ಪ್ರೊ. ಸಿದ್ದು ಸಾವಳಸಂಗ ಕವಿತೆ-ಕೈದೀವಿಗೆ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಕೈದೀವಿಗೆ

ಹಗಲಿರುಳು
ದುಡಿದ ಸೂರ್ಯ
ವಿಶ್ರಾಂತಿಗೆಂದು ತೆರಳಿದಾಗ
ಇರುಳ ಕತ್ತಲೆಯನೋಡಿಸಲು
ಬೆಳಕು ನೀಡುವನು ಚಂದಿರ !
ಜಗದ ಪ್ರೇಮಿಗಳ
ಪಿಸುಮಾತಿಗೆ ಕಿವಿಯಾಗುವನು !
ಹಸಿದ ಹಸುಳೆಗೆ
ಊಟ ಮಾಡಿಸಲು
ತಾಯಿ ತೋರುವ
ಆಗಸದ ಅದ್ಭುತವಾಗುವನು !
ರೈತರ ಸುಗ್ಗಿ ಕಾಲಕ್ಕೆ ಹಿಗ್ಗಾಗುವನು !
ಮಹಿಳೆಯರ ಮದರಂಗಿಗೆ ಹಗಲಿರುಳು
ದುಡಿದ ಸೂರ್ಯ
ವಿಶ್ರಾಂತಿಗೆಂದು ತೆರಳಿದಾಗ
ಇರುಳ ಕತ್ತಲೆಯನೋಡಿಸಲು
ಬೆಳಕು ನೀಡುವನು ಚಂದಿರ !
ಜಗದ ಪ್ರೇಮಿಗಳ
ಪಿಸುಮಾತಿಗೆ ಕಿವಿಯಾಗು
ಕಿಲಕಿಲ ನಗುವಾಗುವನು !
ಗಂಡ ಹೆಂಡತಿಯರ
ಬಿಸಿಯುಸಿರಿಗೆ ಕಿಟಕಿ ಆಚೆಗೆ
ಸಾಕ್ಷಿಯಾಗುವನು !
ಮತ್ತೇರಿಸುವ ಮುತ್ತಿಗೆ ಹೊತ್ತಾಗುವನು !
ಹೆಣ್ಣಿನ ಹಣೆಗೆ ಸಿಂಧೂರವಾಗುವನು !
ಸಾಧನೆಯ ಹಾದಿಯಲಿ
ಹಗಲಿರುಳು ದುಡಿಯುವವರಿಗೆ
ಕೈ ದೀವಿಗೆಯಾಗುವನು !
ಸುಸ್ತಾದವರಿಗೆ ಬೆಚ್ಚನೆ ಹಾಸಿಗೆಯಾಗುವನು !
ಜಗವೆಲ್ಲ ಒಲುಮೆಯಿಂದ ಕರೆಯುವ ಚಂದಮಾಮನಾಗುವನು !
ಕವಿಗಳ ಕಾವ್ಯಕ್ಕೆ ವಸ್ತುವಾಗುವನು !!


ಪ್ರೊˌ ಸಿದ್ದು ಸಾವಳಸಂಗ

One thought on “ಪ್ರೊ. ಸಿದ್ದು ಸಾವಳಸಂಗ ಕವಿತೆ-ಕೈದೀವಿಗೆ

  1. ಹಲ್ಲೊ ಮಿತ್ರರೇ ನಿಮ್ಮ ಕವಿತೆ ಕೈದೀವಿಗೆ ಅತ್ಯುತ್ತಮವಾಗಿದೆ .ಸೂರ್ಯ ಚಂದ್ರರ ದಿನಚರಿಯನ್ನು ಓದುಗರಿಗೆ ನೆನಪು ಮಾಡಿಕೊಟ್ಟಿದೆ. ಕಾವ್ಯಕೃಷಿ ಹೀಗೆ ಮುಂದವರೆದರೆ ಉತ್ತಮ.ಶುಭಾಶಯಗಳು.ಎಸ್ ವಿ ಮನಗುಂಡಿ ಧಾರವಾಡ

Leave a Reply

Back To Top