ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಮತಾ ಶಂಕರ್

ನೋಡಿ ನೋಡಿ ಗಣ ಕೂಡಿ
ಹಿರಿತಲೆಗಳೆಲ್ಲಾ ಗೋಣು ಆಡಿ
ಮನೆ ಮನೆತನ ಎಲ್ಲಾ ತೂಗಿ
ಗುಣ ನೋಡಿ ತಂದ ಹೆಣ್ಣು ಆವಳು

ಸೇರಕ್ಕಿ ಬೆಲ್ಲ ಒದ್ದು
ಹೊಸ್ತಿಲಿಗೆ ಮೊಳೆ ಹೊಡೆದು
ಹೊಸ ಬಣ್ಣ ಬಳಿದ ಮನೆಗೆ
ಬಲಗಾಲಿಟ್ಟು ಒಳ ಬಂದು
ಬಂಧ ಬೆಸೆದವಳು

ಕುಡಿ ಮೀಸೆ ಚೆಲುವಂಗೆ
ತುಟಿ ತುದಿಯ ನಗುವಿಗೆ
ಒಲಿದವಳು ನಾನು
ಬಳಸಿ ಹಬ್ಬಿದ ಬಳ್ಳಿಯಂತೆಂದು
ಬೀಗಿದವಳು

ವರುಷವೆರಡಳಿಯುವುದು
ತಡವೆ
ಕೂಸೆರಡನಡೆದು ಮನೆತನದ ಹೆಸರು ಬರೆದವಳು

ಆದರೂನೂ

ಯಾವ ಗಾಳಿ ಸೋಕಿದ್ದೋ
ಗೂಬೆ ಕಣ್ಣು ತಾಕಿದ್ದೋ
ತಿಳಿಯೊಲವ ಕೊಳದಲ್ಲಿ
ಬಿದ್ದ ಕಲ್ಲು ಯಾರದ್ದೋ

ಮೆಚ್ಚಿದವರೆ ಎಲ್ಲ…. ಚುಚ್ಚಿದವರು ಯಾರಿಲ್ಲ
ಹುಚ್ಚು ಮನಸಿನ ಹತ್ತರಲ್ಲಿ
ಎಷ್ಟನೇ ಮುಖ ತೆರೆಯಿತೋ
ಅಚಾನಕ್ಕು ವಿಚ್ಛೇದನ ಮಾತು
ದಂಗಾಗಿ ಮನೆ ಕೂತು
ಕಾರಣವೇ ತಿಳಿಸದೆ ಬೇರ್ಪಟ್ಟ
ಮುದ್ದು ಜೋಡಿ
ಬೆಳೆದ ಮಕ್ಕಳು ಅವರವರೇ ಹಿಡಿದು ತಮ್ಮ ತಮ್ಮ ದಾರಿ
ನಡೆದೇ ಬಿಟ್ಟರು….

ಅವನು ಸವರಿದ ಮತ್ತಾರದೋ ಗಲ್ಲ
ಅವಳು ಉಂಡ ಮತ್ತಾವುದೋ ಬೆಲ್ಲ
ತಾರೆಗಳು ಮರೆಯಾಗಿ ಉಳಿದಿದೆ ಆಕಾಶ
ಉಳಿದ ಕಥೆ
ಲೋಕಕ್ಕೇಕೇ ಬೇಕು….
ಎದೆಯೊಳಗೇ ಇರಬೇಕು….


ಮಮತಾ ಶಂಕರ್

About The Author

6 thoughts on “ಮಮತಾ ಶಂಕರ್ ಕವಿತೆ-ಆದರೂನೂ!”

  1. ನೊಂದ ಮನದ ಅಳಲು..ವೇದನೆ..ಎದೆಯೊಳು ಅವಿತಿಟ್ಟ ಭಾವ… ಸುಂದರ ರಚನೆ..

    ಹಮೀದಾ ಬೇಗಂ. ಸಂಕೇಶ್ವರ.

  2. ಹೆಣ್ಣಿನ ನಿಜವಾದ ಪರಿಸ್ಥಿತಿ… ಮನದ ಅಳಲು…. ಸುತ್ತಲಿನ ಸಮಾಜದ ಮನೋಸ್ಥಿತಿ
    ಯನ್ನು ಎಳೆ ಎಳೆ ಯಾಗಿ ಬಿಚ್ಚಿಟ್ಟ0ತಾಗಿದೆ… ನಿಮ್ಮೀ ಕವನ…. ಇದರಲ್ಲಿನ ಸಾಲುಗಳು
    ಹಲವಾರು ಜನರ ಬಾಳಿನಲ್ಲಿ ನಡೆದ ವಾಸ್ತವ
    ಸ್ವರೂಪ…. ಮಮತಾ

    1. ಮಮತಾಶಂಕರ್

      ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಸ್ಪಂದನೆಗೆ ❤️

Leave a Reply

You cannot copy content of this page

Scroll to Top