ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವೀಣಾ ರಮೇಶ್

ಮಾನದಂಡವಿಲ್ಲದ ಮೂಢ ಸಂತೆಯೊಳಗೆ
ಬದುಕು ವ್ಯಾಪಾರ ವಾಗುತ್ತಿದೆ

.
ನಂಬಿಕೆಯ ನಡುವೆ ಮೂಢತ್ವ ಬಿತ್ತಿ
ಮೊಳಕೆಯೊಡೆದು
ಬೇರು ಚಾಚಿ
ಮೌಢ್ಯ ಹೆಮ್ಮರವಾಗಿದೆ

ಬೆತ್ತಲಾಗಬೇಡ ಬತ್ತಿದ
ಕನಸುಗಳಿಗೆ
ಪೊಳ್ಳು ಕಟ್ಟು ಪಾಡುಗಳ
ಹೆಗಲೇರಿ ಶವವಾಗಬೇಡ.

ನಿನ್ನ ಕನಸುಗಳ ಚಲುವಿಗೆ
ಸುಜ್ಞಾನ ತೊಡಿಸಿ
ಜ್ಞಾನ ದಾರದಿಂದ ಬಿಗಿದು
ಅಭಿಜ್ಞಾನದೆಡೆಗೆ ಹರಿಸಿ

ಅಹಂಕಾರದ ಕತ್ತಲೆಯ
ಮರೆಸಿ ಆತ್ಮದ ಹಣತೆಯಲಿ
ಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ

**********************************

About The Author

Leave a Reply

You cannot copy content of this page

Scroll to Top