ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರಿನೆರಳು

ಪ್ಯಾರಿಸುತ

ಕರಿನೆರಳು

ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ
ಹಗಲಿನಲ್ಲಿ ಸುಡು ನೆಲದ ಮೇಲೆ
ರಾತ್ರಿಯಲ್ಲಿ ಕಪ್ಪು ನೆಲದಮೇಲೆ
ಹೆಜ್ಜೆಗೊಂದು ಹಜ್ಜೆ ಹಾಕಿ
ಅಷ್ಟು ಬೈದರೂ ಲಜ್ಜೆ ಹೊಸಕಿ
ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ
ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು
ಎತ್ತ ಹೋದರು ಭೂತದಂತೆ..!

ದೇಗುಲಕೂ, ಆಶ್ರಮಕೂ ಬರುತಲಿತ್ತು
ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು
ನಾನು ಏಕೆ ಇವರಿಗೆ ಅಂಟು…?
ನನಗೂ ಇವರಿಗೂ ಯಾವ ನಂಟು…?
ಜೀವ ಇರುವ ನೀನು
ಭಾವ ಮೆರೆವ ನಾನು
ಜೀವಕೊಂದು ಜೀವವಿರಲು
ನನಗೂ ನಿನಗೂ ಯಾಕೆ ಈ ಮಾಯದ ಗಂಟು

ಊರುಕೇರಿ ಓಡುತ್ತಿತ್ತು,ನಿಲ್ಲುತ್ತಿತ್ತು
ಕೇಳುತ್ತಿತ್ತು ಹೇಳುತ್ತಿತ್ತು ಜನರೆದುರು
ಯಾರು ಇವನ ಗೆಳೆಯರು…?
ಯಾರು ಇವನ ಬೆನ್ನು ಬಿದ್ದವರು..?
ಯಾಕೆ ಇಲ್ಲ, ಇವನ ಸಲುಗೆ..?
ಯಾರು ಹಾಕಿದರು ನನ್ನ ಇವನ ಬೆನ್ನಿಗೆ
ಅದಕೂ ಸಾಕಾಯಿತು ಅನಿಸಿತು ನನ್ನ ಒಲುಮೆ
-*******

About The Author

Leave a Reply

You cannot copy content of this page

Scroll to Top