ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

Burning hibiscus flower

ಬರೆದ ಗೀತೆಗೆ ರಾಗವನು ನೀಡಲಿಲ್ಲ ನೀನು
ಮರೆತ ಹೃದಯಕ್ಕೆ ಒಲವನು ಬೇಡಲಿಲ್ಲ ನೀನು

ಆಡಿದ ದಿನಗಳು ಮನದಿ ಮರೆಯಾದವೆ ಸಖಿ
ನೋಡಿದ ಕ್ಷಣದಿ ಪ್ರೀತಿಯಲಿ ಕಾಡಲಿಲ್ಲ ನೀನು

ತಾಳ ಲಯಕ್ಕೆ ಹೊಂದಾಣಿಕೆ ತಪ್ಪಿ ಹೋಯಿತೆ
ನಾಳಿನ ಬದುಕಲಿ ಸ್ಥಿರವಾಗಿ ಮೂಡಲಿಲ್ಲ ನೀನು

ಏಳು ಬೀಳಿನಲಿ ಜೊತೆಗೆ ಇರುವೆನೆಂದು ಹೇಳಿದೆ
ಗೋಳಿನ ಜೀವನ ಕಣ್ಣೆದುರು ನೋಡಲಿಲ್ಲ ನೀನು

ವಿರಹದುರಿ ಅಭಿನವಗೆ ಅವಿರತ ಬೆನ್ನು ಹತ್ತಿತಲ್ಲ
ತೊರೆದು ಹೊರಟ ಜೀವವನು ಕೂಡಲಿಲ್ಲ ನೀನು


About The Author

Leave a Reply

You cannot copy content of this page

Scroll to Top