ಕಾವ್ಯಯಾನ

ನಿರ್ವಾಣದೆಡೆಗೆ

Geometric decoration

ಎಮ್.ಟಿ. ನಾಯ್ಕ. ಹೆಗಡೆ

ಹೋಗಿ ಬಂದವನು ನಾನು
ನಿರ್ವಾಣದೆಡೆಗೆ
ಸರ್ವ ಚೈತನ್ಯ ಶೂನ್ಯದಂಚಿಗೆ

ಕೋಟೆ, ಕಿರೀಟ, ಕೀರ್ತಿಗಳನೆಲ್ಲಾ
ತೊರೆದು ಸಾಗುವ ದಾರಿ
ಅರಸು ಆಳುಗಳನೆಲ್ಲಾ ಕೊನೆಗೆ
ಕೂಡಿಸುವ ಕೂಡುದಾರಿ ….!

ನಡೆದ ಬಸವಣ್ಣ
ಕಲ್ಯಾಣ ಕ್ರಾಂತಿಯ ನಡುವೆ ,
ತನ್ನ ಶಿಲುಬೆ ತಾ —
ಹೊತ್ತು ನಡೆದ ಯೇಸು
ನಿರ್ವಾಣದೆಡೆಗೆ .

ಕಾಲಪುರುಷನಾಣತಿಯಂತೆಲ್ಲಾ
ತೊರೆದು ಹೊರಟ
ಲೋಕದ ‘ ಶ್ರೀ ರಾಮ ‘ ,
ಜಗನ್ನಾಟಕ ಸೂತ್ರಧಾರಿಯ
ಗರಿಮೆ ಹೊತ್ತವ —
ಕಾನನದ ನಡುವೆ ವ್ಯಾಧನ
‘ ಶರಕೆ ‘ ಹೊರಟನಲ್ಲಿಂದಲೇ
ನಿರ್ವಾಣದೆಡೆಗೆ

ಕ್ಷಣಭಂಗುರದ ಬದುಕಿನ
ಕತೆಯ ತೆರೆದಿಡುವ ಗಳಿಗೆ
ಜೀವ ಜಗದ
ಗಡಿಯಾರದ ಗುರುತು
ನಿರ್ವಾಣದ ಗಳಿಗೆ

ದಾಟಿ ಉಳಿದವರಿಲ್ಲ ಆ ಗಳಿಗೆ..!

**********

3 thoughts on “ಕಾವ್ಯಯಾನ

  1. ನನ್ನ ಕವನ ‘ ನಿರ್ವಾಣದೆಡೆಗೆ ‘ ಕುರಿತು ಪ್ರೀತಿಯಿಂದ ಪ್ರತಿಕ್ರಿಯಿಸಿದ ಸಂಗಾತಿ ಬಳಗಕ್ಕೆ ಆತ್ಮೀಯ ವಂದನೆಗಳು.

Leave a Reply

Back To Top