ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸೋಮಲಿಂಗ ಬೇಡರ ಆಳೂರ

ಬಾರಪ್ಪ ಮಳೆರಾಯ

ಅಂತರ್ಜಲ ಕುಸಿದಿದೆ
ನದಿಯೊಡಲು ಬರಿದಾಗುತ್ತಲಿವೆ
ಕೆರೆಯಂಗಳ ಬತ್ತುತ್ತಿವೆ
ಜಲಾಶಯಗಳು ಖಾಲಿಯಾಗುತ್ತಿವೆ
ಬಾರಪ್ಪ ಮಳೆರಾಯ

ನೆಲ ಬಿರುಕು ಬಿಟ್ಟಿವೆ
ಬೆಳೆಯೆಲ್ಲ ಬಾಡಿ ಬಕ್ಕಲಾಗಿವೆ
ದನಕರುಗಳಿಗೆ ಮೇವಿಲ್ಲ
ಬಿಸಿಲಿನ ತಾಪ ಹೆಚ್ಚಾಗುತ್ತಿದೆ
ಬಾರಪ್ಪ ಮಳೆರಾಯ

ಮುಂಗಾರು ಹಿಂಗಾರು ಮಳೆ
ಹದವಾಗಿ ಸುರಿಯಲಿಲ್ಲ
ಒಣ ಭೂಮಿಯಲ್ಲಿ ಬಿತ್ತಿದ ಬೀಜ
ಸುಟ್ಟು ಹೊರಟಿವೆ ಬಿಸಿಲಿಗೆ
ಬಾರಪ್ಪ ಮಳೆರಾಯ

ಒಣ ಬೇಸಾಯಕ್ಕೆ ಮಳೆಯಿಲ್ಲ
ನೀರಾವರಿ ಬೆಳೆಗೆ ನೀರಿಲ್ಲ
ಪ್ರಾಣಿ ಪಕ್ಷಿಗಳು ಹೌಹಾರಿವೆ
ಭೀಕರ ಬರಗಾಲದ ಛಾಯೆ ಮೂಡಿದೆ
ಬಾರಪ್ಪ ಮಳೆರಾಯ

ಮಳೆಯಿಲ್ಲದೆ ಛಳಿಯಾಗದು
ಛಳಿಗಾಲವಿಲ್ಲದೆ ಬೇಸಿಗೆ ಹೇಗೆ?
ಅದರ ನೆನಪಾದರೆ ಮೈಮನ ಸುಡುತ್ತದೆ
ಬದುಕು ಕರಾಳವೆನಿಸುತ್ತದೆ
ಬಾರಪ್ಪ ಮಳೆರಾಯ

ದುಡಿಯುವ ಕೈಗಳಿಗೆ ಕೆಲಸವಿಲ್ಲ
ಭೂಮಾಲಿಕರಿಗೆ ಸಾಲದ ಶೂಲ
ಸಾಮಾನ್ಯ ಜನರ ಬದುಕು ದುಸ್ತರವಾಗಿದೆ
ಗುಳೆ ಹೊರಟಿದ್ದಾರೆ ಕೂಲಿಯರಸಿ
ಬಾರಪ್ಪ ಮಳೆರಾಯ.
……………………..

ಸೋಮಲಿಂಗ ಬೇಡರ ಆಳೂರ

About The Author

Leave a Reply

You cannot copy content of this page

Scroll to Top