ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗದೊಡೆಯ ನೀನಾಗಿದ್ದರೂ ಕರುಣೆ ತೋರಿ ಬರಲಿಲ್ಲ ಒಮ್ಮೆ
ಜೀವದೊಡೆಯ ಎನಿಸಿದ್ದರೂ ಪ್ರೀತಿ ಸವಿ  ಬೀರಿ ಬರಲಿಲ್ಲ ಒಮ್ಮೆ

ಅನಂತ ಕಾಲದಿಂದ ಪರಿತಪಿಸಿ ಪರಿತಪಿಸಿ ಕಾಣದೆ ಕಂಗೆಟ್ಟಿಹೆನು
ಅನುರಾಗದ ರಮನನಾಗಿದ್ದರೂ ಪ್ರೇಮದಿ ಹಾರಿ ಬರಲಿಲ್ಲ ಒಮ್ಮೆ

ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ

ಕೃಷ್ಣಾ ಕೃಷ್ಣಾ ಎಂದು ಕೂಗಿ ಕೂಗಿ ಗಂಟಲೊನಗಿ ಮಾತು ಬಾರದು
ಸೃಷ್ಟಿಕರ್ತ ಎಲ್ಲ ಬಲ್ಲವನಾಗಿದ್ದರೂ ನನ್ನೊಳಗೆ ಸಾರಿ ಬರಲಿಲ್ಲ ಒಮ್ಮೆ

ಕರುನಾಳು ಕರಪಿಡಿದು ಮೈದಡವಿ ಸಂತೈಸುವಲ್ಲಿ ಚತುರನಲ್ಲವೇ
ಚಕ್ರ ಹಿಡಿದ ಸೂತ್ರದಾರನಾಗಿದ್ದರೂ ಬಳಿ ಸೇರಿ ಬರಲಿಲ್ಲ ಒಮ್ಮೆ

ಸರ್ವವ್ಯಾಪಿ ಸರ್ವಸಿದ್ಧನು ಸಕಲರೆಲ್ಲರ ಪೊರೆವ ಒಡೆಯನಲ್ಲವೆ
ಕಳವಳ ಕೊಂದು ಸಲ್ಲಾಪದಿ ಮೀಯಲು ತೂರಿ ಬರಲಿಲ್ಲ ಒಮ್ಮೆ

ಅನುಳ ಒಡಲ ತುಡಿತಗಳು ಬಡಿಬಡಿದು ಎದೆ ದಡ ಸಡಿಲಾಗಿದೆ
ಎಲ್ಲರ ಬಂಧುವಾಗಿದ್ದರೂ ಬಂದು ಸಂಕಟ ಹೀರಿ ಹೋಗಲಿಲ್ಲ ಒಮ್ಮೆ


About The Author

3 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್”

  1. ಅನಾಮಿಕ

    ಗಜಲ್‌ನಲ್ಲಿ ಕಾಫಿಯಾ ರದೀಫ್ ಗಳಲ್ಲಿ ಸಮಸ್ಯೆ ಇದೆ. ರಮನ, ಕರುನಾಳು, ಹೀಗೆ ಕಾಗುಣಿತದ ತಪ್ಪುಗಳೂ ಇವೆ.
    ಪ್ರಕಟಿಸುವ ಮುನ್ನ ಒಮ್ಮೆ ಪರಿಶೀಲಿಸಬಹುದಿತ್ತು.
    ಅವರು ಗಜಲ್ ಸಂಭ್ರಮ ಗುಂಪಿನಲ್ಲಿ ಈ ರಚನೆಯನ್ನು ಹಾಕಿದಾಗ ತಪ್ಪುಗಳಿವೆ ಎಂದು ಹೇಳಲಾಗಿತ್ತು. ತಿದ್ದಿಕೊಳ್ಳುವುದು ಕೆಲವರ ಜಾಯಮಾನದಲ್ಲಿ ಇರುವುದಿಲ್ಲ!

Leave a Reply

You cannot copy content of this page

Scroll to Top