ಕಾವ್ಯಯಾನ

ನೆನಪಾಗಿಸು..

ಲೋಕೇಶ್ ಮನ್ವಿತ್

ನೆನಪಾಗಿಸು….

ಮುಲಾಮು ಹಚ್ಚಲಾಗದ
ಜಾಗದಲ್ಲಿ ಗಾಯ.
ಕಾರಣ ಹೊಸದೇನಲ್ಲ
ಅರಚುತ್ತೇನೆ
ಚೀರುತ್ತೇನೆ
ನರಳುತ್ತೇನೆ
ಕಾಣಿಸುವುದಿಲ್ಲ
ಜಗದ ಕಣ್ಣುಗಳಿಗೆ
ಕೇಳಿಸುವುದಿಲ್ಲ
ಜಗದ ಕಿವಿಗಳಿಗೆ
ನಗುವಿನ ಮುಖವಾಡ
ಬದುಕು ಸಾಗಿದೆ
ಕೊನೆಯ
ಬಿನ್ನಹವಿಷ್ಟೇ
ಗಾಯಕ್ಕಿಷ್ಟು
ಮುಲಾಮು ಬೇಡ
ನಂಜನ್ನಿಟ್ಟು
ನೆನಪಾಗಿಸು
ನನ್ನವರ ಹೃದಯದಲ್ಲಿ.

**********

Leave a Reply

Back To Top