ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವರ್ಗದ ಗಾಂಧಿ ನಗಬೇಕು

ಸಂಗೀತ ರವಿರಾಜ್

ಪಂಜರದ ಬಾಗಿಲು ತೆರೆದೆ ಇದ್ದರು
ಹಾರದ ಹಕ್ಕಿಯ ಮನಸ್ಸು
ನಮ್ಮ ಬಿಡುಗಡೆಯ ಕನಸು

ಹಲವಾರು ವರುಷ ಪಕ್ಷಿ
ಪಂಜರದೊಳಗೆ ಇದ್ದು ಇದ್ದೂ
ಸ್ವಾತಂತ್ರ್ಯ ದ ಚಿಲಕ ತೆಗೆದರು
ಹಾರದೆ ಹಾಗೆಯೇ ಕುಳಿತಿದೆ
ಯಾಕೆಂದು ನಿಮ್ಮ ಆಲೋಚನೆಗೆ ಲೋಕ ಬಿಟ್ಟಿದೆ !!

ಸಾವಿರ ವರುಷದ ದಾಸ್ಯ ಮುಕ್ತದಿ
ದಕ್ಕಿದ ಜೀವನವ ಹೇಗನುಭವಿಸಬೇಕೆಂಬ
ಪಾಠವ
ಮಹಾತ್ಮನಾದಿಯಾಗಿ ಹೋರಾಡಿದ
ಯಾರೊಬ್ಬರೂ ಹೇಳಿ ಹೊರಡಲಿಲ್ಲ.
ಅರೆಬಟ್ಟೆ ಫಕೀರನ
ಜೀವನವೇ ಒಂದು ಪಾಠ
ಎಂಬುದು ಕೊನೆಗೂ ನಮಗರ್ಥವಾಗಲಿಲ್ಲ.

ಪಂಜರದ ಕೀಲಿಕೈ
ಅಧಿಕಾರಶಾಹಿ ಕೈಯೊಳಡಗಿ
ಉಡುಗಿದ್ದು
ಮಹಾತ್ಮನಿಗೆಲ್ಲಿಂದ ತಿಳಿಸಲಿ?
ಬಿಸಿರಕ್ತಕ್ಕೆ ವಿದೇಶಿ ವ್ಯಾಮೋಹ ಹೋಗಿ
ಪರದೇಶಿ ಕೈವಶ ಕಳಚಿದಂದು
ಸ್ವರ್ಗದ ಗಾಂಧಿ ನಗುತ್ತಾರೆ!

ಗಗನ ಚುಂಬುವರೆಗೆ ಪ್ರಗತಿಪಥ
ಇಲ್ಲವೆಂದಲ್ಲ, ಆದರೆ
ಭಾರತದ ಕಟ್ಟ ಕಡೆಯ ಪ್ರಜೆಯು
ಪಂಜರದ ಬಾಗಿಲು ತೆರೆದೊಡನೆ
ಗರಿಬಿಚ್ಚಿ ಆಗಸದಲ್ಲಿ ಕೇವಲ
ಸಂತಸ , ಸಮಾನತೆಯ ಆಸೆಗೆ ಮಾತ್ರ
ಹಾರುವ ಕ್ಷಣ ಬಂದೊಡನೆ
ನಿಜವಾದ ಸ್ವಾತಂತ್ರ್ಯ.


ಸಂಗೀತ ರವಿರಾಜ್

About The Author

1 thought on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ”

Leave a Reply

You cannot copy content of this page

Scroll to Top