ಕಾವ್ಯ ಸಂಗಾತಿ
ಡಾ.ಭೇರ್ಯ ರಾಮಕುಮಾರ್ ಕಿರುಕವಿತೆಗಳು
ಕಿವಿಮಾತು
ಕಷ್ಟಗಳು ಬಂದವೆಂದು ಶೋಕಿಸಬೇಡ,ಪುಟವಿಟ್ಟ ಚಿನ್ನಕ್ಕಲ್ಲವೇ ಬೆಲೆ,
ಹೀಚುಕಾಯಿಗಳಿಗೆ ಎಲ್ಲಯ ರುಚಿ ?
ಪಕ್ವಗೊಂಡ ಹಣ್ಣಿನ ರುಚಿ ಅಮೃತ ಸಮಾನ,
ಕಷ್ಟಗಳ ಅಗ್ನಿ ಪರೀಕ್ಷೆಯಲಿ ನೊದು, ಬೆಂದು ಪಕ್ವವಾಗಿಬಿಡು,
ನಿನ್ನ ಬಾಳು ಆಗಲಿ ಅಪೂರ್ವ ಅನುಭವಗಳ ಗಣಿ..
ನಂಬಿಕೆ
ನಂಬಿಕೆಯ ಮೇಲೇಯೇ
ಈ ಜಗದ ಉಳಿವು..
ಒಳ್ಳೆಯ ನಾಳೆಗಳ ನಂಬಿಕೆಯೇ
ಇಂದಿನ ಮುಗ್ದ ಮಗುವಿನ ಮುಗುಳ್ನಗೆ,
ನಾಳೆ ಎಲ್ಲ ಕಳೆದು ಬೆಳಕು ಮೂಡುವ ನಂಬಿಕೆಯೇ
ಇಂದಿನ ಕತ್ತಲ ಪ್ರಪಂಚದಲಿ
ಬದುಕಲು ಮೂಲ ಚೇತನ..
ಮಾತು- ಮೌನ
ಭಾವನೆಗಳು ಅರ್ಥವಾಗುವವರ ಬಳಿ
ಮನಬಿಚ್ಚಿ, ಹೃದಯತುಂಬಿ ಮಾತನಾಡಬೇಕು,
ಹಣ, ಆಸ್ತಿ, ಅಂತಸ್ತುಗಳ ಕೊಬ್ಬಿನಲಿ
ಏನನ್ನೂ ಕಾಣದವರ ಮುಂದೆ,
ಕೇಳದವರ ಮುಂದೆ
ಎಂದೆಂದೂ ಮೌನವಾಗಿರಬೇಕು,
ಅಲ್ಲಿ ನಮ್ಮ ಸಾಧನೆಗಳು ಮಾತನಾಡಬೇಕು..
ಡಾ.ಭೇರ್ಯ ರಾಮಕುಮಾರ್
ಬಹಳ ಸೊಗಸಾಗಿದೆ.ಸತ್ಯವಾದ ಸಾಲುಗಳು
ಕೃತಜ್ಞತೆಗಳು
ತುಂಬಾ ಚನ್ನಾಗಿವೆ ಸರ್
Anubhavada maatu galu/saalu galu