶುಭ್ರ ಖಾದಿ ಹೊದ್ದು ಸುಪರ್ ಸ್ಟ್ರಕ್ಚರ್ ಹಾಗೆ ನಲ್ಲ ನಲ್ಲೆ ಸ್ವಂತದ್ದೇ ಶಿಲುಬೆ ಸ್ವಂತ ಹೆಗಲುಗಳ ಮೇಲೆ ಹೊತ್ತೊಯ್ಯಲು ಹಲ್ಕಟರಾದ ಇವರು ಇಲ್ಲಿ ಅಜ್ಞಾನ ಫಲ ಕೊಡಲಿ, ಅರಳಲಿ ದಲಿತರಿಗೆ ಮಾತ್ರ ಏನೂ ತಿಳಿಯದಿರಲಿ ಈ ಪ್ರವಾದಿಗಳ ನೆತ್ತಿಯ ಮೇಲೆ ಬೆಣ್ಣೆ ಕರಗುತ್ತಲಿರಲಿ ಇತ್ತೀಚೆ ಇವರ ಸಮಾಜವಾದಿ ಪಿಂಡಗಳನ್ನೂ ಕಾಗೆ ತಿನ್ನ ತೊಡಗಿವೆ ಈ ಕಾಗೆಗಳು ಇಡೀ ಶಹರವನ್ನೇ ಹೊಲಸು ಮಾಡಿ ಬಿಟ್ಟಿದ್ದಾವೆ ಓ ಮಬ್ಬು ಆಕಾಶವೇ ಆ ನಮ್ಮ ಹಿತೈಷಿ ಮುಂಗಾರು ನಮ್ಮನ್ನ ಒದ್ದೆಯಾಗಿಸುತ್ತ ಬರುತ್ತಿದೆಯಲ್ಲ ! ಈ ಎಂಬತ್ತೊಂದರ ವರ್ಷದ ಮಹಾದ್ವಾರವು ಅವನಿಗಾಗಿ ಪೂರ್ತಿ ತೆರೆಯಲಿ ಅವನಿಗಾಗಿ ಈ ಹೃದಯ, ಅವನಿಗಾಗಿ ಈ ರಕ್ತ ಅವನಿಗಾಗಿ ಈ ಪ್ರೇಮ ಸ್ವಪ್ನಗಳ ಪರದೆ ಹರಿದು ಸಿಂಹಗರ್ಜನೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದೇವೆ ನಾವೀಗ ಯಾರಪ್ಪನ ಭಯ ನಮಗೆ? *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ನನ್ನ ಪ್ರಿಯ ಕವಿ ಮೂಲ: ಸರ್ಬಜೀತ್ ಗರ್ಚ ಕನ್ನಡಕ್ಕೆ:ಕಮಲಾಕರ ಕಡವೆ ಬೇಕಾದರೆ ಅವುಗಳನ್ನು ಕವಿತೆ ಎನ್ನಬೇಡಆದರೆ ಬರೆವೆಯಾದರೆ ಬರೆಜೇಬಿನ ಕತ್ತಲೆಗೆ ಬೆಳಕ ಚೆಲ್ಲದಿದ್ದರೂಕೊಂಚ ಬೆಚ್ಚಗಿರುಸುವಂತಸಾಲುಗಳನ್ನು ಹೇಗೆ ನೆಲಹಾಸಿನ ಮೇಲೆ ಬೀಳುವ ಬಿಸಿಲಕೋಲುವರ್ಷಾನುಗಟ್ಟಲೆ ಮುಚ್ಚಿದ್ದ ಕೋಣೆಗೂಹೊರಗೆ ಬೆಳಗುತ್ತಿರುವ ಸೂರ್ಯನಕಾಣುವ ತವಕವನ್ನು ಕೊಟ್ಟಂತೆ ಅಂತಹ ಸಾಲುಗಳುಜೇಬಿನಲ್ಲಿಯೇ ಇದ್ದು ಇದ್ದುಒಂದು ದಿನ ಪಕಳೆಯಾಗಿ ಬಿಡುವವು ಹಾಗೂ ಸೂರ್ಯನಾಗುವನು ಒಂದು ಗುಲಾಬಿಹರಡಿ ಅದರೊಳಗೆಲ್ಲ ತನ್ನ ಕಿರಣ ಕಾಗದ ಅಥವಾ ಜೇಬು ಇಲ್ಲದೆಯೂಅವು ದಿನದಿನವೂ ಬೆಳಗುವವುಅನುದಿನವೂ ನಗುವವು *********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಹಸಿವು ಮತ್ತು ಬಾಯಾರಿಕೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ:ಡಾ.