ವಚನಶ್ರೀ ಶಿವಕುಮಾರ ಪಾಟೀಲ ಬಸವ ಕರುಣಿಸಿದ

ಕಾವ್ಯ ಸಂಗಾತಿ

ವಚನಶ್ರೀ ಶಿವಕುಮಾರ ಪಾಟೀಲ

ಬಸವ ಕರುಣಿಸಿದ

ಜ್ಞಾನದಲ್ಲಿ ಎಲ್ಲರನ್ನ
ದಿಗ್ಭ್ರಮೆ
ಗೊಳಿಸಿದ
ಜ್ಞಾನದ ಶಿಖರನು

ಗುಣದಲ್ಲಿ ಗುಣಕೆ
ಒಡೆಯನು
ಚಲುವಿನಲ್ಲಿ
ಚಂದಿರನನ್ನೆ ನಾಚಿಸುವವನು

ನಡೆನುಡಿ ಒಂದಾಗಿಸಿಕೊಂಡ
ನೀತಿ ಧರ್ಮದಲ್ಲಿ
ನಡೆಯುವ
ಧರ್ಮ ರಾಯನು

ನನಗೆಂದೆ ಆ ಬಸವ ಕರುಣಿಸಿದ
ಬತ್ತದ ಒಲವಿನ ಕಡಲವನು
ಕನಸಲ್ಲೂ ಅರೆಗಳೆಗೆ ನನ್ನ
ತೊರೆಯದವನು


ವಚನಶ್ರೀ ಶಿವಕುಮಾರ ಪಾಟೀಲ

Leave a Reply

Back To Top