ಅಂಬೇಡ್ಕರ್ ಜಯಂತಿ ವಿಶೇಷ

ಸವಿತಾ ಮುದ್ಗಲ್.

ಅಂಬೇಡ್ಕರ್

ಭಾರತದ ಸರ್ವ ಮಹಾ ನಾಯಕನು
ಬಾಬಾ ಸಾಹೇಬ ಅಂಬೇಡ್ಕರನು
ಭಾರತದ ಪ್ರಜಾಪ್ರಭುತ್ವಕೆ ನೀನು
ಬಹುದೊಡ್ಡ ಆಸ್ತಿಯಂತೆ ನಮಗಿನ್ನು

ಸಂವಿಧಾನದ ರಚನೆ ಮಾಡಿದವರು
ಅಸ್ಪೃಶ್ಯತೆ ಹೋಗಲು ಶ್ರಮಿಸಿದವರು
ಶ್ರೇಷ್ಠವಾದ ಪುಸ್ತಕಕೆ ಪ್ರೇಮಿಯಾದವರು
ಮೂಕಪತ್ರಿಕೆಯ ಚಲಾವಣೆ ಮಾಡಿದರು

ಮಾನವೀಯತೆಗೆ ಹರಿಕಾರರಾದವರು
ಜಾತಿಭೇದಕೆ ಹೋರಾಟ ಮಾಡಿದವರು
ಮನಪಾವನ ಮಾಡಿದ ನಾಯಕರವರು
ಕಷ್ಟದಿ ಓದಿ ಸಮಾಜದ ಮಾದರಿಯಾದವರು

ನಿಮಗಿದೋ ನುಡಿನಮನ ಸಲ್ಲಿಸುವೆವು
ತೊರೆದಿಲ್ಲ ಜನರಲ್ಲಿರುವ ಜಾತಿ ಬೇಧವು
ಅಸಮಾಧಾನ ಆಗುತ್ತಿತ್ತೇನೋ ನೋಡಿದ್ದರೆ
ಎಂದು ಬದಲಾವಣೆ ಆಗದ ಮನಸ್ಥಿತಿಗಳು


One thought on “

  1. ಹೃತ್ಪೂರ್ವಕ ಧನ್ಯವಾದಗಳು ಮಧುಸೂದನ್ ಸರ್ ಗೆ

Leave a Reply

Back To Top