ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಸುಜಾತಾ ರವೀಶ್ 

ಅಹಮ್ಮಿನ ಕೋಟೆಯಲಿ ಬಂಧಿಯಾಗಿ ಪ್ರೀತಿ ನಗುವುದೇ 
ಭಿಮ್ಮಿರಲು ಮನಸಿನಲಿ ವಿಶ್ವಾಸ ತುಂಬಿ ತೂಗುವುದೇ 

ಮುರಿದಿದೆ ಹೃದಯ ಚುಚ್ಚುತಿದೆ ನಂಜಿನ ಮಾತುಗಳಿಗೆ 
ಶರವೇಗದ ಬಾಣಕ್ಕೆ ಎದೆ ಸೀಳಿದ ನೋವು ಕಾಡುವುದೇ? 

ಸ್ಪಂದನದ ತಂಗಾಳಿ ಬೀಸಿದರೆ ಕಾವು ತಂಪಾದೀತೇ 
ಬಂಧನದ ಗಂಟುಗಳು ಬಿಚ್ಚಿಹೋಗುತಿರೆ ನಂಟು ನಿಲ್ಲುವುದೇ?

ಭಾವತೀರಗಳ ಮಧ್ಯದಲಿ ವಿಸ್ತಾರ ಕಡಲಿನಂತರ 
ಜೀವಗಳೇಕೋ ವಿಮುಖ ಪರಸ್ಪರ ಒಲವು ಗೆಲ್ಲುವುದೇ

ಸುಜಿಯು ಬಲ್ಲಳು ವಿರಸದುರಿ ಇನ್ನೂ ಹೊಗೆಯಾಡಿದೆಯೆಂದು 
ವಿಜಯ ಸೋತು ತಾ ಗೆಲುವೆನೆಂಬ ಗೀತೆ ಹಾಡುವುದೇ 


About The Author

Leave a Reply

You cannot copy content of this page

Scroll to Top