ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ಹೃದಯ ಕಮಲವಾಗಿಬಿಟ್ಟೆ

ನನ್ನೊಳಗಿನ ನಿನ್ನ ಹುಡುಕ ಹೊರಟೆ
ಸಣ್ಣ ಹುಸಿಮುನಿಸಿನಾಚೆ ತಗಾದೆ ತೆಗೆದೆ
ಕಣ್ಣ ಬಣ್ಣದಿ ಗೀಚ ಹೊರಟೆ
ತಣ್ಣ ನಗೆಯ ಹರಿಸಬಾರದೇ.

ಮನದ ಮೂಲೆಯಲಿ ಅವಿತು ಬಿಟ್ಟೆ
ಸರಳ ಸಜ್ಜನಿಕೆಗೆ ರೂಪವಾದೆ
ತೋರಿಕೆಯ ಮರೆತು ಹೋದೆ
ಸರಿದೂಗಿಸಲು ಕಾಲವ ಮರೆತೆ.

ವೇದನೆಗೆ ಜೊತೆಗಾರನಾಗಿಬಿಟ್ಟೆ
ರೋಧಿಸುವಾಗ ಸಂತೈಸುವ ಕರವಾಗಿ ಬಿಟ್ಟೆ
ಮುದ್ದಿಸಲು ನಾನಾದೆ ರಾಧೆ
ಶುದ್ಧೀಕರಿಸಲು ನೀ ಕೃಷ್ಣ ನಾಗಿಬಿಟ್ಟೆ.

ಒಳಿತನು ಮೆಲುಕು ಹಾಕಲು ಕಲಿಸಿಕೊಟ್ಟೆ
ಬಳಲಿ ಬೆಂಡಾದ ತನುವಿಗೆ ಚೇತಕನಾಗಿಬಿಟ್ಟೆ
ಕಾನನಕೂ ನಗುವುದಕೆ ವರವಾಗಿಬಿಟ್ಟೆ
ಆನು ತಾನುಗಳ ಮಧ್ಯದ ಗೆರೆ ಅಳಿಸಿ ಹಾಕಿಬಿಟ್ಟೆ.

ನೀನಲ್ಲದೇ ನನಗಾರು ನಿಷ್ಟೆ
ಕರ್ಮ ಫಲದ ಅರಿವು ಮೂಡಿಸಿ ಬಿಟ್ಟೆ
ನಿತ್ಯ ನೂತನ ಕಲರವಕೆ ಹೊಸ ವೇಶ ಕೊಟ್ಟೆ
ನೀ ಎನ್ನ ಹೃದಯ ಕಮಲ ವಾಗಿಬಿಟ್ಟೆ.


ರೇಷ್ಮಾ ಕಂದಕೂರ

About The Author

Leave a Reply

You cannot copy content of this page

Scroll to Top