ಕವಿತೆ ಕಾರ್ನರ್

ಮೂರ್ಖರು

ಕು.ಸ.ಮಧುಸೂದನ

ಮೂರ್ಖರು
ಕೋವಿಯಿಂದ ಕ್ರಾಂತಿ ಮಾಡುತ್ತೇವೆಂದು ಹೊರಟ
ಮೂರ್ಖ ನಕ್ಸಲರು!

ಧರ್ಮದ
ಆಧಾರದ ಮೇಲೆದೇಶ ಕಟ್ಟುತ್ತೇವೆಂದು ಹೊರಟ
ಮೂರ್ಖ
ಮತಾಂಧರು!

ಜಾತ್ಯಾತೀತ
ಅಂತ ಹೇಳುತ್ತಾ ಜನಗಳ ಒಡೆಯುತ್ತಿರುವ ಹುಸಿ
ಕ್ರಾಂತಿಕಾರಿಗಳು!

ಇವರುಗಳ ನಡುವೆ
ಇದ್ಯಾವ ಶಬ್ದಗಳನ್ನೂ ಕೇಳಿರದ
ಬಡವರು
ತಣ್ಣಗೆ
ಹೊಲಗದ್ದೆಗಳಲ್ಲಿ
ಕಾರ್ಖಾನೆಗಳಲ್ಲಿ
ಕೆಲಸ ಮಾಡುತ್ತಾ
ದೇಶ ಕಟ್ಟುತ್ತಿದ್ದಾರೆ

ಭಾಷಣಗಳ ಬೀಕರತೆಯಿಂದ ದೂರವುಳಿದು!

*********

Leave a Reply

Back To Top