ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಪುರೋಗಾಮಿಗಳ  ಪ್ರತಿಗಾಮಿಗಳ  ಸಂಘರ್ಷ ಇಂದು ನಿನ್ನೆಯದಲ್ಲ ಶತಮಾನದಿಂದ ನಡದೇ ಇದೆ. ಮೌಲ್ಯ ಮತ್ತು  ಮೌಡ್ಯಗಳ  ನಡುವಿನ ತಿಕ್ಕಾಟ .ಪ್ರಗತಿಪರ ಪುರೋಗಾಮಿ ಚಿಂತಕರ ನಿರಂತರ ಹತ್ಯೆ ಬದಲಾಗದ ಸಮಾಜ .ಶೋಷಣೆ ಅನ್ಯಾಯಕ್ಕೆ ಒಗ್ಗಿಕೊಂಡ ವ್ಯವಸ್ಥೆ .ಬುದ್ಧ ಮೊಹಮ್ಮದ ,ಯೇಸು ,ಬಸವಣ್ಣ  ಗಾಂಧೀ ಇಂತಹ ಪ್ರಯೋಗಶೀಲತೆ ಪರಿವರ್ತನೆಗಾಗಿ ತಮ್ಮ ಜೀವ ತೆತ್ತರು.

ಇದು ಕೇವಲ ಒಂದು ರಾಷ್ಟ್ರದ ಸಮಸ್ಯೆ ಅಲ್ಲ ಮೂಲಭೂತವಾದಿಗಳ  ಅಟ್ಟಹಾಸ ಇಂದು ವಿಶ್ವವ್ಯಾಪಿಯಾಗಿ  ಮೆರೆಯುತ್ತಿದೆ. ಕೊಲೆ ಹತ್ಯೆ ಭೀಕರವಾಗುತ್ತಿದೆ .
ಉಸಿರುಗಟ್ಟಿದ ವಾತಾವರಣ ಅಭಿವ್ಯಕ್ತಿ ಸ್ವಾತಂತ್ರದ   ಸಮಾಧಿಯಾಗಿದೆ .

ಹೆಚ್ಚಾಗುತ್ತಿರುವ ಮೂಲಭೂತವಾದ ( FUNDAMENTALISM )
—————————————-


ಆಲ್ ಖೈದಾ ,ತಾಲಿಬಾನ ,ಇಂಡಿಯನ್ ಮುಜಾಹಿದ್ದೀನ ,ಕೆಲ  ಸ್ಥಾಪಿತ  ಮೌಲ್ಯಗಳನ್ನು ಕೊಚ್ಚಿ ಹಾಕಿ ಸಮಾಜದಲ್ಲಿ ಅಶಾಂತಿ ಅನಿಶ್ಚಿತತೆ ಭಯ ಭೀತಿ ವಾತಾವರಣ ನಿರ್ಮಿಸುವ ದುಷ್ಟ   ಶಕ್ತಿಗಳ ಹುನ್ನಾವಿರಬಹುದೇ? ಸಮಾಜವನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ತನಗೆ ಬೇಕಾದಂತೆ ಸುಲಿಗೆ ಮಾಡಿ ಬದುಕಬೇಕ್ಕೆನ್ನುವ ಕ್ರ್ರೋರ ಆಲೋಚನೆಯೇ ?  ಡಾರ್ವಿನ ಸಿದ್ಧಾಂತದಂತೆ ( survival  of   the fittest ) ಶಕ್ತಿಯುತರಿಗೆ ಒಲಿವ ಬದುಕುವ ಸಾಮರ್ಥ್ಯವೇ?,

ಎಡ ಪಂಥೀಯ ಮತ್ತು ಬಲ ಪಂಥೀಯ ತೀವ್ರ ಸಂಘರ್ಷ
———————————————————-


ಭಾರತವು   ಹಲವು  ಭಾಷೆ ಸಂಸ್ಕೃತಿ ಧರ್ಮ ಆಚಾರ ವಿಚಾರಗಳಿ೦ದ ಕೂಡಿದ ದೇಶವಾಗಿದೆ ,ಸನಾತನವಾದಿಗಳು ಪ್ರಬಲ ಪಾಲುದಾರರು . ಈ ದೇಶದ ಆಡಳಿತವನ್ನು ಸದಾ ತನ್ನ ಹತೊಟಿಯಲ್ಲಿಟ್ಟು ಕೊಳ್ಳುವ ಒಂದೇ ಉದ್ದೇಶದಿಂದ ಇಂತಹ ಮೂಲಭೂತವಾದದ ಸಂಘಟನೆಗಳು . ಸಂಘ ಪರಿವಾರ ದೇಶದ ಸ್ವಾತಂತ್ರತೆಗೆ ದುಡಿದಿದೆ  ಆದರೆ  ಅದೊಂದೇ ದೇಶಭಕ್ತ ಸಂಘಟನೆ ಅನ್ನೋದು ತಪ್ಪು.. ಸಮಾಜವಾದಿ , ಕಮ್ಯುನಿಸ್ಟ್  ದಲಿತ ಪ್ರಗತಿಪರ ಸಂಘಟನೆಗಳು  ತಮ್ಮ ಸಿದ್ದಾಂಥಗಳನ್ನು  ಹೋರಾಟವನ್ನು    ಜನಪರ ವೇದಿಕೆ ಮೂಲಕ ಪ್ರತಿಪಾದಿಸಿದರೆ , ಧರ್ಮ ಆಚಾರ ಪೌರಾಣಿಕ ಹಿನ್ನೆಲೆಯವರು ತಮ್ಮ ವಿಚಾರಗಳನ್ನು ಧಾರ್ಮಿಕ ಪೌರಾಣಿಕ ಶ್ರದ್ಧೆಗಳ ಮೂಲಕ  ಸಾಧಿಸಲು ಪ್ರಯತ್ನಿಸುತ್ತಾರೆ , ಇವರು  ಬಲಪಂಥಿಯ ಸಿದ್ಧಾಂತದವರಾಗಿರುತ್ತಾರೆ.

ಮತೀಯ ಶಕ್ತಿಗಳ ಅಟ್ಟಹಾಸ
———————————–


ಕರ್ನಾಟಕವು ಶಾಂತಿಯ ತವರು ಅದರಲ್ಲೂ ಧಾರವಾಡ ಕವಿಗಳ ತಾಣ ಸಮರಸದ ಕವಿ ದ ರಾ ಬೇಂದ್ರೆ ಕರ್ಮಭೂಮಿ .ಸಮನ್ವಯತೆಯ ಕವಿ ಚೆನ್ನವೀರ ಕವಿಯ ಕ್ಷೇತ್ರ.ಡಾ ಗಿರಡ್ಡಿ ,ಚಂಪಾ ,ಕುರ್ತಕೋಟಿ ,ಬೆಟಗೇರಿ ಕೃಷ್ಣ ಶರ್ಮ,ಪಟ್ಟಣಶೆಟ್ಟಿ ,ಮುಂತಾದ ಅನೇಕ ಸಾಹಿತಿ ಸಂಶೋದಕರನ್ನು ಹೊಂದಿದ ಧಾರವಾಡದ
ನೆಲದಲ್ಲಿ ಸಮರಸ ಸಮಕಳೆ ಸಮಸುಖ ,ಸಮಾನತೆ ತತ್ವವನ್ನು ಸಾರುವ ಕೇಂದ್ರ. ಸಮೀಕ್ಷೆಯ ಪರಕಾರ ಧಾರವಾಡದ ನೆಲದಲ್ಲಿ  ಸಿಗುವಷ್ಟು ಸಾಹಿತಿಗಳು ನಾಡಿನ ದೇಶದ ಇನ್ನೊಂದು ಭಾಗದಲ್ಲಿ ಸಿಗಲು ಅಸಾಧ್ಯ  . ಇಂತಹ ಮಣ್ಣು ಅಗಷ್ಟ ೩೦ ರಂದು ಹಿಂಸೆಯ ರಕ್ತದೋಕುಳಿಯಲ್ಲಿ ರಕ್ತ ಸಿಕ್ತವಾಯಿತು.ಭಾರತವು ಕಂಡರಿಯದ ಸಾಹಿತಿಗಳ ಕೊಲೆ ಹತ್ಯೆ ಮಾನವ ಕುಲಕ್ಕೆ ನಾಚಿಕೆಗೆಡಿತನದ ವಿಷಯ.
 ಅಂದು    ೩೦ ಅಗಷ್ಟ  ೨೦೧೫ ಕಲ್ಯಾಣ ನಗರದ ೯ ನೆ ಕ್ರಾಸ್ ಶ್ರೀ ವಿಜಯ ಎಂಬ ಮನೆಯಲ್ಲಿ ಹಾಡ ಹಗಲೇ ಒಬ್ಬ ನಾಡಿನ ಬಹು ದೊಡ್ಡ ವಿದ್ವಾಂಸ ಡಾ ಎಮ್ ಎಂ ಕಲಬುರ್ಗಿ ಅವರ  ಕೊಲೆ ನಡೆಯಿತು.
ಬೆಳಿಗ್ಗೆ ೮.೪೦ ರ ಸಮಯ ಇಬ್ಬರು ಮೋಟಾರ್ ಬೈಕಿನ ಸವಾರರು ಬಂದು ಒಬ್ಬ ಮೋಟಾರ್ ಬೈಕನ್ನು ಆರಂಬಿಸಿ ನಿಂತಿದ್ದ ಇನ್ನೊಬ್ಬ ಗೇಟ್ ತೆಗೆದು ಕಾಲಿಂಗ ಬೆಲ್ ಒತ್ತಿದನು.ಡಾ ಎಂ ಎಂ ಕಲಬುರ್ಗಿ ಅವರ ಧರ್ಮ ಪತ್ನಿ ಶ್ರೀಮತಿ ಉಮಾ ಅವರು ಬಾಗಿಲು ತೆಗೆದು ವಿಚಾರಿಸಲು, ” ಸರ್ ಇದ್ದಾರಾ ? ಎಂದು ಪ್ರಶ್ನಿಸಿದನು.
ಅವರ ಪತ್ನಿ ” ಏನ್ರಿ   ನಿಮ್ಮನ್ನು  ಯಾರೋ  ಭೇಟಿ ಆಗಕ ಬಂದಾರ ನೋಡ್ರಿ ” ಎಂದು ಹೇಳಿ ಮುಂಬಾಗಿಲನ್ನು ತೆಗೆದು ಪತ್ನಿ  ಅಡುಗೆ ಮನೆಗೆ ಹೋದರು.
ಕಣ್ಣಿನ ಆಪರೇಷನ್ ಮಾಡಿಕೊಂಡಿದ್ದ ಡಾ ಕಲಬುರ್ಗಿಯಾರದೋ ಜೊತೆಯಲ್ಲಿ ಫೋನಿನಲ್ಲಿ ಮಾಟದ ಹತ್ತಿದ್ದರು . ಬಾಗಿಲ ಬಳಿ ಬಂದು ಕೈ ಮಾಡಿ ಸ೦ಜ್ಞೆಯ ಮೂಲಕ  ಕುಳಿತು ಕೊಳ್ಳಲು  ಸೊನ್ನೆ ಮಾಡಿರಬಹುದು.   ಟಪ್ ಟಪ್ ಗುಂಡಿನ ಸಪ್ಪಳ .ಹಂತಕ ನಿಲ್ಲದೆ ಗೇಟ್ ದಾಟಿ ಹೊರಗೆ ಓಡಿ ಹೋಗಿ  ಮೋಟಾರ್ ಬೈಕಿನವನೊಂದಿಗೆ ಪರಾರಿಯದನು.
 ಇದು ನಾಡಿನ ಕರಾಳ ಚರಿತ್ರೆ,ಕಳೆದ ೫೦ ವರ್ಷದಿಂದ ಸಾರಸ್ವತ ಲೋಕದ ರಾಯಭಾರಿ  ವಕ್ತಾರ ,ನಾಡು ನೆಲ ಜಲದ ಬಗ್ಗೆ ಭಾಷೆಯ ಬಗ್ಗೆ ಸಂಸ್ಕೃತಿ ಸಾದರಪಡಿಸುವ ದಿಟ್ಟ ಕನ್ನಡಿಗ ಕೊಲೆಯಾಗಿ ಬಿದ್ದದ್ದು ದುರಂತವೇ ಸರಿ. ದೇಶವೇ ಬೆಚ್ಚಿ ಬೀಳುವ ಪ್ರಸಂಗ ನಡೆದು ಹೋಯಿತು.ಮತೀಯ ಶಕ್ತಿಗಳ ಅಟ್ಟಹಾಸದ ಕೇಕೆ ,ಮೌಡ್ಯ ಕಂದಾಚರನೆಯ ದರ್ಪ, ಶೋಷಣೆ ಅನಾಚಾರಗಳ ತಾತ್ಪೂರ್ತಿಕ ಗೆಲುವು. ಕಲಬುರ್ಗಿ ಅವರ ಕೊಲೆ ಒಬ್ಬ ವ್ಯಕ್ತಿಯ ಕೊಲೆಯಲ್ಲ ಅದು ಒಂದು ಸಿದ್ಧಾಂತಕ್ಕೆ   ಬಸವ ತತ್ವಕ್ಕೆ  ಸತ್ಯದ ಕೊಲೆ .ಮತ್ತು ಪ್ರಗತಿ ಪರರ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುವ ಮುನ್ಸೂಚನೆ