ಬೆಳ್ಳೂರು ವೆಂಕಟಪ್ಪ ಧರ್ಮಛತ್ರದ ಕಾವಲುಗಾರನಾಗಿದ್ದ ವೃದ್ದನೊಬ್ಬ ಕೇಳಿದ: ಹಸಿವು ಮತ್ತು ಬಾಯಾರಿಕೆ ಬಗ್ಗೆ ತಿಳಿಸಿ: ಪ್ರವಾದಿ ನಗುತ್ತಾ ಹೀಗೆ ಹೇಳಿದ: ಬೆಳಕನ್ನು ಹೀರಿ ಬೆಳೆವ ಮರಗಿಡಗಳ ರೀತಿ ತಂಗಾಳಿಯ ಜತೆ ಸುಗಂಧ ಬಿರಿವ ಭೂಮಿಯ ಮೇಲೆ ನಿಮಗೆ ಬದುಕುವುದಕ್ಕೆ ಸಾಧ್ಯವೇ? ಆದರೆ ಕೊಂದು ತಿನ್ನುತ್ತೀರಿ ಪ್ರಾಣಿಗಳ ಹಾಲನ್ನು ಕದ್ದು ಕುಡಿಯುತ್ತೀರಿ ಹಸಿವು ಮತ್ತು ಬಾಯಾರಿಕೆ ನೀಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿರುವ ಈ ಪ್ರಕೃತಿ ನಿಯಮ ಪೂಜನೀಯವಾಗಿದೆ ನಿಮ್ಮ ವಾಸದ ಮನೆಗಳನ್ನು ಕಟ್ಟಲು ಆ ಮುಗ್ಧ ಕಾಡಿನ ಮರಗಳನ್ನು ಬಲಿ ಕೊಡುತ್ತೀರಿ ಇನ್ನೂ ಮುಗ್ಧತೆಯ ಪ್ರತಿಕವಾಗಿರುವ ನಿಮಗೆ ಪರಿಶುದ್ಧ ಗುಣದ ಕಾಡು ಎಲ್ಲವನ್ನೂ ತ್ಯಾಗ ಮಾಡಿದೆ. ಆಡು ಕುರಿ ಕೋಳಿ ಇತರೆ ಯಾವುದಾದರೂ ಜೀವಿಗಳನ್ನು ಕೊಲ್ಲುವಾಗ ನೀವು ನಿಮ್ಮ ಹೃದಯಕ್ಕೆ ಹೀಗೆ ಹೇಳಿ “ಯಾವ ನಿಯಮ ನಿಮ್ಮನ್ನು ಕೊಲ್ಲುವಂತೆ ಮಾಡಿದೆಯೊ ಅದೇ ನಿಯಮ ನನ್ನನ್ನೂ ಕೊಂದು ನನ್ನ ದೇಹದ ಮಾಂಸವನ್ನು ಬೇರೆ ಜೀವಿಗಳು ಸೇವಿಸುತ್ತವೆ” “ಕೊಂದು ತಿನ್ನಲು ಯಾವ ಪ್ರಕೃತಿ ನಿಮ್ಮನ್ನು ನನ್ನ ಕೈಲಿರಿಸಿದೆಯೊ ಅದೇ ಪ್ರಕೃತಿ ನನ್ನನ್ನು ಇನ್ನೊಂದು ಕಾಣದ ಕೈಯಲ್ಲಿ ಇರಿಸಿದೆ” “ನನ್ನ ರಕ್ತ ಮತ್ರು ನಿಮ್ಮ ರಕ್ತ ಬೇರೇನೂ ಅಲ್ಲ ಸ್ವರ್ಗದ ಮರಗಳ ಬೇರುಗಳಿಗೆ ಜೀವರಸ ಮಾತ್ರ” ಹಾಗೆಯೇ ಸೀಬೆಯ ಹಣ್ಣನ್ನು ಕಚ್ಚಿ ತಿನ್ನುವಾಗ ನಿಮ್ಮ ಹೃದಯಕ್ಕೆ ಕೇಳಿಸುವಂತೆ ಹೀಗೆ ಹೇಳಿ: “ನಿಮ್ಮ ಬೀಜಗಳು ನನ್ನ ಹೊಟ್ಟೆಯಲ್ಲಿ ಸೇರಿದ್ದು ಅವು ಮುಂದೆ ನಳನಳಿಸುವ ಹೂವಾಗಿ ನನ್ನ ಹೃದಯದಲ್ಲಿ ಅರಳುತ್ತವೆ “ “ನಿನ್ನ ಸುಗಂಧ ನನ್ನ ಉಸಿರಾಗಲಿ ಎಲ್ಲ ಋತುಗಳಲ್ಲಿ ಕೂಡಿ ಬಾಳೋಣ” ಅದೇ ತರ ಶರತ್ಕಾಲದ ದ್ರಾಕ್ಷಿತೋಟದಿಂದ ಕಿತ್ತು ತಂದ ಹಣ್ಣುಗಳನ್ನು ತುಳಿದು