ಅಂಬೇಡ್ಕರ್ ಜಯಂತಿ ವಿಶೇಷ

ಶಾ ಎಸ್ ಎಸ್ ಯಮಕನಮರಡಿ

ಸಾಹೇಬ

ಹೆತ್ತವ್ವನಾ ಋಣವಾ ತೀರಿಸಿದ
ಸಾಹೇಬ
ಮತ್ತೊಮ್ಮೆ ಹುಟ್ಟಿ ಬಾ
ಈ ಜಗದಿ
ಮೇಲುಕೀಳಿನ ಬೇಲಿ
ದಾಟಿ ಬಂದಾತ ನೀ
ಹೆಣ್ಣು ಮಕ್ಕಳ ಹಿತವಕಾಯಿದ
ಕಾರಣಿಕ
ಮಾತಿನಲ್ಲಿನ ನೀತಿ
ಹಕ್ಕಿನಲಿ ತಂದಾತ
ದುಡಿವ ಹೆಣ್ಣಿನ ಹೆರಿಗೆ
ಕಷ್ಟಕೆ ಮಿಡಿದಾತ
ಕರುಣೆಯಲಿ ಕಾನೂನು
ಬರೆದಾತನಿತ
ಸಂಬಳದ ನೀತಿಯಲ್ಲಿ
ಏಕತೆ ತಂದಾತ
ಗಂಡಿನಂತೆ ಹೆಣ್ಣು
ಸಮಸಮಕು ಎಲ್ಲದರಲಿ
ಎಂಬ ಮಾತನ್ನು
ನಿಯಮವಾಗಿಸಿ
ಹಕ್ಕಾಗಿ ಅದನು
ಹೆಣ್ಣಿನ ಉಡಿ ತುಂಬಿದಾತ
ನಿಜತನದಿ ನೋಡಿದರೆ
ಹೆಣ್ಣಿನ ಜನುಮಕ
ಅಣ್ಣತಮ್ಮನಾದಾತ
ಸಾಹೇಬನಿತ
ಜನಮಾನಸದಿ ಸದಾ
ಮೆರೆವ ಮರೆಯಲಾರದ
ಸಂತ ಅವನೆ ಹೆಸರೆ
ಬಾಬಾ ಸಾಹೇಬ್ ಅಂಬೇಡ್ಕರ್
ಅಂತ.


Leave a Reply

Back To Top