ಯಾರು ಡಾ ಕಲಬುರ್ಗಿ ಅವರನ್ನು ಕೊಂದಿರಬಹುದು?
——————————————————


ಡಾ ಎಂ ಎಂ ಕಲಬುರ್ಗಿ ದೇಶವು  ಕಂಡ ಅಪ್ರತಿಮ ಸಂಶೋಧಕ  ಧಾರ್ಮಿಕ ಸಾಮಾಜಿಕ ನೈತಿಕ ವೈಚಾರಿಕ ಮತ್ತು ೧೨ ನೆ ಶತಮಾನದ  ಬಸವಾದಿ ಶರಣರ ಜೀವನ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಒಂದು ಇರುವೆಯನ್ನು   ಹಿ೦ಸಿಸದ ಸಭ್ಯ ಜೀವಿ. ಕಂಡದ್ದನ್ನು ನೇರವಾಗಿ ನಿಷ್ಠುರವಾಗಿ ಖಚಿತ ಮಾಹಿತಿ ಆಧಾರದೊಂದಿಗೆ ಹೇಳುವ ಧೈರ್ಯವಂತ  ಲೇಖಕ .
ಇವರು ಹಿಂದೂ ಧರ್ಮದ ಮೇಲೆ ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳು ಮತ್ತು ಮೂರ್ತಿ ಪೂಜೆಯ ಬಗ್ಗೆ ಡಾ ಯು ಆರ್ ಅನತಮೂರ್ತಿಯವರ ಅಭಿಪ್ರಾಯವನ್ನು ತಮ್ಮ ಭಾಷಣದಲ್ಲಿ ಹೇಳಿದ್ದು ತಪ್ಪಾಯಿತೇ?
ಹಿಂದೂ ಎನ್ನುವದು ಒಂದು ಧರ್ಮವೇ ಅಲ್ಲ ,ಭಗವತ್ ಗೀತೆ ಹೇಗೆ ಧರ್ಮ ಗ್ರಂಥವಾಗುತ್ತೆ ? ಅಂತ ಪ್ರಶ್ನೆ ಮಾಡಿದ್ದು ತಪ್ಪೇ ?
ಲಿಂಗಾಯತ ವೀರಶೈವ ಬೇರೆ ಬೇರೆ ಎಂಬ ಅಭಿಮತಕ್ಕೆ ಬಂದದ್ದು ಸರಿಯಲ್ಲವೇ?
ಆಷಾಡಭೂತಿ ಸ್ವಾಮಿಗಳ ಬಗ್ಗೆ ಟೀಕಿಸಿದ್ದು ತಪ್ಪೇ? ಮಠಗಳು ವ್ಯಾಪಾರ ಕೇಂದ್ರ ಅಲ್ಲಿ ಬಸವನಿಲ್ಲ ಸ್ವಾಮಿಗಳು ಮಾತ್ರ ಇದ್ದಾರೆ ಅಂತಾ ಹೇಳಿರೋದು ನಿಜವಲ್ಲವೆ ?
ಹೀಗೆ ಹಲವು  ಹತ್ತು ಸಂಶಯಗಳನ್ನು ಹುಟ್ಟು ಹಾಕಿದ ಡಾ ಕಲಬುರ್ಗಿ ಅವರ ಕೊಲೆ ಪ್ರಕರಣ .
ಭಾರತದಲ್ಲಿ ಈಗ ಉಸಿರಿಸುವದು ಕಠಿಣವಾಗುತ್ತಿದೆ. ಮಾನವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ ಇವು ಕೇವಲ ಭಾಷಣದ ಮತ್ತು ಪುಸ್ತಕದ ಶಬ್ದಗಳು ಮಾತ್ರ.

ಸಾವಿನ ಹಿಂದೆ ಸೇಡಿನ ಕಿಡಿಯೋ ? ದ್ವೇಷದ ಜ್ವಾಲೆಯೋ ?
——————————————————————-


ಕೆಲ ದುಷ್ಕರ್ಮಿಗಳು  ಡಾ ಎಂ ಎಂ ಕಲಬುರ್ಗಿ ಅವರು  ಮೂರ್ತಿ ಪೂಜೆಯ ಬಗ್ಗೆ ಡಾ ಯು ಆರ್ ಅನತಮೂರ್ತಿಯವರ ಅಭಿಪ್ರಾಯವನ್ನು ತಮ್ಮ ಭಾಷಣದಲ್ಲಿ  ಹೇಳಿದಾಗ ಅವರ ಮನೆಯ ಮೇಲೆ ಕಲ್ಲು ಬಾಟಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಂಗಳೂರಿನ ಕರಾವಳಿಯಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಕೊಲೆಯ ಸಂಚು ನಡೆದಿದೆ ಎಂದು ತಿಳಿದು ಬಂದಿದೆ .ಸಂಪೂರ್ಣ ತನಿಖೆ ಆಗಬೇಕಿದೆ.ಪ್ರಗತಿಪರ ಲೇಖಕರ ಅಭಿಪ್ರಾಯಕ್ಕೆ ಕಡಿವಾಣ ಹಾಕುವ ಯತ್ನ ಇದಾಗಿದೆ.

ವಿವಾದದ ಸುಳಿಯಲ್ಲಿ ಡಾ ಎಂ ಎಂ ಕಲ್ಬುರ್ಗಿ.
———————————————–


ಡಾ ಎಂ ಎಂ ಕಲಬುರ್ಗಿ ಅವರು ಅತ್ಯಂತ ಸ್ನೇಹಜೀವಿ ಜನಾನುರಾಗಿ ಲೇಖಕ ಸಂಶೋಧಕರು. ಅವರು ಮಾಡಿದ ಕಾರ್ಯವು ತನ್ನ ಮುಂದಿನ ಹತ್ತು ತೆಲೆಮಾರಿನ
ಸಂಶೋದಕರಿಗೆ ಸವಾಲು ಒಡ್ಡುವ ರೀತಿಯಲ್ಲಿದೆ . ಆದರೆ ಅವರ ತೀವ್ರತೆ ಮತ್ತು ಅವಸರ ಒಮ್ಮೊಮ್ಮೆ ಅವರನ್ನು ವಿವ್ವಾದದ ಸುಳಿಯಲ್ಲಿ ಸಿಲುಕಿಸ ಹತ್ತಿತು.
ಅವರ ಮಾರ್ಗ -೧ ರಲ್ಲಿ ಅಕ್ಕ ನಾಗಮ್ಮ ಮತ್ತು ಕಕ್ಕಯ್ಯರ ಮದುವೆ ವಿಚಾರದಲ್ಲಿ ಮತ್ತು ನೀಲಾಂಬಿಕೆಯ ವಿಚಾರದಲ್ಲಿ ಮತ್ತು ಶರಣರಲ್ಲಿ ಬರುವ ಪುಣ್ಯ ಸ್ತ್ರೀ ಎಂಬ
ಪದಕ್ಕೆ ಡಾ ಕಲಬುರ್ಗಿ ಅವರು ತಮ್ಮ ಊಹೆಯಿ೦ದಾ ಅಂತಹ ಪುಣ್ಯ ಸ್ತ್ರಿ ತಮ್ಮ ಪೂರ್ವಾಶ್ರಯದಲ್ಲಿ ವೇಶ್ಯೆ ರಾಗಿದ್ದರು ಎಂದು ಅಭಿಮತಕ್ಕೆ ಬಂದು ದಾಖಲಿಸಿದರು  .
ಆಗ ನಡೆದ  ಉಗ್ರ ಪ್ರತಿಭಟನೆಯಲ್ಲಿ ಅನೇಕ ಸಾಹಿತಿಗಳು ಪ್ರಗತಿಪರರು ಬಸವ ಭಕ್ತರು ಇವರ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಎಲ್ಲಾ ರೀತಿಯ ಚಳುವಳಿ ಆರಂಬಿಸಿದ್ದರು. ಒಂದು ಹಂತದಲ್ಲಿ ೧೯೮೯ ರಲ್ಲಿ ಇವರು ವಿಶ್ವ ವಿದ್ಯಾಲಯದಲ್ಲಿ ಪೋಲೀಸರ ರಕ್ಷಣೆಯಲ್ಲಿ ಪಾಠ ಮಾಡುವ ಪ್ರಸಂಗ ಬಂದೆರಗಿತು.

ಈತ್ತಿಚೆಗೆ ಅವರು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂಬ ಅಭಿಪ್ರಾಯಕ್ಕೆ ಬಂದು ಅದನ್ನು ಪ್ರಮುಖ ವಾಹಿನಿಯಲ್ಲಿ ಹೇಳುವ ಧೈರ್ಯವನ್ನು ಹೊಂದಿದ್ದರು. ವೀರಶೈವ ಪದವು ೧೫ ನೆ ಶಮಾನದಲ್ಲಿ ಬರುವ ಪದ. ಇದಕ್ಕೂ ಪೂರ್ವದಲ್ಲಿ ಲಿಂಗಾಯತ ಧರ್ಮವು ಇತ್ತು ಇದು ಕನ್ನಡಿಗರ ಮೊತ್ತ ಮೊದಲೆನಯ ಧರ್ಮ ಉಳಿದ ಜೈನ ಬೌದ್ಧ  ಹಾಗು ಉತ್ತರ ಭಾರತದ ಶೈವ ಧರ್ಮಗಳು ವಲಸೆ ಬಂದ ಧರ್ಮ ಅಂತ ಪ್ರತಿಪಾದಿಸಿದರು.
ಅವರ ಸಂಶೋಧನೆಯಲ್ಲಿ ಅಷ್ಟೆ ಮೌಲಿಕ ಚಿಂತನೆಗಳು ಸಾಕ್ಷ್ಯಗಳು ಇರುತಿದ್ದವು.

ಡಾ ಎಂ ಎಂ ಕಲಬುರ್ಗಿ ಹತ್ಯೆಗೆ ಕಾರಣವೇನಿರಬಹುದು ?
————————————————————-


೧) ಡಾ ಎಂ ಎಂ ಕಲಬುರ್ಗಿ  ನೇರ ನಡೆ ನುಡಿಯ ನಿಷ್ಠುರ ವ್ಯಕ್ತಿಗಳಾಗಿದ್ದರು. ಲಿಂಗಾಯತ ಹಿಂದೂ ಧರ್ಮವಲ್ಲವೆಂದು ಘಂಟಾಘೋಷವಾಗಿ ಹೇಳ ತೊಡಗಿದರು. ವೀರ ಶೈವ ಬೇರೆ ಲಿಂಗಾಯತ ಬೇರೆ ಎಂಬ ವಿಷಯವಾಗಿ ಅನೇಕ ಬಾರಿ ಚರ್ಚಿಸಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸಿದರು.

