ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತುಮುಲ

White Horse Running on Green Field

ಬಿ.ಎಸ್.ಶ್ರೀನಿವಾಸ್

ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು

ತನ್ನಷ್ಟಕ್ಕೆ ತಾನೇ ತಿಳಿಯಾಗಿ

ಪ್ರತಿಬಿಂಬ ತೋರಿಸುವವರೆಗೂ

ಹರಿಯಬಿಡಬೇಕು  ಯೋಚನೆಗಳ

ಕಡಿವಾಣವಿಲ್ಲದ ಕುದುರೆಯನ್ನು

ಓಡಲಾಗದೆ ತಾನೇ ನಿಲ್ಲುವವರೆಗೂ

ಸುರಿಸಿಬಿಡಬೇಕು ಕಂಬನಿ

ಮನದ ಬೇಗುದಿಯೆಲ್ಲ ಕರಗಿ

ಶಾಂತಿ ನೆಲೆಸುವವರೆಗೂ

ನಡೆದು ಹೋಗಲಿ ಪ್ರಳಯ

ಪರಶಿವನ ತಾಂಡವ ನೃತ್ಯ

ಭ್ರಮೆಗಳೆಲ್ಲ ಭಸ್ಮವಾಗುವವರೆಗೂ

ಕರಗಿದಾ ಕತ್ತಲಲಿ

ಬಸವಳಿದ ಮೈಮನಕೆ

ಗಾಢನಿದ್ರೆಯು ಆವರಿಸಬೇಕು

ಮುಂಜಾನೆ ಹಕ್ಕಿ ಚಿಲಿಪಿಲಿ

ಅರುಣೋದಯ ರಾಗದಲಿ

ಹೊಸಬೆಳಕು ಮೂಡಬೇಕು

********

About The Author

4 thoughts on “ಕಾವ್ಯಯಾನ”

  1. ಶ್ರೀನಿವಾಸ್ ಬಿ.ಎಸ್

    ಧನ್ಯವಾದ ಮಧುಸೂದನ್ ಅವರೇ.
    ಧನ್ಯವಾದ ಸಂಗಾತಿ ಬಳಗ

  2. ಪದ್ಯ ಬದುಕಿನ ಪಾಠ ಕಲಿಸುವುದಲ್ಲದೆ ಚೆನ್ನಾಗಿ ಮೂಡಿ ಬಂದಿದೆ

Leave a Reply

You cannot copy content of this page

Scroll to Top