ಕಾಡಜ್ಜಿ ಮಂಜುನಾಥ ಕವಿತೆ-ಸಂಘರ್ಷ ಏಕೆ” !!!

ಕಾವ್ಯ ಸಂಗಾತಿ

ಸಂಘರ್ಷ ಏಕೆ” !!!

ಕಾಡಜ್ಜಿ ಮಂಜುನಾಥ

ಭತ್ತ ಬೆಳೆಯುವ
ಭೂಮಿ , ನೀರಿಗೂ ಇರದ
ಸಂಘರ್ಷ,
ನಾಡಿನ
ದೊರೆಗಳಿಗೇಕೆ;

ಬೀಜ ಹಾಕಿ,ನೀರು ಹರಿಸಿ
ಕೆಲಸ ಮಾಡಿದ
ರೈತನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಮಳೆ ಸುರಿಸಿದ ಮೋಡ
ಬಿಸಿಲು‌ ನೀಡಿದ
ಸೂರ್ಯನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಮೊಳೆತ ಬೀಜಕೂ
ಬಲಿತ ಭತ್ತಕೂ
ಉಸಿರು ನೀಡಿದ ಗಾಳಿಗೂ
ಇರದ ಸಂಘರ್ಷ
ದೊರೆಗಳಿಗೇಕೆ!

ಉರಿದ ಬೆಂಕಿಗೂ
ಬೆಂದ ಅಗುಳಿಗೂ
ರುಚಿ ನೀಡಿದ
ಉಪ್ಪಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;

ಹಸಿದ ಹೊಟ್ಟೆಗೂ
ಅನ್ನವಿಟ್ಟ ಕೈಯಿಗೂ
ಕವಳ ಸವಿದ ನಾಲಿಗೆಗೂ
ಇರದ ಸಂಘರ್ಷ
ದೊರೆಗಳಿಗೇಕೆ;

ಬೆಳೆಸಿದ ನಿರ್ಸಗಕೂ
ನೆರಳು ನೀಡಿದ ಮೇಘಕೂ
ಕಾಯುವ ದೇವರಿಗೂ
ಇರದ ಹೆಸರಿನ
ಸಂಘರ್ಷ
ದೊರೆಗಳಿಗೇಕೆ !!


ಕಾಡಜ್ಜಿ ಮಂಜುನಾಥ

One thought on “ಕಾಡಜ್ಜಿ ಮಂಜುನಾಥ ಕವಿತೆ-ಸಂಘರ್ಷ ಏಕೆ” !!!

  1. ತುಂಬಾ ಚೆನ್ನಾಗಿದೆ ಸಾರ್ ಸೂಪರ್

Leave a Reply

Back To Top