೨ ) ಡಾ  ಯು ಆರ್ ಅನಂತಮೂರ್ತಿಯವರ ಬೆತ್ತಲೆ ಪೂಜೆ ಏಕೆ ಸಲ್ಲದು ಲೇಖನದ ಭಾಗ –  
ತಮ್ಮ ಕೃತಿವೊಂದರಲ್ಲಿ ಬರೆದ “ನಮ್ಮೂರ ಹೊರಗೊಂದು ಕಲ್ಲು ದೇವರಿತ್ತು…. ಅದು ಕಾಯುವುದು, ಕೊಲ್ಲುವುದು ಎಂಬ ನಂಬಿಕೆ ನಮ್ಮೂರ ಜನರದಾಗಿತ್ತು. ನಾನೊಂದು ರಾತ್ರಿ ಅಲ್ಲಿ ಹೋಗಿ ಉಚ್ಛಿ ಹೊಯ್ದು ಬಂದೆ. ನಾಲ್ಕು ದಿನ ಹೆದರಿದೆ ಆಮೇಲೆ ನನಗೇನು ಆಗಲಿಲ್ಲ. ಆಗ ನನಗೆ ಅರಿವಾಯಿತು ಕಲ್ಲು ದೇವರು ಏನೂ ಮಾಡುವುದಿಲ್ಲ’’ ಎಂಬ ಮಾತನ್ನು ಡಾ ಎಂ  ಎಂ ಕಲಬುರ್ಗಿ ತಮ್ಮ ಭಾಷಣದಲ್ಲಿ ವ್ಯಕ್ತ ಪಡಿಸಿದ್ದರು.ಡಾ. ಎಂ. ಎಂ. ಕಲಬುರ್ಗಿಯವರ ಮನೆಗೆ ಕಲ್ಲು, ಸರಾಯಿ ಬಾಟಲ್ ತೂರಿ ಅವಾಚ್ಯ ಶಬ್ಧಗಳಿಂದ ಕೂಗಾಡಿದ್ದು ನೆನಪು ಮಾಸಿರಲಿಲ್ಲ .
 ೩) ಅಷ್ಟೇ ಅಲ್ಲದೇ ಅವರು ಮತ್ತೊಂದು ವೇದಿಕೆಯಲ್ಲಿ “ಹಿಂದೂ ಒಂದು ಧರ್ಮವೇ ಅಲ್ಲ, ಅದಕ್ಕೆ ಧರ್ಮಗ್ರಂಥವಾವುದು? ಕೆಲವರು ಭಗವದ್ಗೀತೆ ಎಂದು ಹೇಳಬಹುದು, ನಾನು ವಚನ ಎಂದು ಹೇಳುವೇ ಒಪ್ಪುವಿರಾ?’’ ಎಂತಲೂ ಪ್ರಶ್ನೆ ಮಾಡುತಿದ್ದರು .
 ೪  )  ಕಳೆದ ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗ ಬೃಹನ್ಮಠದಲ್ಲಿ “ಚತುರಾಚಾರ್ಯರ-ಪಂಚಾಚಾರ್ಯ ಇತಿಹಾಸ’’ ಕುರಿತಾಗಿ, ವೀರಶೈವದ ಇತಿಹಾಸ ಕುರಿತಾಗಿ ದಿಟವಾಗಿ ನುಡಿದಿದ್ದನ್ನು ಪ್ರಜ್ಞಾವಂತ ಸಮಾಜ ಇನ್ನೂ ಮರೆತಿರಲಿಲ್ಲ. ವೀರಶೈವ ಬಸವೋತ್ತರ ಕಾಲದಲ್ಲಿ ಕಂಡು ಬಂದ  ಶೈವ ಪ್ರಭೇದ ಇದಕ್ಕೂ ಲಿಂಗಾಯತ ಧರ್ಮಕ್ಕೂ   ಯಾವುದೇ ಸಂಬಂದಗಳಿಲ್ಲ ಎಂದು ಹೇಳಿದರು. ಇದರಿಂದ ಇವರಿಗೆ ಮತ್ತು ಡಾ ಎಂ ಚಿದಾನಂದ ಮೂರ್ತಿಗಳಿಗೆ ಇವರಿಗೆ ಚರ್ಚೆ ಮಾತಿನ ಚಕಮಕಿ ನಡದೇ ಇತ್ತು.

೫ ) ಲಿಂಗಾಯತ ಇದು ಕನ್ನಡಿಗರು ಕಟ್ಟಿದ ಒಂದು ಸ್ವತಂತ್ರ ಧರ್ಮ ಉಳಿದ ಧರ್ಮಗಳು ಒಲಸೆ ಬಂದ ಧರ್ಮಗಳು ಎಂದು ಹೇಳಿದ್ದಕ್ಕೆ – ಇವರಿಗೆ ಮತ್ತು ಡಾ ಎಂ  ಹ೦ಪಾನಾ  ಇವರ ಮಧ್ಯೆ ಚರ್ಚೆ ಮಾತಿನ ಚಕಮಕಿ  ನಡೆದಿತ್ತು .

೬ ) ಮೇ ೧೦ ೨೦೧೫ ಹುಬ್ಬಳ್ಳಿಯಲ್ಲಿ  ಕಲ್ಯಾಣ ನಗರದ ರಹವಾಸಿ ಸಂಘದ ಸಭಾ ಭವನದಲ್ಲಿ ಪುಣೆಯ ಬಸವ  ಅಂತ ರಾಷ್ಟ್ರಿಯ  ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದವರು ಏರ್ಪಡಿಸಿದ  ಬಸವ ತತ್ವ ಸಮಾವೇಶದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ಮಠಗಳಲ್ಲಿ  ಬಸವನಿಲ್ಲಾ  ಸ್ವಾಮಿಗಳಿದ್ದಾರೆ.ಮತ್ತು ಸ್ವಾಮಿಗಳು ಮುಂದಿನ ದಿನಗಳಲ್ಲಿ  ಎಂ ಎಲ್ ಎ ಹಾಗೂ ಎಂ ಪಿ ಆಗುವದರಲ್ಲಿ ಸಂಶಯವಿಲ್ಲ.ಸ್ವಾಮಿಗಳು ತಮ್ಮ ಮೂಲ ಕರ್ತವ್ಯವ ಮರೆತು ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ  ಎಂದು ತುಂಬಾ ನೊಂದ ನೋವಿನ ಮನಸ್ಸಿನಿಂದಾ   ಹೇಳಿದರು .

೭ ) ಲಿಂಗಾಯತ ಒಂದು ಸ್ವತಂತ್ರ ಧರ್ಮ -ಅದಕ್ಕೆ ಶಾಸನ ಬದ್ಧ ಮಾನ್ಯತೆ ದೊರೆಯಬೇಕು ಈ ದಿಶೆಯಲ್ಲಿ ಡಾ ಶಿವಾನಂದ ಜಾಮದಾರ್  ಡಾ ಏನ್ ಜಿ ಮಹಾದೇವಪ್ಪ ಡಾ ವೀರಣ್ಣ ರಾಜೂರು ಮತ್ತು ಪುಣೆಯ ಬಸವ  ಅಂತ ರಾಷ್ಟ್ರಿಯ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದವರು,ದಾವಣಗೆರೆ ಆಸ್ಥೆ ವಹಿಸಬೇಕು ಎಂದು ವಿನಂತಿಸಿದರು.
೮ ) ಮರುದಿನ ಅಂದರೆ ೧೧ ಮತ್ತು ೧೨ ರ  ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಡಾ ಕಲಬುರ್ಗಿ ಅವರ ಹೇಳಿಕೆಗಳನ್ನು ಮಾಧ್ಯಮದವರು ಅರ್ಥವತ್ತಾಗಿ ಬಿಂಬಿಸಿದರು. ಅಷ್ಟೆ ಕಟುವಾಗಿ ರಂಭಾಪುರಿ ಜಗದ್ಗುರು ಮತ್ತು ನಿಡು ಮಾಮಿಡಿ ಶ್ರೀಗಳು ಸುಲಫಲ  ಸ್ವಾಮಿಗಳು ಡಾ. ಎಂ. ಎಂ. ಕಲಬುರ್ಗಿ ಅವರ ಹೇಳಿಕೆ ವಿರೋಧಿಸಿ ಹೇಳಿಕೆ ನೀಡಿದರು. ನಾಡಿನ ಯಾವ ಸ್ವಾಮಿಗಳು ಡಾ ಎಂ ಎ೦  ಕಲಬುರ್ಗಿ ಅವರ ಪರವಾಗಿ ಹೇಳಿಕೆ ನೀಡಲಿಲ್ಲ. ಮಾತಾಜಿ ಮಾತ್ರ ಡಾ. ಎಂ. ಎಂ. ಕಲಬುರ್ಗಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
 ೯ )ಡಾ ಎಂ ಎಂ ಕಲಬುರ್ಗಿ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿತ್ತು. ಕೆಲ ವೀರಶೈವ ಮತ್ತು ಲಿಂಗಾಯತ ಸ್ವಾಮಿಗಳು ಹಿಂದೂ ಸಂಘಟನೆಗಳ ಜೊತೆಗೆ ನೇರ ಸ೦ಬ೦ದಗಳನ್ನು ಹೊಂದಿದ್ದರು ಇನ್ನು ಕೆಲವರು ಪರೋಕ್ಷ ಹಿಂದುವಾದಕ್ಕೆ ಕೆಲಸ ಮಾಡಿದರು. ಮಠ ಗಳಲ್ಲಿ ಬಸವ ತತ್ವ ಮತ್ತು ಹೊರಗೆ ಸನಾತನ ಧರ್ಮದ ಪ್ರತಿಪಾದನೆಗೆ ಮುಂದಾಗಿದ್ದರು.

  ಸಂಶೋಧಕನ ಸಾವು ಸತ್ಯ ಸಿದ್ಧಾಂತದ್ದಲ್ಲ    
——————————————–
ಅಗಷ್ಟ   ೩೦ ಬೆಳಿಗ್ಗೆ ೮.೪೦ ಕ್ಕೆ ಒಬ್ಬ ಅನಾಮಿಕ ಬಂದು ಸರ್ ಇದ್ದಾರ ಎಂದು ಪ್ರಶ್ನಿಸಿದ .ಡಾ ಎಂ ಎಂ ಕಲಬುರ್ಗಿ ಅವರ ಪತ್ನಿ ಶ್ರೀಮತಿ ಉಮಾ ಅವರು
ಏನ್ರಿ ನಿಮ್ಮನ್ನು ಯಾರೋ ಬೇಟಿಗೆ ಬಂದಿದ್ದಾರೆ ಅಂತ ಹೇಳಿ ಅಡುಗೆ ಮನೆಗೆ ಹೋದರು. ಡಾ ಎಂ ಎಮೆ ಕಲಬುರ್ಗಿ ಅವ್ರು ಯಾರದೋ ಫೋನಿನಲ್ಲಿದ್ದರು
ಕೈಮಾಡಿದರು ಬಂದ ವ್ಯಕ್ತಿಗೆ .ಆಟ ನೇರವಾಗಿ ಅವರ ತೆಲೆಯ ಮಧ್ಯೆ  ೨ ಸುತ್ತು ಗುಂಡು ಹಾರಿಸಿ ಹೊರಗೆ ತನಗೆ ಒಬ್ಬ ಕಾಯುತ್ತಿದ್ದ ಮೋಟಾರ್ ಬೈಕಿನಲ್ಲಿ ಪರಾರಿಯಾದರು.ರಕ್ತದ ಮಡಿಲಿನಲ್ಲಿ ಡಾ ಎಂ ಎಂ ಕಲಬುರ್ಗಿ ಬಯಲಾದರು.  ೭೭ ವರ್ಷದ ಹಿರಿಯ  ಜೀವಿ   ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಂಡ ಕಲಬುರ್ಗಿ ಅಮಾಯಕರಾಗಿ ಕೊಲೆಯಲ್ಲಿ ಅಂತ್ಯ ಕಂಡರು .ಡಾ ಎಂ ಎಂ ಕಲಬುರ್ಗಿ ಬಿದ್ದ ಮರವಲ್ಲ ಬಿತ್ತಿದ ಬೀಜ .
ಕೊಲೆ ಪರ್ಯಾಯವಲ್ಲ ಅಥವಾ ಮಾರ್ಗವೂ ಅಲ್ಲ ಡಾ ದಾಭೊಲಕರ ,ಗೋವಿಂದ ಪಾನ್ಸರೆ ,ಡಾ ಎಂ ಎಂ ಕಲಬುರ್ಗಿ ಅವರ ಸ್ಪಷ್ಟ ನೇರ ನುಡಿಗಳು ಸಮಾಜಕ್ಕೆ ಅರ್ಥವಾಗಲಿಲ್ಲವೇನೋ? ಅಥವಾ ಅರ್ಥೈಸಿಕೊಂಡು ಜೀರ್ಣತೆ ಮಾಡಿಕೊಳ್ಳದ ಕೊಳಕು ಮನಸ್ಸಿನ ಶಕ್ತಿಗಳು ಇರುವವರೆಗೆ ಹೀಗೆ ಹತ್ಯೆಗಳು ನಡೆಯುತ್ತವೆ .ಅವರ ಬಂದೂಕಿನಲ್ಲಿ  ಇನ್ನೂ ಗುಂಡುಗಳಿವೆ ಅದನ್ನು ಎದರಿಸುವ ಗಂಡೆದೆಗಳು  ಮತ್ತೆ ಹುಟ್ಟಿ ಬರುತ್ತವೆ. ಹುಟ್ಟು    ಆಕಸ್ಮಿಕ ಬದುಕು ಅನಿವಾರ್ಯ ಸಾವು ನಿಶ್ಚಿತ .ಅಭಿವ್ಯಕ್ತಿ ಸ್ವಾತಂತ್ರವನ್ನು ಕೊಲ್ಲುವದು ಸರಿಯಲ್ಲ .ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಅಂತ ಹೇಳಿದ ಬಸವಣ್ಣನಂತೆ ಸಮಷ್ಠಿಗೆ ಪೂರಕವಾದ ಸತ್ಯ ಪ್ರತಿಪಾದನೆಯಲ್ಲಿ ಹೊರಟಾಗ ಇಂತಹ ಅನಾಹುತಗಳು ಜರುಗುವವು.ಕೊಲೆ ಹತ್ಯೆ ವ್ಯಕ್ತಿಯನ್ನು ಮಾಡಬಹುದೇ ಹೊರತು ಸತ್ಯವನ್ನಲ್ಲ,

ಡಾ ಎಂ ಎಂ ಕಲಬುರ್ಗಿ ಅವರ ಸಾಧನೆ ಅಪಾರ -ಕಲ್ಯಾಣ ಕ್ರಾಂತಿಯ ಕೊಂಡಿ
——————————————————————————–
ಜನನ 1938. ಮರಣ 30-8-2015.ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಾಪುರ ಜಿಲ್ಲೆ
ವೃತ್ತಿ ಲೇಖಕ, ಪ್ರಾಧ್ಯಾಪಕ, ವಿಶ್ರಾಂತ ಕುಲಪತಿ
ರಾಷ್ಟ್ರೀಯತೆ ಭಾರತೀಯ
ಪ್ರಕಾರ/ಶೈಲಿ ಕಥೆ, ಕವನ, ಕಾದಂಬರಿ
ವಿಷಯ ಕರ್ನಾಟಕ, ರಾಮಾಯಣ,
ಸಾಹಿತ್ಯ ಚಳುವಳಿ ನವೋದಯ ,  ವಚನ ಸಾಹಿತ್ಯ ಸಂಪಾದನೆ ಮತ್ತು ಪರಿಷ್ಕರಣೆ

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಯಿಯ ತವರು ಮನೆಯ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ ತಂದೆ ಮಡಿವಾಳಪ್ಪ  ಇವರ  ಊರು  ಸಿಂದಗಿ ತಾಲೂಕಿನ  ಯರಗಲ್ಲ . ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧ್ರುಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ.

ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದಿ ಕವನ ಸಂಕಲವನ್ನು ಪ್ರಕಟಿಸಿದ್ದಾರೆ.

ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.(1960) ಮತ್ತು ಎಂ..ಎ.(1962) ಪದವಿಗಳನ್ನು ಪ್ರಥಮ ದರ್ಜೆ, ಪ್ರಥಮ ಸ್ಥಾನದೊಂದಿಗೆ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕವಾದರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಸುಮಾರು ಹತ್ತೊಂಬತ್ತು ವರ್ಷಗಳು ಪ್ರಾಧ್ಯಾಪಕರಾಗಿದ್ದ ಕಲಬರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾಗಿದ್ದಾರೆ. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.

ಶಿಕ್ಷಣ
———-
ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು.ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ ನಲ್ಲಿ ಬಿ.ಎ.(ಕನ್ನಡ)ಪದವಿಯನ್ನು ಪ್ರಥಮ ವರ್ಗದಲ್ಲಿ, ಪ್ರಥಮ ಸ್ಥಾನ   ಮತ್ತು ಯು.ಜಿ.ಸಿ.ಶಿಷ್ಯವೇತನ,  ಸಹಾಯ  ಪಡೆದು ಗಳಿಸಿದರು. ಬಳಿಕ, ೧೯೬೨ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ವರ್ಗದಲ್ಲಿ, ಪ್ರಥಮ ಸ್ಥಾನ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿಜೀವನ
————–
೧೯೬೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. ೧೯೮೨ರಲ್ಲಿ ಅಲ್ಲಿಯೆ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಂಶೋಧನ ಕ್ಷೇತ್ರ
————————-
ಡಾ| ಎಂ.ಎಂ.ಕಲಬುರ್ಗಿಯವರು ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ, ಇತಿಹಾಸ, ಹಸ್ತಪ್ರತಿಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಲನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ ಶ್ರೀ ತೋಂಟದಾರ್ಯ ಮಠದ ಲಿಂಗಾಯತ  ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ , ಬೆಳಗಾವಿಯ ನಾಗನೂರು ಮಠದ ವಚನ ಅಧ್ಯಯನ ಅಕಾಡೆಮಿಯ ಮಾರ್ಗದರ್ಶಕರು ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಗೌರವ
———
ಡಾ| ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernceಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಾಹಿತ್ಯ
—————-
ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗು ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು, ಬರಹ, ಚಿಂತನೆ, ಪ್ರಕಟಣೆ, ಮಾರ್ಗದರ್ಶನ ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಸಾಹಿತ್ಯ , ಶಾಸನ, ಜಾನಪದ, ನಾಮ ವಿಜ್ಞಾನ, ಗ್ರಂಥ ಸಂಪಾದನೆ,ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ  “ಆಳ್ವಾಸ್ ನುಡಿಸಿರಿ 2011” ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.

ಕವನ -ನೀರು ನೀರಡಿಸಿತ್ತು

ನಾಟಕ
——–
ಕೆಟ್ಟಿತ್ತು ಕಲ್ಯಾಣ , ಖರೆ ಖರೆ ಸಂಗ್ಯಾಬಾಳ್ಯಾ   ಥ್ಯಾಕರೆ

ಸಂಶೋಧನೆ
——————–
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ.ಈ ಕಿರು ಟಿಪ್ಪಣಿಯಲ್ಲಿ ಅವರ ಮುಖ್ಯವಾದ ಕೃತಿಗಳನ್ನು ಮಾತ್ರ ಪಟ್ಟಿಮಾಡಲು ಸಾಧ್ಯ.. ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.

ಸಂಶೋಧನೆ
ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, 1973
ಮಾರ್ಗ’ – ನಾಲ್ಕು ಸಂಪುಟಗಳು 1988-2004
ಐತಿಹಾಸಿಕ’, 1984
ಕೆಲವು ಸಂಶೋಧನ ಗ್ರಂಥಗಳು
ಮಾರ್ಗ (೧,೨,೩,೪)
ಕನ್ನಡ ಹಸ್ತಪ್ರತಿ ಶಾಸ್ತ್ರ
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕನ್ನಡ ಸಂಶೋಧನ ಶಾಸ್ತ್ರ
ಕನ್ನಡ ನಾಮವಿಜ್ಞಾನ
ಧಾರವಾಡ ಜಿಲ್ಲೆಯ ಶಾಸನಸೂಚಿ
ಮಹಾರಾಷ್ಟ್ರದ ಕನ್ನಡ ಶಾಸನಗಳು
ಶಾಸನಗಳಲ್ಲಿ ಶಿವಶರಣರು
ಶಬ್ದಮಣಿದರ್ಪಣ ಸಂಗ್ರಹ
ಕನ್ನಡ ಕೈಫಿಯತ್ತುಗಳು
ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
ಸ್ವಾದಿ ಅರಸು ಮನೆತನ
ಸಾರಂಗಶ್ರೀ
ಶಾಸನಶಾಸ್ತ್ರ
ಅ. ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975 ಆ. ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980 ಇ. ಶಾಸನ ಸಂಪದ, 1968 ಈ. ಧಾರವಾಡ ಜಿಲ್ಲೆಯ ಶಾಸನಸೂಚಿ, 1975

ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು
ಕನ್ನಡ ಗ್ರಂಥಸಂCಪಾದನಶಾಸ್ತ್ರ, 1972
ಕನ್ನಡ ಹಸ್ತಪ್ರತಿಶಾಸ್ತ್ರ
ಕನ್ನಡ ಸಂಶೋಧನಶಾಸ್ತ್ರ
ಕನ್ನಡ ಸ್ಥಳನಾಮವಿಜ್ಞಾನ
ಗ್ರಂಥಸಂಪಾದನೆ

ಕಲಬುರ್ಗಿಯವರು 30 ಕ್ಕೂ ಹೆಚ್ಚುC ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
ಶಿವಯೋಗ ಪ್ರದೀಪಿಕಾ, 1976
ಕೊಂಡಗುಳಿ ಕೇಶಿರಾಜನ ಕೃತಿಗಳು, 1978
ಬಸವಣ್ಣ…ಬಸವಣ್ಣನ ಟೀಕಿನ ವಚನಗಳು. 1978
ಸಿರುಮನಾಯಕನ ಸಾಂಗತ್ಯ, 1983.
ಜಾನಪದ
ಜಾನಪದ ಮಾರ್ಗ, 1995
ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978

ಸೃಜನಶೀಲ ಬರೆಹಗಳು

ನೀರು ನೀರಡಿಸಿತ್ತು (ಕವನಗಳು)
ಕೆಟ್ಟಿತ್ತು ಕಲ್ಯಾಣ, (ನಾಟಕ)

ಸಂಪಾದನೆ
ಕನ್ನಡ ವಿಶ್ವವಿದ್ಯಾಲಯದ ಮೂಲಕ (೧)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (೨)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.

ಪ್ರಶಸ್ತಿ
‘ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ’
‘ಆರು ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ’
‘ರಾಜ್ಯೋತ್ಸವ ಪ್ರಶಸ್ತಿ’
‘ಪಂಪ ಪ್ರಶಸ್ತಿ’
‘ವರ್ಧಮಾನ ಪ್ರಶಸ್ತಿ’
‘ವಿಶ್ವಮಾನವ ಪ್ರಶಸ್ತಿ’
೨೦೦೬ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೨೦೧೪ ನೆ ಸಾಲಿನ ರಾಜ್ಯ ಸರಕಾರದ  ಬಸವಶ್ರಿ ಪ್ರಶಸ್ತಿ
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು.

ಡಾ ಎಂ ಎಂ ಕಲ್ಬುರ್ಗಿ ಅವರು ಬಸವ ಧರ್ಮದ ಕಟ್ಟಾ ಅಭಿಮಾನಿ ಮತ್ತು ಪ್ರತಿಪಾದಕರಾಗಿದ್ದರು. ಅವರ ಸಂಶೋಧನೆ ತೀವ್ರಕ್ಕೆ ಯಾವ ವಿದ್ವಾಂಸರು ನಿಲ್ಲುತಿರಲಿಲ್ಲ . ಕಂಡುಕೊಂಡ ಸತ್ಯವನ್ನು ನೇರವಾಗಿ ಮತ್ತು ಅಷ್ಟೆ ಚೊಕ್ಕಟ್ಟಾಗಿ   ಹೇಳುವ ಪರಿಜ್ಞಾನವನ್ನು ಹೊಂದಿದ್ದರು.ಸಮಗ್ರ ವಚನಗಳ ಸಂಪುಟ ೧ ೨  ಮತ್ತು ಈಗ ಮೂರನೆಯ ಆವೃತ್ತಿಯಲ್ಲಿದೆ. ಮಠಗಳಿಗೆ ಬೌದ್ಧಿಕ ಸ್ಥಾನ ಅಕಾಡೆಮಿ ಮೌಲ್ಯ ತುಂಬುವ ಕೆಲಸ ಮಾಡಿದರು.

ಡಾ ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ  ಧಾರವಾಡದಲ್ಲಿ  ಶ್ರೀ ಬಸವರಾಜ ಕಟ್ಟಿಮನಿ ಅವರ ಸಾಹಿತ್ಯ ಪ್ರತಿಷ್ಠಾನ ಬೆಳಗಾವಿಯಲ್ಲಿ ಇಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡು ಹಗಲಿರುಳು ದುಡಿದ ದಿವ್ಯ ಚೇತನಕ್ಕೆ ಕೊಟ್ಟ ಕಾಣಿಕೆ ಕೊಲೆಯೇ ?
ಒಂದು ಸಾಮ್ಯತೆ ಅಂದ್ರೆ ಡಾ ಕಲಬುರ್ಗಿ ದಾಭೊಲ್ಕರ ಗೋವಿಂದ ಪನಸಾರೆ ಹುಟ್ಟಿದ್ದು ನವೆಂಬರ ತಿಂಗಳಲ್ಲಿ. ಅವರೆಲ್ಲರ ಹತ್ಯೆಯು   ಒಂದೇ ರೀತಿಯಾಗಿದೆ.
ಕೊಲೆ ಹತ್ಯೆ  ಹಿಂಸೆ   ವ್ಯವಸ್ಥೆಯ ಪರಿವರ್ತನೆಗೆ ಕಾರಣವಾಗುವದಿಲ್ಲ. ಪ್ರಕ್ಷುಬ್ಧ ಪರಿಸ್ಥಿತಿಗೆ ಅರಾಜಕತೆಗೆ  ಕಾರಣವಾಗುತ್ತದೆ. ಇದು ಸ್ವತಂತ್ರ ರಾಷ್ಟ್ರ ಇಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರಬೇಕು.ಒಬ್ಬರ ಅಭಿಪ್ರಾಯವನ್ನು ತಾತ್ವಿಕ ಚೌಕಟ್ಟಿನಲ್ಲಿ ಅರಿಯುವ ಸ೦ಯಮಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಬೇಕು.
————————————————————————————————————–

ಪುರೋಗಾಮಿಗಳ  ಪ್ರತಿಗಾಮಿಗಳ  ಸಂಘರ್ಷ ಇಂದು ನಿನ್ನೆಯದಲ್ಲ ಶತಮಾನದಿಂದ ನಡದೇ ಇದೆ. ಮೌಲ್ಯ ಮತ್ತು  ಮೌಡ್ಯಗಳ  ನಡುವಿನ ತಿಕ್ಕಾಟ .ಪ್ರಗತಿಪರ ಪುರೋಗಾಮಿ ಚಿಂತಕರ ನಿರಂತರ ಹತ್ಯೆ ಬದಲಾಗದ ಸಮಾಜ .ಶೋಷಣೆ ಅನ್ಯಾಯಕ್ಕೆ ಒಗ್ಗಿಕೊಂಡ ವ್ಯವಸ್ಥೆ .ಬುದ್ಧ ಮೊಹಮ್ಮದ ,ಯೇಸು ,ಬಸವಣ್ಣ  ಗಾಂಧೀ ಇಂತಹ ಪ್ರಯೋಗಶೀಲತೆ ಪರಿವರ್ತನೆಗಾಗಿ ತಮ್ಮ ಜೀವ ತೆತ್ತರು.

