ಗಜಲ್

ಕಾವ್ಯ ಸಂಗಾತಿ

ಗಜಲ್

ಬೆಂಶ್ರೀ ರವೀಂದ್ರ

ನಾ ಬರೆಯದ ಕವನಗಳ ನಿನಗಾಗಿ ಮೀಸಲಿಟ್ಟಿದ್ದೇನೆ
ಒಳಕೋಣೆಯ ಒಳ್ಗುಣಗಳ ಕನಸಿಗಾಗಿ ಮೀಸಲಿಟ್ಟಿದ್ದೇನೆ

ನಾವಿಬ್ಬರೂ ದೂರಸರಿದ ಬವಣೆ ನಿಜವೆ ಆದರೂ
ಹರಿದಿಲ್ಲದ ಭಾವದ ಅಕ್ಷರಗಳಿಗಾಗಿ ಮೀಸಲಿಟ್ಟಿದ್ದೇನೆ

ಕೂಡಿ ನಕ್ಕ ಮುಗುಳು ಉದುರಿತು ನಂಜಾಗಿ ಆದರೂ
ನೀನಾಗಲಿ ನಾನಾಗಲಿ ಅಕಾರಣ ಹಾಗಾಗಿ ಮೀಸಲಿಟ್ಟಿದ್ದೇನೆ

ಆಯತಪ್ಪಿದರೆ ಮನಬಿಚ್ಚಿ ಹಾಡಾಗುವುದೆಂದು ಬೆದರಿಹೆನು
ಅದಕೆ ಅಕ್ಷರಗಳ ಬಾಡದಂತೆ ನಯವಾಗಿ ಮೀಸಲಿಟ್ಟಿದ್ದೇನೆ

ಕೈಗಳ ತೆರೆದು ಬಾಂದಳಕ್ಕೆ ತೆಕ್ಕೆಯ ತೂಗಿ ಬಿಟ್ಟಿದ್ದೇನೆ
ಕಳಚಿ ತಟ್ಟನೆ ತೆಕ್ಕೆಗೆ ಬೀಳುವ ಬಸಿರಿಗಾಗಿ ಮೀಸಲಿಟ್ಟಿದ್ದೇನೆ.

ಬಾಯಾಳಿಗಳ ಭರತಕ್ಕೆ ಪಕ್ಕಾಗದಿರಲೆಂದು ಅವಿಸಿಟ್ಟಿದ್ದೇನೆ
ಮುಂಗಾರು ಹಂಗಾಮದಲಿ ಮತ್ತೆ ಬಿತ್ತುವುದಕಾಗಿ ಮೀಸಲಿಟ್ಟಿದ್ದೇನೆ

ನನ್ನಿನುಡಿಗಳು ನಿನಗಲ್ಲದೆ ಇನ್ಯಾರಿಗೂ ಅರಿವಾಗದು
ರವಿತೇಜ ದಲಿ ಅಮಾವಾಸ್ಯೆ ಹುಣ್ಣಿಮೆಯೆಂದು ನಿನಗಾಗಿ ಮೀಸಲಿಟ್ಟಿದ್ದೇನೆ.


Leave a Reply

Back To Top