ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷ

ಡಾ ಶಶಿಕಾಂತ ಪಟ್ಟಣ

ಗುಬ್ಬಿ ಹೇಳಿದ ಕಥೆ

ಅವಸಾನದ ಅಂಚಿನಲಿ
ಪುಟ್ಟ ಜೀವ ಮರುಗಿ
ಕಣ್ಣೀರು ಇಟ್ಟ
ಗುಬ್ಬಿ ಹೇಳಿದ ಕಥೆ
ಆಗ ಎಲ್ಲೆಂದರಲ್ಲಿ
ಹುಲ್ಲುಗಾವಲು
ಕಟ್ಟಿಕೊಂಡಿತ್ತು ತನ್ನ
ಪುಟ್ಟ ಗೂಡು.
ಈಗ ಎಲ್ಲವೂ ಮಾಯ
ಕಾಡು ನಾಶ
ಮರಗುಳುರುಳಿ ಮಾಯ
ಮುಗಿಲು ಮುಟ್ಟುವ
ಕಾಂಕ್ರೀಟ್ ಚಾವಣಿ
ಆಗೆಲ್ಲ ಗುಬ್ಬಿ
ಚಿವು ಗುಡುತ್ತಿದ್ದವು
ರಾತ್ರಿಯಿಡಿ ಮಕ್ಕಳಿಗೆ
ಸೋಪಾನ ಹಾಡುತ್ತಿದ್ದವು.
ಈಗ ದೈತ್ಯಾಕಾರದ
ಫೋನ್ ಟವರ್ ನಿಂತಿವೆ
ಕರ್ಕಶ ಸಪ್ಪಳ
ವಿಲಿ ವಿಲಿ ಒದ್ದಾಡಿ
ಮರಿಗಳು ಸತ್ತವು
ಮೊಟ್ಟೆಯೊಡೆದು
ಆಸು ನೀಗಿದವು
ಎಳೆಯ ಭ್ರೂಣ .
ಕನಿಕರವಿಲ್ಲದ
ಮನುಜ ರಕ್ಕಸ
ಹೊರಗೆ ಸೂರ್ಯ
ಬೆಂಕಿ ಉಗುಳುತ್ತಿದ್ದಾನೆ.
ಕೆರೆ ನುಂಗಿ ಈಗ
ಭವ್ಯ ಬಂಗಲೆಗಳು
ಇಲ್ಲ ಕುಡಿಯಲು ನೀರು
ತಿನ್ನಲು ಕಾಳು
ಕಸಿದು ಕೊಂಡರು
ನಮ್ಮ ಕನಸುಗಳು ಸೂರು
ವಿಜ್ಞಾನದ ಆವಿಷ್ಕಾರಗಳ
ಭರಾಟೆ
ಕ್ಷಿಪಣಿಗಳ ಹಾರಾಟ
ಯುದ್ಧ ಅಣು ಬಾಂಬು
ಎಲ್ಲೆಡೆ ವಿಷಾನಿಲ ಸೋರಿಕೆ
ಸೋತಿದ್ದೇವೆ ಸತ್ತಿದ್ದೇವೆ
ವಿದಾಯ ಹೇಳುತ್ತೇವೆ
ನಮ್ಮನ್ನು ಕೊಲ್ಲುವ
ನೀವಾದರೂ ಬದುಕಿ
ನಗೆ ನೆಮ್ಮದಿ ಸಂತಸದಿ
ಹೋಗಿ ಬರುತ್ತೇವೆ ನಾವು
ಭೂಮಿಯ ಪಳೆಯುಳಿಕೆ


ಡಾ ಶಶಿಕಾಂತ ಪಟ್ಟಣ

About The Author

1 thought on “”

Leave a Reply

You cannot copy content of this page

Scroll to Top