ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ವೃತ್ತಿ _ನಿವೃತ್ತಿ

ಬದುಕಿಗೊಂದು ಭರವಸೆಯ ನೆಲೆ
ಕಾಯಕವೇ ನಿರಂತರ ಸೆಲೆ
ಬದುಕುವುದು ಒಂದು ಕಲೆ
ದುಡಿದಾಗಲೇ ನಿನಗೊಂದು ಬೆಲೆ.

ವಿದ್ಯೆ ಕಲಿತು ಮುಗಿಸಿ
ಅಲೆದೆ ಜೀವನಕ್ಕಾಸರೆ ಬಯಸಿ
ಬಂತು ಅದೃಷ್ಟ ನಿನ್ನ ಅರಸಿ
ನೌಕರಸ್ಥ ದೊರೆ ನೀನೇಂದೆನಿಸಿ.

ದುಡಿದು ದಣಿದವನೇ ಬಲ್ಲ
ಆ ಬೆವರ ಸಿರಿಯನ್ನೆಲ್ಲ.
ಅಳುಕದಿರೆ ಏರುಪೇರಿಗೆ ದಿನವೆಲ್ಲ.
ಆಗಲೇ ಜೀವನ ಸವಿ ಬೆಲ್ಲ.

ಅರವತ್ತಕ್ಕೆ ಆಯಸ್ಸು ಸುತ್ತಿ
ಬಂದಾಗ ತೊರೆಯಬೇಕು ವೃತ್ತಿ
ಉದ್ಯೋಗಸ್ಥರಿಗೆ ಕಟ್ಟಿಟ್ಟ ಬುತ್ತಿ
ಇದು ವಯೋ ಸಹಜ ನಿವೃತ್ತಿ.

ಜೀವಕೆ ಆಸರೆ ಎಂಬ ಬೆಳಕು
ಇಳಿ ವಯಸ್ಸಿನಲ್ಲಿ ಬೇಕು
ಹೀಗೋ ಹಾಗೋ ಬಾಳಬೇಕು
ಬಾಳು ಸುಖಾಂತ್ಯ ಕಂಡರೆ ಸಾಕು.


ಡಾ. ಮಹೇಂದ್ರ ಕುರ್ಡಿ

About The Author

1 thought on “ಡಾ. ಮಹೇಂದ್ರ ಕುರ್ಡಿಯವರ ಕವಿತೆ-ವೃತ್ತಿ _ನಿವೃತ್ತಿ”

Leave a Reply

You cannot copy content of this page

Scroll to Top