ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂರ್ಖರು

ಕು.ಸ.ಮಧುಸೂದನ

ಮೂರ್ಖರು
ಕೋವಿಯಿಂದ ಕ್ರಾಂತಿ ಮಾಡುತ್ತೇವೆಂದು ಹೊರಟ
ಮೂರ್ಖ ನಕ್ಸಲರು!

ಧರ್ಮದ
ಆಧಾರದ ಮೇಲೆದೇಶ ಕಟ್ಟುತ್ತೇವೆಂದು ಹೊರಟ
ಮೂರ್ಖ
ಮತಾಂಧರು!

ಜಾತ್ಯಾತೀತ
ಅಂತ ಹೇಳುತ್ತಾ ಜನಗಳ ಒಡೆಯುತ್ತಿರುವ ಹುಸಿ
ಕ್ರಾಂತಿಕಾರಿಗಳು!

ಇವರುಗಳ ನಡುವೆ
ಇದ್ಯಾವ ಶಬ್ದಗಳನ್ನೂ ಕೇಳಿರದ
ಬಡವರು
ತಣ್ಣಗೆ
ಹೊಲಗದ್ದೆಗಳಲ್ಲಿ
ಕಾರ್ಖಾನೆಗಳಲ್ಲಿ
ಕೆಲಸ ಮಾಡುತ್ತಾ
ದೇಶ ಕಟ್ಟುತ್ತಿದ್ದಾರೆ

ಭಾಷಣಗಳ ಬೀಕರತೆಯಿಂದ ದೂರವುಳಿದು!

*********

About The Author

Leave a Reply

You cannot copy content of this page

Scroll to Top