ಇದು ಕೇವಲ ಒಂದು ರಾಷ್ಟ್ರದ ಸಮಸ್ಯೆ ಅಲ್ಲ ಮೂಲಭೂತವಾದಿಗಳ  ಅಟ್ಟಹಾಸ ಇಂದು ವಿಶ್ವವ್ಯಾಪಿಯಾಗಿ  ಮೆರೆಯುತ್ತಿದೆ. ಕೊಲೆ ಹತ್ಯೆ ಭೀಕರವಾಗುತ್ತಿದೆ .
ಉಸಿರುಗಟ್ಟಿದ ವಾತಾವರಣ ಅಭಿವ್ಯಕ್ತಿ ಸ್ವಾತಂತ್ರದ   ಸಮಾಧಿಯಾಗಿದೆ .

ಹೆಚ್ಚಾಗುತ್ತಿರುವ ಮೂಲಭೂತವಾದ ( FUNDAMENTALISM )
—————————————-
ಆಲ್ ಖೈದಾ ,ತಾಲಿಬಾನ ,ಇಂಡಿಯನ್ ಮುಜಾಹಿದ್ದೀನ ,ಕೆಲ  ಸ್ಥಾಪಿತ  ಮೌಲ್ಯಗಳನ್ನು ಕೊಚ್ಚಿ ಹಾಕಿ ಸಮಾಜದಲ್ಲಿ ಅಶಾಂತಿ ಅನಿಶ್ಚಿತತೆ ಭಯ ಭೀತಿ ವಾತಾವರಣ ನಿರ್ಮಿಸುವ ದುಷ್ಟ   ಶಕ್ತಿಗಳ ಹುನ್ನಾವಿರಬಹುದೇ? ಸಮಾಜವನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ತನಗೆ ಬೇಕಾದಂತೆ ಸುಲಿಗೆ ಮಾಡಿ ಬದುಕಬೇಕ್ಕೆನ್ನುವ ಕ್ರ್ರೋರ ಆಲೋಚನೆಯೇ ?  ಡಾರ್ವಿನ ಸಿದ್ಧಾಂತದಂತೆ ( survival  of   the fittest ) ಶಕ್ತಿಯುತರಿಗೆ ಒಲಿವ ಬದುಕುವ ಸಾಮರ್ಥ್ಯವೇ?,

ಎಡ ಪಂಥೀಯ ಮತ್ತು ಬಲ ಪಂಥೀಯ ತೀವ್ರ ಸಂಘರ್ಷ
———————————————————-
ಭಾರತವು   ಹಲವು  ಭಾಷೆ ಸಂಸ್ಕೃತಿ ಧರ್ಮ ಆಚಾರ ವಿಚಾರಗಳಿ೦ದ ಕೂಡಿದ ದೇಶವಾಗಿದೆ ,ಸನಾತನವಾದಿಗಳು ಪ್ರಬಲ ಪಾಲುದಾರರು . ಈ ದೇಶದ ಆಡಳಿತವನ್ನು ಸದಾ ತನ್ನ ಹತೊಟಿಯಲ್ಲಿಟ್ಟು ಕೊಳ್ಳುವ ಒಂದೇ ಉದ್ದೇಶದಿಂದ ಇಂತಹ ಮೂಲಭೂತವಾದದ ಸಂಘಟನೆಗಳು . ಸಂಘ ಪರಿವಾರ ದೇಶದ ಸ್ವಾತಂತ್ರತೆಗೆ ದುಡಿದಿದೆ  ಆದರೆ  ಅದೊಂದೇ ದೇಶಭಕ್ತ ಸಂಘಟನೆ ಅನ್ನೋದು ತಪ್ಪು.. ಸಮಾಜವಾದಿ , ಕಮ್ಯುನಿಸ್ಟ್  ದಲಿತ ಪ್ರಗತಿಪರ ಸಂಘಟನೆಗಳು  ತಮ್ಮ ಸಿದ್ದಾಂಥಗಳನ್ನು  ಹೋರಾಟವನ್ನು    ಜನಪರ ವೇದಿಕೆ ಮೂಲಕ ಪ್ರತಿಪಾದಿಸಿದರೆ , ಧರ್ಮ ಆಚಾರ ಪೌರಾಣಿಕ ಹಿನ್ನೆಲೆಯವರು ತಮ್ಮ ವಿಚಾರಗಳನ್ನು ಧಾರ್ಮಿಕ ಪೌರಾಣಿಕ ಶ್ರದ್ಧೆಗಳ ಮೂಲಕ  ಸಾಧಿಸಲು ಪ್ರಯತ್ನಿಸುತ್ತಾರೆ , ಇವರು  ಬಲಪಂಥಿಯ ಸಿದ್ಧಾಂತದವರಾಗಿರುತ್ತಾರೆ.

ಮತೀಯ ಶಕ್ತಿಗಳ ಅಟ್ಟಹಾಸ
———————————–
ಕರ್ನಾಟಕವು ಶಾಂತಿಯ ತವರು ಅದರಲ್ಲೂ ಧಾರವಾಡ ಕವಿಗಳ ತಾಣ ಸಮರಸದ ಕವಿ ದ ರಾ ಬೇಂದ್ರೆ ಕರ್ಮಭೂಮಿ .ಸಮನ್ವಯತೆಯ ಕವಿ ಚೆನ್ನವೀರ ಕವಿಯ ಕ್ಷೇತ್ರ.ಡಾ ಗಿರಡ್ಡಿ ,ಚಂಪಾ ,ಕುರ್ತಕೋಟಿ ,ಬೆಟಗೇರಿ ಕೃಷ್ಣ ಶರ್ಮ,ಪಟ್ಟಣಶೆಟ್ಟಿ ,ಮುಂತಾದ ಅನೇಕ ಸಾಹಿತಿ ಸಂಶೋದಕರನ್ನು ಹೊಂದಿದ ಧಾರವಾಡದ
ನೆಲದಲ್ಲಿ ಸಮರಸ ಸಮಕಳೆ ಸಮಸುಖ ,ಸಮಾನತೆ ತತ್ವವನ್ನು ಸಾರುವ ಕೇಂದ್ರ. ಸಮೀಕ್ಷೆಯ ಪರಕಾರ ಧಾರವಾಡದ ನೆಲದಲ್ಲಿ  ಸಿಗುವಷ್ಟು ಸಾಹಿತಿಗಳು ನಾಡಿನ ದೇಶದ ಇನ್ನೊಂದು ಭಾಗದಲ್ಲಿ ಸಿಗಲು ಅಸಾಧ್ಯ  . ಇಂತಹ ಮಣ್ಣು ಅಗಷ್ಟ ೩೦ ರಂದು ಹಿಂಸೆಯ ರಕ್ತದೋಕುಳಿಯಲ್ಲಿ ರಕ್ತ ಸಿಕ್ತವಾಯಿತು.ಭಾರತವು ಕಂಡರಿಯದ ಸಾಹಿತಿಗಳ ಕೊಲೆ ಹತ್ಯೆ ಮಾನವ ಕುಲಕ್ಕೆ ನಾಚಿಕೆಗೆಡಿತನದ ವಿಷಯ.
 ಅಂದು    ೩೦ ಅಗಷ್ಟ  ೨೦೧೫ ಕಲ್ಯಾಣ ನಗರದ ೯ ನೆ ಕ್ರಾಸ್ ಶ್ರೀ ವಿಜಯ ಎಂಬ ಮನೆಯಲ್ಲಿ ಹಾಡ ಹಗಲೇ ಒಬ್ಬ ನಾಡಿನ ಬಹು ದೊಡ್ಡ ವಿದ್ವಾಂಸ ಡಾ ಎಮ್ ಎಂ ಕಲಬುರ್ಗಿ ಅವರ  ಕೊಲೆ ನಡೆಯಿತು.
ಬೆಳಿಗ್ಗೆ ೮.೪೦ ರ ಸಮಯ ಇಬ್ಬರು ಮೋಟಾರ್ ಬೈಕಿನ ಸವಾರರು ಬಂದು ಒಬ್ಬ ಮೋಟಾರ್ ಬೈಕನ್ನು ಆರಂಬಿಸಿ ನಿಂತಿದ್ದ ಇನ್ನೊಬ್ಬ ಗೇಟ್ ತೆಗೆದು ಕಾಲಿಂಗ ಬೆಲ್ ಒತ್ತಿದನು.ಡಾ ಎಂ ಎಂ ಕಲಬುರ್ಗಿ ಅವರ ಧರ್ಮ ಪತ್ನಿ ಶ್ರೀಮತಿ ಉಮಾ ಅವರು ಬಾಗಿಲು ತೆಗೆದು ವಿಚಾರಿಸಲು, ” ಸರ್ ಇದ್ದಾರಾ ? ಎಂದು ಪ್ರಶ್ನಿಸಿದನು.
ಅವರ ಪತ್ನಿ ” ಏನ್ರಿ   ನಿಮ್ಮನ್ನು  ಯಾರೋ  ಭೇಟಿ ಆಗಕ ಬಂದಾರ ನೋಡ್ರಿ ” ಎಂದು ಹೇಳಿ ಮುಂಬಾಗಿಲನ್ನು ತೆಗೆದು ಪತ್ನಿ  ಅಡುಗೆ ಮನೆಗೆ ಹೋದರು.
ಕಣ್ಣಿನ ಆಪರೇಷನ್ ಮಾಡಿಕೊಂಡಿದ್ದ ಡಾ ಕಲಬುರ್ಗಿಯಾರದೋ ಜೊತೆಯಲ್ಲಿ ಫೋನಿನಲ್ಲಿ ಮಾಟದ ಹತ್ತಿದ್ದರು . ಬಾಗಿಲ ಬಳಿ ಬಂದು ಕೈ ಮಾಡಿ ಸ೦ಜ್ಞೆಯ ಮೂಲಕ  ಕುಳಿತು ಕೊಳ್ಳಲು  ಸೊನ್ನೆ ಮಾಡಿರಬಹುದು.   ಟಪ್ ಟಪ್ ಗುಂಡಿನ ಸಪ್ಪಳ .ಹಂತಕ ನಿಲ್ಲದೆ ಗೇಟ್ ದಾಟಿ ಹೊರಗೆ ಓಡಿ ಹೋಗಿ  ಮೋಟಾರ್ ಬೈಕಿನವನೊಂದಿಗೆ ಪರಾರಿಯದನು.
 ಇದು ನಾಡಿನ ಕರಾಳ ಚರಿತ್ರೆ,ಕಳೆದ ೫೦ ವರ್ಷದಿಂದ ಸಾರಸ್ವತ ಲೋಕದ ರಾಯಭಾರಿ  ವಕ್ತಾರ ,ನಾಡು ನೆಲ ಜಲದ ಬಗ್ಗೆ ಭಾಷೆಯ ಬಗ್ಗೆ ಸಂಸ್ಕೃತಿ ಸಾದರಪಡಿಸುವ ದಿಟ್ಟ ಕನ್ನಡಿಗ ಕೊಲೆಯಾಗಿ ಬಿದ್ದದ್ದು ದುರಂತವೇ ಸರಿ. ದೇಶವೇ ಬೆಚ್ಚಿ ಬೀಳುವ ಪ್ರಸಂಗ ನಡೆದು ಹೋಯಿತು.ಮತೀಯ ಶಕ್ತಿಗಳ ಅಟ್ಟಹಾಸದ ಕೇಕೆ ,ಮೌಡ್ಯ ಕಂದಾಚರನೆಯ ದರ್ಪ, ಶೋಷಣೆ ಅನಾಚಾರಗಳ ತಾತ್ಪೂರ್ತಿಕ ಗೆಲುವು. ಕಲಬುರ್ಗಿ ಅವರ ಕೊಲೆ ಒಬ್ಬ ವ್ಯಕ್ತಿಯ ಕೊಲೆಯಲ್ಲ ಅದು ಒಂದು ಸಿದ್ಧಾಂತಕ್ಕೆ   ಬಸವ ತತ್ವಕ್ಕೆ  ಸತ್ಯದ ಕೊಲೆ .ಮತ್ತು ಪ್ರಗತಿ ಪರರ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುವ ಮುನ್ಸೂಚನೆ

