ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಬ್ಬಿಯದೇಹ
ಕೃಷ್ಣನ ವೇಗ
ಅರ್ಜುನನ ಗುರಿ
ಏಕಲವ್ಯನ ನಿಖರತೆ

ವಿನಯದ ಪ್ರತೀಕ
ಎದರಿನೆದೆಯಲಿ ನಡುಕ
ಅಜಾತಶತ್ರು ಸರಳಜೀವಿ
ನೇರನುಡಿ ದಿಟ್ಟಹೆಜ್ಜೆ

ಶಾರದಾ ಸಂಪನ್ನ
ಭಾರತಿ ಸಂಜಾತ
ವಶಿಷ್ಠರ ನಿರ್ಧಾರ
ಅಮೇರಿಕಾ ತತ್ತರ
ಪಾಪಿಪಾಕೀ.. ಥರಥರ

ಬೆದರದ ಭಾವ
ಬಗ್ಗದಾ ಜೀವ
ತ್ರಿವಿಕ್ರಮನ ಅವತಾರ
ಭಾರತದ ನೇತಾರ

ಜೈಜವಾನ್
ಜೈಕಿಸಾನ್
ಶಾಸ್ತ್ರೀಗಳ
ಝೇಂಕಾರ
ಮುಗಿಲಿನಲೂ
ಉದ್ಗಾರ !
ಜೈ ಜವಾನ್
ಜೈ ಕಿಸಾನ್

ಶಾಸ್ತ್ರೀಗಳ
ಅಂದಿನಾ ಕರೆ
ಈಗೀನ ಸೋಮವಾರವೂ
ಉಪವಾಸ
ವಿರುವದು ಖರೆ

—————————————————————————————————

About The Author

Leave a Reply

You cannot copy content of this page

Scroll to Top