ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ

ಮಣಿಪುರ ಮಸಣಪುರ

ಶತ ಶತಮಾನಗಳಿಂದ
ಮಣಿಪುರ ಕುಕೆ ಮೈತೇಯಿಗಳು
ಮತಾಂಧತೆಯಿಂದ ನಲುಗುತ್ತಿದೆ
ಮಾನವೀಯತೆ ಸೊರಗುತ್ತಿದೆ

ನ್ಯಾಯ ದೇವತೆಯ ತೀರ್ಪಿಗೂ
ಸಂಧಾನಗೊಳ್ಳದ ಪಂಗಡಿಗರು
ಅಸಮಾಧಾನ ಹೊಗೆಯಲ್ಲಿ
ಕೋಮುಗಲಭೆ ದಳ್ಳುರಿ ಗಗನ ಚುಂಬಿತ್ತು

ಹೊತ್ತಿತ್ತು ಬೆಂಕಿಯ ಜ್ವಾಲೆ
ಭವ್ಯ ಕಟ್ಟಡಗಳು ನೆಲಸಮ
ನಾಲೆಯಾಗಿ ಹರಿಯಿತು ಜನ ನೆತ್ತರ
ಮುಗಿಲು ಮುಟ್ಟಿತ್ತು ಬದುಕಿದವರ ಅಕ್ರಂದನ

ನಾರಿ ನಾರಾಯಣಿಯಾಗಿ
ಪೂಜಿಸುವ ದೇಶದಲ್ಲಿ
ಬೆತ್ತಲೆಗೊಳಿಸಿ ಮೆರಸಿದರು
ಭವ್ಯ ಸಂಸ್ಕೃತಿ ನಾಚಿಸಿದರು

ಪುಂಡ ಪೋಕರ್ ದುಷ್ಟತನಕ್ಕೆ
ಸ್ಪಾರ್ಥ ರಾಜಕೀಯ ಹಗೆತನಕ್ಕೆ
ಅಮಾಯಕರು ಬಲಿಯಾಗುತ್ತಿದೆ
ಮಣಿಪುರ ಮಸಣಪುರವಾಗಿದೆ

ಸೃಷ್ಟಿಯ ಪಂಚಭೂತಗಳು
ಮಾಡಲಿಲ್ಲ ಭೇಧಭಾವಗಳು
ಮಾನವನಲ್ಲಿ ಒಂದಾಗದ ಭೂತಗಳು
ಜಾತಿ ಧರ್ಮಗಳಾಗಿ ಬೆರ್ಪಟ್ಟವು ಜಗದಲ್ಲಿ


ಜಯದೇವಿ ಆರ್ ಯದಲಾಪೂರೆ 

About The Author

Leave a Reply

You cannot copy content of this page

Scroll to Top