ಯಾರು ಡಾ ಕಲಬುರ್ಗಿ ಅವರನ್ನು ಕೊಂದಿರಬಹುದು?
——————————————————
ಡಾ ಎಂ ಎಂ ಕಲಬುರ್ಗಿ ದೇಶವು  ಕಂಡ ಅಪ್ರತಿಮ ಸಂಶೋಧಕ  ಧಾರ್ಮಿಕ ಸಾಮಾಜಿಕ ನೈತಿಕ ವೈಚಾರಿಕ ಮತ್ತು ೧೨ ನೆ ಶತಮಾನದ  ಬಸವಾದಿ ಶರಣರ ಜೀವನ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಒಂದು ಇರುವೆಯನ್ನು   ಹಿ೦ಸಿಸದ ಸಭ್ಯ ಜೀವಿ. ಕಂಡದ್ದನ್ನು ನೇರವಾಗಿ ನಿಷ್ಠುರವಾಗಿ ಖಚಿತ ಮಾಹಿತಿ ಆಧಾರದೊಂದಿಗೆ ಹೇಳುವ ಧೈರ್ಯವಂತ  ಲೇಖಕ .
ಇವರು ಹಿಂದೂ ಧರ್ಮದ ಮೇಲೆ ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳು ಮತ್ತು ಮೂರ್ತಿ ಪೂಜೆಯ ಬಗ್ಗೆ ಡಾ ಯು ಆರ್ ಅನತಮೂರ್ತಿಯವರ ಅಭಿಪ್ರಾಯವನ್ನು ತಮ್ಮ ಭಾಷಣದಲ್ಲಿ ಹೇಳಿದ್ದು ತಪ್ಪಾಯಿತೇ?
ಹಿಂದೂ ಎನ್ನುವದು ಒಂದು ಧರ್ಮವೇ ಅಲ್ಲ ,ಭಗವತ್ ಗೀತೆ ಹೇಗೆ ಧರ್ಮ ಗ್ರಂಥವಾಗುತ್ತೆ ? ಅಂತ ಪ್ರಶ್ನೆ ಮಾಡಿದ್ದು ತಪ್ಪೇ ?
ಲಿಂಗಾಯತ ವೀರಶೈವ ಬೇರೆ ಬೇರೆ ಎಂಬ ಅಭಿಮತಕ್ಕೆ ಬಂದದ್ದು ಸರಿಯಲ್ಲವೇ?
ಆಷಾಡಭೂತಿ ಸ್ವಾಮಿಗಳ ಬಗ್ಗೆ ಟೀಕಿಸಿದ್ದು ತಪ್ಪೇ? ಮಠಗಳು ವ್ಯಾಪಾರ ಕೇಂದ್ರ ಅಲ್ಲಿ ಬಸವನಿಲ್ಲ ಸ್ವಾಮಿಗಳು ಮಾತ್ರ ಇದ್ದಾರೆ ಅಂತಾ ಹೇಳಿರೋದು ನಿಜವಲ್ಲವೆ ?
ಹೀಗೆ ಹಲವು  ಹತ್ತು ಸಂಶಯಗಳನ್ನು ಹುಟ್ಟು ಹಾಕಿದ ಡಾ ಕಲಬುರ್ಗಿ ಅವರ ಕೊಲೆ ಪ್ರಕರಣ .
ಭಾರತದಲ್ಲಿ ಈಗ ಉಸಿರಿಸುವದು ಕಠಿಣವಾಗುತ್ತಿದೆ. ಮಾನವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ ಇವು ಕೇವಲ ಭಾಷಣದ ಮತ್ತು ಪುಸ್ತಕದ ಶಬ್ದಗಳು ಮಾತ್ರ.

ಸಾವಿನ ಹಿಂದೆ ಸೇಡಿನ ಕಿಡಿಯೋ ? ದ್ವೇಷದ ಜ್ವಾಲೆಯೋ ?
——————————————————————-
ಕೆಲ ದುಷ್ಕರ್ಮಿಗಳು  ಡಾ ಎಂ ಎಂ ಕಲಬುರ್ಗಿ ಅವರು  ಮೂರ್ತಿ ಪೂಜೆಯ ಬಗ್ಗೆ ಡಾ ಯು ಆರ್ ಅನತಮೂರ್ತಿಯವರ ಅಭಿಪ್ರಾಯವನ್ನು ತಮ್ಮ ಭಾಷಣದಲ್ಲಿ  ಹೇಳಿದಾಗ ಅವರ ಮನೆಯ ಮೇಲೆ ಕಲ್ಲು ಬಾಟಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಂಗಳೂರಿನ ಕರಾವಳಿಯಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಕೊಲೆಯ ಸಂಚು ನಡೆದಿದೆ ಎಂದು ತಿಳಿದು ಬಂದಿದೆ .ಸಂಪೂರ್ಣ ತನಿಖೆ ಆಗಬೇಕಿದೆ.ಪ್ರಗತಿಪರ ಲೇಖಕರ ಅಭಿಪ್ರಾಯಕ್ಕೆ ಕಡಿವಾಣ ಹಾಕುವ ಯತ್ನ ಇದಾಗಿದೆ.

ವಿವಾದದ ಸುಳಿಯಲ್ಲಿ ಡಾ ಎಂ ಎಂ ಕಲ್ಬುರ್ಗಿ.
———————————————–
ಡಾ ಎಂ ಎಂ ಕಲಬುರ್ಗಿ ಅವರು ಅತ್ಯಂತ ಸ್ನೇಹಜೀವಿ ಜನಾನುರಾಗಿ ಲೇಖಕ ಸಂಶೋಧಕರು. ಅವರು ಮಾಡಿದ ಕಾರ್ಯವು ತನ್ನ ಮುಂದಿನ ಹತ್ತು ತೆಲೆಮಾರಿನ
ಸಂಶೋದಕರಿಗೆ ಸವಾಲು ಒಡ್ಡುವ ರೀತಿಯಲ್ಲಿದೆ . ಆದರೆ ಅವರ ತೀವ್ರತೆ ಮತ್ತು ಅವಸರ ಒಮ್ಮೊಮ್ಮೆ ಅವರನ್ನು ವಿವ್ವಾದದ ಸುಳಿಯಲ್ಲಿ ಸಿಲುಕಿಸ ಹತ್ತಿತು.
ಅವರ ಮಾರ್ಗ -೧ ರಲ್ಲಿ ಅಕ್ಕ ನಾಗಮ್ಮ ಮತ್ತು ಕಕ್ಕಯ್ಯರ ಮದುವೆ ವಿಚಾರದಲ್ಲಿ ಮತ್ತು ನೀಲಾಂಬಿಕೆಯ ವಿಚಾರದಲ್ಲಿ ಮತ್ತು ಶರಣರಲ್ಲಿ ಬರುವ ಪುಣ್ಯ ಸ್ತ್ರೀ ಎಂಬ
ಪದಕ್ಕೆ ಡಾ ಕಲಬುರ್ಗಿ ಅವರು ತಮ್ಮ ಊಹೆಯಿ೦ದಾ ಅಂತಹ ಪುಣ್ಯ ಸ್ತ್ರಿ ತಮ್ಮ ಪೂರ್ವಾಶ್ರಯದಲ್ಲಿ ವೇಶ್ಯೆ ರಾಗಿದ್ದರು ಎಂದು ಅಭಿಮತಕ್ಕೆ ಬಂದು ದಾಖಲಿಸಿದರು  .
ಆಗ ನಡೆದ  ಉಗ್ರ ಪ್ರತಿಭಟನೆಯಲ್ಲಿ ಅನೇಕ ಸಾಹಿತಿಗಳು ಪ್ರಗತಿಪರರು ಬಸವ ಭಕ್ತರು ಇವರ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಎಲ್ಲಾ ರೀತಿಯ ಚಳುವಳಿ ಆರಂಬಿಸಿದ್ದರು. ಒಂದು ಹಂತದಲ್ಲಿ ೧೯೮೯ ರಲ್ಲಿ ಇವರು ವಿಶ್ವ ವಿದ್ಯಾಲಯದಲ್ಲಿ ಪೋಲೀಸರ ರಕ್ಷಣೆಯಲ್ಲಿ ಪಾಠ ಮಾಡುವ ಪ್ರಸಂಗ ಬಂದೆರಗಿತು.

ಈತ್ತಿಚೆಗೆ ಅವರು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂಬ ಅಭಿಪ್ರಾಯಕ್ಕೆ ಬಂದು ಅದನ್ನು ಪ್ರಮುಖ ವಾಹಿನಿಯಲ್ಲಿ ಹೇಳುವ ಧೈರ್ಯವನ್ನು ಹೊಂದಿದ್ದರು. ವೀರಶೈವ ಪದವು ೧೫ ನೆ ಶಮಾನದಲ್ಲಿ ಬರುವ ಪದ. ಇದಕ್ಕೂ ಪೂರ್ವದಲ್ಲಿ ಲಿಂಗಾಯತ ಧರ್ಮವು ಇತ್ತು ಇದು ಕನ್ನಡಿಗರ ಮೊತ್ತ ಮೊದಲೆನಯ ಧರ್ಮ ಉಳಿದ ಜೈನ ಬೌದ್ಧ  ಹಾಗು ಉತ್ತರ ಭಾರತದ ಶೈವ ಧರ್ಮಗಳು ವಲಸೆ ಬಂದ ಧರ್ಮ ಅಂತ ಪ್ರತಿಪಾದಿಸಿದರು.
ಅವರ ಸಂಶೋಧನೆಯಲ್ಲಿ ಅಷ್ಟೆ ಮೌಲಿಕ ಚಿಂತನೆಗಳು ಸಾಕ್ಷ್ಯಗಳು ಇರುತಿದ್ದವು.

ಡಾ ಎಂ ಎಂ ಕಲಬುರ್ಗಿ ಹತ್ಯೆಗೆ ಕಾರಣವೇನಿರಬಹುದು ?
————————————————————-
೧) ಡಾ ಎಂ ಎಂ ಕಲಬುರ್ಗಿ  ನೇರ ನಡೆ ನುಡಿಯ ನಿಷ್ಠುರ ವ್ಯಕ್ತಿಗಳಾಗಿದ್ದರು. ಲಿಂಗಾಯತ ಹಿಂದೂ ಧರ್ಮವಲ್ಲವೆಂದು ಘಂಟಾಘೋಷವಾಗಿ ಹೇಳ ತೊಡಗಿದರು. ವೀರ ಶೈವ ಬೇರೆ ಲಿಂಗಾಯತ ಬೇರೆ ಎಂಬ ವಿಷಯವಾಗಿ ಅನೇಕ ಬಾರಿ ಚರ್ಚಿಸಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸಿದರು.