ವೈನ್ ತಯಾರಿಸುವಾಗ ಕೂಗಿ ಹೇಳಿ ನಿಮ್ಮ ಹೃದಯಕ್ಕೆ: “ನಾನೂ ಕೂಡ ಒಂದು ದ್ರಾಕ್ಷಿತೋಟ ನನ್ನ ಎಲ್ಲ ರಕ್ತ ಮಾಂಸ ದ್ರಾಕ್ಷಿ ಹಣ್ಣುಗಳ ರೀತಿ ತುಳಿಯಲ್ಪಟ್ಟು ದ್ರಾಕ್ಷಾರಸವಾಗುತ್ತವೆ” “ನಾನು ಹೊಸ ವೈನ್ ಅಗಿ ಅನಂತ ಕಾಲದ ಪಾತ್ರೆಗಳಲ್ಲಿ ಬಂಧಿಯಾಗುತ್ತೇನೆ” “ಚಳಿಗಾಲಕ್ಕೆ ನೀವು ಕುಡಿವ ಆ ವೈನಿನ ಪ್ರತಿ ಕಪ್ಪಿನಲ್ಲೂ ಸೇರಿ ನಿಮ್ಮ ಹೃದಯದ ಹಾಡಾಗುತ್ತೇನೆ” “ಆ ಹಾಡಿನಲ್ಲಿ ಶರತ್ಕಾಲದ ದ್ರಾಕ್ಷಿ ತೋಟ ಮತ್ತು ವೈನ್ ಮತ್ತೆ ನೆನೆಪಾಗಲಿ” ***********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

“ನಿಮ್ಮ ಕೈಗಳು ಮೂಲ: ಬಾಬುರಾವ್ ಬಾಗುಲ್(ಮರಾಠಿಕವಿ) ಕನ್ನಡಕ್ಕೆ:ಕಮಲಾಕರ ಕಡವೆ ನಿಮ್ಮ ಕೈಗಳು ಇದ್ದಿರಬಹುದು ಬಂಧಿಆದರೆ ಅವು ಸೃಜನಶೀಲನಿಮ್ಮ ಕೈಗಳು ಇದ್ದಿರಬಹುದು ಶಾಂತ, ಅಮಾಯಕಆದರೆ ಅವು ಪರಿವರ್ತನೆಯ ರಥಗಳುಪ್ರಗತಿಯ ಹೆದ್ದಾರಿಗಳುನಿಮ್ಮ ಐದು ಬೆರಳುಗಳು ಪಂಚಮಹಾಭೂತಗಳುಇದೇನು ಬಾ. ಬಾ. ನ ಕಲ್ಪನೆಯಲ್ಲರಶಿಯಾ, ಅಮೇರಿಕ, ಯುರೋಪು ಆಗಿದ್ದಾರೆ ಸಾಕ್ಷಿನಿಮ್ಮ ಖಚಿತ ಸಾಮರ್ಥ್ಯಕ್ಕೆ ********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಈ ದಿನ ಮೂಲ: ಮೆರಿ ಒಲಿವಿರ್( ಅಮೇರಿಕಾ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರ ಕಡವೆ ಈ ದಿನ ನನ್ನ ಹಾರಾಟ ಕಡಿಮೆ ಮಾಡಿದ್ದೇನೆಒಂದು ಮಾತನೂ ಆಡುತ್ತಿಲ್ಲ ನಾನುಹೆಬ್ಬಯಕೆಗಳ ಎಲ್ಲ ಮಾಟಮಂತ್ರಗಳ ಮಲಗಿಸಿದ್ದೇನೆ. ಜಗ ಸಾಗಿದೆ ಅದು ಸಾಗಬೇಕಾಗಿರುವಂತೆಹೂದೋಟದಲ್ಲಿ ಮೆಲ್ಲಗೆ ಜೇನಿನ ಝೇಂಕಾರಮೀನು ಕುಪ್ಪಳಿಸಿದೆ, ನೊರಜು ಯಾರದೋ ಆಹಾರವಾಗಿದೆಮುಂತಾಗಿ. ನಾನು ಮಾತ್ರ ಈ ದಿನ ರಜೆಯಲ್ಲಿದ್ದೇನೆಪುಕ್ಕದಷ್ಟು ಶಾಂತಚಲಿಸದೆಯೂ, ಅಪಾರ ದೂರವನ್ನುಕ್ರಮಿಸುತ್ತಿದ್ದೇನೆ ನಿಶ್ಚಲತೆ, ಮಂದಿರದ ಒಳಹೊಗಲುಇರುವ ಬಾಗಿಲುಗಳಲ್ಲೊಂದು. ***** Today