ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೆಷ್ಟೋ ದಶಕಗಳು
ಉರುಳಿದವು
ಹೀಗೆ ರಿಬ್ಬನ್ ಉಂಡೆ
ಉರುಳಿದಂತೆ
ನಿಂತಿಲ್ಲ ಘೋಷಣೆ ಕೂಗು

ಗುಂಪಿನಲ್ಲಿ ನಮ್ಮಲ್ಲಿರುವ
ನಮ್ಮ  ಸೈತಾನ ಶಕ್ತಿ
ನನ್ನೊಳಗಿನ ಅಂತರಂಗದ
ಒಬ್ಬ  ಸಂತನನ್ನು
ಬರ್ಬರವಾಗಿ ಕೊಲ್ಲುತ್ತೇವೆ

ಬೀದಿಗಳಲ್ಲಿ ಮೆರವಣಿಗೆ
ಪಥ ಸಂಚಲನ
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ

ಹುಟ್ಟಿ ಕೊಳ್ಳುತ್ತಾರೆ
ಹಿಟ್ಲರ್ ಮುಸಲೋನಿ
ಅಧಿಕಾರವೇರುತ್ತಾರೆ
ರಕ್ತ ಬಿಜಾಸುರರ ಆಡಳಿತ
ನಾವು ಘೋಷಣೆ ಕೂಗುತ್ತಲಿದ್ದೇವೆ


About The Author

16 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ””

  1. ಎಂಥ ಮಾತು. ಎದೆ ಒಮ್ಮೆ ನಡುಗಿತು. ಮನ ತಲ್ಲಣಿಸಿತು. ಎದೆಬಡಿತ ನಗಾರಿಯಂತೆ. ಇನ್ನೂ ಅದರ ತಪ್ಪಿದ ತಾಳ ಸರಿಯಾಗುತ್ತಿಲ್ಲ. ನಿಮಗೆ ನೀವೇ ಸಾಟಿ.

  2. ಸರ್,ತಮ್ಮ ಕವನ ವಾಸ್ತವಕ್ಕೆ ಕನ್ನಡಿ. ಧನ್ಯವಾದ ಗಳು

    ಡಾ ಬೀ ಎಂ ಪಾಟೀಲ ರಾಯಬಾಗ

  3. ಕವಿತೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಸರ್
    ಪ್ರಭಾವತಿ ದೇಸಾಯಿ ವಿಜಯಪುರ

  4. Vishwanath Patil

    ವಾವ್ ಈಗಲೂ ಇಂತಹ ವೈಚಾರಿಕ ಕವಿ ಮನಸ್ಸುಗಳು ಇವೆ ಎಂದು.ಖುಷಿ ಆಯ್ತು

  5. ಸಾಮಾಜಿಕ ಕಳಕಳಿ ಹೊತ್ತ ಕವನ. ಸುತ್ತಮುತ್ತಲೂ ದಿನನಿತ್ಯ ನಡೆಯುತ್ತಿರುವ ವಿವಿಧ ಘಟನೆಗಳು, ಅವುಗಳಿಗೆಲ್ಲ ನಾವು ಸುಮ್ಮನೆ ಗುಂಪಿನಲ್ಲಿ ಅರಚುತ್ತಿದ್ದೇವೆ ಎನ್ನುವ ಬೇಸರ…ಆಕ್ರೋಶ ತಮ್ಮ ಕವನದಲ್ಲಿ ಎದ್ದು ಕಾಣುತ್ತಿದೆ ಸರ್

