ಮೇ-ದಿನದ ವಿಶೇಷ

ಡಾ ಸುರೇಶ ನೆಗಳಗುಳಿ

ಕಾರ್ಮಿಕನಿಗೇಕೆ ದಿನ!

ದುಡಿವ ಕರ ಒರಟು ನಿಜ ಮನವಿಹುದು ಕೋಮಲ
ಗುಲಾಬಿ ಗಿಡ ಮುಳ್ಳ ನೆಲೆ ಹೂವಿಹುದು ಕೋಮಲ

ದರ್ಪದಲಿ ಮೆರೆಯವರು ಧನಿಕ ಜನ ಕೆಲವೊಮ್ಮೆ
ಶಿರಬಾಗಿ ನಮಿಸುವ ರೈತನೆದೆಯಿಹುದು ಕೋಮಲ

ನಲ್ಲೆಯೊಡೆ ಸರಸವನು ಆಡದಿರುವನೆ ಪ್ರೇಮಿ ತಾ
ಜಲ್ಲೆ ಕಬ್ಬದು ಹೊರಗೆ ಕಠಿಣ ಒಳಗಿಹುದು ಕೋಮಲ

ದುಡಿವುದೇ ಉದ್ಯಮವು ಕಾರ್ಮಿಕನಿಗಿಹ ಶಾಪ
ಬೆಳೆ ಬೆಳೆದು ವರ ಪಡೆಯೆ ಫಸಲಹುದು ಕೋಮಲ

ನಿತ್ಯವೂ ಆಚರಿಸ ಬೇಕು ಕರ್ಮದ ದಿನವ ಸುರೇಶ
ಅವನಿರದೆ ಎಂದಿಗೂ ಬದುಕಿರದು ಕೋಮಲ


ಡಾ ಸುರೇಶ ನೆಗಳಗುಳಿ

One thought on “

Leave a Reply

Back To Top