ಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಕಾವ್ಯಸಂಗಾತಿ

ಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

.

ಈಗಾಗಲೇ
ಒಳ-ಹೊರಗಿನ
ಗಾಳಿಯನು ಗುತ್ತಿಗೆ ಪಡೆದಿದ್ದಾರೆ,
ನಮ್ಮ ಗುಡಿಸಲಿನ-
ಹಣತೆಯ ಬೆಳಕು
ಅವರು……
ನುಂಗುವದೆಷ್ಟೊತ್ತು….?

ಯಾರು…ಯಾರವರು..?

ಚುಕ್ಕಿ ಚಂದ್ರಮರ
ನೆರಳ ಕೊರಳಿಗೆ-
ನೋಟಿಸ್ ಕೊಟ್ಟಿದ್ದಾರಂತೆ
ಹೊಳೆ,ಹಳ್ಳ,ಕೊಳಗಳ
ಹಕ್ಕಿಪಿಕ್ಕಿ ಜೀವ ಸಂಕುಲಗಳ
ಝರಾಕ್ಷ್ ಪ್ರತಿ ತೆಗೆಸಿ,
ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ

ಯಾರು…ಯಾರವರು..?

ಗುಡುಗು,ಮಿಂಚಿಗೆ
ಮುತ್ತಿಗೆ ಹಾಕಿ,
ಸಂಚುಗಾರರಾಗಿದ್ದಾರಂತೆ
ಭ್ರಮೆಗೊಳಗಾದ ಮೋಡವು,
ಅರುಣನೆದೆಯ ಕದ ತಟ್ಟಿ-
ತನ್ನಾತ್ಮವನು ತೆರೆದಿಟ್ಟು,
ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆ
ನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ

ಯಾರು…ಯಾರವರು..?

ಕಡಲ ಆಳ,ಅಗಲ,
ವಿಸ್ತಾರವನು ಲೆಕ್ಕ-
ತೆಗೆದುಕೊಂಡಿದ್ದರಂತೆ
ಹಿಮ ಗಿರಿ ಶಿಖರಗಳ ಆಯುವನು-
ನಿಷ್ಕ್ರಿಯಗೊಳಿಸಿ,
ಮೂರ್ತ ಅಮೂರ್ತದ
ಹಂಗನ್ನು ಶೂನ್ಯಗೊಳಿಸಿದ್ದಾರಂತೆ.,
ಕಾಡು,ಗುಡ್ಡ,ಬೆಟ್ಟ ಗವಾರಗಳ ಸಣ್ಣ ಉಸಿರಾಟಕ್ಕೂ ತೆರಿಗೆ ವಿಧಿಸುತ್ತಾರಂತೆ

ಯಾರು…ಯಾರವರು…?

ಸತ್ಯದ ತಲೆಗಳ
ಪ್ರಶ್ನಿಸುವ ಮನಗಳ
ಸಭ್ಯಸ್ಥರ ದಿನಗಳ ಬಾಳನು
ಡಿಲಿಟ್ ಮಾಡುತ್ತಾ….
ಈ ಮಣ್ಣಿನ ಕಣ್ಣೀರು ಹರಿದಂತೆಲ್ಲಾ..‌.ನಿರಂತರ
ನೆಕ್ಕುತ್ತಿರುತ್ತಾರಂತೆ
ಆಗ…….ನಮ್ಮೆಲ್ಲರ ಕಣ್ಣು
ನೆಲ ಬರೆಯುತ್ತವೆ.
ಆಪತ್ಕಾಲದಲಿ
ಸೂಲಗಿತ್ತಿಯು ಸ್ಕಲಿಸಿದ ಹಾಗೆ ಮೆತ್ತಗಿರುತ್ತೇವೆ.

ಯಾರು….ಯಾರವರು..?

ಬಂಡವಾಳಶಾಯಿಗಳು
ರಾಜಕಾರಣಿಗಳು
ಕುಂಟಲಗಿತ್ತೆಯರು


4 thoughts on “ಉಣ್ಣೊ ತಾಟನ್ನು ಹರಾಜು ಹಾಕುವ ದಿನ

  1. ಎಂತಹ ಕವನಾರಿ ಇದು… ಸೀದಾ ಎದೆಯ ಅಳವನು ಹೊಕ್ಕಿತು ನೋಡಿ. ಅದ್ಭುತವಾಗಿದೆ ಬಳಸಿದ ಪದಗಳು.ಅಭಿನಂದನೆಗಳು ಶರಣಪ್ಪ ತಳ್ಳಿ ಅವರಿಗೆ

  2. ಅರ್ಥಗರ್ಭಿತ.. ಕವಿತೆ..? ಪ್ತಶ್ನೆಮಾಡುತ್ತಲೇ ಪ್ರಶ್ನೆ ಕಾಡುವ ಕವಿತೆ..!!

Leave a Reply

Back To Top