I’m flying low and I’mnot saying a wordI’m letting all the voodoos of ambition sleep. The world goes on as it must,the bees in the garden rumbling a little,the fish leaping, the gnats getting eaten.And so forth. But I’m taking the day off.Quiet as a feather.I hardly move though really I’m travelinga terrific distance. Stillness. One of the doorsinto the temple.

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಪಾಪ ಮೂಲ:ಫಾರೂಫ್ ಫರಾಕ್ಜಾದ್ (ಇರಾನಿ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರಕಡವೆ ಸುಖಭರಿತ ಪಾಪವೊಂದೆಸಗಿದೆ ನಾನುಉರಿವ ಬೆಚ್ಚಗಿನ ಆಲಿಂಗನದಲ್ಲಿಪಾಪವೆಸಗಿದೆ ನಾನು ಬಿಸಿ ಕಬ್ಬಿಣದಂತಬಾಹುಗಳಿಂದ ಸುತ್ತುವರಿದಿದ್ದಾಗ. ಆ ಕತ್ತಲ, ಶಾಂತ ಏಕಾಂತದಲ್ಲಿನಾನವನ ಗುಟ್ಟಬಚ್ಚಿಟ್ಟ ಕಣ್ಣುಗಳೊಳಗೆ ಇಣುಕಿದೆ.ಅವನ ಅಗತ್ಯ-ಭರಿತ ಕಂಗಳ ಬೇಡಿಕೆಗೆ ಪ್ರತಿಯಾಗಿನನ್ನ ಚಂಚಲ ಹೃದಯ ಕಂಪಿಸಿತು. ಆ ಕತ್ತಲ, ಶಾಂತ ಏಕಾಂತದಲ್ಲಿಕುಳಿತಿದ್ದೆ ನಾನು ಅವನ ಪಕ್ಕ ಕೆದರಿದ ಕೂದಲಲ್ಲಿಅವನ ತುಟಿಗಳು ಸುರಿದವು ಕಾಮನೆಗಳ ನನ್ನ ತುಟಿಗಳ ಮೇಲೆನನ್ನ ಹೃದಯದ ಹುಚ್ಚು ಸಂಕಟದಿಂದ ಬಿಡುಗಡೆ ಪಡೆದೆ ನಾನು. ಅವನ ಕಿವಿಯೊಳಗುಸುರಿದೆ ಪ್ರೇಮ ಕತೆಯಬಯಸುವೆ ನಿನ್ನ, ಓ ನನ್ನ ಬಾಳ ಸಂಗಾತಿಯೇಬಯಸುತ್ತೇನೆ ನಿನ್ನ ಜೀವ ತುಂಬುವ ಆಲಿಂಗನವಓ ನನ್ನ ಹುಚ್ಚು ಪ್ರೇಮಿಯೇ. ಬಯಕೆ ಅವನ ಕಣ್ಣಲ್ಲಿ ಕಿಡಿಯೊಂದ ಹೊತ್ತಿಸಿತು;ಬಟ್ಟಲಲಿ ಮಧ್ಯ ನರ್ತಿಸಲು ತೊಡಗಿತು.