ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬರೆಸಿಕೊಂಡ ಸಾಲುಗಳು

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

New destination in Manasagangothri: Mahatma's Sculptures at Gandhi Bhavan -  Star of Mysore

ನನ್ನ ಮೇಲೆ ಕರುಣೆ ತೋರಬೇಕಿಲ್ಲ
ಶವದ ಮುಂದೆ ಸೋಬಾನೆ ಹಾಡಬೇಡ

ನಾನೀಗ ಅಲೆಮಾರಿ
ಇಷ್ಟುದಿನ ನನ್ನವನಿಗಾಗಿ ಹುಡುಕುತ್ತಿದ್ದೆ..
ಈಗ ಅವನು ಅಲೆಮಾರಿ

ನಾ ಬದುಕ ಬೇಕೆಂಬ ಬಯಕೆ ನಿನಗಿದ್ದರೆ ..
ಈಗ ಉಣಿಸಿದ ವಿಷದ
ಅಮಲು ಏರಲು ಬೀಡು
ಸಮಾಧಿಯ ಗೋಡೆಗಳು ಬೆವರುತಿವೆ…

ನಿತ್ಯವೂ ನನ್ನ ನಿಟ್ಟುಸಿರು
ಹಾಯಿದೋಣಿಯ ಲಂಗುರಿಗೆ
ನಿಶಾನೆ ಕೇಳುತಿದೆ

ನನ್ನ ಸಮಾಧಿಯ ಮುಂದೆ
ರೋಧಿಸ ಬೇಡಾ
ಆತ್ಮವಿನ್ನು ಬದುಕಿದೆ

ಮನವ ಸಂತೈಸಿ ಸಾಕಾಗಿದೆ
ತನುವ ಹೂತ ಪರಿಗೆ
ರಾತ್ರಿಗಳು ರೋಧಿಸುತಿವೆ

ಅಲ್ಲಮಾ.. ನೀ ಬೆರೆತ ಗಾಳಿ
ಉಸಿರ ಕೊಲ್ಲುತಿದೆ
ವ್ಯೋಮದ ತುಂಬೆಲ್ಲಾ ಶವಗಳ
ಮೆರವಣಿಗೆ

ಅಕ್ಕಾ.. ನೀ ಹೊರಟೆ ಬಿಟ್ಟೆಯಲ್ಲಾ
ಬಟ್ಟೆ ಧರಿಸಿದ ತಂಗಿಯರ
ಬದುಕು ಮೂರಾಬಟ್ಟೆಯಾಗಿದೆ

ಅಣ್ಣಾ …ನಿನ್ನ ಮೂರ್ತಿಯ
ಕೈ ಕೆಡವಿದ್ದಾರೆ
ಅವರ ಹೃದಯದಲ್ಲಿ ನೀ ಇನ್ನೂ
ಬದುಕಿದ್ದಿಯಾ

ಗಾಂಧೀ ..ನಿನ್ನ ಗ್ರಾಮಗಳ ತುಂಬೆಲ್ಲಾ ಡ್ರಮ ಗಟ್ಟಲೆ
ಸಾರಾಯಿ ..
ಗ್ರಾಮ ರಾಮದ ಕನಸು
ದೂರವಿಲ್ಲ..


About The Author

Leave a Reply

You cannot copy content of this page

Scroll to Top