ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ತೋಟ ಸಿರಿ

ಹೂವಿನ ತೋಟವು ನೋವನು ಮರೆಸಲು
ನಾವಿರುವಲ್ಲಿ ನಗುತಿರಲಿ..

ಹಣ್ಣಿನ ನಂದನ ಕಣ್ಣನು ತುಂಬಲು
ಮಣ್ಣಿನ ಕೊಡುಗೆ ನಮಗಿಹುದು.

ಹೊಲದಲಿ ಕಳವೆಯ ಚೆಲುವನು ನೋಡಲು
ನಲಿವಿನ ಸುಗ್ಗಿ ನಳನಳಿಸಿ ..

ಕಂಗಿನ ತೋಟದಿ ರಂಗಿನ ಫಲಗಳ
ಕಂಗಳ ಸೆಳೆವ ಹರುಷವಿದೆ.

ಪೂಗದ ಬನದಲಿ ಸಾಗಲು ಸಂತಸ
ಬೇಗೆಯ ತಡೆವ ನೆರಳಿರಲು..

ಬಗೆ ಬಗೆ ಬಣ್ಣದ ಸೊಗಸಿನ ಕುಸುಮದ
ನಗೆಯನು ನೋಡಿ ಹರುಷವಿದೆ ..

ಚೆಲುವಲಿ ಮನಸಿಗೆ ನಲಿವಿದೆ ತಿಳಿಯಿರಿ
ಬಳಲಿಕೆ ನೀಗೆ ಹಸಿರಸಿರಿ.

ನಂದನ =ತೋಟ,ಕಳವೆ=ಬತ್ತ, ಪೂಗ =ಅಡಕೆ,ಬೇಗೆ=ತಾಪ,ದುಃಖ; ನೀಗೆ=ನಿವಾರಿಸಲು.


ಗುಣಾಜೆ ರಾಮಚಂದ್ರ ಭಟ್


About The Author

Leave a Reply

You cannot copy content of this page

Scroll to Top