ಪ್ರಭಾ ಅಶೋಕ ಪಾಟೀಲ-ಕನ್ನಡ ನುಡಿ

ಕನ್ನಡ ರಾಜ್ಯೋತ್ಸವ ವಿಶೇಷ

ಪ್ರಭಾ ಅಶೋಕ ಪಾಟೀಲ

ಕನ್ನಡ ನುಡಿ

ಹಾಲ ಜೇನು ಸುರಿದಂತೆ
ರಸ ಕಾವ್ಯ ರಸಧಾರೆ ಯಂತೆ
ಅಕ್ಷರಗಳ ಸರಮಾಲೆ
ಮುತ್ತು ಹವಳ ರತ್ನದಂತೆ

ವ್ಯಂಜನಗಳ ಉದ್ಗಾರವು
ಸ್ವರಗಳಲ್ಲಿ ಜೇಂಕಾರವು
ನುಡಿಯಲು ಸಾಕ್ಷಾತ್ಕಾರ ವು
ಕರುನಾಡಿಗೆ ಸಿಂಗಾರ ವು

ಸುಸಲಿತ ಸುರಳಿತ ನುಡಿಯು
ಕವಿ ದಿಗ್ಗಜರ ಕಣ್ಮಣಿಯು
ಜ್ಞಾನಾರ್ಜನೆಗೆ ಸಾಗರ ವು
ಬಾ ರಿಸಿದೆ ಕನ್ನಡ ಡಿಂಡಿಮವು

ಮಗುವ ತೊದಲನುಡಿಯಲ್ಲಿ
ಪ್ರೇಮಿಗಳ ಒಲವಧಾರೆಯಲಿ
ಅಮ್ಮನ ವಾತ್ಸಲ್ಯದ ಅಲೆಯಲಿ
ಕನ್ನಡದ ಕಂಪಿನ ಸುಳಿಯಲಿ

ಕನ್ನಡವಾಗಲಿ ನಮ್ಮಸಿರು
ಜೀವನಕದುವೇ ಹಸಿರು
ತಾಯಿ ಭುವನೇಶ್ವರಿಯ ಮರೆಯದಿರು
ಕನ್ನಡತನವ ತೊರೆಯದಿರು


ಪ್ರಭಾ ಅಶೋಕ ಪಾಟೀಲ

Leave a Reply

Back To Top