ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಶೋಕ ಬೇಳಂಜೆ

ಬದುಕಿನ ಪಾಠ

ನೋವಿನೊಂದಿಗೂ ಬದುಕಿನ ಪಾಠವಿದೆ
ಅಂತರ್ಯದ ಮಂಥನಕೆ ಅರಿವು ಚಿಗುರದೇ
ಬೆರೆತು ಬಾಳುವ ಸದ್ಗುಣ ಸಾರ್ಥಕ
ಏಕಾಂಗಿತನ ಜೀವನವೇ ನರಕ

ಎಲ್ಲಕ್ಕಿಂತ ಮುನ್ನ ಜ್ಞಾನವ ಗಳಿಸು
ಅಹಮಿಕೆಯನ್ನು ಮೆಲ್ಲನೆ ಒರೆಸು
ಅಯ್ಯಾ ಅವ್ವಾ ಎಂದರೆ ಸ್ವರ್ಗ
ಬೇಡ ಎಂದಿಗು ಕ್ರೌರ್ಯದ ಮಾರ್ಗ

ರಂಗಾದ ಮಾತಿಗೆ ಮರುಳಾಗದಿರು
ಹೊಗಳಿಕೆ ಸಿಹಿ ಆದರೂ ಬಯಸದಿರು
ಮನವರಿತ ಸ್ನೇಹ ಅಪ್ಪಟ ಚಿನ್ನ
ಶುಭ್ರವಿರಲಿ ಬದುಕಿನ ಬಣ್ಣ

ಮಾತಿಗೂ ಕೃತಿಗೂ ವೆತ್ಯಾಸ ಇರದಿರಲಿ
ನುಡಿದಂತೆಯೇ ನಡೆಯೂ ಇರಲಿ
ಬೇಡ ಸನ್ಮಾನ ಅರ್ಹತೆ ಇಲ್ಲದಿರೆ
ಪ್ರಕೃತಿ ಇರುವಾಗ ಕಲಿಕೆಗೇಕೆ ಕೊರೆ


ಅಶೋಕ ಬೇಳಂಜೆ

About The Author

Leave a Reply

You cannot copy content of this page

Scroll to Top