ಕೋಮಲ ಹಾಸಿಗೆಯಲ್ಲಿ ನನ್ನ ದೇಹಅವನೆದೆಯ ಮೇಲೆ ಉನ್ಮಾದದಲ್ಲಿ ಕಂಪಿಸಿತು. ಸುಖಭರಿತ ಪಾಪವೊಂದೆಸಗಿದೆ ನಾನುನಡುಗುವ, ಸ್ತಬ್ಧ ಆಕಾರದ ಪಕ್ಕದಲ್ಲಿಓ ದೇವರೇ, ಯಾರಿಗೆ ಗೊತ್ತು ನಾನೇನು ಮಾಡಿದೆಆ ಕತ್ತಲ ಶಾಂತ ಏಕಾಂತದಲ್ಲಿ. ****** “The Sin” I sinned a sin full of pleasure,In an embrace which was warm and fiery.I sinned surrounded by armsthat were hot and avenging and iron. In that dark and silent seclusionI looked into his secret-full eyes.my heart impatiently shook in my breastIn response to the request of his needful eyes. In that dark and silent seclusion,I sat dishevelled at his side.his lips poured passion on my lips,I escaped from the sorrow of my crazed heart. I whispered in his ear the tale of love:I want you, o life of mine,I want you, O life-giving embrace,O crazed lover of mine, you. desire sparked a flame in his eyes;the red wine danced in the cup.In the soft bed, my bodydrunkenly quivered on his chest. I sinned a sin full of pleasure,next to a shaking, stupefied form.o God, who knows what I didIn that dark and quiet seclusion. *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಎರಡನೆಯ ಅವತಾರ ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್) ಕನ್ನಡಕ್ಕೆ: ಕಮಲಾಕರ ಕಡವೆ ಎರಡನೆಯ ಅವತಾರ ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತಡೇಗೆಗಾರನ ಕರೆಯ ಕೇಳಲಾರದು ಡೇಗೆಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆಬರಿಯೆ ಅರಾಜಕತೆ ಆವರಿಸಿದೆ ಜಗದಗಲಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋಉತ್ಕಟ ಉದ್ರೇಕವೇ ತುಂಬಿಕೊಂಡಿದೆ ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆಎರಡನೆಯ ಅವತಾರ ಖಂಡಿತ ಬಳಿಸಾರಿದೆಎರಡನೆಯ ಅವತಾರವೆಂದೊಡನೆಯೇವಿಶ್ವಚೇತನವೊಂದರ ವಿಶಾಲ ಆಕಾರಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟಹೊತ್ತ ನರಸಿಂಹ ರೂಪವೊಂದುಹಗುರ ಹೆಜ್ಜೆ ಹಾಕಿದೆ, ಅದರ ಸುತ್ತಲೂ ನೆರೆದಿವೆಮರುಭೂಮಿಯ ಕುಪಿತ ಪಕ್ಷಿಗಳ ನೆರಳುಗಳು. ಕತ್ತಲು ಕವಿಯುತ್ತಿದೆ ಮತ್ತೆ, ಆದರೂ ನಾ ಬಲ್ಲೆಇಪ್ಪತ್ತು ಶತಮಾನಗಳ ಕಲ್ಲಿನಂತ ನಿದ್ದೆಕದಲಿದೆ ದುಃಸ್ವಪ್ನವಾಗಿ ತೊಟ್ಟಿಲು ತೂಗಿದಂತೆ,ಯಾವ ಒರಟು ಪಶು ತನ್ನ ಕಾಲ ಸನ್ನಿಹಿತವಾದಂತೆಬೆಥ್ಲೆಹೆಮ್ಮಿನೆಡೆ ಮರುಹುಟ್ಟಿಗಾಗಿ ಹೆಜ್ಜೆ ಹಾಕಿದೆ? ********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಹೆಣ್ಣಿನ ದುಡಿಮೆ ಮೂಲ:ಮಾಯಾ ಏಂಜೆಲೋ ಕನ್ನಡಕ್ಕೆ ಡಾ.ಗೋವಿಂದ ಹೆಗಡೆ ನನಗೆ ಮಕ್ಕಳ ಕಾಳಜಿ ಮಾಡಲಿದೆ ಅರಿವೆಗಳನ್ನು ಒಗೆಯಲಿದೆ ನೆಲ ಸಾರಿಸುವುದು ಆಹಾರ ಖರೀದಿಸುವುದು ಕೋಳಿಯನ್ನು ಹುರಿಯುವುದು ಮಗುವನ್ನು ಚೊಕ್ಕ ಮಾಡುವುದು ಬಂದವರಿಗೆ ಊಟ ನೀಡಬೇಕಿದೆ ತೋಟದ ಕಳೆ ತೆಗೆಯಬೇಕಿದೆ ಅಂಗಿಗಳಿಗೆ ಇಸ್ತ್ರಿ ಮಾಡಲಿದೆ ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ ಕಬ್ಬು ಕತ್ತರಿಸಲಿಕ್ಕಿದೆ ಈ ಗುಡಿಸಲನ್ನು ಶುಚಿಗೊಳಿಸಲಿದೆ ರೋಗಿಗಳ ಉಪಚರಿಸಲಿದೆ ಹತ್ತಿಯನ್ನು ಬಿಡಿಸುವುದಿದೆ ಬೆಳಗು ನನ್ನಮೇಲೆ, ಬಿಸಿಲೇ ಸುರಿ ನನ್ನ ಮೇಲೆ, ಮಳೆಯೇ ಮೃದುವಾಗಿ ಇಳಿ, ಇಬ್ಬನಿಯೇ ನನ್ನ ಹಣೆಯನ್ನು ತಂಪಾಗಿಸು- ಮತ್ತೆ ಬಿರುಗಾಳಿ, ನನ್ನ ಇಲ್ಲಿಂದ ಹಾರಿಸು ನಿನ್ನ ಜೋರಾದ ಅಲೆಯಲ್ಲಿ ನಾನು ಬಾನುದ್ದ ತೇಲುವಂತಾಗಲಿ ಮತ್ತೆ ವಿರಮಿಸುವವರೆಗೆ ಹಿಮದ ತುಣುಕುಗಳೇ, ಮೆತ್ತಗೆ ಬೀಳಿರಿ ನನ್ನನ್ನು