ಶ್ರೀವಲ್ಲಿ ಮಂಜುನಾಥ ಕವಿತೆ

ಕಾವ್ಯ ಸಂಗಾತಿ

ಕಡಲು – ಮುಗಿಲು

ಶ್ರೀವಲ್ಲಿ ಮಂಜುನಾಥ

ನೀನೊಂದು ನೀಲ್ಗಡಲು
ನಾನೋ ಕರಿ ಮುಗಿಲು
ನಮ್ಮ ಸಮಾಗಮಕಾಗಿ
ಕಾದು ನಾ ಕುಳಿತಿಹೆನು .

ನೀ ಕಳುಹಿದೊಂದೊಂದು
ಹನಿಹನಿಗಳೊಂದಾಗಿ
ಕಪ್ಪನೆಯ ಮುಗಿಲಾಗಿ
ನಾ ಬಾಗಿ ನಿಂದಿಹೆನು.

ನಿನ್ನ ಅಲೆಗಳ ದನಿಗೆ
ನಾ ಮಾರುತ್ತರವಿತ್ತ
ಗುಡುಗಿನ ದನಿಯು
ನಿನಗೀಗ ತಲುಪಿತೆ ?

ಕ್ಷಣಗಳನ್ನೆಣಿಸುತಿರು
ನಾ ಬರುವೆ ಧುಮ್ಮಿಕ್ಕಿ.
ನಿನ್ನೊಡಲ ತುಂಬೆಲ್ಲ
ಮುಗಿಲಲೆಲಲೆಯಾಗಿ.


Leave a Reply

Back To Top