ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮೇ ದಿನದ ವಿಶೇಷ ಗಝಲ್

ಅಮೃತಾ ಉಮೇಶ್ ಶೆಟ್ಟಿ

ಹಸಿದ ಹೊಟ್ಟೆಯ ತುತ್ತಿಗಾಗಿ ಹಗಲಿರುಳು ದುಡಿಯುವವನು ಕಾರ್ಮಿಕ
ಹೊಸೆದ ಕನಸುಗಳ ಸಾಕಾರದ ನಡೆಗಾಗಿ ತುಡಿಯುವವನು ಕಾರ್ಮಿಕ

ಬಡತನದ ಬೇಗೆಲಿ ಬೇಯುತ ಸ್ತಬ್ದವಾಗಿ ನಿಂತಿರುವೆಯಾ ಹೇಳು
ಸಿರಿತನದ ಮಾಯಾ ಕುದುರೆಯ ಬಾಲ ಹಿಡಿಯುವವನು ಕಾರ್ಮಿಕ

ಗೂಡನು ಕಟ್ಟುವ ಆಸೆಲಿ ಸಾಲದ ಮೂಟೆಯ ಹೊರುವೆಯಾ
ಕೇಡನು ಬಯಸದೆ ಸತ್ಯದಿ ನಿತ್ಯವು ಮಿಡಿಯುವವನು ಕಾರ್ಮಿಕ

ತೋಳ ಬಲದಲಿ ಕೂಳ ಗಳಿಸುವ ಸ್ವಾಭಿಮಾನದ ಮೂರುತಿ
ಬಾಳ ಕಡಲಲಿ ಆಸೆ ಅಲೆಗಳಿಗೆ ಜಡಿಯುವವನು ಕಾರ್ಮಿಕ

ಬೆವರ ಹನಿಯಲಿ ಬರೆದ ಹೆಸರನು ಅಮ್ಮಿ ಓದುವಳು
ಸಾವಿರ ಸಮಸ್ಯೆಗಳ ಶಿರವ ಹಿಡಿದು ಕಡಿಯುವವನು ಕಾರ್ಮಿಕ


About The Author

3 thoughts on “ಮೇ ದಿನದ ವಿಶೇಷ ಗಝಲ್”

  1. ಹೆಚ್. ಮಂಜುಳಾ.

    ಕಾರ್ಮಿಕರ ಸಮಸ್ಯೆಗಳನ್ನು ಚಿತ್ರಣ ಚೆನ್ನಾಗಿದೆ ಮೇಡಂ ಧನ್ಯವಾದಗಳು ತಮಗೆ.

Leave a Reply

You cannot copy content of this page

Scroll to Top