ಮುಚ್ಚಿ- ಬಿಳಿಯ ತಣ್ಣಗಿನ ಮಂಜಿನ ಚುಂಬನಗಳಿಂದ, ಈ ರಾತ್ರಿ ನಾನು ಮಲಗುವಂತಾಗಲಿ ನೇಸರ, ಮಳೆ, ಬಾಗಿದ ಆಗಸ ಬೆಟ್ಟ ಕಡಲು ಎಲೆ ಶಿಲೆ ತಾರೆಗಳ ಮಿನುಗು ಚಂದಿರನ ಹೊಳಪು ನಿಮ್ಮನ್ನು ಮಾತ್ರ ನಾನು ‘ನನ್ನವ’ರೆನ್ನಬಹುದು *********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೂಲ:ವೇನ್ ಕೌಮೌಲಿ ವೆಸ್ಟ್ ಲೇಕ್(ಹವಾಯಿ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ ಸಿರಿವಂತ ಮಹಿಳೆ ಬಸ್ಸಿನ ಮೇಲೆಮಾತು ಮಾತು ಮಾತುಕೊನೆಯೇ ಇಲ್ಲ ನಾನೊಂದು ಕಮ್ಯುನಿಸ್ಟ ಸಿಗರೆಟ್ಟು ಹಚ್ಚಿಭಯಾನಕ ಹೊಗೆ ಉಗುಳಿದೆಹಾ ! ನೀರು ಕುಡಿಯಿತು ಒಂದು ಆಕಳುಹಾಲಾಗಿ ಮರುನೀಡಿನೀರು ಕುಡಿಯಿತು ಒಂದು ಹಾವುಹಾಲಾಹಲವ ಮರುನೀಡಿ ಬಿಳಿ ಚಿಟ್ಟೆ ಅಟ್ಟಿ ಓಡುವಬೆಕ್ಕಿಗೆ ಲೆಕ್ಕಕ್ಕಿಲ್ಲಕಾಲಡಿಗಾದ ಹೂಗಳು ಮುಂಜಾನೆ ಮೌನ ಹಿತ ಕೊಡುತ್ತಿತ್ತುಅಷ್ಟರಲ್ಲಿ ಹೊರಗಡೆ ಯಾರೋಕಿರುಚತೊಡಗಿದರುದೇವರೇ ! ದೇವರೇ ! ದೇವರೇ ! ಎಷ್ಟು ವಿಭಿನ್ನ ವಿಚಾರಗಳುನನಗೆ ಮತ್ತು ಬೆಕ್ಕಿಗೆಹಕ್ಕಿಮರಿಯೊಂದ ನೋಡುತ್ತ ಅರಳಿದ್ದ ಗುಲಾಬಿ ನೋಡುತ್ತ ನೋಡುತ್ತನಾನು ಕಾಲಿಟ್ಟೆಸಗಣಿಯ ಮೇಲೆ ಶಾಲೆಯಲ್ಲಿ ಎರಡನೆಯ ದಿನನಾನು ಅಂದು ಕೊಳ್ಳುತ್ತೇನೆ –ಪುಸ್ತಕಗಳನ್ನಲ್ಲಮೋಡಗಳನ್ನು ನೋಡ ಬಯಸುತ್ತೇನೆ ಈ ಅಕ್ಷರ, ಈ ಅಂಕಿ, ನೂರು ನೂರು !!ಆಹಹ, ಎಂಥ ನೆಮ್ಮದಿಒಂದು ಮರವ ನೋಡುವುದು ನನ್ನ ಕವನಗಳು ಅರ್ಥಹೀನವೆಂದುಹೀಯಾಳಿಸಿದರು ಅವರುನಾನು ನಕ್ಕೆನಷ್ಟೆ,ಎಲ್ಲರಿಗೂ ಗೋಚರಿಸುವುದಿಲ್ಲಬಣ್ಣಗಳ ನಡುವೆ ರಕ್ತದ ಗೆರೆಗಳು ಚಳಿ ಕೊರೆಯುವ ಈ ಗುಡ್ಡದನೆತ್ತಿಯಲ್ಲಿಪುಟ್ಟ ಹಕ್ಕಿಯೇ ಏನು ಮಾಡುತ್ತಿರುವೆ ಏಕಾಕಿ ಕವಿಯಾದವ ಕವನ ಖರೀದಿಸಲಾರಹಾಗೆ ಖರೀದಿಸಿದರೆ ಕವಿಯಾದಾನು ಹೇಗೆ? *******

ಅನುವಾದ ಸಂಗಾತಿ Read Post »

You cannot copy content of this page

Scroll to Top