ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಮಳೆಗಾಲದ ಸಂಭ್ರಮ

ಕೋಲಮಿಂಚು ಗುಡುಗಿನ ನರ್ತನ
ಕಾರ್ಮೋಡಗಳ ಘರ್ಷಣೆಯ ಗಗನ
ಭೂತಾಯಿ ಮಳೆರಾಯನ ಸ್ವಾಗತಿಸಲು
ಸುರಿದು ಮಳೆಗೆ ತಣಿದ ಭೂ ವದನ

ಮಳೆಗಾಲದ ಮಳೆ ಬಂತು ಮಳೆ
ರೈತರ ಮುಖದಲ್ಲಿ ಕಂಡಿತು ಕಳೆ
ನದಿ ಹಳ್ಳ ಕೊಳ್ಳ ತುಂಬಿ ನಗುತಿರೆ
ಸೃಷ್ಟಿ ಸೊಬಗಿಗೆ ಆಸರೆಯಾದ ಧರೆ

ಭೋರ್ಗರೆವ ಜಲಪಾತಗಳ ಗರ್ಜನ
ಸಂಭ್ರಮಿಸುವ ಪ್ರವಾಸಿಗಳ ಮನ
ಕೈ ಬೀಸಿ ಕರೆವ ಜಲಧಾರೆಯಲ್ಲಿ
ಮಳೆಯಲ್ಲೆ ತನುವಿಗಾದ ಅಭ್ಯಂಜನ

ಮಕ್ಕಳೆಲ್ಲ ಮಳೆಯಲ್ಲಿ ಒದ್ದೆಯಾಗಿ 
ಜಿಗಿತ ಕುಣಿದಾಟದ ಆಟ ಹುರುಪಾಗಿ
ಹರಿವ ನೀರಿಗೆ ಬಿಟ್ಟ ಕಾಗದದ ದೋಣಿ
ಮುಳಗದೆ ಗೆಲುವು ತಂದಿತು ಚಿನ್ನರಿಗಾಗಿ

ಸಕಲ ಜೀವರಾಶಿಗಳಿಗೆ ಬದುಕಲು
ಮರಗಳಿಂದ ಪರಿಸರ ಬೆಳೆಯಲು
ವರ್ಷಾಋತು ಆಗಮನವಾಗುತ್ತಿದ್ದಂತೆ
ಹಸಿರು ಹಸಿರಾಯಿತು ನಿಸರ್ಗದ ಮಡಿಲು


ಸುಲೋಚನಾ ಮಾಲಿಪಾಟೀಲ

About The Author

Leave a Reply

You cannot copy content of this page

Scroll to Top