ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ನಾಕು ಸಲಿಗೆ ನಾಲಿಗೆ

ಕಾವ್ಯ ಸಂಗಾತಿ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನಾಕು ಸಲಿಗೆ ನಾಲಿಗೆ

ಆಚೆ ಮೊನ್ನೆ-
ಎದೆಯ ಉಮ್ಮಳ
ತೇಲುಗಣ್ಣಿನ ವಾಸ್ತವ
ಬೆದೆ ಬಂದ ತುಪ್ಪಳ
ಮತ್ತು…
ಅರಿವಿನ ನಿರಾಳವನು
ಬರೆಸಿಕೊಳ್ಳುತ್ತಿದ್ದವು

ಈಚೆ ಮೊನ್ನೆ-
ಮೂರ್ಖರ ಕಿವುಡು
ಅಲೆಯುವ ಜಾಡು
ವ್ಯಾಕುಲದ ಒದ್ದೆ ತೆವಲು
ಮಡಿವಂತರ ಆಷಾಡಭೂತಿತನ
ಮತ್ತು……
ಬೆಳಕಿನ ಒಳಿತು ಕೆಡುಕು
ಬರೆಸಿಕೊಳ್ಳುತ್ತಿದ್ದವು

ನಿನ್ನೆಯ ದಿನ-
ಹಣದ ಕಣದಲಿ
ಸಲಿಗೆಯಲಿ ಕೂತು-
ಎಲುಬು ಕಡಿದು
ಮೃದು ಫಾಯಿದ ಪಡೆಯಲು
ದೀಪ ನಂದಿಸಿ
ನಾಕು ನಾಲಿಗೆಗಳು
ಕಿವಿಯೊಳಗೆ ಉಸುರುತ್ತಾ
ಬರೆಸಿಕೊಳ್ಳಲಾರಂಭಿಸಿವೆ

ಈ ದಿನ-
ಎಂಜಲು ಮುಲಾಜಿಗೆ
ನಗುವು ಅಳುವು
ಮೈಗೆ-ಮೈ ಒತ್ತಿ ನಿಂತು,
ಜಗವನು ದುರಾಕ್ರಮಿಸಿ
ಅಸತ್ಯಗಳ ಬರೆಸುತ್ತವೆ

ನನ್ನಂತವರಿಂದ
ಮಂದ್ರದಿಂದ ತಾರಕದವರೆಗೆ
ಗೂಡು ಕಟ್ಟಿದ ಹದ್ದುಗಳ ಅಳಿಸಿ ಸವಿಯಾಗಿ
ಬರೆದು ಹಂಚಲು,
ನಾಕಾರು ಮಾತಿನ ಮಾತನ್ನು
ತೇಯಲು…….
ಇಚ್ಛಿತ ಸಾಲುಗಳ ಬಿತ್ತಿಸಿದರೂ ಭಾವ-
ಫಲಿಸದೆ ಗೋಣು ಮುರಿದುಕೊಳ್ಳುತ್ತಿದೆ
ಕಾವ್ಯದ ಮುದಿ ಜೀವ
————————


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

2 thoughts on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ನಾಕು ಸಲಿಗೆ ನಾಲಿಗೆ

  1. ನಾಲಿಗೆ ಜೊತೆ ಜೊತೆ ಬುದ್ದಿ ಯೂ….
    ಹಲವಾರು

  2. ಅಧ್ಬುತ ಭಾವನೆ ಸಹೋದರ, ಮನುಜನ ಜೀವನ ಎತ್ತ ಸಾಗಿದೆ ಒತ್ತಾಸೆಗೂ ಮಿಗಿಲಾಗಿ ಬಳಲುವವರ ಚಿಂತನೆ ಅಮೋಘ. ಅಭಿನಂದನೆಗಳು

Leave a Reply

Back To Top