ಅಂಬೇಡ್ಕರ್ ಜಯಂತಿ ವಿಶೇಷ

ಮಹಾದೇವಿ ಪಾಟೀಲ

ಮಹಾನಾಯಕ

ನೂರಾರು ನೊಂದ ಜೀವಗಳಿಗೆ
ನೀ ಬರೆದೆ ಬದುಕುವ ಮುನ್ನುಡಿ
ಸಂವಿಧಾನ ಎಂಬ ಹೆಸರಿನಡಿ
ನೀ ನೀಡಿದೆ ವಿಶ್ವಕ್ಕೆ ಮಹಾಕೈಪಿಡಿ||

ಬುದ್ಧ ಬಸವರ ತತ್ವಗಳ ಎತ್ತಿಹಿಡಿದು ಬದುಕಿದ ಆದರ್ಶದ ಕನ್ನಡಿ ನೀನೇ
ಶಿಕ್ಷಣವೇ ಆಯಿತು
ನಿನ್ನ ಬದುಕಿಗೆ ಚೇತನ
ಹೋರಾಟದಿ ಪಡೆದೆ ನ್ಯಾಯದ ನಿಜ ದರ್ಶನ||

ಅಸಹಾಯಕ ಜನರ ಕೂಗಿಗೆ
ಧ್ವನಿಯಾದ ಮಮತೆಯ ಧಣಿ ನೀನೆ
ಬಸವಳಿದ ಬಡವರ ಬದುಕಿಗೆ ಭರವಸೆಯ ಬೆಳಕಿನ ಚುಕ್ಕಾಣಿ ನೀನೆ
ವಾಸ್ತವದ ಕತ್ತಲೆಯೊಳಗೆ ಕಮರಿದ್ದ ಕನಸುಗಳಿಗೆ ಮರು ಜೀವ ಕೊಟ್ಟವನು ನೀನೆ,||

ತಾರ್ಕಿಕವಾಗಿ ಭವಿತವ್ಯದ ಭಾಷ್ಯ ಬರೆದ ಶತಕೋಟಿ ಭಾರತೀಯರ ಹೆಮ್ಮೆಯ ಭಾಸ್ಕರ ನೀನೆ
ಮಹಿಳೆಯರ ನಿಟ್ಟುಸಿರಿಗೆ ದಿಟ್ಟತನದ ನ್ಯಾಯ ಒದಗಿಸಿದ ಸೂರ್ಯತೇಜ ನೀನೇ
ಬೆತ್ತಲೆ ಬಡವರ ಬದುಕಿಗೆ ಎಂದೆಂದಿಗೂ ತಂಪಾದ ಮಹಾನಾಯಕ ಅಂಬೇಡ್ಕರ್ ನೀನೇ||


Leave a Reply

Back To Top