ಪ್ರೊ. ಸಿದ್ದು ಸಾವಳಸಂಗ-ತನಗಗಳು

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ತನಗಗಳು


ಅಳಿಲು ಸೇವೆ ಸಾಕು
ಸಂತೃಪ್ತಿ ದೊರಕಲು
ದೊಡ್ಡದು ಸಾಧನೆಗೆ
ಅದುವೇ ಅಡಿಗಲ್ಲು !!

ವಿಧಿಲಿಖಿತವನು
ಮೀರುವರಾರು ಎಂದು
ಸುಮ್ಮನಿರದೆ ಪ್ರಯ
ತ್ನದಿ ಫಲವಿಹುದು !!

ಎಳ್ಳ ಅಮವಾಸ್ಯೆಗೆ
ಎಳ್ಳಕಾಳು ಬಿಸಿಲು
ಹೊಲದಲ್ಲಿ ಬೆಳೆಯು
ರೈತನಿಗೆ ಹುಲುಸು !!

ಇಲಿಗಳ ರಾಜ್ಯದಿ
ಬೆಕ್ಕಿನದು ದರ್ಬಾರು
ಸಣ್ಣವರ ಮೇಲೆಯೇ
ದೊಡ್ಡವ್ರ ಅಧಿಕಾರು !!

ಎಲ್ಲ ದಾನಗಳಲ್ಲಿ
ಶ್ರೇಷ್ಠವು ಸಮಾಧಾನ
ಇಲ್ರಿ ಜೀವನದಲ್ಲಿ
ಒಂದಷ್ಟು ನಿಧಾನ !!

ವೃದ್ಧರದು ಯಾವತ್ತೂ
ಕಿರಿಕಿರಿಯೇ ಸರಿ
ಬಾಲ್ಯದಲ್ಲಿ ನೀನೇನು
ಸುಮ್ಮನಿದ್ದೆಯೇ ಮರಿ !!

ಸತ್ತವರಿಗೆ ಸ್ವರ್ಗ
ನಿಜವಿರಬಹುದು
ಜೀವಂತ ನರಕವೇ
ನಿತ್ಯ ಹಲವರದು !!

ಯುದ್ಧ ಕಾಲದಲ್ಲಿಯೇ
ಶಸ್ತ್ರಾಭ್ಯಾಸ ಸರಿಯೆ ?
ಪರೀಕ್ಷಾ ದಿನದಂದು
ಓದಿ ಪಾಸಾಗಬಹುದೆ ?

ಮಹಿಳೆಯರಿಗಾಗಿ
ಮಹಿಳೆಯ ದುಡಿತ
ಕೆಲವು ಪುರುಷರು
ಕಂಠಪೂರ್ತಿ ಕುಡಿತ !!
೧೦
ಎಳ್ಳು ಬೆಲ್ಲವ ಕೊಟ್ಟು
ತಿಳಿಯಾಗಲಿ ಮನ
ಸಂಕ್ರಾಂತಿ ಶುಭದಿನ
ಹೊಂದಿಕೊಳ್ಳುವ ದಿನ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top