೨ ) ಡಾ  ಯು ಆರ್ ಅನಂತಮೂರ್ತಿಯವರ ಬೆತ್ತಲೆ ಪೂಜೆ ಏಕೆ ಸಲ್ಲದು ಲೇಖನದ ಭಾಗ –  
ತಮ್ಮ ಕೃತಿವೊಂದರಲ್ಲಿ ಬರೆದ “ನಮ್ಮೂರ ಹೊರಗೊಂದು ಕಲ್ಲು ದೇವರಿತ್ತು…. ಅದು ಕಾಯುವುದು, ಕೊಲ್ಲುವುದು ಎಂಬ ನಂಬಿಕೆ ನಮ್ಮೂರ ಜನರದಾಗಿತ್ತು. ನಾನೊಂದು ರಾತ್ರಿ ಅಲ್ಲಿ ಹೋಗಿ ಉಚ್ಛಿ ಹೊಯ್ದು ಬಂದೆ. ನಾಲ್ಕು ದಿನ ಹೆದರಿದೆ ಆಮೇಲೆ ನನಗೇನು ಆಗಲಿಲ್ಲ. ಆಗ ನನಗೆ ಅರಿವಾಯಿತು ಕಲ್ಲು ದೇವರು ಏನೂ ಮಾಡುವುದಿಲ್ಲ’’ ಎಂಬ ಮಾತನ್ನು ಡಾ ಎಂ  ಎಂ ಕಲಬುರ್ಗಿ ತಮ್ಮ ಭಾಷಣದಲ್ಲಿ ವ್ಯಕ್ತ ಪಡಿಸಿದ್ದರು.ಡಾ. ಎಂ. ಎಂ. ಕಲಬುರ್ಗಿಯವರ ಮನೆಗೆ ಕಲ್ಲು, ಸರಾಯಿ ಬಾಟಲ್ ತೂರಿ ಅವಾಚ್ಯ ಶಬ್ಧಗಳಿಂದ ಕೂಗಾಡಿದ್ದು ನೆನಪು ಮಾಸಿರಲಿಲ್ಲ .
 ೩) ಅಷ್ಟೇ ಅಲ್ಲದೇ ಅವರು ಮತ್ತೊಂದು ವೇದಿಕೆಯಲ್ಲಿ “ಹಿಂದೂ ಒಂದು ಧರ್ಮವೇ ಅಲ್ಲ, ಅದಕ್ಕೆ ಧರ್ಮಗ್ರಂಥವಾವುದು? ಕೆಲವರು ಭಗವದ್ಗೀತೆ ಎಂದು ಹೇಳಬಹುದು, ನಾನು ವಚನ ಎಂದು ಹೇಳುವೇ ಒಪ್ಪುವಿರಾ?’’ ಎಂತಲೂ ಪ್ರಶ್ನೆ ಮಾಡುತಿದ್ದರು .
 ೪  )  ಕಳೆದ ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗ ಬೃಹನ್ಮಠದಲ್ಲಿ “ಚತುರಾಚಾರ್ಯರ-ಪಂಚಾಚಾರ್ಯ ಇತಿಹಾಸ’’ ಕುರಿತಾಗಿ, ವೀರಶೈವದ ಇತಿಹಾಸ ಕುರಿತಾಗಿ ದಿಟವಾಗಿ ನುಡಿದಿದ್ದನ್ನು ಪ್ರಜ್ಞಾವಂತ ಸಮಾಜ ಇನ್ನೂ ಮರೆತಿರಲಿಲ್ಲ. ವೀರಶೈವ ಬಸವೋತ್ತರ ಕಾಲದಲ್ಲಿ ಕಂಡು ಬಂದ  ಶೈವ ಪ್ರಭೇದ ಇದಕ್ಕೂ ಲಿಂಗಾಯತ ಧರ್ಮಕ್ಕೂ   ಯಾವುದೇ ಸಂಬಂದಗಳಿಲ್ಲ ಎಂದು ಹೇಳಿದರು. ಇದರಿಂದ ಇವರಿಗೆ ಮತ್ತು ಡಾ ಎಂ ಚಿದಾನಂದ ಮೂರ್ತಿಗಳಿಗೆ ಇವರಿಗೆ ಚರ್ಚೆ ಮಾತಿನ ಚಕಮಕಿ ನಡದೇ ಇತ್ತು.

೫ ) ಲಿಂಗಾಯತ ಇದು ಕನ್ನಡಿಗರು ಕಟ್ಟಿದ ಒಂದು ಸ್ವತಂತ್ರ ಧರ್ಮ ಉಳಿದ ಧರ್ಮಗಳು ಒಲಸೆ ಬಂದ ಧರ್ಮಗಳು ಎಂದು ಹೇಳಿದ್ದಕ್ಕೆ – ಇವರಿಗೆ ಮತ್ತು ಡಾ ಎಂ  ಹ೦ಪಾನಾ  ಇವರ ಮಧ್ಯೆ ಚರ್ಚೆ ಮಾತಿನ ಚಕಮಕಿ  ನಡೆದಿತ್ತು .

೬ ) ಮೇ ೧೦ ೨೦೧೫ ಹುಬ್ಬಳ್ಳಿಯಲ್ಲಿ  ಕಲ್ಯಾಣ ನಗರದ ರಹವಾಸಿ ಸಂಘದ ಸಭಾ ಭವನದಲ್ಲಿ ಪುಣೆಯ ಬಸವ  ಅಂತ ರಾಷ್ಟ್ರಿಯ  ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದವರು ಏರ್ಪಡಿಸಿದ  ಬಸವ ತತ್ವ ಸಮಾವೇಶದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ಮಠಗಳಲ್ಲಿ  ಬಸವನಿಲ್ಲಾ  ಸ್ವಾಮಿಗಳಿದ್ದಾರೆ.ಮತ್ತು ಸ್ವಾಮಿಗಳು ಮುಂದಿನ ದಿನಗಳಲ್ಲಿ  ಎಂ ಎಲ್ ಎ ಹಾಗೂ ಎಂ ಪಿ ಆಗುವದರಲ್ಲಿ ಸಂಶಯವಿಲ್ಲ.ಸ್ವಾಮಿಗಳು ತಮ್ಮ ಮೂಲ ಕರ್ತವ್ಯವ ಮರೆತು ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ  ಎಂದು ತುಂಬಾ ನೊಂದ ನೋವಿನ ಮನಸ್ಸಿನಿಂದಾ   ಹೇಳಿದರು .

೭ ) ಲಿಂಗಾಯತ ಒಂದು ಸ್ವತಂತ್ರ ಧರ್ಮ -ಅದಕ್ಕೆ ಶಾಸನ ಬದ್ಧ ಮಾನ್ಯತೆ ದೊರೆಯಬೇಕು ಈ ದಿಶೆಯಲ್ಲಿ ಡಾ ಶಿವಾನಂದ ಜಾಮದಾರ್  ಡಾ ಏನ್ ಜಿ ಮಹಾದೇವಪ್ಪ ಡಾ ವೀರಣ್ಣ ರಾಜೂರು ಮತ್ತು ಪುಣೆಯ ಬಸವ  ಅಂತ ರಾಷ್ಟ್ರಿಯ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದವರು,ದಾವಣಗೆರೆ ಆಸ್ಥೆ ವಹಿಸಬೇಕು ಎಂದು ವಿನಂತಿಸಿದರು.
೮ ) ಮರುದಿನ ಅಂದರೆ ೧೧ ಮತ್ತು ೧೨ ರ  ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಡಾ ಕಲಬುರ್ಗಿ ಅವರ ಹೇಳಿಕೆಗಳನ್ನು ಮಾಧ್ಯಮದವರು ಅರ್ಥವತ್ತಾಗಿ ಬಿಂಬಿಸಿದರು. ಅಷ್ಟೆ ಕಟುವಾಗಿ ರಂಭಾಪುರಿ ಜಗದ್ಗುರು ಮತ್ತು ನಿಡು ಮಾಮಿಡಿ ಶ್ರೀಗಳು ಸುಲಫಲ  ಸ್ವಾಮಿಗಳು ಡಾ. ಎಂ. ಎಂ. ಕಲಬುರ್ಗಿ ಅವರ ಹೇಳಿಕೆ ವಿರೋಧಿಸಿ ಹೇಳಿಕೆ ನೀಡಿದರು. ನಾಡಿನ ಯಾವ ಸ್ವಾಮಿಗಳು ಡಾ ಎಂ ಎ೦  ಕಲಬುರ್ಗಿ ಅವರ ಪರವಾಗಿ ಹೇಳಿಕೆ ನೀಡಲಿಲ್ಲ. ಮಾತಾಜಿ ಮಾತ್ರ ಡಾ. ಎಂ. ಎಂ. ಕಲಬುರ್ಗಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
 ೯ )ಡಾ ಎಂ ಎಂ ಕಲಬುರ್ಗಿ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿತ್ತು. ಕೆಲ ವೀರಶೈವ ಮತ್ತು ಲಿಂಗಾಯತ ಸ್ವಾಮಿಗಳು ಹಿಂದೂ ಸಂಘಟನೆಗಳ ಜೊತೆಗೆ ನೇರ ಸ೦ಬ೦ದಗಳನ್ನು ಹೊಂದಿದ್ದರು ಇನ್ನು ಕೆಲವರು ಪರೋಕ್ಷ ಹಿಂದುವಾದಕ್ಕೆ ಕೆಲಸ ಮಾಡಿದರು. ಮಠ ಗಳಲ್ಲಿ ಬಸವ ತತ್ವ ಮತ್ತು ಹೊರಗೆ ಸನಾತನ ಧರ್ಮದ ಪ್ರತಿಪಾದನೆಗೆ ಮುಂದಾಗಿದ್ದರು.

  ಸಂಶೋಧಕನ ಸಾವು ಸತ್ಯ ಸಿದ್ಧಾಂತದ್ದಲ್ಲ    
——————————————–
ಅಗಷ್ಟ   ೩೦ ಬೆಳಿಗ್ಗೆ ೮.೪೦ ಕ್ಕೆ ಒಬ್ಬ ಅನಾಮಿಕ ಬಂದು ಸರ್ ಇದ್ದಾರ ಎಂದು ಪ್ರಶ್ನಿಸಿದ .ಡಾ ಎಂ ಎಂ ಕಲಬುರ್ಗಿ ಅವರ ಪತ್ನಿ ಶ್ರೀಮತಿ ಉಮಾ ಅವರು
ಏನ್ರಿ ನಿಮ್ಮನ್ನು ಯಾರೋ ಬೇಟಿಗೆ ಬಂದಿದ್ದಾರೆ ಅಂತ ಹೇಳಿ ಅಡುಗೆ ಮನೆಗೆ ಹೋದರು. ಡಾ ಎಂ ಎಮೆ ಕಲಬುರ್ಗಿ ಅವ್ರು ಯಾರದೋ ಫೋನಿನಲ್ಲಿದ್ದರು
ಕೈಮಾಡಿದರು ಬಂದ ವ್ಯಕ್ತಿಗೆ .ಆಟ ನೇರವಾಗಿ ಅವರ ತೆಲೆಯ ಮಧ್ಯೆ  ೨ ಸುತ್ತು ಗುಂಡು ಹಾರಿಸಿ ಹೊರಗೆ ತನಗೆ ಒಬ್ಬ ಕಾಯುತ್ತಿದ್ದ ಮೋಟಾರ್ ಬೈಕಿನಲ್ಲಿ ಪರಾರಿಯಾದರು.ರಕ್ತದ ಮಡಿಲಿನಲ್ಲಿ ಡಾ ಎಂ ಎಂ ಕಲಬುರ್ಗಿ ಬಯಲಾದರು.  ೭೭ ವರ್ಷದ ಹಿರಿಯ  ಜೀವಿ   ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಂಡ ಕಲಬುರ್ಗಿ ಅಮಾಯಕರಾಗಿ ಕೊಲೆಯಲ್ಲಿ ಅಂತ್ಯ ಕಂಡರು .ಡಾ ಎಂ ಎಂ ಕಲಬುರ್ಗಿ ಬಿದ್ದ ಮರವಲ್ಲ ಬಿತ್ತಿದ ಬೀಜ .
ಕೊಲೆ ಪರ್ಯಾಯವಲ್ಲ ಅಥವಾ ಮಾರ್ಗವೂ ಅಲ್ಲ ಡಾ ದಾಭೊಲಕರ ,ಗೋವಿಂದ ಪಾನ್ಸರೆ ,ಡಾ ಎಂ ಎಂ ಕಲಬುರ್ಗಿ ಅವರ ಸ್ಪಷ್ಟ ನೇರ ನುಡಿಗಳು ಸಮಾಜಕ್ಕೆ ಅರ್ಥವಾಗಲಿಲ್ಲವೇನೋ? ಅಥವಾ ಅರ್ಥೈಸಿಕೊಂಡು ಜೀರ್ಣತೆ ಮಾಡಿಕೊಳ್ಳದ ಕೊಳಕು ಮನಸ್ಸಿನ ಶಕ್ತಿಗಳು ಇರುವವರೆಗೆ ಹೀಗೆ ಹತ್ಯೆಗಳು ನಡೆಯುತ್ತವೆ .ಅವರ ಬಂದೂಕಿನಲ್ಲಿ  ಇನ್ನೂ ಗುಂಡುಗಳಿವೆ ಅದನ್ನು ಎದರಿಸುವ ಗಂಡೆದೆಗಳು  ಮತ್ತೆ ಹುಟ್ಟಿ ಬರುತ್ತವೆ. ಹುಟ್ಟು    ಆಕಸ್ಮಿಕ ಬದುಕು ಅನಿವಾರ್ಯ ಸಾವು ನಿಶ್ಚಿತ .ಅಭಿವ್ಯಕ್ತಿ ಸ್ವಾತಂತ್ರವನ್ನು ಕೊಲ್ಲುವದು ಸರಿಯಲ್ಲ .ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಅಂತ ಹೇಳಿದ ಬಸವಣ್ಣನಂತೆ ಸಮಷ್ಠಿಗೆ ಪೂರಕವಾದ ಸತ್ಯ ಪ್ರತಿಪಾದನೆಯಲ್ಲಿ ಹೊರಟಾಗ ಇಂತಹ ಅನಾಹುತಗಳು ಜರುಗುವವು.ಕೊಲೆ ಹತ್ಯೆ ವ್ಯಕ್ತಿಯನ್ನು ಮಾಡಬಹುದೇ ಹೊರತು ಸತ್ಯವನ್ನಲ್ಲ,

ಡಾ ಎಂ ಎಂ ಕಲಬುರ್ಗಿ ಅವರ ಸಾಧನೆ ಅಪಾರ -ಕಲ್ಯಾಣ ಕ್ರಾಂತಿಯ ಕೊಂಡಿ
——————————————————————————–
ಜನನ 1938. ಮರಣ 30-8-2015.ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಾಪುರ ಜಿಲ್ಲೆ
ವೃತ್ತಿ ಲೇಖಕ, ಪ್ರಾಧ್ಯಾಪಕ, ವಿಶ್ರಾಂತ ಕುಲಪತಿ
ರಾಷ್ಟ್ರೀಯತೆ ಭಾರತೀಯ
ಪ್ರಕಾರ/ಶೈಲಿ ಕಥೆ, ಕವನ, ಕಾದಂಬರಿ
ವಿಷಯ ಕರ್ನಾಟಕ, ರಾಮಾಯಣ,
ಸಾಹಿತ್ಯ ಚಳುವಳಿ ನವೋದಯ ,  ವಚನ ಸಾಹಿತ್ಯ ಸಂಪಾದನೆ ಮತ್ತು ಪರಿಷ್ಕರಣೆ

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಯಿಯ ತವರು ಮನೆಯ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ ತಂದೆ ಮಡಿವಾಳಪ್ಪ  ಇವರ  ಊರು  ಸಿಂದಗಿ ತಾಲೂಕಿನ  ಯರಗಲ್ಲ . ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧ್ರುಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ.

ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದಿ ಕವನ ಸಂಕಲವನ್ನು ಪ್ರಕಟಿಸಿದ್ದಾರೆ.

ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.(1960) ಮತ್ತು ಎಂ..ಎ.(1962) ಪದವಿಗಳನ್ನು ಪ್ರಥಮ ದರ್ಜೆ, ಪ್ರಥಮ ಸ್ಥಾನದೊಂದಿಗೆ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕವಾದರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಸುಮಾರು ಹತ್ತೊಂಬತ್ತು ವರ್ಷಗಳು ಪ್ರಾಧ್ಯಾಪಕರಾಗಿದ್ದ ಕಲಬರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾಗಿದ್ದಾರೆ. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.

ಶಿಕ್ಷಣ
———-
ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು.ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ ನಲ್ಲಿ ಬಿ.ಎ.(ಕನ್ನಡ)ಪದವಿಯನ್ನು ಪ್ರಥಮ ವರ್ಗದಲ್ಲಿ, ಪ್ರಥಮ ಸ್ಥಾನ   ಮತ್ತು ಯು.ಜಿ.ಸಿ.ಶಿಷ್ಯವೇತನ,  ಸಹಾಯ  ಪಡೆದು ಗಳಿಸಿದರು. ಬಳಿಕ, ೧೯೬೨ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ವರ್ಗದಲ್ಲಿ, ಪ್ರಥಮ ಸ್ಥಾನ ಸ್ನಾತಕೋತ್ತರ ಪದವಿ ಪಡೆದರು.

ವೃತ್ತಿಜೀವನ
————–
೧೯೬೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. ೧೯೮೨ರಲ್ಲಿ ಅಲ್ಲಿಯೆ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಂಶೋಧನ ಕ್ಷೇತ್ರ
————————-
ಡಾ| ಎಂ.ಎಂ.ಕಲಬುರ್ಗಿಯವರು ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ, ಇತಿಹಾಸ, ಹಸ್ತಪ್ರತಿಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಲನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ ಶ್ರೀ ತೋಂಟದಾರ್ಯ ಮಠದ ಲಿಂಗಾಯತ  ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ , ಬೆಳಗಾವಿಯ ನಾಗನೂರು ಮಠದ ವಚನ ಅಧ್ಯಯನ ಅಕಾಡೆಮಿಯ ಮಾರ್ಗದರ್ಶಕರು ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಗೌರವ
———
ಡಾ| ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernceಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಾಹಿತ್ಯ
—————-
ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗು ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು, ಬರಹ, ಚಿಂತನೆ, ಪ್ರಕಟಣೆ, ಮಾರ್ಗದರ್ಶನ ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಸಾಹಿತ್ಯ , ಶಾಸನ, ಜಾನಪದ, ನಾಮ ವಿಜ್ಞಾನ, ಗ್ರಂಥ ಸಂಪಾದನೆ,ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ  “ಆಳ್ವಾಸ್ ನುಡಿಸಿರಿ 2011” ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.

ಕವನ -ನೀರು ನೀರಡಿಸಿತ್ತು

ನಾಟಕ
——–
ಕೆಟ್ಟಿತ್ತು ಕಲ್ಯಾಣ , ಖರೆ ಖರೆ ಸಂಗ್ಯಾಬಾಳ್ಯಾ   ಥ್ಯಾಕರೆ

ಸಂಶೋಧನೆ
——————–
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ.ಈ ಕಿರು ಟಿಪ್ಪಣಿಯಲ್ಲಿ ಅವರ ಮುಖ್ಯವಾದ ಕೃತಿಗಳನ್ನು ಮಾತ್ರ ಪಟ್ಟಿಮಾಡಲು ಸಾಧ್ಯ.. ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.

ಸಂಶೋಧನೆ
ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, 1973
ಮಾರ್ಗ’ – ನಾಲ್ಕು ಸಂಪುಟಗಳು 1988-2004
ಐತಿಹಾಸಿಕ’, 1984
ಕೆಲವು ಸಂಶೋಧನ ಗ್ರಂಥಗಳು
ಮಾರ್ಗ (೧,೨,೩,೪)
ಕನ್ನಡ ಹಸ್ತಪ್ರತಿ ಶಾಸ್ತ್ರ
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕನ್ನಡ ಸಂಶೋಧನ ಶಾಸ್ತ್ರ
ಕನ್ನಡ ನಾಮವಿಜ್ಞಾನ
ಧಾರವಾಡ ಜಿಲ್ಲೆಯ ಶಾಸನಸೂಚಿ
ಮಹಾರಾಷ್ಟ್ರದ ಕನ್ನಡ ಶಾಸನಗಳು
ಶಾಸನಗಳಲ್ಲಿ ಶಿವಶರಣರು
ಶಬ್ದಮಣಿದರ್ಪಣ ಸಂಗ್ರಹ
ಕನ್ನಡ ಕೈಫಿಯತ್ತುಗಳು
ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
ಸ್ವಾದಿ ಅರಸು ಮನೆತನ
ಸಾರಂಗಶ್ರೀ
ಶಾಸನಶಾಸ್ತ್ರ
ಅ. ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975 ಆ. ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980 ಇ. ಶಾಸನ ಸಂಪದ, 1968 ಈ. ಧಾರವಾಡ ಜಿಲ್ಲೆಯ ಶಾಸನಸೂಚಿ, 1975

ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು
ಕನ್ನಡ ಗ್ರಂಥಸಂಪಾದನಶಾಸ್ತ್ರ, 1972
ಕನ್ನಡ ಹಸ್ತಪ್ರತಿಶಾಸ್ತ್ರ
ಕನ್ನಡ ಸಂಶೋಧನಶಾಸ್ತ್ರ
ಕನ್ನಡ ಸ್ಥಳನಾಮವಿಜ್ಞಾನ
ಗ್ರಂಥಸಂಪಾದನೆ

ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
ಶಿವಯೋಗ ಪ್ರದೀಪಿಕಾ, 1976
ಕೊಂಡಗುಳಿ ಕೇಶಿರಾಜನ ಕೃತಿಗಳು, 1978
ಬಸವಣ್ಣ…ಬಸವಣ್ಣನ ಟೀಕಿನ ವಚನಗಳು. 1978
ಸಿರುಮನಾಯಕನ ಸಾಂಗತ್ಯ, 1983.
ಜಾನಪದ
ಜಾನಪದ ಮಾರ್ಗ, 1995
ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978
ಸೃಜನಶೀಲ ಬರೆಹಗಳು

ನೀರು ನೀರಡಿಸಿತ್ತು (ಕವನಗಳು)
ಕೆಟ್ಟಿತ್ತು ಕಲ್ಯಾಣ, (ನಾಟಕ)

ಸಂಪಾದನೆ
ಕನ್ನಡ ವಿಶ್ವವಿದ್ಯಾಲಯದ ಮೂಲಕ (೧)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (೨)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.

ಪ್ರಶಸ್ತಿ
‘ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ’
‘ಆರು ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ’
‘ರಾಜ್ಯೋತ್ಸವ ಪ್ರಶಸ್ತಿ’
‘ಪಂಪ ಪ್ರಶಸ್ತಿ’
‘ವರ್ಧಮಾನ ಪ್ರಶಸ್ತಿ’
‘ವಿಶ್ವಮಾನವ ಪ್ರಶಸ್ತಿ’
೨೦೦೬ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೨೦೧೪ ನೆ ಸಾಲಿನ ರಾಜ್ಯ ಸರಕಾರದ  ಬಸವಶ್ರಿ ಪ್ರಶಸ್ತಿ
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು.

ಡಾ ಎಂ ಎಂ ಕಲ್ಬುರ್ಗಿ ಅವರು ಬಸವ ಧರ್ಮದ ಕಟ್ಟಾ ಅಭಿಮಾನಿ ಮತ್ತು ಪ್ರತಿಪಾದಕರಾಗಿದ್ದರು. ಅವರ ಸಂಶೋಧನೆ ತೀವ್ರಕ್ಕೆ ಯಾವ ವಿದ್ವಾಂಸರು ನಿಲ್ಲುತಿರಲಿಲ್ಲ . ಕಂಡುಕೊಂಡ ಸತ್ಯವನ್ನು ನೇರವಾಗಿ ಮತ್ತು ಅಷ್ಟೆ ಚೊಕ್ಕಟ್ಟಾಗಿ   ಹೇಳುವ ಪರಿಜ್ಞಾನವನ್ನು ಹೊಂದಿದ್ದರು.ಸಮಗ್ರ ವಚನಗಳ ಸಂಪುಟ ೧ ೨  ಮತ್ತು ಈಗ ಮೂರನೆಯ ಆವೃತ್ತಿಯಲ್ಲಿದೆ. ಮಠಗಳಿಗೆ ಬೌದ್ಧಿಕ ಸ್ಥಾನ ಅಕಾಡೆಮಿ ಮೌಲ್ಯ ತುಂಬುವ ಕೆಲಸ ಮಾಡಿದರು.

ಡಾ ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ  ಧಾರವಾಡದಲ್ಲಿ  ಶ್ರೀ ಬಸವರಾಜ ಕಟ್ಟಿಮನಿ ಅವರ ಸಾಹಿತ್ಯ ಪ್ರತಿಷ್ಠಾನ ಬೆಳಗಾವಿಯಲ್ಲಿ ಇಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡು ಹಗಲಿರುಳು ದುಡಿದ ದಿವ್ಯ ಚೇತನಕ್ಕೆ ಕೊಟ್ಟ ಕಾಣಿಕೆ ಕೊಲೆಯೇ ?
ಒಂದು ಸಾಮ್ಯತೆ ಅಂದ್ರೆ ಡಾ ಕಲಬುರ್ಗಿ ದಾಭೊಲ್ಕರ ಗೋವಿಂದ ಪನಸಾರೆ ಹುಟ್ಟಿದ್ದು ನವೆಂಬರ ತಿಂಗಳಲ್ಲಿ. ಅವರೆಲ್ಲರ ಹತ್ಯೆಯು   ಒಂದೇ ರೀತಿಯಾಗಿದೆ.
ಕೊಲೆ ಹತ್ಯೆ  ಹಿಂಸೆ   ವ್ಯವಸ್ಥೆಯ ಪರಿವರ್ತನೆಗೆ ಕಾರಣವಾಗುವದಿಲ್ಲ. ಪ್ರಕ್ಷುಬ್ಧ ಪರಿಸ್ಥಿತಿಗೆ ಅರಾಜಕತೆಗೆ  ಕಾರಣವಾಗುತ್ತದೆ. ಇದು ಸ್ವತಂತ್ರ ರಾಷ್ಟ್ರ ಇಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರಬೇಕು.ಒಬ್ಬರ ಅಭಿಪ್ರಾಯವನ್ನು ತಾತ್ವಿಕ ಚೌಕಟ್ಟಿನಲ್ಲಿ ಅರಿಯುವ ಸ೦ಯಮಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಬೇಕು.
————————————————————————————————————–
ಡಾ ಶಶಿಕಾಂತ .ರುದ್ರಪ್ಪ .ಪಟ್ಟಣ -ಪೂನಾಅ“““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““““`

One thought on “ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

Leave a Reply

Back To Top