ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಯೋಗ

ಹಂಸಪ್ರಿಯ

ನೆನಪಿನ ಸೆಲೆ

ಬತ್ತಿ ಹೋಗಿದ್ದವು ಇನಿಯ;

ಮತ್ತೆ ಇದಿರು ಬಂದಾಗ

ತೋಡಿದ ಒರತೆಯಲ್ಲಿ ಜಲದ ಝರಿ ಹರಿದಂತೆ

ಜಿನುಗಿದವು ನೆನಪುಗಳು…..

ಮಿಂಚಂತೆ ಇದಿರು ನಿಂತೆ!

ಹೊಳಪಿರದ ಕಣ್ಣಲ್ಲಿ

ಹೊಸ ಬೆಳಕು ಮೂಡಲಿಲ್ಲ..

ಮುತ್ತಿಟ್ಟಿದ್ದ ತುಟಿಗಳು

ಮಾತಾಡಲಿಲ್ಲ …                                          

 ನೋಡಿದ ಕಣ್ಣುಗಳೇ

ಮಾತನಾಡಿದವು…

ಮೌನ  ಮಾತಾದಾಗ ಕದ್ದು ಕೇಳುವುರಾರು?

ರಾಮನಲ್ಲ ನೀ  ಕೃಷ್ಣನಲ್ಲ; ನಾ

ಸೀತೆ ಅಲ್ಲ ; ಅಲ್ಲ ನಾ.. ಪಾಂಚಲಿ…

ಭೋಗದಲ್ಲಿಲ್ಲ ‘ಪ್ರೇಮ’..                                  

ಇರುವುದು

ಸಂಯೋಗದಲಿ…

ನೀ ಪ್ರೀತಿಸಿದ

ಪುಷ್ಪಕೆ ದುಂಬಿಗಳು ಸಾಲು ಸಾಲು..

ಮಕರಂದವು ನಿನಗೆ ಮೀಸಲು…

ಆಲಂಗಿಸಿ..

ಚಿಮ್ಮಿಸಿ ಜೀವಜಲ..

ಜೀವಜಲದ  ಸದ್ದ ಆಲಿಸಿದ “ನಲ್ಲ”…

ಬರುವುವೆಯಾ?                                                   

ನೀ ಬರಲಾರೆ…

ಮತ್ತೆ ಸಿಗಲಾರೆ…….


ಹಂಸಪ್ರಿಯ

About The Author

Leave a Reply

You cannot copy content of this page

Scroll to Top