ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವ ಜಯಂತಿ ವಿಶೆಷ

ಯೋಗೇಂದ್ರಾಚಾರ್ ಎ ಎನ್

ಗದ್ದುಗೆ

ಗದ್ದುಗೆಯ ಕಾಲುಗಳನ್ನು ಗಂಧದ ಮರದಲ್ಲಿ ಕೆತ್ತಿಸಿಕೊಳ್ಳಲಾಗಿದೆ
ಕೆತ್ತುವವನ ಕೈಗಳನ್ನು ಕೊಂಡು
ದುಪ್ಪಟ್ಟು ತೆರಿಗೆಯ ಹಾಕಿ
ಅವನ ಕೈಗಳನ್ನು ಗಿರವಿ ಇಟ್ಟುಕೊಳ್ಳಲಾಗಿದೆ

ಗದ್ದುಗೆಯ ಕೈಗಳಿಗೆ ಬಂಗಾರದ ಲೇಪನ ಮಾಡಿಸಲಾಗಿದೆ
ಲೇಪನ ಮಾಡಿದ ಕೈಗಳಿಗೆ ಕಡಗ ಹಾಕಿ
ಶಕುನಿಯನ್ನು ಕರೆಯಿಸಿ
ಹಿಂದಿನಿಂದ ಕೋಳ ತೊಡಿಸಲಾಗಿದೆ

ಅಷ್ಟೇ ಅಲ್ಲ
ಗದ್ದುಗೆಯ ಕಾವಲಿಗೆ ಒಮ್ಮತದಿ
ಕಾವಲುಗಾರನನ್ನೂ ನೇಮಿಸಲಾಗಿದೆ
ಕಾವಲುಗಾರ ಮಾತ್ರ
ಎಲ್ಲರೆದುರು ನಿಂತು
ಠೀವಿಯಲಿ ಕೂತು
ತುಳಿಯುತ್ತಿದ್ದಾನೆ
ಜನರ ತುಳಿಯುತ್ತಲೇ ಇದ್ದಾನೆ


About The Author

Leave a Reply

You cannot copy content of this page

Scroll to Top