    ಸುಧಾ ಪಾಟೀಲ
    ಬೆಳಗಾವಿ

  6. ಹನುಮಾಕ್ಷಿ ಗೋಗಿ ಹುಬ್ಬಳ್ಳಿ ಧಾರವಾಡ

    ಈ ಕವಿತೆ ಓದಿ ನಾವು ಯಾವ ಕಡೆಗೆ ಹೋಗುತ್ತಿದ್ದೇವೆ ಎನ್ನುವುದೇ ಅರ್ಥವಾಗದೆ ಮನಸ್ಸು ಗಲಿಬಿಲಿಗೊಳ್ಳುತ್ತದೆ. ನಾವು ಹಿಡಿದ ದಾರಿ ಸರಿಯಿದ್ದರೂ ನಮಗೇಕೆ ಸೋಲಾಗುತ್ತಿದೆ ? ತಪ್ಪು ದಾರಿ ಹಿಡಿದವರೇ ನಮಗಿಂತಲೂ ಹೆಚ್ಚು ಏಕೆ ಸಂಘಟಿತರಾಗುತ್ತಿದ್ದಾರೆ ? ನಮ್ಮ ಸಂಘಟನೆ ಏಕೆ ಕುಸಿಯುತ್ತಿದೆ ? ಸತ್ಯಕ್ಕಿಂತಲೂ ಸುಳ್ಳೇ ಏಕೆ ವಿಜೃಂಭಿಸುತ್ತಿದೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಒಮ್ಮೊಮ್ಮೆ ನಮ್ಮದು ಅರಣ್ಯ ರೋದನ ಅನ್ನಿಸಿ ಅಧೀರತೆ ಮೂಡುತ್ತದೆ. ಅದಕ್ಕೇ ಈ ಮೊದಲು ಹೇಳಿದಂತೆ ಜೀವ ತಲ್ಲಣಿಸುತ್ತದೆ. ಯಾಕೋ ಯಾವುದೂ ಸರಿಯಿಲ್ಲ ಎಂದು ತಲೆ ಕೊಡವಿಕೊಳ್ಳಬೇಕೆನ್ನಿಸುತ್ತದೆ.

    ಈ ಕವಿತೆ ಓದಿ ನಾವು ಯಾವ ಕಡೆಗೆ ಹೋಗುತ್ತಿದ್ದೇವೆ ಎನ್ನುವುದೇ ಅರ್ಥವಾಗದೆ ಮನಸ್ಸು ಗಲಿಬಿಲಿಗೊಳ್ಳುತ್ತದೆ. ನಾವು ಹಿಡಿದ ದಾರಿ ಸರಿಯಿದ್ದರೂ ನಮಗೇಕೆ ಸೋಲಾಗುತ್ತಿದೆ ? ತಪ್ಪು ದಾರಿ ಹಿಡಿದವರೇ ನಮಗಿಂತಲೂ ಹೆಚ್ಚು ಏಕೆ ಸಂಘಟಿತರಾಗುತ್ತಿದ್ದಾರೆ ? ನಮ್ಮ ಸಂಘಟನೆ ಏಕೆ ಕುಸಿಯುತ್ತಿದೆ ? ಸತ್ಯಕ್ಕಿಂತಲೂ ಸುಳ್ಳೇ ಏಕೆ ವಿಜೃಂಭಿಸುತ್ತಿದೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಒಮ್ಮೊಮ್ಮೆ ನಮ್ಮದು ಅರಣ್ಯ ರೋದನ ಅನ್ನಿಸಿ ಅಧೀರತೆ ಮೂಡುತ್ತದೆ. ಅದಕ್ಕೇ ಈ ಮೊದಲು ಹೇಳಿದಂತೆ ಜೀವ ತಲ್ಲಣಿಸುತ್ತದೆ. ಯಾಕೋ ಯಾವುದೂ ಸರಿಯಿಲ್ಲ ಎಂದು ತಲೆ ಕೊಡವಿಕೊಳ್ಳಬೇಕೆನ್ನಿಸುತ್ತದೆ.

    ಹನುಮಾಕ್ಷಿ ಗೋಗಿ
    ಹುಬ್ಬಳ್ಳಿ ಧಾರವಾಡ

  7. Dr.Sharadamani.Hunashal

    ಸತ್ಯದ ಸುಂದರ ಅನಾವರಣ .ನಿಮ್ಮ ಕವನ ಸೊಗಸಾಗಿದೆ ಸರ್.

  8. ಜಯಶ್ರೀ ಬೆಂಡಿಗೇರಿ

    ನಿಜಕ್ಕೂ ಅರ್ಥಪೂರ್ಣ ಕಾವ್ಯ ಸರ್
    ಜಯಶ್ರೀ ಬೆಂಡಿಗೇರಿ

Leave a Reply

You cannot copy content of this page

Scroll to Top