ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಟುಕದ ಹಾಗೆ ಇಟ್ಟ ಬೆಣ್ಣೆ
ತಿನ್ನುವೆ ಹೇಗಮ್ಮಾ
ನೆಲುವಲಿ ಇಟ್ಟ ಗಡಿಗೆ ನೋಡು
ಎಟಕುವುದೇನಮ್ಮಾ

ಸುಳ್ಳನು ಹೇಳುವ ಗೋಪಿಯ ಮಾತು
ನಿಜವೇ ಏನಮ್ಮಾ
ಮಾತನು ಕೇಳುತ ನನ್ನನು ಜರಿಯುವುದು
ಎಷ್ಟು ಸರಿಯಮ್ಮಾ

ಮುದ್ದಿನ ಕಂದ ನಿನ್ನವ ನಾ
ಮಾತನ್ನು ನಂಬಮ್ಮಾ
ಅವರ ಮಾತನು ಕೇಳುತ ಬೈದರೆ
ಹೋಗಲಿ ನಾ ಎಲ್ಲಮ್ಮಾ

ಪ್ರೀತಿಯ ಅಮ್ಮ ನನ್ನನು ನಂಬು
ಬೆಣ್ಣೆಯ ನಾನು ಕದ್ದಿಲ್ಲಾ
ಬೆಕ್ಕಿನ ಆಟ ಮೇಲಕೆ ಜಿಗಿದು
ಬೆಣ್ಣೆಯ ತಿಂದಿದೆಯಮ್ಮಾ

ತಿಳಿಸಲಿ ಹೇಗೆ ನನ್ನ ನೋವಾ
ತೆಗಳುವರೆಲ್ಲರು ನನ್ನನ್ನಾ
ನಿನ್ನ ಕೈಯಲಿ ಶಿಕ್ಷಿಸಲೆಂದೇ
ಸುಳ್ಳೇ ಹೇಳುವರಮ್ಮಾ

ಗೋಪಿಯರೇ ಹೀಗೆ ಸರಿನೇ ಇಲ್ಲಾ
ತಾವೇ ಬೆಣ್ಣೆ ತಿನಿಸುವರು
ಅವರಿರದ ಸಮಯದಿ ಬೆಣ್ಣೆ ತಿಂದರೆ
ಕದ್ದೆ ಎಂದು ದೂರುವರಮ್ಮಾ

ನೀನೇ ನೋಡು ಆಷ್ಟೊಂದು ಬೆಣ್ಣೆ
ಒಬ್ಬನೇ ಹೇಗೆ ತಿಂದೇನು
ನೀನೇ ನೀಡಿದ ಇಷ್ಟೆ ಬೆಣ್ಣೆಗೆ
ಹೊಟ್ಟೆ ತುಂಬಿದೆ ನೋಡು


About The Author

3 thoughts on “ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ””

Leave a Reply

You cannot copy content of this page

Scroll to Top