ಜ್ಯೋತಿ , ಡಿ.ಬೊಮ್ಮಾಕವಿತೆ-ಯುದ್ದ , ಬರ ,

ಕಾವ್ಯ ಸಂಗಾತಿ

ಜ್ಯೋತಿ , ಡಿ.ಬೊಮ್ಮಾಕವಿತೆ-

ಯುದ್ದ , ಬರ ,

ಅಲ್ಲಿ ಸುರಿಯುತ್ತಿದೆ ಕ್ಷೀಪಣಿಗಳ ದಾಳಿ.
ಇಲ್ಲಿ ಉರಿಯುತ್ತಿದೆ ಬಿಸಿಲಿನ ದುಳ್ಳುರಿ.

ಅಲ್ಲಿ ರಕ್ತ ಉಂಡ ನೆಲ ಬಿಕ್ಕಳಿಸುತ್ತಿದೆ.
ಇಲ್ಲಿ ಮಳೆಗಾಗಿ ನೆಲ ಬಾಯ್ದೆರದಿದೆ.

ಅಲ್ಲಿ ಸೂರು ಕಳೆದುಕೊಂಡು ನಿರಾಶ್ರಿತರಾದವರ
ಆತಂಕ.
ಇಲ್ಲಿ ಸೂರಿನಡಿಯಲ್ಲೂ ನಿಟ್ಟುಸಿರಿನ ಸೂತಕ.

ಅಲ್ಲಿ ಛಿದ್ರ ಛಿದ್ರ ವಾದ ದೇಹಗಳು
ಇಲ್ಲಿ ರೈತರು ಜಿವಂತ ಶವಗಳು.

ಅಲ್ಲಿ ಮುಗಿಲಿಗೆ ಕಣ್ಣಿಟ್ಟಿರುವರು ಯಾವಾಗ
ಬೀಳುವವೊ ಬಾಂಬುಗಳೆಂದು.
ಇಲ್ಲಿಯು ನೋಡುತ್ತಿರುವೆವು ಆಕಾಶ
ಯಾವಾಗ ಸುರಿವವೋ ಎರಡು ಹನಿ ಎಂದು.

ಅಲ್ಲಿ ವಿಜೃಂಭಿಸುತ್ತಿದೆ ವೈರತ್ವ
ಇಲ್ಲಿ ಅಸಹಾಯಕವಾಗಿದೆ ಮನುಷತ್ವ.

ಯುದ್ದ ಘಟಿಸುವವು ರಾಷ್ಟ್ರ ಗಳ ನಡುವಿನ ದ್ವೇಷದಿಂದ
ಬರ ಸಂಭವಿಸುವದು ಪೃಕೃತಿಯ ಮುನಿಸಿನಿಂದ.

ಪರಿಣಾಮ ಜೀವಕುಲದ ನಾಶ.


ಜ್ಯೋತಿ , ಡಿ.ಬೊಮ್ಮಾ.

Leave a Reply

Back To Top